ಬ್ರೇಕಿಂಗ್ ನ್ಯೂಸ್
            
                        18-09-25 06:11 pm Mangalore Correspondent ಕರಾವಳಿ
            ಮಂಗಳೂರು, ಸೆ.18 : ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ಜಾತಿ ಗಣತಿ ಮಾಡುತ್ತಿರುವುದನ್ನು ಸ್ವಾಗತಿಸುತ್ತೇನೆ. ಆದರೆ ತರಾತುರಿಯಲ್ಲಿ ಈ ಮಹತ್ತರ ಕೆಲಸವನ್ನು ಮಾಡಿ ಅವೈಜ್ಞಾನಿಕ ರೀತಿಯಲ್ಲಿ ಸಮೀಕ್ಷೆ ಆಗುವಂತಾಗಬಾರದು. ಬಂಟ ನಾಡವರು ಒಂದೇ ಆಗಿದ್ದು, ಸಮಾಜವನ್ನು ಪ್ರತ್ಯೇಕಿಸುವ ಕೆಲಸ ಮಾಡಬೇಡಿ. 118 ವರ್ಷಗಳ ಹಿಂದೆಯೇ ನಾವು ಬಂಟರು ಮತ್ತು ನಾಡವರು ಒಟ್ಟಿಗಿದ್ದೇವೆ ಎಂದು ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ ಹೇಳಿದ್ದಾರೆ.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಬಂಟರು ದಕ್ಷಿಣ ಕನ್ನಡ, ಕಾಸರಗೋಡು, ಉಡುಪಿ ಜಿಲ್ಲೆಯ ವ್ಯಾಪ್ತಿಯಲ್ಲಿದ್ದಾರೆ. ನಾಡವರು ಕುಂದಾಪುರ, ಸಾಗರ, ಶಿವಮೊಗ್ಗ ಭಾಗದಲ್ಲಿ ಇದ್ದಾರೆ. ನಾವು ಪರಸ್ಪರ ಸಂಬಂಧಿಕರಾಗಿದ್ದು, ಜೊತೆಗೇ ಇದ್ದೇವೆ. ನೂರು ವರ್ಷಗಳ ಹಿಂದೆಯೇ ನಾವು ಒಟ್ಟಿಗಿದ್ದೇವೆ. ನಮ್ಮನ್ನು ಬಂಟ ನಾಡವ ಎಂದೇ ಗುರುತಿಸಬೇಕು ಎಂದು ಸರಕಾರಕ್ಕೂ ಮನವಿ ಮಾಡಿದ್ದೇವೆ. ಆದರೆ ಈಗ ಜಾತಿ- ಶೈಕ್ಷಣಿಕ ಸಮೀಕ್ಷೆಯಲ್ಲಿ ಬಂಟರು ಎಂದು ಮಾತ್ರ ಗುರುತಿಸಿದ್ದಾರೆ. ನಾಡವರು ಏನೆಂದು ಗುರುತಿಸಬೇಕು ಎಂಬ ಬಗ್ಗೆ ಉಲ್ಲೇಖ ಇಲ್ಲ. ಇದರಿಂದ ಸಮಾಜದಲ್ಲಿ ಗೊಂದಲ ಉಂಟಾಗಿದೆ.

