ಬ್ರೇಕಿಂಗ್ ನ್ಯೂಸ್
18-12-21 10:38 pm HK Desk news ಕರಾವಳಿ
ಮಂಗಳೂರು, ಡಿ.19: ದೇಶಾದ್ಯಂತ ಎಲ್ಲರಿಗೂ ಕೊರೊನಾ ಲಸಿಕೆ ನೀಡಬೇಕು ಎಂದು ಪ್ರಧಾನಿ ಮೋದಿ ಕರೆ ಕೊಟ್ಟಿದ್ದಾರೆ. ಆದರೆ, ಆರೋಗ್ಯ ಇಲಾಖೆಯಲ್ಲಿ ಲಸಿಕೆ ಪಡೆಯಬೇಕಿದ್ದರೆ ಆಧಾರ್ ಕಾರ್ಡ್, ಮೊಬೈಲ್ ನಂಬರ್ ಬೇಕು. ಆಸ್ಪತ್ರೆಗೆ ಹೋದರೂ ದಾಖಲೆ ಪತ್ರಗಳಿಲ್ಲದಿದ್ದರೆ ಲಸಿಕೆ ನೀಡಲು ಆಗಲ್ಲ ಎನ್ನುತ್ತಾರೆ. ಹಾಗಿದ್ದರೆ, ಅನಾಥರು, ನಿರ್ಗತಿಕರು ದಾಖಲೆ ಪತ್ರಗಳಿಗಾಗಿ ಎಲ್ಲಿ ಹೋಗಬೇಕು. ಅಂಥವರಿಗೆ ಲಸಿಕೆ ಹೇಗೆ ನೀಡಬೇಕು ಇತ್ಯಾದಿ ಪ್ರಶ್ನೆಗಳಿಗೆ ಉತ್ತರ ಇಲ್ಲದಾಗಿತ್ತು.
ಇಂಥ ಉತ್ತರ ಇಲ್ಲದ ಪ್ರಶ್ನೆಗಳಿಗೆ ಪ್ರಧಾನಿ ಮೋದಿಯೇ ಉತ್ತರ ನೀಡಿದ್ದರು. ಸ್ಪೆಷಲ್ ಡ್ರೈವ್ ಮೂಲಕ ಅಂಥ ವಿಭಾಗದವರಿಗೆ ಲಸಿಕೆ ನೀಡಲು ಕೇಂದ್ರ ಸರಕಾರವೇ ಅವಕಾಶ ಕೊಟ್ಟಿತ್ತು. ಕಳೆದ ಬಾರಿ ಸೆ.17ರಂದು ಪ್ರಧಾನಿ ಮೋದಿ ಜನ್ಮದಿನದಂದು ಇದೇ ವಿಶೇಷ ಅವಕಾಶವನ್ನು ಬಳಸ್ಕೊಂಡು ಮಂಗಳೂರಿನ ಸಮರ್ಥನಾ ಫೌಂಡೇಶನ್ ಅನಾಥರು, ನಿರ್ಗತಿಕರಿಗೂ ಕೊರೊನಾ ಲಸಿಕೆ ನೀಡಲು ಮುಂದಾಗಿತ್ತು.

