ಬ್ರೇಕಿಂಗ್ ನ್ಯೂಸ್
27-12-24 06:55 pm Mangalore Correspondent ಕರಾವಳಿ
ಮಂಗಳೂರು, ಡಿ.27: ಬೋಳಾರದ ಸಿಟಿ ಬೀಚ್ ನಲ್ಲಿ ಏರ್ಪಡಿಸಲಾಗಿದ್ದ ಇಸ್ರೇಲ್ ಮೂಲದ ಖ್ಯಾತ ಡಿಜೆ ಆರ್ಟಿಸ್ಟ್ ಸಜಂಕಾ ಡಿಜೆ ಪಾರ್ಟಿಯನ್ನು ಕೊನೆಕ್ಷಣದಲ್ಲಿ ರದ್ದು ಪಡಿಸಲಾಗಿದೆ. ಹಿಂದು ಸಂಘಟನೆಗಳ ವಿರೋಧ ಹಿನ್ನೆಲೆಯಲ್ಲಿ ಸಜಂಕಾ ಪಾರ್ಟಿಗೆ ಪೊಲೀಸರು ಅನುಮತಿ ನಿರಾಕರಿಸಿದ್ದಾರೆ. ಹೀಗಾಗಿ ಆಯೋಜಕರು ಸಜಂಕಾ ಬದಲು ಬೇರೆ ಆರ್ಟಿಸ್ಟ್ ಮೂಲಕ ಕಾರ್ಯಕ್ರಮ ನಡೆಸುವುದಾಗಿ ತಿಳಿಸಿದ್ದಾರೆ.
ಹೊಸ ವರ್ಷದ ಪ್ರಯುಕ್ತ ಮಂಗಳೂರಿನ ಟಾಪ್ ಹೌಸ್ ರೆಸ್ಟೋರೆಂಟ್ ಮಾಲೀಕರು ಅದ್ದೂರಿ ಡಿಜೆ ಪಾರ್ಟಿಯನ್ನು ಆಯೋಜಿಸಿದ್ದರು. ಡಿಜೆ ಪಾರ್ಟಿಗೆ ಇಸ್ರೇಲ್ ಮೂಲದ ಖ್ಯಾತ ಆರ್ಟಿಸ್ಟ್ ಸಜಂಕಾ ಬರುವುದೆಂದು ನಿಗದಿಯಾಗಿತ್ತು. ಹಿಂದು ಸಂಘಟನೆಗಳ ವಿರೋಧ ನಡುವೆಯೂ ಸಂಘಟಕರು ಮೇಲಿನ ಲೆವೆಲಲ್ಲಿ ಮಾತುಕತೆ ಮಾಡಿ ಡಿ.27ರ (ಇಂದು) ರಾತ್ರಿಗೆ ಪಾರ್ಟಿ ಆಯೋಜಿಸಿದ್ದರು.

ಆದರೆ ಡಿಜೆ ಪಾರ್ಟಿಯಲ್ಲಿ ಡ್ರಗ್ಸ್ ನೀಡಲಾಗುತ್ತದೆ, ಹಿಂದು ದೇವರ ಅಣಕಿಸುವ ಸಜಂಕಾಗೆ ಅವಕಾಶ ನೀಡಬಾರದು ಎಂದು ವಿಎಚ್ ಪಿ ಮತ್ತು ಬಜರನಂಗದಳ ಪೊಲೀಸರಿಗೆ ದೂರು ನೀಡಿತ್ತು. ಅಲ್ಲದೆ, ವಿಎಚ್ ಪಿ, ಬಜರಂಗದಳದಿಂದ ಜಾಲತಾಣದಲ್ಲಿಯೂ ಅಭಿಯಾನ ನಡೆದಿತ್ತು. ಸಜಂಕಾ ಪಾರ್ಟಿಯಲ್ಲಿ ಪಾಲ್ಗೊಂಡರೆ ಬಜರಂಗದಳದಿಂದ ಪ್ರತಿಭಟನೆ ನಡೆಸುವ ಬೆದರಿಕೆಯನ್ನೂ ಒಡ್ಡಿದ್ದರು. ಈ ಹಿನ್ನೆಲೆಯಲ್ಲಿ ಸಜಂಕಾ ಪಾಲ್ಗೊಳ್ಳುವುದಕ್ಕೆ ಪೊಲೀಸರು ಅನುಮತಿ ನಿರಾಕರಿಸಿದ್ದಾರೆ. ಇತ್ತ ಸಜಂಕಾ ಮಂಗಳೂರಿಗೆ ಆಗಮಿಸಿದ್ದಾರೆ ಎನ್ನಲಾಗುತ್ತಿದ್ದು ಪಾರ್ಟಿಗೆ ಹೋಗದೆ ಹೊಟೇಲಿನಲ್ಲೇ ಉಳಿದುಕೊಳ್ಳುವ ಸಾಧ್ಯತೆಯಿದೆ.
