ಬ್ರೇಕಿಂಗ್ ನ್ಯೂಸ್
            
                        17-09-20 07:51 pm Mangalore Reporter ಕರಾವಳಿ
            ಮಂಗಳೂರು, ಸೆಪ್ಟಂಬರ್ 17: ತಾನೊಂದು ಬಗೆದರೆ ವಿಧಿಯೊಂದು ಬಗೆಯುತ್ತೆ ಅಂತಾರೆ. ಆ ಮಹಿಳೆಯ ಬದುಕಲ್ಲೂ ಅದೇ ಆಗಿತ್ತು. ಆಕೆ ತನ್ನ ಗಂಡನ ಉಳಿವಿಗಾಗಿ ಗೋಗರೆದರು. ಸಹಾಯಕ್ಕಾಗಿ ಅಂಗಲಾಚಿದರು. ಮಹಿಳೆಯ ನೋವು ಕಂಡು ನೆರವಿನ ಕೈಗಳೂ ಸಹಾಯ ಹಸ್ತ ಚಾಚಿದವು. ಆದರೆ, ವಿಧಿಯಾಟ ಬೇರೆಯೇ ಆಗಿತ್ತು. ಸಾವಿರ ಹೃದಯಗಳು ಮಿಡಿದರೂ ಜೀವ ಉಳಿಯಲೇ ಇಲ್ಲ !
ಹೌದು.. ದಾನಿಗಳು ಮಿಡಿದರೂ ವಿಧಿ ಮಾತ್ರ ಮರುಗಲೇ ಇಲ್ಲ. ಆಕೆಯ ಹೆಸರು ಗೀತಾ.. ಎರಡು ದಿನಗಳ ಹಿಂದೆ ಆಕೆಯ ಗಂಡ ಬೋಳಾರದ ರಂಜೇಶ್ ಶೆಟ್ಟಿ ಕಿಡ್ನಿ ಕಾಯಿಲೆಯಿಂದಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ, ಐಸಿಯುನಲ್ಲಿ ದಾಖಲಿಸಲು ಆಕೆಯ ಬಳಿ ಹಣ ಇರಲಿಲ್ಲ. ತನ್ನಲ್ಲಿದ್ದ ಬಂಗಾರವನ್ನು ಮಾರಿ 50 ಸಾವಿರ ರೂಪಾಯಿ ಮಾಡಿ, ಐಸಿಯುಗೆ ದಾಖಲು ಮಾಡಿದ್ದರು. ಆಬಳಿಕ ಆಸ್ಪತ್ರೆ ಬಳಿಯ ಮೆಡಿಕಲ್ ಶಾಪ್ ಒಂದರಲ್ಲಿ ತನ್ನ ನೋವನ್ನು ಹೇಳಿಕೊಂಡರು. ಮೆಡಿಕಲ್ ಶಾಪ್ ಹುಡುಗ ಆಪದ್ಬಾಂಧವ ಆಸಿಫ್ ಅವರಿಗೆ ಸುದ್ದಿ ಮುಟ್ಟಿಸಿದ್ದರು. ನೇರವಾಗಿ ಆಸ್ಪತ್ರೆಗೆ ಧಾವಿಸಿ ಬಂದ ಆಸಿಫ್, ಒಂದು ವಿಡಿಯೋ ಮಾಡಿ ಅದರಲ್ಲಿ ಅಕೌಂಟ್ ನಂಬರ್ ದಾಖಲಿಸಿ, ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದರು.


