ಬ್ರೇಕಿಂಗ್ ನ್ಯೂಸ್
31-07-21 09:51 pm Mangaluru Correspondent ಕರಾವಳಿ
ಮಂಜೇಶ್ವರ, ಜುಲೈ 31: ಬಂಟ್ವಾಳ ಬಳಿಯ ಪಾಣೆಮಂಗಳೂರಿನ ನೇತ್ರಾವತಿ ಸೇತುವೆಯ ಬಳಿ ಚಾಲನೆ ಸ್ಥಿತಿಯಲ್ಲಿ ಬೈಕನ್ನು ಬಿಟ್ಟು ನದಿಗೆ ಹಾರಿದ್ದ ಯುವಕನ ಶವ ಕಾಸರಗೋಡು ಜಿಲ್ಲೆಯ ಮಂಜೇಶ್ವರದ ಬಳಿಯ ಕಣ್ವತೀರ್ಥ ಸಮುದ್ರ ಕಿನಾರೆಯಲ್ಲಿ ಪತ್ತೆಯಾಗಿದೆ.
ಬೆಂಗಳೂರಿನ ದಾಸರಹಳ್ಳಿಯ ನಿವಾಸಿ ಸತ್ಯವೇಲು (28) ಎಂಬ ಯುವಕ ಜುಲೈ 28ರಂದು ರಾತ್ರಿ ಬಿ.ಸಿ.ರೋಡಿನ ಪಾಣೆಮಂಗಳೂರು ಸೇತುವೆ ಬಳಿಗೆ ಬೈಕಿನಲ್ಲಿ ಬಂದಿದ್ದು, ಬೈಕನ್ನು ಚಾಲನೆ ಸ್ಥಿತಿಯಲ್ಲೇ ಬಿಟ್ಟು ನದಿಗೆ ಹಾರಿದ್ದ ಎನ್ನಲಾಗಿತ್ತು. ಬಳಿಕ ಆತನ ಹುಡುಕಾಟ ನಡೆಸಿದ್ದರೂ, ಶವ ಸಿಕ್ಕಿರಲಿಲ್ಲ.
ಜುಲೈ 30ರಂದು ಮಂಜೇಶ್ವರ ಸಮುದ್ರ ಕಿನಾರೆಯಲ್ಲಿ ಶವ ಪತ್ತೆಯಾಗಿದ್ದು, ಪೊಲೀಸರು ಬಂಟ್ವಾಳ ಪೊಲೀಸರ ಮೂಲಕ ಆತನ ಕುಟುಂಬಸ್ಥರಿಗೆ ಮಾಹಿತಿ ನೀಡಿದ್ದರು. ಕುಟುಂಬಸ್ಥರು ಬಂದು ಶವದ ಗುರುತು ಹಚ್ಚಿದ್ದಾರೆ. ಮಂಜೇಶ್ವರ ಪೊಲೀಸರು ಶವವನ್ನು ಕಾಸರಗೋಡು ಸರಕಾರಿ ಆಸ್ಪತ್ರೆಗೆ ಒಯ್ದು ಪೋಸ್ಟ್ ಮಾರ್ಟಂ ನಡೆಸಿದ್ದು, ಬಳಿಕ ಕುಟುಂಬಸ್ಥರಿಗೆ ಹಸ್ತಾಂತರ ಮಾಡಿದ್ದಾರೆ.
ಸತ್ಯವೇಲು ಇತ್ತೀಚೆಗೆ ಎರಡು ವಾರಗಳ ಹಿಂದೆಯೂ ಇದೇ ರೀತಿ ಪಾಣೆಮಂಗಳೂರಿನಲ್ಲಿ ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದ. ಆನಂತರ ಸ್ಥಳೀಯರು ಗಮನಿಸಿ, ಆತನ ರಕ್ಷಣೆ ಮಾಡಿ ಪೊಲೀಸರಿಗೆ ಒಪ್ಪಿಸಿದ್ದರು. ಪೊಲೀಸರು ಕುಟುಂಬಸ್ಥರನ್ನು ಕರೆಸಿ, ವಶಕ್ಕೆ ನೀಡಿದ್ದರು. ಇದೀಗ ಮತ್ತೆ ಜುಲೈ 28ರಂದು ಸತ್ಯವೇಲು ಬೆಂಗಳೂರಿನ ಮನೆಯನ್ನು ಬಿಟ್ಟು ಬಂದಿದ್ದ. ಈ ಬಗ್ಗೆ ಆತನ ತಾಯಿ ಪೊಲೀಸ್ ದೂರು ನೀಡಿದ್ದರು.
