ಬ್ರೇಕಿಂಗ್ ನ್ಯೂಸ್
03-08-21 02:06 pm Mangaluru Correspondent ಕರಾವಳಿ
ಮಂಗಳೂರು, ಆಗಸ್ಟ್ 3: ಕೋವಿಡ್ ನಿರ್ಬಂಧ ನಿಯಮಗಳು ಕೇರಳ - ಕರ್ನಾಟಕ ಗಡಿಯನ್ನು ಪಾಕಿಸ್ತಾನದ ಗಡಿಯನ್ನಾಗಿ ಮಾಡಿದೆ. ಕೇರಳದಿಂದ ಕರ್ನಾಟಕ ಪ್ರವೇಶ ಮಾಡಬೇಕಾದರೆ ಕೋವಿಡ್ ನೆಗೆಟಿವ್ ವರದಿ ಕಡ್ಡಾಯಗೊಳಿಸಿದ್ದು ಜನರು ಪರದಾಡುವಂತಾಗಿದೆ. ಅತ್ತ ಮಂಜೇಶ್ವರ ಭಾಗದ ಸ್ಥಳೀಯರ ಪ್ರತಿಭಟನೆ ನಡುವೆಯೇ, ಮಂಗಳೂರಿಗೆ ಆಗಮಿಸಿದ ಎಡಿಜಿಪಿ ಪ್ರತಾಪ್ ರೆಡ್ಡಿ ಇಂದು ತಲಪಾಡಿ ಗಡಿಗೆ ಭೇಟಿಯಿತ್ತು ಪರಿಶೀಲನೆ ನಡೆಸಿದ್ದಾರೆ.
ಜಿಲ್ಲಾಧಿಕಾರಿ ರಾಜೇಂದ್ರ ಕೆ.ವಿ., ಮಂಗಳೂರು ನಗರ ಪೊಲೀಸ್ ಕಮಿಷನರ್ ಶಶಿಕುಮಾರ್ ಜೊತೆಗೆ ತಲಪಾಡಿ ಗಡಿಗೆ ತೆರಳಿದ ಎಡಿಜಿಪಿ, ಯಾವುದೇ ಕಾರಣಕ್ಕೂ ಕೋವಿಡ್ ನೆಗೆಟಿವ್ ಪ್ರಮಾಣಪತ್ರ ಇಲ್ಲದವರನ್ನು ಒಳಗೆ ಬಿಡದಂತೆ ಸೂಚನೆ ನೀಡಿದರು. ಅಲ್ಲದೆ, ತುರ್ತು ಚಿಕಿತ್ಸೆಗಾಗಿ ಮಂಗಳೂರಿಗೆ ಆಗಮಿಸುವ ಮಂದಿಗೆ ಮಾತ್ರ ಆಂಬುಲೆನ್ಸ್ ನಲ್ಲಿ ಬಂದರೆ ಗಡಿಯಲ್ಲಿ ಒಳ ಬಿಡಬಹುದು. ಇನ್ನಾವುದೇ ಚಿಕಿತ್ಸೆಗೆ ಆಗಮಿಸುವ ಮಂದಿ ಮೊದಲೇ ದಕ್ಷಿಣ ಕನ್ನಡ ಜಿಲ್ಲಾಡಳಿತದ ಕಂಟ್ರೋಲ್ ರೂಂಗೆ ಈ ಬಗ್ಗೆ ಮಾಹಿತಿ ನೀಡಬೇಕು. ಕಂಟ್ರೋಲ್ ರೂಂ ಕಡೆಯಿಂದ ಗಡಿಭಾಗದಲ್ಲಿರುವ ಪೊಲೀಸರಿಗೆ ಸೂಚನೆ ಬಂದರೆ ಮಾತ್ರ ಕೋವಿಡ್ ನೆಗೆಟಿವ್ ಮಾನದಂಡ ಇಲ್ಲದೆಯೂ ಪ್ರವೇಶಕ್ಕೆ ಅನುಮತಿ ನೀಡಬಹುದು. ಇದು ಬಿಟ್ಟರೆ ಬೇರೆ ಯಾವುದೇ ಮಂದಿಯೂ ಕೋವಿಡ್ ನೆಗೆಟಿವ್ ಪ್ರಮಾಣಪತ್ರ ವಿನಾ ಕರ್ನಾಟಕ ಪ್ರವೇಶ ಮಾಡುವಂತಿಲ್ಲ ಎಂದು ಹೇಳಿದರು.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋವಿಡ್ ಸೋಂಕು ತೀವ್ರ ಗತಿಯಲ್ಲಿ ಹೆಚ್ಚುತ್ತಿದೆ. ಇದಕ್ಕೆ ಕೇರಳ ಕಡೆಯಿಂದ ಬರುವ ಮಂದಿಯೇ ಕಾರಣ. ಮತ್ತೆ ಕರಾವಳಿಯಲ್ಲಿ ಅಪಾಯಕಾರಿ ಸನ್ನಿವೇಶ ಎದುರಾಗದಂತೆ ನೋಡಿಕೊಳ್ಳಬೇಕು ಎಂದು ಎಡಿಜಿಪಿ ಹೇಳಿದರು.
