ಬ್ರೇಕಿಂಗ್ ನ್ಯೂಸ್
27-02-26 05:00 pm HK News Staffer ಕರಾವಳಿ
ಮಂಗಳೂರು, ಫೆ.27: ನಗರದ ಕುಂಟಿಕಾನ ಬಳಿಯಿಂದ ಮಕ್ಕಳನ್ನು ಕದ್ದೊಯ್ಯಲಾಗಿದೆ ಎಂಬ ವದಂತಿಯ ಸಂದೇಶ ಇಂದು ಬೆಳಗ್ಗಿನಿಂದ ಭಾರೀ ವೈರಲ್ ಆಗಿದ್ದು ಆಸುಪಾಸಿನಲ್ಲಿ ಸಾರ್ವಜನಿಕರು ಭಯಕ್ಕೀಡಾಗಿದ್ದರು. ಕದ್ರಿ ಪೊಲೀಸರು ಸ್ಥಳಕ್ಕೆ ತೆರಳಿ ತನಿಖೆ ನಡೆಸಿ ಅದು ಬರೀ ವದಂತಿಯೆಂದು ಸ್ಪಷ್ಟಪಡಿಸಿದ್ದಾರೆ.
ಇಂದು ಬೆಳಗ್ಗೆ ಎಜೆ ಆಸ್ಪತ್ರೆ ಬಳಿಯ ಕುಂಟಿಕಾನದಲ್ಲಿ ಓಮ್ನಿ ಕಾರಿನಲ್ಲಿ ನಾಲ್ವರು ಬಂದು ಇಬ್ಬರು ಮಕ್ಕಳನ್ನು ಕಿಡ್ನಾಪ್ ಮಾಡಿದ್ದಾರೆಂದು ಸುದ್ದಿ ಹಬ್ಬಿತ್ತು. ಯಾರೋ ಮಕ್ಕಳಿಂದ ವಿಷಯ ತಿಳಿದ ಸ್ಥಳೀಯ ಮಹಿಳೆಯೊಬ್ಬರು ಈ ಬಗ್ಗೆ ಆಡಿಯೋ ಮೆಸೇಜನ್ನು ಪರಿಸರದ ಅಂಗನವಾಡಿ ಟೀಚರಿಗೆ ಹಾಕಿದ್ದರು. ಇದನ್ನು ನಂಬಿದ ಟೀಚರ್ ಮಕ್ಕಳ ಪೋಷಕರಿದ್ದ ಗ್ರೂಪಿಗೆ ವಾಯ್ಸ್ ಮೆಸೇಜ್ ಹಾಕಿ, ಯಾರೋ ಮಕ್ಕಳು ಕಳ್ಳರಿದ್ದಾರಂತೆ, ಜಾಗ್ರತೆ ಇರುವಂತೆ ಹೇಳಿದ್ದರು. ಈ ಎರಡೂ ವಾಯ್ಸ್ ಮೆಸೇಜ್ ಭಾರೀ ವೈರಲ್ ಆಗಿದ್ದು ಕುಂಟಿಕಾನದಲ್ಲಿ ಮಕ್ಕಳು ಕಳ್ಳರಿದ್ದಾರೆಂದು ಸಂದೇಶ ಜನರಿಗೆ ಹೋಗಿತ್ತು. ಜನರು ಇದನ್ನು ಹೌದೋ ಅಲ್ಲವೋ ಎಂದು ಪರಿಶೀಲಿಸುವ ಮೊದಲು ಭಯಕ್ಕೆ ಒಳಗಾಗಿದ್ದರು.
ವಿಷಯ ತಿಳಿದ ಕದ್ರಿ ಪೊಲೀಸರು ಸ್ಥಳಕ್ಕೆ ತೆರಳಿ ತನಿಖೆ ನಡೆಸಿದ್ದು ಮಧ್ಯಾಹ್ನ ವರೆಗೂ ಸ್ಥಳೀಯ ಸಾರ್ವಜನಿಕರಿಂದ ಮಾಹಿತಿ ಸಂಗ್ರಹಿಸಿದ್ದಾರೆ. ಅಂಗನವಾಡಿ ಟೀಚರನ್ನೂ ಮಾಹಿತಿ ಕೇಳಿದ್ದಾರೆ. ಯಾರೋ ಪೋಷಕರು ಹಾಕಿದ್ದಕ್ಕೆ ಜಾಗ್ರತೆ ಇರುವಂತೆ ಮೆಸೇಜ್ ಹಾಕಿದ್ದೆ ಎಂದು ಟೀಚರ್ ತಿಳಿಸಿದ್ದಾರೆ. ಬೆಳಗ್ಗೆ ಸೈಂಟ್ ಆ್ಯನ್ಸ್ ಶಾಲೆಯ ಬಳಿ ಯಾರೋ ಹೆಣ್ಮಗು ಆಟೋದಲ್ಲಿ ಅಳುತ್ತಿರುವುದನ್ನು ನೋಡಿದ ಮಕ್ಕಳು ಒಬ್ಬರಿಗೊಬ್ಬರು ಹೇಳುತ್ತಾ 'ಮಕ್ಕಳು ಕಳ್ಳರು ಬಂದಿದ್ದಾರೆ' ಎಂದು ಹೇಳಿಕೊಂಡಿದ್ದಾರೆ. ಅದೇ ಮಾತು ಮುಂದೆ ವದಂತಿಗೆ ಕಾರಣವಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಸತ್ಯ ಒಂದು ಸುತ್ತು ಬರುವಷ್ಟರಲ್ಲಿ ಸುಳ್ಳು ಇಡೀ ಊರು ಸುತ್ತಿರುತ್ತದೆ ಅನ್ನುವ ಹಾಗಾಗಿದೆ ಕತೆ. ಮಾಧ್ಯಮದ ಪ್ರಶ್ನೆಗೆ ಪೊಲೀಸ್ ಕಮಿಷನರ್ ಸುಧೀರ್ ರೆಡ್ಡಿ, ಅದೊಂದು ವದಂತಿಯಷ್ಟೇ ಎಂದು ಹೇಳಿದ್ದಾರೆ.
