ಬ್ರೇಕಿಂಗ್ ನ್ಯೂಸ್
08-05-26 12:06 pm HK News Staffer ದೇಶ - ವಿದೇಶ
ಮುಂಬೈ, ಮೇ 8: ನವಿ ಮುಂಬೈನಿಂದ ಮಂಗಳೂರಿಗೆ ತೆರಳಬೇಕಿದ್ದ ವಿಮಾನದಲ್ಲಿ ಓರ್ವ ಪ್ರಯಾಣಿಕನ ಗಲಾಟೆ ಇಡೀ ಪ್ರಯಾಣವನ್ನು ಗೊಂದಲದ ಗೂಡನ್ನಾಗಿಸಿದ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ಭಾರೀ ಚರ್ಚೆಗೆ ಕಾರಣವಾಗಿದೆ. ಸಾಮಾನ್ಯವಾಗಿ ಉದ್ದ ಸಾಲುಗಳು, ಭದ್ರತಾ ತಪಾಸಣೆ, ಗೇಟ್ ಬದಲಾವಣೆ ಮತ್ತು ವಿಳಂಬಗಳಿಂದಲೇ ವಿಮಾನ ಪ್ರಯಾಣಿಕರು ಬೇಸತ್ತಿರುತ್ತಾರೆ. ಆದರೆ ಈ ಬಾರಿ ಪರಿಸ್ಥಿತಿ ಮತ್ತಷ್ಟು ಕಿರಿಕಿರಿಯಾಗಿದ್ದು, ವಿಮಾನದೊಳಗೇ ವಾಗ್ವಾದ ಮತ್ತು ಉದ್ವಿಗ್ನತೆ ಸೃಷ್ಟಿಯಾಗಿದೆ.
ಮಾಹಿತಿ ಪ್ರಕಾರ, ಮುಂಬೈಯಿಂದ ಗುರುವಾರ ಬೆಳಗ್ಗೆ 11 ಗಂಟೆಗೆ ಟೇಕ್ ಆಫ್ ಆಗಬೇಕಿದ್ದ ವಿಮಾನ, ಓರ್ವ ಪ್ರಯಾಣಿಕ ತನ್ನ ಪತ್ನಿಯೊಂದಿಗೆ ತಡವಾಗಿ ಆಗಮಿಸಿದ ಕಾರಣ ಮಧ್ಯಾಹ್ನ 12.23ಕ್ಕೆ ಹೊರಟಿದೆ. ಆ ವೇಳೆ ಉಳಿದ ಎಲ್ಲಾ ಪ್ರಯಾಣಿಕರು ಅದಾಗಲೇ ವಿಮಾನದಲ್ಲಿ ಕುಳಿತು ಕಾಯುತ್ತಿದ್ದರು. ಸಾಮಾಜಿಕ ಜಾಲತಾಣ X ನಲ್ಲಿ ವೈರಲ್ ಆದ ವಿಡಿಯೋದಲ್ಲಿ, ತಡವಾಗಿ ಬಂದ ಪ್ರಯಾಣಿಕ ಹಾಗೂ ಬಳಿಕ ವಿಮಾನಕ್ಕೇರಿದ ಅವರ ಪತ್ನಿಯನ್ನು ನೋಡಿ ಕೆಲವರು ವ್ಯಂಗ್ಯವಾಗಿ ಚಪ್ಪಾಳೆ ತಟ್ಟಿ ಅಸಮಾಧಾನ ಹೊರಹಾಕಿರುವುದು ಕಂಡುಬಂದಿದೆ.
ಆದರೆ ಘಟನೆ ಅಲ್ಲಿಗೇ ನಿಲ್ಲಲಿಲ್ಲ. ಬಳಿಕ ವಿಮಾನದೊಳಗೆ ಕೆಲ ಪ್ರಯಾಣಿಕರು ತೀವ್ರ ವಾಗ್ವಾದ ನಡೆಸಿದ್ದಾರೆ. ಆತ ಸಹ ಪ್ರಯಾಣಿಕರೊಂದಿಗೆ ಆಕ್ರೋಶದಿಂದ ಮಾತನಾಡಿ, ಅಸಭ್ಯ ಪದ ಬಳಕೆ ಮಾಡಿದ್ದಲ್ಲದೆ, “ನೀಚೇ ಉತರ್ ದಿಖಾತಾ ಹೂಂ ಕೌನ್ ಹೂಂ ಮೈ…” (ಕೆಳಗಿಳಿದ ಬಳಿಕ ನಾನ್ಯಾರೆಂದು ತೋರಿಸುತ್ತೇನೆ) ಎಂದು ಬೆದರಿಕೆ ಹಾಕಿದ್ದಾನೆ.
ತನ್ನ ವಿಳಂಬವನ್ನು ಸಮರ್ಥಿಸಿಕೊಳ್ಳಲು “ವಿಮಾನಗಳು ಯಾವಾಗಲೂ ತಡವಾಗುತ್ತವೆ” ಎಂದು ಆತ ಹೇಳಿದ ಮಾತು ಉಳಿದ ಪ್ರಯಾಣಿಕರ ಕೋಪವನ್ನು ಇನ್ನಷ್ಟು ಹೆಚ್ಚಿಸಿದೆ. ಕೊನೆಗೆ ಪ್ರಯಾಣಿಕರ ಒತ್ತಾಯದ ಮೇರೆಗೆ ಆತ ಕ್ಷಮೆ ಕೇಳಿದ್ದಾನೆ. ಬಳಿಕ ವಿಮಾನ ಮಂಗಳೂರು ಕಡೆ ಪ್ರಯಾಣ ಮುಂದುವರಿಸಿತು.
ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಾರ್ವಜನಿಕ ಶಿಸ್ತು ಮತ್ತು ಪರಸ್ಪರ ಗೌರವದ ಬಗ್ಗೆ ದೊಡ್ಡ ಚರ್ಚೆ ಆರಂಭವಾಗಿದೆ. ಸಮಯಕ್ಕೆ ಸರಿಯಾಗಿ ಬಂದು ಎಲ್ಲಾ ನಿಯಮಗಳನ್ನು ಪಾಲಿಸುವ ಪ್ರಯಾಣಿಕರಿಗೆ, ಕೆಲವರು ಮಾತ್ರ ತಮ್ಮ ಅನುಕೂಲಕ್ಕೆ ತಕ್ಕಂತೆ ವರ್ತಿಸುವುದು ಅಸಮಾಧಾನ ಮೂಡಿಸಿದೆ.
@Ministry_CA @mohol_murlidhar @Dev_Fadnavis @NidhiKamdarMH
— Punita Toraskar (@impuni) May 7, 2026
I am on board Mangaluru flight from Navi Mumbai . Our flight which was supposed to take off at 11.00 is taking off now at 12.23 bcoz of one passenger who arrived at 1100 for a flight supposed to take off at 1100 .
And… pic.twitter.com/LsMTz9I6yW
28-08-26 09:35 pm
HK News Staffer
ವಾಲ್ಮೀಕಿ ನಿಗಮ ಹಗರಣ ಎಫೆಕ್ಟ್ ; ಕೊನೆಗೂ ಸಚಿವ ಸ್ಥಾ...
28-08-26 12:41 pm
ಮಹಿಳೆಯರು ಇಲ್ಲದ ಸಂಪುಟ ಅಪೂರ್ಣ, ಮಂತ್ರಿಗಿರಿ ಕೇಳಿಲ...
28-08-26 12:13 pm
Yadgir Prayer Meeting: ಯಾದಗಿರಿಯಲ್ಲಿ ಉಜ್ಜೀವನದ...
25-08-26 03:39 pm
ಕರ್ನಾಟಕದಲ್ಲಿ H1N1 ಆತಂಕ ; 8 ತಿಂಗಳಲ್ಲಿ 4,212 ಪ...
24-08-26 03:16 pm
27-08-26 12:39 pm
HK News Staffer
ಪುತ್ರಿಯ ಅಂತರ್ಜಾತಿ ವಿವಾಹ ; ಕಣ್ಣೂರು ಮುಚ್ಚಿಲೋಟ್...
26-08-26 06:41 pm
ಹಿಜಾಬ್ ಇಸ್ಲಾಮಿನ ಧಾರ್ಮಿಕ ಆಚರಣೆಯಲ್ಲಿ ಅನಿವಾರ್ಯ ಅ...
26-08-26 02:05 pm
ಮಂಗಳೂರನ್ನು ಪಾಲಕ್ಕಾಡ್ ರೈಲ್ವೇ ವಿಭಾಗದಿಂದ ತೆರವು ಮ...
26-08-26 12:01 pm
ಅಮರಾವತಿ ಆಸ್ಪತ್ರೆಯಲ್ಲಿ ಭೀಕರ ಅಗ್ನಿ ದುರಂತ ; ವೆಂಟ...
24-08-26 04:55 pm
28-08-26 08:57 pm
HK News Staffer
ಚೀರುಂಭಾ ಭಗವತಿ ತೀಯಾ ಸಮಾಜ ಸೇವಾ ಸಂಘದಲ್ಲಿ ಅವ್ಯವಹಾ...
28-08-26 02:11 pm
ಪಾಲ್ಘಾಟ್ ರೈಲ್ವೇಯಿಂದ ಮಂಗಳೂರು ಪ್ರತ್ಯೇಕವಾದರೆ ಕೇರ...
28-08-26 01:19 pm
G R Hospital, VHP, Mangalore: ಜಿ.ಆರ್ ಆಸ್ಪತ್ರೆ...
27-08-26 10:59 pm
ಕ್ಯಾನ್ಸರ್ ಹೋರಾಟದ ಮಧ್ಯೆ ದರ್ಶನ ಪಾತ್ರಿಗೆ 7ನೇ ನಮೋ...
27-08-26 08:26 pm
28-08-26 09:03 pm
HK News Staffer
ಮಧ್ಯಪ್ರದೇಶದಲ್ಲಿ ಪ್ರಪಾತಕ್ಕೆ ಉರುಳಿ ಬಿದ್ದ ಬಸ್ ;...
28-08-26 07:40 pm
ತೆರಿಗೆ ಮೊತ್ತವನ್ನು 80 ಲಕ್ಷದಿಂದ 30 ಲಕ್ಷ ರೂ.ಗೆ ಇ...
28-08-26 06:22 pm
ಕಾನ್ಪುರದಲ್ಲಿ ತರಬೇತಿ ವಿಮಾನ ಪತನ ; ಉಡುಪಿ ಮೂಲದ 22...
28-08-26 04:17 pm
ಪುತ್ತೂರಿನ ದಾಖಲೆ ಸುಟ್ಟ ಪ್ರಕರಣ ; ನಾವು ಹಿಂದು- ಮು...
27-08-26 07:23 pm