ಇದೇ ವೇಳೆ, ಗಡಿಭಾಗದಲ್ಲಿ ಕಾಂಗ್ರೆಸ್ ಸೇರಿದಂತೆ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಕಾರ್ಯಕರ್ತರು ಕರ್ನಾಟಕ ಸರಕಾರದ ಧೋರಣೆಯನ್ನು ಖಂಡಿಸಿ ಪ್ರತಿಭಟನೆ ನಡೆಸಿದರು. ರಾಜ್ಯದ ಗಡಿಯನ್ನು ಪಾಕಿಸ್ತಾನದ ಗಡಿಯನ್ನಾಗಿ ಮಾಡಿದರೆ ಹೇಗೆ ? ಇದು ನಮ್ಮ ಮೂಲಭೂತ ಹಕ್ಕಿನ ಉಲ್ಲಂಘನೆ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಎಡಿಜಿಪಿ ಪ್ರತಾಪ ರೆಡ್ಡಿ ಬಳಿಯೂ ಈ ಬಗ್ಗೆ ಪ್ರತಿಭಟನಾಕಾರರು ಬಂದು ಮಾತನಾಡಿದರು.
ಸುಮಾರು 40 ನಿಮಿಷಗಳ ಕಾಲ ತಲಪಾಡಿಯಲ್ಲಿ ಕೇರಳಕ್ಕೆ ಸಾಗುವ ವಾಹನಗಳನ್ನು ತಡೆದು ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿದರು. ಹೆದ್ದಾರಿ ಬಂದ್ ಮಾಡಿದ ವೇಳೆ ಮಂಜೇಶ್ವರ ಪೊಲೀಸರು ಭದ್ರತೆಗಾಗಿ ಬಂದಿದ್ದರು. ಬಳಿಕ ಮಂಗಳೂರು ಕಮಿಷನರ್ ಶಶಿಕುಮಾರ್ ಮತ್ತು ಡಿಸಿಪಿ ಹರಿರಾಮ್ ಶಂಕರ್ ಕೇರಳ ಪೊಲೀಸರ ಜೊತೆ ಮಾತುಕತೆ ನಡೆಸಿ, ಪ್ರತಿಭಟನೆ ನಿಲ್ಲಿಸುವಂತೆ ಸೂಚಿಸಿದರು.
ಕೇರಳದ ಬಹಳಷ್ಟು ಮಲಯಾಳಂ ಮಾಧ್ಯಮಗಳ ಪ್ರತಿನಿಧಿಗಳು ತಲಪಾಡಿ ಗಡಿಗೆ ಬಂದು ಸೇರಿದ್ದು ವಿಶೇಷವಾಗಿತ್ತು. ಒಂದೆಡೆ ಜನರು ಮಂಗಳೂರಿಗೆ ಬರಲಾಗದೆ ತೊಂದರೆಗೆ ಸಿಲುಕಿದ್ದರೆ, ಮತ್ತೊಂದು ಕಡೆ ನೂರಾರು ಪೊಲೀಸರು ಬಂದೋಬಸ್ತ್ ನಡೆಸಿದ್ದರು. ಅಲ್ಲಿನ ಸ್ಥಿತಿ ನೋಡಿದರೆ ಪಾಕ್ ಗಡಿಯೋ ಎನ್ನುವಂತೆ ಭಾಸವಾಗಿತ್ತು.
Video:
In the backdrop of tighter measures being taken at Karnataka's border with Kerala because of the spurt of coronavirus cases in that state, Karnataka additional director general of police (ADGP), Pratap Reddy, visited Talapady border on Tuesday August 3, and scrutinized the security measures in place. He gathered information about additional police security and checks being conducted there. Dakshina Kannada district deputy commissioner Dr K V Rajendra, provided details to the ADGP.
15-06-25 09:29 pm
Bangalore Correspondent
Lokayukta, Crypto Firms, Notice: ಲೋಕಾಯುಕ್ತ ಹೆ...
14-06-25 11:05 pm
A.H. Vishwanath, CM Sidddaramaiah ; ನವೆಂಬರ್ ನ...
14-06-25 07:45 pm
Bike Taxi, Ola, Uber, Karnataka: ರ್ಯಾಪಿಡೋ, ಉ...
13-06-25 08:47 pm
Agumbe Ghat, Closed: ಜೂ.15ರಿಂದ - ಸೆ. 30ರವರೆಗೆ...
13-06-25 07:01 pm
15-06-25 10:29 pm
HK News Desk
Israel Iran War, Generals Killed: ಮೂರನೇ ಮಹಾಯು...
14-06-25 12:00 pm
Kasaragod Deputy Tahsildar Suspended: ವಿಮಾನ ದ...
13-06-25 11:09 pm
Air India Plane Crash, Black Box Recovered: ವ...
13-06-25 10:42 pm
ಏರ್ ಇಂಡಿಯಾ ವಿಮಾನ ದುರಂತ ; ಲಂಡನ್ನಲ್ಲೇ ಬದುಕು ಕಟ್...
13-06-25 03:08 pm
15-06-25 11:04 pm
Mangalore Correspondent
Kadri Kaibattal, Mangalore Rain, Landslide: ಕ...
15-06-25 09:50 pm
Mangalore Rain, School Holiday: ರೆಡ್ ಅಲರ್ಟ್ ಮ...
15-06-25 09:35 pm
Mangalore Heavy Rains, Dinesh Gundu Rao: ಮಳೆ...
15-06-25 03:20 pm
Mangalore Rain, Compound Wall Collapsed Video...
15-06-25 12:12 pm
14-06-25 11:02 pm
Bangalore Correspondent
Lokayukta Corruption, Bengaluru SP Srinath Jo...
14-06-25 05:59 pm
Mangalore, Yeyyadi Bar, Murder, Kaushik: ಯೆಯ್...
13-06-25 07:30 pm
Mangalore, Puttur, Dr Adarsh, Sullia, Marriag...
13-06-25 05:37 pm
Goa Rape, Calangute Beach: ಬಕ್ರೀದ್ ಪಾರ್ಟಿಗೆ ಬ...
12-06-25 12:31 pm