ಮಹಿಳೆ ಗೀತಾ ತುಳುವಿನಲ್ಲಿ ತನ್ನ ನೋವನ್ನು ಹೇಳಿಕೊಂಡಿದ್ದರು. ಬಂಗಾರ ಮಾರಿ 50 ಸಾವಿರ ತಂದಿದ್ದೇನೆ. ದಯವಿಟ್ಟು ನನ್ನ ಗಂಡನನ್ನು ಉಳಿಸಿ ಕೊಡಿ. ಸಣ್ಣ ಮಗು ಇದೆ ಎಂದು ಅಳು ತೋಡಿಕೊಂಡಿದ್ದರು. ಅಲ್ಲದೆ, ಆಸಿಫ್ ಕೂಡ ಧರ್ಮ ಭೇದ ನೋಡದೆ ಈ ತಾಯಿಯ ಮಾಂಗಲ್ಯ ಉಳಿಸಲು ನೆರವಾಗಿ ಎಂದು ಮನವಿ ಮಾಡಿದ್ದರು. ಸೆ.15ರ ರಾತ್ರಿ ಎಂಟು ಗಂಟೆಗೆ ಅಪ್ಲೋಡ್ ಆಗಿದ್ದ ಈ ವಿಡಿಯೋ ವಾಟ್ಸಪ್ ಗ್ರೂಪ್ ಗಳಲ್ಲಿ ಭಾರೀ ವೈರಲ್ ಆಗಿತ್ತು. ವಿಡಿಯೋ ವೈರಲ್ ಆಗುತ್ತಿದ್ದಂತೆ ದೇಶ- ವಿದೇಶಗಳಿಂದ ನೆರವಿನ ಮಹಾಪೂರವೂ ಹರಿದು ಬಂದಿತ್ತು. ಕೇವಲ ಅರ್ಧ ದಿನದಲ್ಲಿ 14 ಲಕ್ಷ ರೂಪಾಯಿ ಸಂಗ್ರಹ ಆಗಿತ್ತು. ಕರುಣೆಗೆ ಮಿಡಿವ ಹೃದಯಗಳು ನಮ್ಮ ನಡುವೆ ಇವೆ ಎನ್ನುವುದನ್ನು ಸಹೃದಯರು ತೋರಿಸಿಕೊಟ್ಟಿದ್ದರು. ಮರುದಿನ ಮಧ್ಯಾಹ್ನ ಮತ್ತೊಂದು ವಿಡಿಯೋ ಮಾಡಿದ್ದ ಆಸಿಫ್, ಚಿಕಿತ್ಸೆಗೆ ಐದು ಲಕ್ಷ ಬೇಕಾಗಿತ್ತು. ಏಳು ಲಕ್ಷ ಬರಬಹುದು ಅಂದ್ಕೊಂಡಿದ್ದೆವು. ನಿರೀಕ್ಷೆಗೂ ಮೀರಿ ನೆರವು ನೀಡಿದ್ದೀರಿ. ನಿಮ್ಮ ನೆರವಿಗೆ ಆಭಾರಿಯಾಗಿದ್ದೇನೆ ಎಂದು ಹೇಳಿದ್ದರು.
ಆದರೆ, ಮಹಿಳೆಯ ನೋವಿಗೆ ಸಾವಿರ ಹೃದಯಗಳು ಮಿಡಿದರೂ ಆಕೆಯ ಗಂಡನನ್ನು ಮಾತ್ರ ಉಳಿಸಿಕೊಳ್ಳಲು ಆಗಲಿಲ್ಲ. ಮೊದಲೇ ಹೃದಯ ರೋಗಿಯಾಗಿದ್ದ ರಂಜೇಲ್ ಶೆಟ್ಟಿಗೆ ಹಿಂದೊಮ್ಮೆ ಸರ್ಜರಿ ಆಗಿತ್ತು. ಈಗ ಕಿಡ್ನಿ ವೈಫಲ್ಯ ಆಗಿದ್ದಲ್ಲದೆ, ಕೊರೊನಾ ರೋಗ ಬಾಧಿತರಾಗಿ ಒಂದೇ ದಿನದಲ್ಲಿ ಮೃತಪಟ್ಟಿದ್ದಾರೆ. ಸಾವಿರ ಹೃದಯಗಳು ಸೇರಿ ಬಡಿದಾಡಿದರೂ ವಿಧಿಯಾಟ ಬದಲಿಸಲಿಲ್ಲ. ಆದರೆ, ಮಾನವೀಯತೆಗೆ ಜನ ಸ್ಪಂದಿಸುತ್ತಾರೆ ಅನ್ನುವುದನ್ನು ತೋರಿಸಿಕೊಟ್ಟಿದ್ದಾರೆ.
            
