ಬ್ರೇಕಿಂಗ್ ನ್ಯೂಸ್
12-01-26 05:01 pm Mangaluru Staffer ದೇಶ - ವಿದೇಶ
ಕಾಸರಗೋಡು, ಜ.12: ರಾಷ್ಟ್ರೀಯ ಹೆದ್ದಾರಿ 66ರ ಕುಂಬಳೆಯ ಆರಿಕ್ಕಾಡಿಯಲ್ಲಿ ತಾತ್ಕಾಲಿಕ ಟೋಲ್ ಪ್ಲಾಜಾ ಆರಂಭಿಸುವುದನ್ನು ವಿರೋಧಿಸಿ ಮಂಜೇಶ್ವರ ಶಾಸಕ ಎಕೆಎಂ ಶರೀಫ್ ನೇತೃತ್ವದಲ್ಲಿ ಸಾವಿರಾರು ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದು, ಮೂರು ಗಂಟೆ ಕಾಲ ಧರಣಿ ಕುಳಿತ ಶಾಸಕ ಮತ್ತು ಇತರ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ.
ಜ.12ರಿಂದ ತಾತ್ಕಾಲಿಕವಾಗಿ ಟೋಲ್ ಸಂಗ್ರಹಿಸಲು ಜಿಲ್ಲಾಡಳಿತ ಅನುಮತಿ ನೀಡಿದ್ದು, ಇದರಂತೆ ಸೋಮವಾರದಿಂದ ಆರಿಕ್ಕಾಡಿಯಲ್ಲಿ ಟೋಲ್ ಸಂಗ್ರಹಿಸಲು ವ್ಯವಸ್ಥೆಯಾಗಿತ್ತು. ಆದರೆ ಬೆಳಗ್ಗೆ 7 ಗಂಟೆಗೆ ಸರ್ವಪಕ್ಷಗಳ ಆಕ್ಷನ್ ಕಮಿಟಿಯ ನೇತೃತ್ವದಲ್ಲಿ ಸಾರ್ವಜನಿಕರು ಪ್ರತಿಭಟನೆ ಆರಂಭಿಸಿದ್ದಾರೆ. ಮೂರು ಗಂಟೆ ಕಾಲ ರಸ್ತೆಯಲ್ಲಿ ಧರಣಿ ನಡೆಸಿದ್ದರಿಂದ ಟ್ರಾಫಿಕ್ ಜಾಮ್ ಆಗಿದ್ದಕ್ಕೆ ಶಾಸಕ ಅಶ್ರಫ್ ಮತ್ತು ಇತರರನ್ನು ಪೊಲೀಸರು ಬಂಧಿಸಿ ಬಳಿಕ ಕುಂಬಳೆ ಠಾಣೆಗೆ ಒಯ್ದಿದ್ದಾರೆ.

ಅಲ್ಲಿಯೂ ಕಾರ್ಯಕರ್ತರು ಪೊಲೀಸ್ ಠಾಣೆ ಮುಂದೆ ಪ್ರತಿಭಟನೆ ನಡೆಸಿದ್ದಾರೆ. ಈ ವೇಳೆ, ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಶಾಸಕ ಅಶ್ರಫ್, ಕೇಂದ್ರ ಸರಕಾರದ ನಿಯಮ ಪ್ರಕಾರ 60 ಕಿಮೀಗೆ ಒಂದರಂತೆ ಟೋಲ್ ಕಲೆಕ್ಷನ್ ಮಾಡಬೇಕು. ಇಲ್ಲಿ ತಲಪಾಡಿಯಿಂದ 20 ಕಿಮೀ ಅಂತರದಲ್ಲಿ ಟೋಲ್ ಪ್ಲಾಜಾ ನಡೆಸುವುದಕ್ಕೆ ನಮ್ಮ ವಿರೋಧ ಇದೆ. ನಿಯಮ ಪ್ರಕಾರ, ಪೆರಿಯಾ ಪಂಚಾಯತಿನ ಚಾಲಿಂಗಾಲ್ ನಲ್ಲಿ ಟೋಲ್ ಪ್ಲಾಜಾ ಆಗಬೇಕಿದ್ದು, ಅಲ್ಲಿಗೆ ಶಿಫ್ಟ್ ಮಾಡಬೇಕು. ತಲಪಾಡಿ ಟೋಲ್ ಗೇಟ್ ಮಂಜೇಶ್ವರ ಕ್ಷೇತ್ರಕ್ಕೆ ತಾಗಿಕೊಂಡಿದ್ದು, ಹೀಗಿರುವಾಗ ಒಂದೇ ಕ್ಷೇತ್ರದಲ್ಲಿ ಎರಡು ಕಡೆ ಟೋಲ್ ಕಲೆಕ್ಷನ್ ಮಾಡುವುದಕ್ಕೆ ನಾವು ಬಿಡುವುದಿಲ್ಲ. ಕನಿಷ್ಠ ಮಂಜೇಶ್ವರ ಕ್ಷೇತ್ರ ಹೊರತುಪಡಿಸಿಯಾದ್ರೂ ಟೋಲ್ ಕಲೆಕ್ಷನ್ ಮಾಡಿ ಎಂದು ಹೇಳಿದ್ದಾರೆ.
