ಬ್ರೇಕಿಂಗ್ ನ್ಯೂಸ್
15-08-26 04:52 pm HK News Staffer ಕರಾವಳಿ
ಮಂಗಳೂರು, ಆ.15: ಪಾನ್ ಮಸಾಲಾದಲ್ಲಿ ನಿಕೋಟಿನ್, ತಂಬಾಕು ಹೆಚ್ಚಿರುವುದರಿಂದ ಗುಟ್ಕಾ ಬ್ಯಾನ್ ಮಾಡಲಾಗಿದೆ. ಪ್ರತ್ಯೇಕವಾಗಿ ಪಾನ್ ಮಸಾಲ ಮಾತ್ರ ಬರೋದಾದ್ರೆ ನಮ್ಮ ನಿರ್ಬಂಧ ಇಲ್ಲ. ಇದರಿಂದ ಅಡಿಕೆ ಬೆಳೆಗಾರರಿಗೆ ಅಥವಾ ವ್ಯಾಪಾರಸ್ಥರಿಗೆ ಯಾವ ತೊಂದರೆಯೂ ಆಗಲ್ಲ ಎಂದು ಆರೋಗ್ಯ ಸಚಿವ ಯು.ಟಿ ಖಾದರ್ ಹೇಳಿದ್ದಾರೆ.
2014ರಲ್ಲಿ ಗುಟ್ಕಾ ನಿಷೇಧ ಮಾಡಿದಾಗಲೂ ಇದೇ ರೀತಿ ಆಗಿತ್ತು. ಆದರೆ ಆಗಲೂ ಅಡಿಕೆ ಬೆಲೆ ಕಡಿಮೆ ಆಗಿಲ್ಲ, ಜಾಸ್ತಿ ಆಗಿತ್ತು. ಈಗಲೂ ಮೂರು ತಿಂಗಳು ಕಾಯಿರಿ, ಆ ಬಳಿಕ ಹೇಳುತ್ತೇನೆ. ಇದನ್ನ ನಾನು ರಾಜಕೀಯ ಮಾಡಲ್ಲ, ನಮ್ಮದು ಆರೋಗ್ಯಕ್ಕೆ ಪೂರಕ ಉದ್ದೇಶ. ಇವರು ಗುಟ್ಕಾ ಲಾಬಿಗೆ ಮಣಿದು ನಮ್ಮನ್ನ ವಿರೋಧ ಮಾಡ್ತಾ ಇದಾರೆ ಅಂತ ಆರೋಪ ಇದೆ. ಅಡಿಕೆಗೂ ಗುಟ್ಕಾ ನಿಷೇಧಕ್ಕೂ ಸಂಬಂಧ ಇಲ್ಲ ಎನ್ನೋದನ್ನು ಹೇಳುತ್ತೇನೆ ಎಂದರು.
ಸಾರ್ವಜನಿಕ ಸ್ಥಳಗಳಲ್ಲಿ ಧಾರ್ಮಿಕ ಚಟುವಟಿಕೆ ನಿರ್ಬಂಧ ಕಾಯಿದೆ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಸಂವಿಧಾನ, ಕಾನೂನಿಗೆ ಅನುಗುಣವಾಗಿ ಸರ್ಕಾರ ತೀರ್ಮಾನ ತೆಗೆದುಕೊಳ್ಳಲಿದೆ. ಕಾಂಗ್ರೆಸ್ ಸರ್ಕಾರ ಕುಳಿತು ಚರ್ಚಿಸಿ ಇದರ ಬಗ್ಗೆ ತೀರ್ಮಾನ ಮಾಡಲಿದೆ. ಜನರಿಗೆ ತೊಂದರೆ ಆಗದಂತೆ ನಾವು ಪ್ರತಿಪಕ್ಷ ನಾಯಕರ ಜೊತೆಗೂ ಚರ್ಚಿಸ್ತೇವೆ. ಸರ್ಕಾರ ಜನಸಾಮಾನ್ಯರಿಗೆ ತೊಂದರೆ ಕೊಡುವುದಾಗಲೀ, ಸಂವಿಧಾನದ ವಿರುದ್ಧ ತೀರ್ಮಾನ ತೆಗೊಳ್ಳುವುದಾಗಲೀ ಮಾಡಲ್ಲ ಎಂದರು.
