ಬ್ರೇಕಿಂಗ್ ನ್ಯೂಸ್
29-11-20 12:07 am Mangaluru Crime Correspondent ಕರಾವಳಿ
ಮಂಗಳೂರು, ನ.29: ಮಂಗಳೂರಿನಲ್ಲಿ ಮತ್ತೊಂದು ಕಡೆ ಮತಾಂಧರ ಗೋಡೆ ಬರಹ ಪತ್ತೆಯಾಗಿದ್ದು ಆತಂಕ ಮೂಡಿಸಿದೆ. ಮಂಗಳೂರಿನ ಪಿವಿಎಸ್ ಬಳಿಯ ನ್ಯಾಯಾಲಯದ ಆವರಣದ ಹಳೆ ಕಟ್ಟಡದ ಗೋಡೆಯಲ್ಲಿ ಉರ್ದು ಭಾಷೆಯಲ್ಲಿ ಬರಹ ಕಂಡುಬಂದಿದೆ.
ಕೋರ್ಟ್ ಆವರಣದಲ್ಲಿರುವ ಜನರೇಟರ್ ರೂಂ ಗೋಡೆಯ ಮೇಲೆ ಉರ್ದು ಭಾಷೆಯಲ್ಲಿ "Gustak E Rasool ek hi saza Sar tan say juda" ಎಂದು ಬರೆದಿದ್ದಾರೆ. ಇದರರ್ಥ "ಪ್ರವಾದಿಗೆ ಕೋಪ ಬಂದರೆ ಒಂದೇ ಶಿಕ್ಷೆ, ತಲೆ ದೇಹದಿಂದ ಬೇರ್ಪಡುವುದು" ಎಂಬುದಾಗಿ ಎನ್ನಲಾಗಿದೆ. ಈ ಬಗ್ಗೆ ಮಂಗಳೂರಿನ ಬಂದರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಎರಡು ದಿನಗಳ ಹಿಂದೆ ಬಿಜೈ ಅಪಾರ್ಟ್ಮೆಂಟ್ ಆವರಣದಲ್ಲಿ ಉಗ್ರರ ಪರ ಗೋಡೆ ಬರಹ ಪತ್ತೆಯಾಗಿ ಸಂಚಲನ ಮೂಡಿಸಿತ್ತು. ಸಂಘ ಪರಿವಾರದ ವಿರುದ್ಧ ಬೆದರಿಕೆ ಹಾಕುವ ರೀತಿ ಲಷ್ಕರ್, ತಾಲಿಬಾನ್ ಉಗ್ರರನ್ನು ಕರೆಸಬೇಕಾದೀತು ಎಂಬರ್ಥದಲ್ಲಿ ಕಿಡಿಗೇಡಿಗಳು ಉಗ್ರರ ಪರವಾಗಿ ಬರಹ ಬರೆದಿದ್ದರು.
ಬಿಜೈ ಹಾಗು ಕೋರ್ಟ್ ಅವರಣದ ಗೋಡೆ ಬರಹದಲ್ಲಿ ಸಾಮ್ಯತೆ ಕಂಡುಬಂದಿದ್ದು ಎರಡೂ ಕೃತ್ಯವನ್ನು ಒಂದೇ ತಂಡ ಎಸಗಿರುವ ಬಗ್ಗೆ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಬೈಕ್ ನಲ್ಲಿ ಬಂದು ಸ್ಪ್ರೇ ಪೇಂಟ್ ಮೂಲಕ ಗೋಡೆ ಬರಹ ಬರೆದು ಪರಾರಿಯಾಗುತ್ತಿರುವ ಬಗ್ಗೆ ಈಗಾಗಲೇ ಅನುಮಾನ ವ್ಯಕ್ತವಾಗಿದ್ದು ಪೊಲೀಸರು ಆರೋಪಿಗಳ ಪತ್ತೆಗೆ ಶೋಧ ನಡೆಸುತ್ತಿದ್ದಾರೆ. ನಗರದ ಸಿಸಿಟಿವಿಗಳನ್ನು ತಪಾಸಣೆ ಮಾಡುತ್ತಿದ್ದಾರೆ. ಪತ್ತೆ ಕಾರ್ಯಾಚರಣೆಗೆ ಪೊಲೀಸರ ವಿಶೇಷ ತಂಡ ಇಳಿದಿರುವಾಗಲೇ ಮತ್ತೊಂದು ಕಡೆ ಮತಾಂಧರು ಕಿಡಿಗೇಡಿ ಕೃತ್ಯ ನಡೆಸಿರುವುದು ಪೊಲೀಸರಿಗೇ ಸವಾಲಾಗುವ ರೀತಿ ಇದೆ.
Also Read: 'ಲಷ್ಕರ್ ಜಿಂದಾಬಾದ್' ಗೋಡೆ ಬರಹ ; ಯಾರೇ ಬರೆದಿದ್ದರೂ ಕಠಿಣ ಕ್ರಮ
After Miscreants graffiti wall in support of Anti-terrorist groups at Kadri in Mangalore, another graffiti has been reported at the Mangalore Court Wall on November 28, Saturday, 2020. The Police rushed to the spot and have erased graffiti by painting on the same.
18-03-25 11:02 pm
Bangalore Correspondent
ಬಿಡದಿಯಲ್ಲಿ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ...
18-03-25 10:34 pm
Bangalore JCB Accident, Two Killed; ರಸ್ತೆ ಕಾಮ...
18-03-25 02:30 pm
Tumkur Wedding News, Water: ನೀರಿನ ವಿಚಾರದಲ್ಲಿ...
18-03-25 01:08 pm
ಎಸ್.ಟಿ. ಸೋಮಶೇಖರ್, ಶಿವರಾಮ ಹೆಬ್ಬಾರ್ ಸದ್ಯದಲ್ಲೇ...
17-03-25 11:54 am
17-03-25 10:57 pm
HK News Desk
Case against Orry at Vaishno Devi: ವೈಷ್ಣೋದೇವಿ...
17-03-25 09:43 pm
Kerala Christan girls missing, PC George: ಕೊಟ...
13-03-25 03:49 pm
Shiradi Ghat, Mangalore Bengalore, Mp Brijesh...
13-03-25 01:30 pm
ಪಾಕಿಸ್ತಾನದಲ್ಲಿ 500ಕ್ಕು ಹೆಚ್ಚು ಪ್ರಯಾಣಿಕರಿದ್ದ ರ...
12-03-25 11:41 am
18-03-25 10:09 pm
Mangalore Correspondent
Electricity, Malekudiya Tribal, Belthangady:...
18-03-25 08:53 pm
Mangalore accident, Kinnigoli, Bike, Vidoe: ಕ...
18-03-25 03:15 pm
ಮಂಗಳೂರು- ಮುಂಬೈ ವಂದೇ ಭಾರತ್ ರೈಲು ಸನ್ನಿಹಿತ ; ಉಡು...
17-03-25 11:02 pm
Mangalore Accident, Kallapu: ನಿಯಂತ್ರಣ ತಪ್ಪಿ ಆ...
17-03-25 08:01 pm
18-03-25 06:31 pm
Mangalore Correspondent
Ccb Police Mangalore, Kali Yogesh, Underworld...
17-03-25 07:51 pm
Bangalore crime, Fraud, Bank Manager: ಮನೆ ಮಾರ...
16-03-25 10:39 pm
Mangalore Police, CCB, Drugs, CM: ರಾಜ್ಯದಲ್ಲೇ...
16-03-25 07:27 pm
Mangalore CCB police, Drugs, crime: ರಾಜ್ಯದಲ್ಲ...
16-03-25 10:43 am