ಕುಂಬಳೆ ಪಂಚಾಯತ್ ಸದಸ್ಯ ಖಾಲಿದ್ ಮಾತನಾಡಿ, ತಾತ್ಕಾಲಿಕ ಟೋಲ್ ಗೇಟ್ ವಿರುದ್ಧ ಹೈಕೋರ್ಟಿನಲ್ಲಿ ರಿಟ್ ಹಾಕಿದ್ದೇವೆ, ಅಲ್ಲಿ ವಿಚಾರಣೆ ಮುಗಿಯೋ ವರೆಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಟೋಲ್ ಕಲೆಕ್ಷನ್ ನಿಲ್ಲಿಸಬೇಕು ಎಂದು ಆಗ್ರಹಿಸಿದ್ದಾರೆ. ಆದರೆ ಪೊಲೀಸರು ಕೋರ್ಟ್ ಸೂಚನೆಯಂತೆ, ತಾತ್ಕಾಲಿಕ ಟೋಲ್ ಕಲೆಕ್ಷನ್ ಮಾಡಲು ಅನುಮತಿ ನೀಡಿದ್ದಾರೆ. ಪ್ರತಿಭಟನೆ ಸಂದರ್ಭದಲ್ಲಿ ಶಾಸಕ ಎಕೆಎಂ ಅಶ್ರಫ್ ಮತ್ತು ಪೊಲೀಸರ ನಡುವೆ ತಳ್ಳಾಟ, ಮಾತಿನ ವಾಗ್ವಾದ ನಡೆಯಿತು. ಆದರೆ ಪೊಲೀಸರು ಯಾವುದೇ ಪ್ರತಿಭಟನೆಗೂ ಬಗ್ಗಲಿಲ್ಲ.
Thousands of activists led by Manjeshwar MLA A.K.M. Ashraf staged a protest on Monday opposing the start of a temporary toll plaza at Arikkady in Kumble on National Highway 66. The protest resulted in a three-hour road blockade, causing heavy traffic congestion. Police later arrested the MLA along with several protestors.
31-05-26 09:23 pm
HK News Staffer
ಜೂನ್ 3ರಂದು 24ನೇ ಮುಖ್ಯಮಂತ್ರಿಯಾಗಿ ಡಿಕೆಶಿ ಪ್ರಮಾಣ...
30-05-26 06:45 pm
ಕೆಪಿಸಿಸಿ ಅಧ್ಯಕ್ಷ ಗಾದಿಗೆ ಸರ್ಪ್ರೈಸ್ ಟ್ವಿಸ್ಟ್ ;...
30-05-26 01:14 pm
ಡಿಕೆಶಿ ಪಟ್ಟಾಭಿಷೇಕಕ್ಕೆ ಕ್ಷಣಗಣನೆ ! ವಿಧಾನಸೌಧ ಮೆಟ...
29-05-26 10:41 pm
ಒಬ್ಬರಿಗೆ ಒಂದೇ ಹುದ್ದೆ ; ಕೆಪಿಸಿಸಿ ಅಧ್ಯಕ್ಷ ಹುದ್ದ...
29-05-26 04:30 pm
31-05-26 09:25 pm
HK News Staffer
ಸೌದಿ ಜೈಲಿನಲ್ಲಿ ಎರಡು ದಶಕಗಳ ಅಗ್ನಿಪರೀಕ್ಷೆ; 34 ಕೋ...
29-05-26 06:17 pm
ಟಿಎಂಸಿಯಲ್ಲಿ ಬಿರುಕು ; 50 ಶಾಸಕರು, ಸಂಸದರು ಬಿಜೆಪಿ...
27-05-26 09:17 pm
ಕೇರಳ ರಾಜಕಾರಣದಲ್ಲಿ ಭಾರೀ ಸಂಚಲನ..! ಮಾಜಿ ಸಿಎಂ ಪಿಣ...
27-05-26 08:36 pm
ಜೂನ್, ಜುಲೈನಲ್ಲಿ 12 ಪರಿಷತ್ ಸ್ಥಾನಗಳಿಗೆ ಚುನಾವಣೆ...
26-05-26 12:54 pm
31-05-26 03:40 pm
HK News Staffer
ತಣ್ಣೀರುಬಾವಿ ಇಕೋ ಬೀಚ್ನಲ್ಲಿ ರಾಷ್ಟ್ರ ಮಟ್ಟದ ಸರ್ಫ...
30-05-26 09:52 pm
Mangalore News, Traffic: ಹೆದ್ದಾರಿ ಅಪಘಾತ ತಡೆಗೆ...
30-05-26 08:06 pm
Master Travels Bus, Mangalore: ಕಾವೂರಿನಲ್ಲಿ ಬಸ...
30-05-26 02:10 pm
ಹಿಂದೆ ವೀರೇಂದ್ರ ಪಾಟೀಲ್ ಗೆ ಆದ ಅವಮಾನ ಈಗ ಸಿದ್ದರಾಮ...
28-05-26 02:45 pm
31-05-26 08:25 pm
HK News Staffer
ಬೀದಿ ಬದಿ ವ್ಯಾಪಾರಿಗೆ ನಿಂದಿಸಿ ವಿಡಿಯೋ ವೈರಲ್ ; ಸಾ...
31-05-26 05:06 pm
ಸತ್ಯನಾರಾಯಣ ಪೂಜೆ ಮುಗಿಸಿ ನದಿಗೆ ಇಳಿದವರು ಜಲಸಮಾಧಿ...
31-05-26 02:24 pm
ಭೀಮಾತೀರದಲ್ಲಿ ಮತ್ತೆ ರಕ್ತದೋಕುಳಿ! ಅಸ್ತಿ ವಿವಾದಕ್ಕ...
29-05-26 10:21 pm
Expert College Case, Mangalore: ಕೋವಿಡ್ ಲಾಕ್ಡ...
29-05-26 08:30 pm