Join our WhatsApp group for the latest news and stories on Headline Karnataka: https://t.ly/yCmFN
A voice message claiming that school children were kidnapped near Kuntikana in the city has been circulating widely on WhatsApp since this morning, triggering fear and panic among local residents. Following the spread of the message, personnel from the Kadri Police Station rushed to the spot and conducted a thorough inquiry. After verification, the police confirmed that the message was completely false and baseless.
16-06-26 12:26 pm
HK News Staffer
ಧರ್ಮಸ್ಥಳದ ಬುರುಡೆ ಕೇಸಿಗೆ ಬಿಗ್ ಟ್ವಿಸ್ಟ್ ; ಎಸ್ಐಟ...
12-06-26 12:02 pm
ಪದತ್ಯಾಗದ ತರಾತುರಿಯಲ್ಲೇ ಸಿದ್ದರಾಮಯ್ಯ ಕುರುಬ ಸಮುದಾ...
11-06-26 08:31 pm
ಹಳಸಿತೇ ಜಮೀರ್ - ಸಿದ್ದು ಸ್ನೇಹ ಸಂಬಂಧ? ನಿಮ್ಮ ಆಪ್ತ...
11-06-26 07:36 pm
ಮಗು ಕರುಣಿಸಿದ ಪ್ರಕರಣ; ಕೊನೆಗೂ ರಾಜಿ ಸಂಧಾನಕ್ಕಿಳಿದ...
11-06-26 01:53 pm
15-06-26 11:18 am
HK News Staffer
ಬಿರಿಯಾನಿ ಹೆಸರಲ್ಲಿ ಮಹಿಳೆಯ ಮಾನ ಕಳೆದ ಟೆಕ್ಕಿ! ತಮಾ...
14-06-26 09:46 pm
ಸಹಕಾರಿ ಬ್ಯಾಂಕುಗಳಲ್ಲಿ ಸರ್ವಾಧಿಕಾರಕ್ಕೆ ಬ್ರೇಕ್ !...
14-06-26 07:17 pm
ಅಸ್ಸಾಂನಲ್ಲಿ 18 ವರ್ಷ ಮೇಲ್ಪಟ್ಟವರಿಗೆ ಆಧಾರ್ ಕಾರ್ಡ...
14-06-26 04:49 pm
ಕೇರಳದಲ್ಲಿ ಜೂನ್ 15ರಿಂದ 'ಪ್ರಿಯದರ್ಶಿನಿ' ಉಚಿತ ಬಸ್...
14-06-26 01:08 pm
16-06-26 11:35 am
HK News Staffer
ಧರ್ಮಸ್ಥಳ ಬುರುಡೆ ಪ್ರಕರಣ ; ಗಿರೀಶ್ ಮಟ್ಟಣ್ಣನವರ್,...
15-06-26 04:52 pm
ಅಂಬಾನಿ ಕುಟುಂಬದ ಗುರೂಜಿ ಜೊತೆ ಕೊಲ್ಲೂರು ಮೂಕಾಂಬಿಕೆ...
14-06-26 09:47 pm
ದ.ಕ. ಜಿಲ್ಲೆಯ 14 ಪ್ರಮುಖ ರಸ್ತೆ ಅಭಿವೃದ್ದಿ ಕಾಮಗಾರ...
14-06-26 02:37 pm
ಧರ್ಮಸ್ಥಳ ಬುರುಡೆ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್:...
13-06-26 05:28 pm
16-06-26 08:32 pm
HK News Staffer
SIT Car Accident: ಎಸ್ಐಟಿ ಎಸ್ಪಿ ಸೈಮನ್ ಪ್ರಯಾಣಿಸ...
16-06-26 05:10 pm
Chandrashekhar, Belthangady: ಬೆಳ್ತಂಗಡಿ ಸರ್ಕಾರ...
16-06-26 02:34 pm
ಉಳ್ಳಾಲ ; ಸ್ನಾನಕ್ಕೆಂದು ಕೋಣೆಗೆ ತೆರಳಿದ್ದ ಪಿಯುಸಿ...
16-06-26 10:33 am
ಮಕ್ಕಳ ಕಣ್ಣೆದುರೇ ತಾಯಿಯ ಬರ್ಬರ ಹತ್ಯೆ! ಬೆಟ್ಟಿಂಗ್...
15-06-26 09:21 pm