Mangalore, UT Khader: ಹಿಂದುಳಿದ ವರ್ಗಗಳ ಆಯೋಗ ಸ್ವತಂತ್ರ ಸಂಸ್ಥೆ ; ಸ್ಪೀಕರ್ ಆದರೇನು ಜನಸೇವಕನಾಗಿ ಸಭೆ ನಡೆಸಿದ್ದೇನೆ, ನಕಾರಾತ್ಮಕ ಮಾತುಗಳು ಅವರ ಪ್ರಬುದ್ಧತೆ ಪ್ರದರ್ಶಿಸುತ್ತದೆ, ಬಿಜೆಪಿ ಟೀಕೆಗೆ ಖಾದರ್ ಟಾಂಗ್

18-09-25 09:12 pm       Mangalore Correspondent   ಕರಾವಳಿ

ಸಕಾರಾತ್ಮಕ ಚಿಂತನೆ ಇರುವವರು ನಾನು ನಡೆಸಿರುವ ಸಭೆ ಹಾಗೂ ಸುದ್ಧಿಗೋಷ್ಠಿಯನ್ನು ಸಕಾರಾತ್ಮಕವಾಗಿಯೇ ಸ್ವೀಕರಿಸುತ್ತಾರೆಯೇ ಹೊರತು ಅದೇ ವಿಚಾರವನ್ನ ಮುಂದಿಟ್ಟು ನಕಾರಾತ್ಮಕವಾಗಿ ಮಾತನಾಡುವವರಿಗೆ ಏನೂ ಮಾಡಲಾಗದು. ಅದು ಅವರ ಪ್ರಬುದ್ಧತೆಯನ್ನ ಪ್ರದರ್ಶಿಸುತ್ತದೆ.

ಉಳ್ಳಾಲ‌, ಸೆ.18 : ಸಕಾರಾತ್ಮಕ ಚಿಂತನೆ ಇರುವವರು ನಾನು ನಡೆಸಿರುವ ಸಭೆ ಹಾಗೂ ಸುದ್ಧಿಗೋಷ್ಠಿಯನ್ನು ಸಕಾರಾತ್ಮಕವಾಗಿಯೇ ಸ್ವೀಕರಿಸುತ್ತಾರೆಯೇ ಹೊರತು ಅದೇ ವಿಚಾರವನ್ನ ಮುಂದಿಟ್ಟು ನಕಾರಾತ್ಮಕವಾಗಿ ಮಾತನಾಡುವವರಿಗೆ ಏನೂ ಮಾಡಲಾಗದು. ಅದು ಅವರ ಪ್ರಬುದ್ಧತೆಯನ್ನ ಪ್ರದರ್ಶಿಸುತ್ತದೆ. ನಾನು ವಿಧಾನಸಭೆಯ ಸಭಾಧ್ಯಕ್ಷನಾಗಿದ್ದರೂ ನನ್ನ ಕ್ಷೇತ್ರ ಮತ್ತು ಜಿಲ್ಲೆಗೆ ಜನಸೇವಕನಾಗಿ ಜನರ ಸಮಸ್ಯೆಗಳಿಗೆ ಸದಾ ಸ್ಪಂದಿಸುತ್ತೇನೆಂದು ಸ್ಪೀಕರ್ ಯು.ಟಿ.ಖಾದರ್ ಬಿಜೆಪಿ ಟೀಕೆಗೆ ಟಾಂಗ್ ನೀಡಿದ್ದಾರೆ. 