ಜಮೀರ್ ಆಹ್ಮದ್ ಸ್ವಾತಂತ್ರ್ಯ ಧ್ವಜಾರೋಹಣ ನಿರಾಕರಿಸಿದ್ದಕ್ಕೆ ಪ್ರತಿಕ್ರಿಯೆ ನೀಡಿದ ಖಾಸರ್, ಜಮೀರ್ ಅವರ ದೇಶಪ್ರೇಮ ಬೇರೆಯವರಿಗಿಂತ ಹೆಚ್ಚಿದೆ. ದೇಶದ ಸತ್ಪ್ರಜೆಯಾಗಿ ಸೌಹಾರ್ದತೆ ಮತ್ತು ದೇಶಪ್ರೇಮ ತೋರಿಸಿದ್ದಾರೆ. ಕೆಲವೊಂದು ಕಾರಣದಿಂದ ಇವತ್ತಿನ ಕಾರ್ಯಕ್ರಮ ಬರಲು ಆಗಲ್ಲ ಎಂದು ಹೇಳಿದ್ದಾರೆ. ಅವರು ಬರೆದ ಪತ್ರದಲ್ಲಿ ಒಂದೆರಡು ಅಕ್ಷರ ಹೆಚ್ಚು ಕಡಿಮೆ ಆಗಿದೆ. ಅವರ ಉದ್ದೇಶ ಸರಿಯಿದೆ, ಅದನ್ನ ನಾವು ಅರ್ಥ ಮಾಡಿಕೊಳ್ಳಬೇಕು. ಅದನ್ನೇ ಅಪಾರ್ಥ ಮಾಡಿಕೊಂಡು ರಾಜಕೀಯ ಮಾಡೋದು ಸರಿಯಲ್ಲ
ಅವರಿಗೆ ಕಡೆ ಘಳಿಗೆಯಲ್ಲಿ ಅವರಿಗೆ ಹೋಗಲು ಆಗದೇ ಪತ್ರ ಬರೆದಿದ್ದಾರೆ. ದೇಶದ ಎಲ್ಲರಿಗೂ ದೇಶ ಪ್ರೇಮ ಇದೆ, ಜಮೀರ್ ಆಹ್ಮದ್ ಅವರಿಗೂ ಇದೆ. ಎಲ್ಲರೂ ಪ್ರೀತಿ, ವಿಶ್ವಾಸದಿಂದ ಒಗ್ಗಟ್ಟಿನಿಂದ ಅಭಿವೃದ್ಧಿಯ ಕರ್ನಾಟಕ ನಿರ್ಮಿಸೋಣ. ಜಮೀರ್ ಅವರಿಗೆ ಖಾತೆ ಬಗ್ಗೆ ಅಸಮಾಧಾನ ಇಲ್ಲ, ಅದು ಹೈಕಮಾಂಡ್ ಕೊಟ್ಟಿರೋದು. ಎಲ್ಲರೂ ಒಪ್ಪಿಕೊಂಡೇ ಈ ತೀರ್ಮಾನ ಆಗಿದೆ, ಜಮೀರ್ ಕೂಡ ಒಪ್ಪಿದ್ದಾರೆ ಎಂದರು.
14-08-26 08:42 pm
HK News Staffer
ಗುಟ್ಕಾ-ಪಾನ್ ಮಸಾಲಾ ನಿಷೇಧಕ್ಕೆ 48 ಗಂಟೆಯಲ್ಲೇ ಯು-...
14-08-26 05:32 pm
ಅನುಭವ ಇಲ್ಲದ ಮಂಗ ಯತೀಂದ್ರಗೆ ಮೈಸೂರು ಜಿಲ್ಲಾ ಉಸ್ತು...
13-08-26 10:19 pm
ಆದಿವಾಸಿ ಮತ್ತು ಅಲೆಮಾರಿ ಸಮುದಾಯಗಳ ಅಭಿವೃದ್ಧಿಗೆ ವಿ...
13-08-26 08:09 pm
ಜೈಲಿನಲ್ಲಿದ್ದರೂ ಚಟ ಬಿಡದ ಪ್ರಜ್ವಲ್ ರೇವಣ್ಣ ! ಪೆನ್...
13-08-26 07:14 pm
11-08-26 10:25 pm
HK News Staffer
ಇಬ್ಬರು ಸಹೋದರಿಯರ ಇಸ್ಲಾಂ ಮತಾಂತರ ಎತ್ತಿಹಿಡಿದ ಅಲಹಾ...
11-08-26 04:49 pm
ಕಾಶ್ಮೀರಿ ಪಂಡಿತರನ್ನು ಗುರಿಯಾಗಿಸಿ ಉಗ್ರರ ಬೆದರಿಕೆ...
11-08-26 04:32 pm
ಮೋದಿ ಸೆಲ್ಫಿ ವಿಡಿಯೋ ತೆಗೆದು ಹಾಕಿದ್ದ ಫೇಸ್ಬುಕ್ ಕಂ...
05-08-26 08:36 pm
ಜಾನ್ಸನ್ & ಜಾನ್ಸನ್ ಬೇಬಿ ಪೌಡರ್ ನಿಂದ ಕ್ಯಾನ್ಸರ್ ಆ...
01-08-26 05:17 pm
15-08-26 04:52 pm
HK News Staffer
Infosys Mangalore, News: ಕೊಟ್ಟಾರದ ಇನ್ಫೋಸಿಸ್ ಕ...
14-08-26 10:23 pm
ಮಂಗಳೂರು ವಿಮಾನ ದುರಂತದ ಕಹಿನೆನಪು ಬಾಲಕಿಯ ಮನದಲ್ಲಿ...
14-08-26 02:07 pm
Valachil Accident, Mangalore: ವಳಚ್ಚಿಲ್ ಬಳಿ ಕಾ...
12-08-26 11:06 pm
ಸಾರ್ವಜನಿಕ ಕೆಲಸಕ್ಕೆ ಲಂಚದ ಆರೋಪ; ಮಂಗಳೂರು, ಬೆಳ್ತಂ...
12-08-26 02:08 pm
15-08-26 06:11 pm
HK News Staffer
David Dsouza Murder, Arrest: ಡೇವಿಡ್ ಹತ್ಯೆ ಪ್ರ...
15-08-26 05:09 pm
ಅಪ್ರಾಪ್ತ ಬಾಲಕಿಯನ್ನು ಕಾರಿನಲ್ಲಿ ಕರೆದೊಯ್ದಿದ್ದಕ್ಕ...
15-08-26 04:19 pm
ಕೆಲಸ ಮಾಡಿಕೊಡುವ ನೆಪದಲ್ಲಿ ಪದೇಪದೇ ಹಣಕ್ಕಾಗಿ ಒತ್ತಾ...
15-08-26 02:06 pm
Belthangady Couple Suicide, Bangalore: ಬೆಂಗಳೂ...
15-08-26 01:28 pm