ನಿನ್ನೆ ಸ್ಪೀಕರ್ ಯುಟಿ ಖಾದರ್ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಭೆ ನಡೆಸುವ ವರೆಗೂ ನಮಗೆ ಯಾವ ರೀತಿಯ ಸಮೀಕ್ಷೆಯೆಂದು ಮಾಹಿತಿ ಇರಲಿಲ್ಲ. ಆಕ್ಷೇಪ ಸಲ್ಲಿಸುವುದಕ್ಕೂ ಸಮಯ ಇರಲಿಲ್ಲ. ಖಾದರ್ ಅವರಲ್ಲಿ ಈ ಕಾಲಂ ಸರಿಪಡಿಸಬೇಕೆಂದು ಕೇಳಿಕೊಂಡಿದ್ದು ಏಪ್ ನಲ್ಲಿ ಸರಿ ಮಾಡಿಸುವುದಾಗಿ ಅವರು ಒಪ್ಪಿದ್ದಾರೆ. ಸಮೀಕ್ಷೆಯ ವೇಳೆ ಮೊಬೈಲ್ ಏಪ್ ನಲ್ಲಿರುವ 8ನೇ ಕಾಲಂನಲ್ಲಿ ಧರ್ಮ ಎಂದಿರುವ ಜಾಗದಲ್ಲಿ ಹಿಂದೂ ಎಂದು ನಮೂದಿಸಿ, 9ನೇ ಕಾಲಂನಲ್ಲಿ ಜಾತಿ ಎಂದಿರುವ ಜಾಗದಲ್ಲಿ (ಕೋಡ್ ಸಂಖ್ಯೆ ಎ-0227) ಬಂಟ್ ಎಂದು ನಮೂದಿಸಬೇಕು. 11ನೇ ಕಾಲಂನಲ್ಲಿ ಸಮಾನಾರ್ಥಕ ಪದ ಎಂದಿರುವಲ್ಲಿ ನಾಡವ ಎಂದು ನಮೂದಿಸಬೇಕು ಎಂದು ಸಮಾಜ ಬಾಂಧವರಲ್ಲಿ ವಿನಂತಿಸುತ್ತಿದ್ದೇನೆ ಎಂದು ಅಜಿತ್ ರೈ ಹೇಳಿದ್ದಾರೆ.
ಇದೇ ರೀತಿ ನಾಡವ ಎಂದು ಕರೆಸಿಕೊಳ್ಳುವವರು 9ನೇ ಕಾಲಂನಲ್ಲಿ ಜಾತಿ ಎಂದಿರುವ ಜಾಗದಲ್ಲಿ (ಕೋಡ್ ಸಂಖ್ಯೆ ಎ-1026) ನಾಡವ ಎಂದು ನಮೂದಿಸಿ, ಸಮಾನಾರ್ಥ ಪದ ಇರುವ (ಎ-0227) ಜಾಗದಲ್ಲಿ ಬಂಟ್ ಎಂದು ನಮೂದಿಸಬೇಕಾಗಿದೆ. ಇಲ್ಲದಿದ್ದರೆ ಸಮಾಜದಲ್ಲಿ ಜನರ ಸಂಖ್ಯೆ ಕಡಿಮೆಯಾಗುವ ಸಾಧ್ಯತೆಯಿದೆ. ನಮ್ಮ ಸಮಾಜದವರು ದೇಶ- ವಿದೇಶದಲ್ಲಿ ಹರಡಿದ್ದು, ಸುಮಾರು 20 ಲಕ್ಷಕ್ಕೂ ಹೆಚ್ಚು ಇದ್ದಾರೆ. ಆದರೂ 40 ಶೇಕಡಾ ಜನ ಬಡತನದಲ್ಲಿಯೇ ಇದ್ದಾರೆ. ಕಾಂತರಾಜು ಆಯೋಗದಲ್ಲಿ ನಮ್ಮ ಸಂಖ್ಯೆಯನ್ನು 3.15 ಲಕ್ಷವೆಂದು ತಪ್ಪಾಗಿ ತೋರಿಸಿದ್ದಾರೆ. ಆ ಮಾಹಿತಿಯನ್ನು ಸ್ವೀಕರಿಸದೆ ಸರಿಯಾದ ಸಮೀಕ್ಷೆಯನ್ನು ಮಾಡಬೇಕಾಗಿ ಸಿಎಂ ಸಿದ್ದರಾಮಯ್ಯ ಅವರನ್ನು ಕೇಳಿಕೊಳ್ಳುತ್ತೇನೆ ಎಂದರು.
ಬಾಂಧವ್ಯ ಹೆಸರಲ್ಲಿ ಸಮೀಕ್ಷೆ
ಬಂಟ ಸಮಾಜದ ಸದಸ್ಯರನ್ನು ಗುರುತಿಸಲು ಮತ್ತು ನಮ್ಮ ಮೂರು ಜಿಲ್ಲೆಗಳಲ್ಲದೆ ದೇಶ- ವಿದೇಶದಲ್ಲಿ ಒಟ್ಟು ಎಷ್ಟು ಜನರಿದ್ದಾರೆ, ಸ್ಥಿತಿಗತಿ ಹೇಗಿದೆ ಎಂಬುದನ್ನು ತಿಳಿಯಲು ನಾವು ಬಂಟರ ಸಂಘದ ವತಿಯಿಂದ ಸಮೀಕ್ಷೆ ಮಾಡುತ್ತಿದ್ದೇವೆ. ಮೊಬೈಲ್ ಏಪ್ ಮೂಲಕ ಬಾಂಧವ್ಯ ಎನ್ನುವ ಹೆಸರಲ್ಲಿ ಸಮೀಕ್ಷೆ ನಡೆಸಲಾಗುತ್ತಿದ್ದು, ವಿಶ್ವ ಬಂಟರ ಮಾಹಿತಿ ಕೋಶವನ್ನು ತಯಾರಿಸಲು ಮುಂದಡಿ ಇಟ್ಟಿದ್ದೇವೆ. ಇದರಲ್ಲಿ ನಮ್ಮ ಸಮಾಜದ ಸರ್ವ ಜನರು ಪಾಲ್ಗೊಂಡು ಯಶಸ್ವಿಗೊಳಿಸಬೇಕಾಗಿ ಅಜಿತ್ ಕುಮಾರ್ ಮನವಿ ಮಾಡಿದ್ದಾರೆ.
ಸುದ್ದಿಗೋಷ್ಟಿಯಲ್ಲಿ ಉಪಾಧ್ಯಕ್ಷ ಕಾವು ಹೇಮನಾಥ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಕೆ.ಎಂ.ಶೆಟ್ಟಿ, ಕೋಶಾಧಿಕಾರಿ ಸಿಎಂ ರಾಮಮೋಹನ ರೈ, ಜತೆ ಕಾರ್ಯದರ್ಶಿ ಸಂಜೀವ ಶೆಟ್ಟಿ ಸಂಪಿಗೆದಡಿ ಉಪಸ್ಥಿತರಿದ್ದರು.
            