ಇದೇ ವೇಳೆ, ಇಂದು ರಾತ್ರಿ ಆಯೋಜನೆಗೊಂಡಿದ್ದ ಡಿಜೆ ಪಾರ್ಟಿ ನಡೆಯುತ್ತದೆ. ಸಜಂಕಾ ಬದಲು ಬೇರೆಯವರನ್ನು ಕರೆಸಿಕೊಂಡಿದ್ದೇವೆ. ಮ್ಯೂಸಿಕ್ ಪ್ರಿಯರು ಬನ್ನಿ ಎಂದು ಟಾಪ್ ಹೌಸ್ ತಂಡ ಪೋಸ್ಟರ್ ಬಿಟ್ಟಿದೆ. ಮೊದಲ ಬಾರಿಗೆ ಮಂಗಳೂರಿನಲ್ಲಿ ಸಜಂಕಾ ಪಾರ್ಟಿ ಆಯೋಜಿಸಲಾಗಿತ್ತು. ವಿಭಿನ್ನ ಶೈಲಿಯ ಮ್ಯೂಸಿಕ್, ಭಾರತೀಯ ಹಾಡುಗಳನ್ನೂ ಪಾಪ್ ಶೈಲಿಗೆ ಸಂಯೋಜಿಸುವ ಸಜಂಕಾ ಬಗ್ಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಇದೆ. ಈ ಬಾರಿ ಹೊಸ ವರ್ಷಕ್ಕೆ ಕೊಲ್ಕತ್ತಾ, ಮುಂಬೈನಲ್ಲಿಯೂ ಸಜಂಕಾ ಪಾರ್ಟಿ ಆಯೋಜನೆಯಾಗಿದೆ.
Mangalore DJ Sajanka party canceled at beach festival after opposition from Bajarang dal. Organisers have released a statement saying the entry of Dk Sajanka has been cancelled but the program with other DJs will be held.
27-03-26 04:49 pm
HK News Staffer
ಶಾರ್ಟ್ ಕಟ್ ದಾರಿಯೆಂದು ತುಂಗಭದ್ರಾ ನದಿಗೆ ನುಗ್ಗಿಸಿ...
27-03-26 04:04 pm
ನಡುರಸ್ತೆಯಲ್ಲೇ ಪತ್ನಿಯ ಕತ್ತು ಕತ್ತರಿಸಿ ಭೀಕರ ಕೊಲೆ...
27-03-26 03:52 pm
ಚಿಕ್ಕಮಗಳೂರಿನಲ್ಲಿ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಬ...
26-03-26 10:27 pm
ಕ್ಲಾಸ್ ರೂಮಿನಲ್ಲೇ ವಿದ್ಯಾರ್ಥಿನಿಗೆ ಪ್ರಪೋಸ್ ಮಾಡಿದ...
26-03-26 09:21 pm
27-03-26 04:07 pm
HK News Staffer
ಗಲ್ಫ್ ಯುದ್ಧದ ಪರಿಣಾಮ ಊಹಿಸುವುದು ಕಷ್ಟ, ಕೋವಿಡ್ನಂ...
27-03-26 12:11 pm
ಅಮೆರಿಕ ಷರತ್ತಿಗೆ ಪಟ್ಟು ಬಿಡದ ಇರಾನ್ ; ಗಲ್ಫ್ ದೇಶಗ...
26-03-26 09:44 pm
ಹೊರ್ಮುಜ್ ಜಲಸಂಧಿ ನಿರ್ಬಂಧಿಸಿದ್ದ ಇರಾನ್ ನೌಕಾಪಡೆ ಮ...
26-03-26 09:00 pm
ಮಂಗಳೂರಿಗೆ ಮತ್ತೆರಡು ಬೃಹತ್ ತೈಲ ಟ್ಯಾಂಕರ್ ಹಡಗು ;...
26-03-26 09:31 am
27-03-26 03:38 pm
HK News Staffer
ಇನಾಯತ್ ಆಲಿ ನೇತೃತ್ವದಲ್ಲಿ ಏ.4ರಂದು ಗುರುಪುರ ಜೋಡುಕ...
26-03-26 10:51 pm
ಮಂಗಳೂರು ಸಿಟಿ ಪೊಲೀಸರ ಹೆಸರಲ್ಲೇ ನಕಲಿ ವೆಬ್ಸೈಟ್ !...
26-03-26 10:29 pm
ನವ ಮಂಗಳೂರು ಬಂದರು ಸ್ಥಾಪನೆಗೊಂಡ ಬಳಿಕ 40 ಸಾವಿರ ಹಡ...
26-03-26 07:19 pm
ಸುಹಾಸ್ ಶೆಟ್ಟಿ ಕೊಲೆ ಪ್ರಕರಣ ; ಸಾಮಾಜಿಕ ಜಾಲತಾಣದಲ್...
25-03-26 08:44 pm
27-03-26 06:51 am
Mangaluru Staffer
ಅಕ್ರಮ ಸಂಬಂಧ ಶಂಕೆ ; ತಾಯಿಯನ್ನ ನಿಂದಿಸಿದ್ದಕ್ಕೆ ಇಬ...
26-03-26 06:48 pm
ಮೂಡುಬಿದ್ರೆ ಸಂದೇಶ್ ಕೇಸ್ ಬೆನ್ನಲ್ಲೇ ಬೆಂಗಳೂರಿನಲ್ಲ...
26-03-26 03:12 pm
ಪ್ರೇಮದ ನಾಟಕವಾಡಿ ವೈದ್ಯೆಯನ್ನೇ 'ಜೀವಂತ ಶವ' ಮಾಡಿದ್...
26-03-26 09:28 am
ಮದುವೆಯಾಗೋದಾಗಿ ನಂಬಿಸಿ ಮೋಸ ; ನೀನು ನಂಗೆ ದೈಹಿಕ ತೃ...
24-03-26 02:04 pm