            
            
    
            
             04-11-25 04:38 pm
                        
            
                  
                Bangalore Correspondent    
            
                    
ಸಚಿವ ಸತೀಶ್ ಜಾರಕಿಹೊಳಿ ದಿಢೀರ್ ದೆಹಲಿಗೆ ; ಕೆಪಿಸಿಸ...
03-11-25 05:17 pm
ಕಣ್ಣೂರಿನ ಪಯ್ಯಂಬಲಂ ಬೀಚ್ ನಲ್ಲಿ ಸಮುದ್ರಕ್ಕಿಳಿದ ಬೆ...
02-11-25 11:09 pm
ಆರೆಸ್ಸೆಸ್ನವರಷ್ಟು ಹೇಡಿಗಳು ಯಾರೂ ಇಲ್ಲ, ಅವರ್ಯಾಕೆ...
01-11-25 09:33 pm
ನಮ್ಮ ಕ್ಷೇತ್ರದಲ್ಲಿ ಪಥಸಂಚಲನ ಮಾಡೋದನ್ನು ಆರೆಸ್ಸೆಸ್...
31-10-25 08:10 pm
    
            
             03-11-25 01:13 pm
                        
            
                  
                HK News Desk    
            
                    
ಜೋಧಪುರ ; ಭೀಕರ ರಸ್ತೆ ಅಪಘಾತದಲ್ಲಿ 18 ಜನರು ಸಾವು,...
02-11-25 11:12 pm
ಕೇರಳದಲ್ಲಿ ಮುಸ್ಲಿಮ್ ಮತ್ತು ಕ್ರಿಶ್ಚಿಯನ್ನರಿಗೆ ಒಬಿ...
02-11-25 05:13 pm
ಜೆಡ್ಡಾದಿಂದ ಹೈದರಾಬಾದ್ ಬರುತ್ತಿದ್ದ ವಿಮಾನದಲ್ಲಿ ಬ...
01-11-25 07:27 pm
ಭಾರತದಲ್ಲಿ ಸ್ವತಂತ್ರವಾಗಿದ್ದೇನೆ, ಮತ್ತೆ ಬಾಂಗ್ಲಾದೇ...
30-10-25 03:20 pm
    
            
             04-11-25 06:15 pm
                        
            
                  
                Mangalore Correspondent    
            
                    
ವ್ಯಾಟಿಕನ್ ಸಿಟಿಯ ಭಾರತದ ರಾಯಭಾರಿ ಆ್ಯಂಡ್ರಿಯಾ ಫಾನ್...
04-11-25 05:06 pm
ಧರ್ಮಸ್ಥಳ ಪ್ರಕರಣ ; ಎಸ್ಐಟಿ ತನಿಖಾ ಪ್ರಕ್ರಿಯೆಗೆ ಮಹ...
04-11-25 05:03 pm
ಹಿಂದುಗಳು, ಬಿಜೆಪಿಗರೆಂದು ತಾರತಮ್ಯಗೈದರೆ ಕ್ಷೇತ್ರದ...
03-11-25 10:47 pm
ಡಿ.27 ರಂದು 9ನೇ ವರ್ಷದ ಮಂಗಳೂರು ಕಂಬಳ ; ಈ ಬಾರಿ ’ನ...
03-11-25 05:20 pm
    
            
             04-11-25 02:11 pm
                        
            
                  
                Mangalore Correspondent    
            
                    
ಟೋಪಿ ನೌಫಾಲ್ ಕೊಲೆಯಲ್ಲ, ರೈಲು ಡಿಕ್ಕಿ ಹೊಡೆದು ಸಾವು...
03-11-25 12:33 pm
ಶಬರಿಮಲೆ ಅಯ್ಯಪ್ಪ ದೇವಸ್ಥಾನದಲ್ಲಿ ಚಿನ್ನ ಕಳವು ಪ್ರಕ...
01-11-25 07:25 pm
Rowdy Topi Naufal Murder, Mangalore: ಮಂಗಳೂರಿನ...
01-11-25 03:31 pm
ವೃದ್ಧ ಮಹಿಳೆಗೆ ಡಿಜಿಟಲ್ ಅರೆಸ್ಟ್ ಬಲೆ ; ಐದು ಗಂಟೆಯ...
01-11-25 01:31 pm