ಬ್ರೇಕಿಂಗ್ ನ್ಯೂಸ್
08-08-21 10:05 pm Mangaluru Correspondent ಕರಾವಳಿ
ಮಂಗಳೂರು, ಆಗಸ್ಟ್ 8: ಕಂಬಳದ ಅಪ್ಪಟ ಅಭಿಮಾನಿ, ಕಂಬಳ ಕೋಣಗಳ ಸಾಧಕ ಗುರುಪುರ ನಿವಾಸಿ ಕೆದುಬರಿ ಗುರುವಪ್ಪ ಪೂಜಾರಿ (78) ರಸ್ತೆ ಅಪಘಾತಕ್ಕೆ ಬಲಿಯಾಗಿದ್ದಾರೆ.
ಕಂಬಳದ ಸಾಧನೆಯೊಂದಿಗೆ ಸ್ವತಃ ಕೃಷಿಕನಾಗಿದ್ದ ಗುರುವಪ್ಪ ಪೂಜಾರಿ ದಿನವೂ ಹಾಲು ಡೈರಿಗೆ ಒಯ್ಯುವ ಕೆಲಸ ಮಾಡುತ್ತಿದ್ದರು. ಇಂದು ಸಂಜೆ ತನ್ನ ಸ್ಕೂಟಿಯಲ್ಲಿ ಹಾಲನ್ನು ಒಯ್ಯುತ್ತಿದ್ದಾಗ ಗುರುಪುರದ ಬಳಿಯ ಕುಕ್ಕುದಕಟ್ಟೆ ಎಂಬಲ್ಲಿ ಎದುರಿನಿಂದ ಬಂದ ಕಾರು ಡಿಕ್ಕಿಯಾಗಿದೆ. ಇದರಿಂದ ರಸ್ತೆಗೆ ಎಸೆಯಲ್ಪಟ್ಟ ಗುರುವಪ್ಪ ಪೂಜಾರಿಯವರು ತೀವ್ರ ಗಾಯಗೊಂಡಿದ್ದು ಬಳಿಕ ಆಸ್ಪತ್ರೆ ತಲುಪುವಷ್ಟರಲ್ಲಿ ನಿಧನರಾಗಿದ್ದಾರೆ.
ನಾಲ್ಕು ದಶಕಗಳಿಂದ ತಮ್ಮ ಕೃಷಿಯೊಂದಿಗೆ ಕೋಣಗಳನ್ನು ಸಾಕುತ್ತಾ ಕಂಬಳಕ್ಕೆ ಒಯ್ಯುತ್ತಿದ್ದ ಕೆದುಬರಿ ಗುರುವಪ್ಪ ಪೂಜಾರಿ ಕಂಬಳ ಕ್ಷೇತ್ರದ ಅನನ್ಯ ಸಾಧಕರು. ಕಂಬಳದ ಮೇಲಿದ್ದ ಪ್ರೇಮದಿಂದ ಕೋಣಗಳನ್ನು ಒಯ್ಯುತ್ತಿದ್ದರೇ ವಿನಾ ಅವರು ಪದಕ ಗೆಲ್ಲುವತ್ತ ಮನಸ್ಸು ನೆಟ್ಟಿರಲಿಲ್ಲ. ಹಗ್ಗ ಕಿರಿಯ, ಹಿರಿಯ, ನೇಗಿಲು ಹಿರಿಯ, ಕಿರಿಯ, ಅಡ್ಡ ಹಲಗೆ, ಕನೆಹಲಗೆ ಹೀಗೆ ಕಂಬಳದ ಎಲ್ಲ ಪ್ರಕಾರಗಳಲ್ಲೂ ಕೋಣಗಳನ್ನು ಓಡಿಸಿದ್ದ ಹಿರಿಮೆ ಅವರದ್ದು. ಹಾಗಿದ್ದರೂ ಬಿರುಸಿನ ಸ್ಪರ್ಧೆಯ ನಡುವೆ 50ಕ್ಕೂ ಹೆಚ್ಚು ಪದಕಗಳನ್ನು ಗೆದ್ದು ಕೆದುಬರಿ ಹೆಸರಿಗೆ ಗುರುವಪ್ಪ ಪೂಜಾರಿಯವರು ತನ್ನದೇ ಛಾಪು ಮೂಡಿಸಿದ್ದರು. ಪೂಜಾರಿಯವರ ನಿಧನ ಕಂಬಳಾಭಿಮಾನಿಗಳಲ್ಲಿ ನಿರಾಸೆ ಮೂಡಿಸಿದೆ.
Mangalore Kambala Player Guruvappa Poojary dies of Road Accident
22-04-25 10:15 pm
Bangalore Correspondent
30 ವರ್ಷಗಳಲ್ಲಿ ಮುಸ್ಲಿಮರು, ಪರಿಶಿಷ್ಟರ ಸಂಖ್ಯೆ ದುಪ...
22-04-25 10:13 pm
Bidar SSLC Student, Blackmail: ಫುಲ್ ಮಾರ್ಕ್ ಕೊ...
22-04-25 02:37 pm
ಜನಿವಾರ ತೆಗೆಸಿರುವ ಕ್ರಮ ನಿಯಮಬಾಹಿರ, ಧಾರ್ಮಿಕ ನಂಬಿ...
22-04-25 01:00 pm
R Ashok, Census Probe: ಜಾತಿಗಣತಿ ವರದಿಯೇ ನಕಲಿ,...
21-04-25 07:27 pm
22-04-25 10:33 pm
HK News Desk
Rahul Gandhi, BJP : ಅಮೆರಿಕದಲ್ಲಿ ನಿಂತು ಭಾರತದ ಚ...
22-04-25 07:13 pm
Next Pope: ರೋಮನ್ ಕ್ಯಾಥೋಲಿಕ್ ಚರ್ಚ್ನ 266ನೇ ಪೋಪ...
21-04-25 07:46 pm
Pope Francis Death, Vatican, Catholic: ಕೆಥೋಲಿ...
21-04-25 02:13 pm
No GST on UPI Payments: ಎರಡು ಸಾವಿರಕ್ಕಿಂತ ಮೇಲಿ...
20-04-25 08:42 pm
21-04-25 10:32 pm
Mangalore Correspondent
Puttur, Arun Putila: ಬ್ರಾಹ್ಮಣರು ಮತ್ತೆ ಪರಶುರಾಮ...
21-04-25 07:08 pm
Mangalore Chakravarti Sulibele, Ujre; ಸರ್ಕಾರವ...
20-04-25 05:42 pm
DK Shivakumar, Dharmasthala temple, Mangalore...
20-04-25 12:51 pm
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
22-04-25 07:37 pm
Bangalore Correspondent
IPS Om Prakash Murder, Update: ನಿವೃತ್ತ ಡಿಜಿಪಿ...
22-04-25 03:26 pm
Om Prakash IPS Murder, Wife arrest: ನಿವೃತ್ತ ಡ...
21-04-25 01:03 pm
Karnataka DGP Om Prakash Murder, wife: ನಿವೃತ್...
20-04-25 10:52 pm
ರಾಮಕೃಷ್ಣ ಆಶ್ರಮದ ಕಾರ್ಯದರ್ಶಿಗೇ ಟೋಪಿ ; ಇಡಿ ಅಧಿಕಾ...
20-04-25 07:26 pm