ಬೆಂಗಳೂರಿನ ಯುವಕ ನೇತ್ರಾವತಿ ನದಿಗೆ ಹಾರಿದ ಶಂಕೆ ; ಬಿ.ಸಿ.ರೋಡ್ ಸೇತುವೆಯಲ್ಲಿ ಬೈಕ್ ಪತ್ತೆ !
The mortal remains of the man who left his bike engine running and went missing from Netravati bridge at Panemangalore on July 28 morning, was found later at Manjeshwar Kanwatheertha sea shore. The person is identified as Sathyavelu (29), a resident of Dasarahalli in Bengaluru.
22-04-25 10:15 pm
Bangalore Correspondent
30 ವರ್ಷಗಳಲ್ಲಿ ಮುಸ್ಲಿಮರು, ಪರಿಶಿಷ್ಟರ ಸಂಖ್ಯೆ ದುಪ...
22-04-25 10:13 pm
Bidar SSLC Student, Blackmail: ಫುಲ್ ಮಾರ್ಕ್ ಕೊ...
22-04-25 02:37 pm
ಜನಿವಾರ ತೆಗೆಸಿರುವ ಕ್ರಮ ನಿಯಮಬಾಹಿರ, ಧಾರ್ಮಿಕ ನಂಬಿ...
22-04-25 01:00 pm
R Ashok, Census Probe: ಜಾತಿಗಣತಿ ವರದಿಯೇ ನಕಲಿ,...
21-04-25 07:27 pm
22-04-25 10:33 pm
HK News Desk
Rahul Gandhi, BJP : ಅಮೆರಿಕದಲ್ಲಿ ನಿಂತು ಭಾರತದ ಚ...
22-04-25 07:13 pm
Next Pope: ರೋಮನ್ ಕ್ಯಾಥೋಲಿಕ್ ಚರ್ಚ್ನ 266ನೇ ಪೋಪ...
21-04-25 07:46 pm
Pope Francis Death, Vatican, Catholic: ಕೆಥೋಲಿ...
21-04-25 02:13 pm
No GST on UPI Payments: ಎರಡು ಸಾವಿರಕ್ಕಿಂತ ಮೇಲಿ...
20-04-25 08:42 pm
21-04-25 10:32 pm
Mangalore Correspondent
Puttur, Arun Putila: ಬ್ರಾಹ್ಮಣರು ಮತ್ತೆ ಪರಶುರಾಮ...
21-04-25 07:08 pm
Mangalore Chakravarti Sulibele, Ujre; ಸರ್ಕಾರವ...
20-04-25 05:42 pm
DK Shivakumar, Dharmasthala temple, Mangalore...
20-04-25 12:51 pm
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
22-04-25 07:37 pm
Bangalore Correspondent
IPS Om Prakash Murder, Update: ನಿವೃತ್ತ ಡಿಜಿಪಿ...
22-04-25 03:26 pm
Om Prakash IPS Murder, Wife arrest: ನಿವೃತ್ತ ಡ...
21-04-25 01:03 pm
Karnataka DGP Om Prakash Murder, wife: ನಿವೃತ್...
20-04-25 10:52 pm
ರಾಮಕೃಷ್ಣ ಆಶ್ರಮದ ಕಾರ್ಯದರ್ಶಿಗೇ ಟೋಪಿ ; ಇಡಿ ಅಧಿಕಾ...
20-04-25 07:26 pm