ಯು.ಟಿ ಖಾದರ್ ಅವರು ಸ್ಪೀಕರಾ ಅಥವಾ ಜಿಲ್ಲೆಯ ಉಸ್ತುವಾರಿ ಸಚಿವರೇ..? ಇದುವರೆಗೆ ಯಾವುದೇ ಸ್ಪೀಕರ್ ಗಳು ಆಡಳಿತಾತ್ಮಕ ವಿಚಾರದಲ್ಲಿ ಸಭೆ ನಡೆಸಿರಲಿಲ್ಲ ಎಂದು ಬಿಜೆಪಿ ಶಾಸಕ ವೇದವ್ಯಾಸ ಕಾಮತ್ ಮತ್ತು ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಅವರ ಟೀಕೆಗೆ ಸ್ಪೀಕರ್ ಯು.ಟಿ.ಖಾದರ್ ತಿರುಗೇಟು ನೀಡಿದ್ದಾರೆ. ಸೋಮೇಶ್ವರ, ಉಚ್ಚಿಲದಲ್ಲಿ ಖಾಸಗಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಅವರು ಮಾಧ್ಯಮದವರ ಪ್ರಶ್ನೆಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. ರಾಜ್ಯ ಹಿಂದುಳಿದ ವರ್ಗಗಳ ಅಯೋಗವು ಸಾಂವಿಧಾನಿಕ ಸ್ವತಂತ್ರ ಸಂಸ್ಥೆಯಾಗಿದೆಯೇ ಹೊರತು ಅದು ಸರ್ಕಾರದ ಅಧೀನದಲ್ಲಿಲ್ಲ. ಆಯೋಗವು ಜಾತಿ‌ ಗಣತಿಗೆ ಮುಂದಾಗಿದ್ದು ಅದಕ್ಕೆ ಸಹಕಾರ ನೀಡುವುದು ಸರ್ಕಾರದ ಜವಾಬ್ದಾರಿ. ಈ ಬಗ್ಗೆ ಜನರಲ್ಲಿರುವ ಗೊಂದಲಗಳನ್ನ ಮೊದಲೇ ಬಗೆಹರಿಸಬೇಕೆನ್ನುವ ನಿಟ್ಟಿನಲ್ಲಿ ಎಲ್ಲಾ ವರ್ಗದ ಜನರ ಜೊತೆ ಕುಳಿತು ಚರ್ಚಿಸಿ ಗೊಂದಲ‌ಗಳನ್ನ ಬಗೆಹರಿಸಲು ಪ್ರಯತ್ನಿಸಿದರೆ ಬೇರೆಯವರಿಗೆ ಆಗುವ ತೊಂದರೆ ಏನೆಂದು ಪ್ರಶ್ನಿಸಿದರು. 

ಕೆಂಪು ಕಲ್ಲಿಗೆ ಹೊಸ ನಿಯಮ ಜಾರಿ 

ಇಲ್ಲಿಯವರೆಗೆ ಕೆಂಪು ಕಲ್ಲು ವ್ಯಾಪಾರಿಗಳು ಮತ್ತು ಕೆಲಸಗಾರರು ಅಧಿಕಾರಿಗಳ ಭಯ ಮತ್ತು ನಿಯಂತ್ರಣದಲ್ಲೇ ಕೆಲಸ ಮಾಡುತ್ತಿದ್ದರು. ಸರಕಾರ ಇದನ್ನ ಮನಗಂಡು ಕೆಂಪುಕಲ್ಲು ವ್ಯಾಪಾರಸ್ಥರು ಮತ್ತು ಕೆಲಸಗಾರರು ಸ್ವಾಭಿಮಾನ ಮತ್ತು ದೈರ್ಯದಿಂದ ವ್ಯಾಪಾರ ಮಾಡಬೇಕೆನ್ನುವ ನಿಟ್ಟಿನಲ್ಲಿ ಈ ಹಿಂದಿನ ಎಲ್ಲಾ ನಿಯಮಗಳನ್ನ ಸಡಿಲಿಸಿದ್ದು ಅದೀಗ ಹೊಸ ನಿಯಮವಾಗಿ ಜಾರಿಗೊಳ್ಳುತ್ತಿದೆ. ಇದರಿಂದ ವ್ಯಾಪಾರಿಗಳಿಗೆ ಎಲ್ಲಾ ರೀತಿಯ ಪ್ರಯೋಜನ ದೊರಕಲಿದೆ. ಅಲ್ಲದೆ ಜನರಿಗೂ ಕೆಂಪುಕಲ್ಲು ಕಡಿಮೆ ದರದಲ್ಲಿ ಸಿಗುವ ವಿಶ್ವಾಸ ಇದೆಯೆಂದು ಖಾದರ್ ಹೇಳಿದರು.

Karnataka Legislative Assembly Speaker U.T. Khader has responded sharply to BJP leaders’ criticism, stating that while he may hold the position of Speaker, he continues to serve as a public representative committed to addressing people’s issues.