            
            Ajith Kumar Rai, President of the Bunt Nadavara Matru Sangha, has urged the Karnataka State Commission for Backward Classes to avoid creating confusion and division within communities during the ongoing caste and socio-educational survey.
    
            
             03-11-25 05:17 pm
                        
            
                  
                Bangalore Correspondent    
            
                    
ಕಣ್ಣೂರಿನ ಪಯ್ಯಂಬಲಂ ಬೀಚ್ ನಲ್ಲಿ ಸಮುದ್ರಕ್ಕಿಳಿದ ಬೆ...
02-11-25 11:09 pm
ಆರೆಸ್ಸೆಸ್ನವರಷ್ಟು ಹೇಡಿಗಳು ಯಾರೂ ಇಲ್ಲ, ಅವರ್ಯಾಕೆ...
01-11-25 09:33 pm
ನಮ್ಮ ಕ್ಷೇತ್ರದಲ್ಲಿ ಪಥಸಂಚಲನ ಮಾಡೋದನ್ನು ಆರೆಸ್ಸೆಸ್...
31-10-25 08:10 pm
'ನವೆಂಬರ್ ಕ್ರಾಂತಿ' ಮುನ್ಸೂಚನೆ ನೀಡಿದ್ದ ರಾಜಣ್ಣ ಅಖ...
31-10-25 06:02 pm
    
            
             03-11-25 01:13 pm
                        
            
                  
                HK News Desk    
            
                    
ಜೋಧಪುರ ; ಭೀಕರ ರಸ್ತೆ ಅಪಘಾತದಲ್ಲಿ 18 ಜನರು ಸಾವು,...
02-11-25 11:12 pm
ಕೇರಳದಲ್ಲಿ ಮುಸ್ಲಿಮ್ ಮತ್ತು ಕ್ರಿಶ್ಚಿಯನ್ನರಿಗೆ ಒಬಿ...
02-11-25 05:13 pm
ಜೆಡ್ಡಾದಿಂದ ಹೈದರಾಬಾದ್ ಬರುತ್ತಿದ್ದ ವಿಮಾನದಲ್ಲಿ ಬ...
01-11-25 07:27 pm
ಭಾರತದಲ್ಲಿ ಸ್ವತಂತ್ರವಾಗಿದ್ದೇನೆ, ಮತ್ತೆ ಬಾಂಗ್ಲಾದೇ...
30-10-25 03:20 pm
    
            
             03-11-25 10:47 pm
                        
            
                  
                Mangalore Correspondent    
            
                    
ಡಿ.27 ರಂದು 9ನೇ ವರ್ಷದ ಮಂಗಳೂರು ಕಂಬಳ ; ಈ ಬಾರಿ ’ನ...
03-11-25 05:20 pm
ಸಸಿಹಿತ್ಲು ಬೀಚ್ ನಲ್ಲಿ ನೀರಾಟಕ್ಕಿಳಿದು ಬೆಂಗಳೂರಿನ...
03-11-25 12:37 pm
ಧರ್ಮಸ್ಥಳ ಪ್ರಕರಣ ; ಗುರುತು ಪತ್ತೆಯಾಗದ 38 ಪ್ರಕರಣಗ...
02-11-25 10:23 pm
ಮಂಗಳೂರು ಅಂತಾರಾಷ್ಟ್ರೀಯ ಬ್ಯಾಡ್ಮಿಂಟನ್ ಕೂಟಕ್ಕೆ ತೆ...
02-11-25 06:57 pm
    
            
             03-11-25 12:33 pm
                        
            
                  
                Mangalore Correspondent    
            
                    
ಶಬರಿಮಲೆ ಅಯ್ಯಪ್ಪ ದೇವಸ್ಥಾನದಲ್ಲಿ ಚಿನ್ನ ಕಳವು ಪ್ರಕ...
01-11-25 07:25 pm
Rowdy Topi Naufal Murder, Mangalore: ಮಂಗಳೂರಿನ...
01-11-25 03:31 pm
ವೃದ್ಧ ಮಹಿಳೆಗೆ ಡಿಜಿಟಲ್ ಅರೆಸ್ಟ್ ಬಲೆ ; ಐದು ಗಂಟೆಯ...
01-11-25 01:31 pm
ಸುಹಾಸ್ ಶೆಟ್ಟಿ ಕೊಲೆ ಪ್ರಕರಣ ; 11 ಆರೋಪಿಗಳ ವಿರುದ್...
31-10-25 10:57 pm