ಮಂಗಳೂರಿನ ನೆಹರು ಮೈದಾನದ ಆಸುಪಾಸಿನಲ್ಲಿ ನೂರಾರು ಮಂದಿ ನಿರ್ಗತಿಕರು ಇದ್ದಾರೆ. ಅನಾಥರು, ಭಿಕ್ಷುಕರು ಕೂಡ ಇದರಲ್ಲಿದ್ದಾರೆ. ಅವರಲ್ಲಿ ಯಾರಿಗೂ ದಾಖಲೆ ಪತ್ರಗಳಿಲ್ಲ. ಮೊಬೈಲುಗಳಿಲ್ಲ. ಆಧಾರ್ ಕಾರ್ಡ್ ಇಲ್ಲ. ಬೇರೆ ಬೇರೆ ಊರುಗಳಿಂದ, ಎಲ್ಲೋ ರಾಜ್ಯದ ಮೂಲೆಯಿಂದ ಬಂದು ಇಲ್ಲಿ ಉಳಿದುಕೊಂಡವರಿದ್ದಾರೆ. ಭಾಷೆ, ತಮ್ಮ ಕುಟುಂಬ, ಊರಿನ ಪರಿವೇ ಇಲ್ಲದವರೂ ಇದ್ದಾರೆ. ಅವರನ್ನು ಪತ್ತೆ ಮಾಡಿ, ಕೊರೊನಾ ಲಸಿಕೆ ನೀಡುವ ಕೆಲಸವನ್ನು ಸಮರ್ಥನಾ ಫೌಂಡೇಶನ್ ಮಾಡಿದೆ. ಕಳೆದ ಬಾರಿ 83 ಜನಕ್ಕೆ ಈ ರೀತಿ ಲಸಿಕೆ ನೀಡಲಾಗಿತ್ತು. ಈಗ 84 ದಿನಗಳ ನಂತರ ಡಿ.17ರಂದು ಎರಡನೇ ಡೋಸ್ ನೀಡಲಾಗಿದ್ದು, ಈ ಬಾರಿ 55 ಜನರು ಎರಡನೇ ಹಂತದ ಡೋಸ್ ಪಡೆದಿದ್ದಾರೆ.

ಕೋವಿನ್ ಏಪ್ ನಲ್ಲಿ ಒಂದೇ ಮೊಬೈಲ್ ನಂಬರಿನಲ್ಲಿ ಸ್ಪೆಷಲ್ ಡ್ರೈವ್ ಬಗ್ಗೆ ರಿಜಿಸ್ಟರ್ ಮಾಡಿಕೊಂಡು ಅವಕಾಶ ನೀಡಲಾಗಿತ್ತು. ಈ ರೀತಿ ವಿಶೇಷ ಆದ್ಯತೆಯಲ್ಲಿ ಲಸಿಕೆ ನೀಡಲು ಮಂಗಳೂರಿನಲ್ಲಿ ಕೆಎಂಸಿ ಆಸ್ಪತ್ರೆಗೆ ಅನುಮತಿ ನೀಡಲಾಗಿತ್ತು. ಸರಕಾರದ ಉಚಿತ ಲಸಿಕೆಯನ್ನು ಪಡೆದು ಸಮರ್ಥನಾ ಫೌಂಡೇಶನ್ ಆಶ್ರಯದಲ್ಲಿ ಕೆಎಂಸಿ ಆಸ್ಪತ್ರೆ ಸಿಬಂದಿ ಲಸಿಕೆಯನ್ನು ನೀಡಿದ್ದಾರೆ. ಈ ಬಗ್ಗೆ ತುಂಬ ಸಂತಸಗೊಂಡಿರುವ ಅನಾಥರು, ನಾವು ಲಸಿಕೆ ಪಡೆಯುವುದಕ್ಕಾಗಿ ಆಸ್ಪತ್ರೆಗಳಿಗೆ ಹೋಗಿದ್ದಾಗ ಆಧಾರ್ ಕಾರ್ಡ್, ಮೊಬೈಲ್ ನಂಬರ್ ಕೇಳುತ್ತಿದ್ದರು. ಆದರೆ ನಾವು ಮನೆ ಬಿಟ್ಟು ಎಷ್ಟೋ ವರ್ಷಗಳಾಗಿವೆ. ನಮ್ಮಲ್ಲಿ ಮೊಬೈಲ್ ಎಲ್ಲಿಂದ ಬರಬೇಕು. ಜೀವ ಮಾತ್ರ ಇದೆ, ಉಳಿದಿದ್ದು ಯಾವುದೂ ಇಲ್ಲ. ನಮ್ಮ ಕಷ್ಟ ಕಂಡು ಲಸಿಕೆ ನೀಡಿದ್ದಕ್ಕಾಗಿ ಧನ್ಯವಾದ ಎನ್ನುತ್ತಿದ್ದರು.

ನಿರ್ಗತಿಕರೇ ಆಗಿದ್ದರೂ, ಅವರಿಗೆ ಲಸಿಕೆ ಪಡೆದಿರುವುದಕ್ಕಾಗಿ ಕೆಎಂಸಿ ಆಸ್ಪತ್ರೆಯಿಂದ ಕೊರೊನಾ ಲಸಿಕೆ ಕಾರ್ಡ್ ಅನ್ನು ನೀಡಲಾಗಿದೆ. ಸಮಾಜಮುಖಿ ಕೆಲಸ ಮಾಡಿರುವ ಸಮರ್ಥನಾ ಫೌಂಡೇಶನ್ ಅಧ್ಯಕ್ಷ ಕ್ಯಾ.ಬೃಜೇಶ್ ಚೌಟ, ಟ್ರಸ್ಟಿ ಸುಜಿತ್ ಪ್ರತಾಪ್, ಪ್ರೀತಮ್ ರೈ, ಸಚಿನ್ ಶೆಟ್ಟಿ, ಅನಿಲ್ ಪ್ರಸಾದ್, ಕೆಎಂಸಿ ಆಸ್ಪತ್ರೆಯ ಸಿಂಧು ಪ್ರಸಾದ್, ಜಯರಾಮ ಪೂಜಾರಿ ಒಡಗೂಡಿ ಈ ಕೆಲಸ ಮಾಡಿದ್ದಾರೆ.
Mangalore Covid vaccine special drive for the poor and needy by Samarthana Foundation, wins hearts of people. Also a Health card from Kmc hospital has been issued by the foundation to the needy and poor for their medical benefits.
17-09-26 04:13 pm
HK News Staffer
ಚಿತ್ರರಂಗದ ಸಾರ್ವಕಾಲಿಕ ಶ್ರೇಷ್ಠ ನಟ ಅನಂತನಾಗ್ ಗೆ '...
16-09-26 10:40 pm
Tulu Language, Shivraj Tangadagi: ತುಳುವಿಗೆ 2ನ...
16-09-26 01:51 pm
Pradeep Eshwar, Pratap Simha: ಪೊಲೀಸ್ ಠಾಣೆಗೆ...
15-09-26 09:13 pm
Imran Pasha, Pratap Simha: ನಿನ್ನಂತಹ ಒಂದು ಲಕ್...
15-09-26 04:46 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
18-09-26 07:30 pm
HK News Staffer
Puttur Medical College, Dakshina Kannada, Man...
18-09-26 06:08 pm
Tulu second official language: ತುಳುನಾಡಿನ ದಶಕಗ...
18-09-26 04:46 pm
Dk Shivakumar, Mangalore, social media: ಸೋಶಿಯ...
18-09-26 04:11 pm
CM Dk Shivakumar, Mangalore: ಕದ್ರಿ ದೇವಸ್ಥಾನದಲ...
18-09-26 03:39 pm
17-09-26 02:22 pm
HK News Staffer
Bangalore Murder, Crime: ಪ್ರೀತಿಸಿ ಮದುವೆಯಾಗಿದ್...
17-09-26 01:56 pm
Bangalore kidnap, Crime: ಬೆಂಗಳೂರಿನಲ್ಲಿ ಶಾಕ್...
17-09-26 12:35 pm
Manglore Cyber crime, Stock Market: ಷೇರು ಮಾರ್...
17-09-26 11:45 am
ಬೆಳ್ತಂಗಡಿ; ಗೃಹಪ್ರವೇಶಕ್ಕೆ ಹೋದಾಗ ಮನೆಗೆ ಕನ್ನ, ₹1...
16-09-26 11:18 am