ಬ್ರೇಕಿಂಗ್ ನ್ಯೂಸ್
14-10-20 11:34 am Mangaluru Correspondent ಕರಾವಳಿ
ಮಂಗಳೂರು, ಅಕ್ಟೋಬರ್ 14: ಮಾಂಸದ ಮಾರುಕಟ್ಟೆಯಲ್ಲಿ ದನದ ಮಾಂಸವನ್ನು ಬೆರೆಸಲಾಗುತ್ತದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಮಹಾನಗರ ಪಾಲಿಕೆ ಮೇಯರ್ ದಿವಾಕರ ಪಾಂಡೇಶ್ವರ್ ಮಂಗಳೂರಿನ ಮಾಂಸದ ಮಾರುಕಟ್ಟೆಗಳಿಗೆ ದಿಢೀರ್ ದಾಳಿ ನಡೆಸಿದ್ದಾರೆ.
ಉರ್ವಾ, ಉರ್ವಾ ಸ್ಟೋರ್ ಮತ್ತು ಕುದ್ರೋಳಿ ಕಸಾಯಿಖಾನೆಗೆ ಭೇಟಿ ನೀಡಿದ ಮೇಯರ್, ಅಧಿಕಾರಿಗಳ ಜೊತೆ ಪರಿಶೀಲನೆ ನಡೆಸಿದರು. ಮಾಂಸದ ಮಾರುಕಟ್ಟೆಗಳಲ್ಲಿ ದಿನವಹಿ ವ್ಯಾಪಾರವಾಗುವ ಮಾಂಸದ ಪ್ರಮಾಣ, ಕಡಿಯುವ ಕುರಿ, ಆಗಳ ಕುರಿತು ರಶೀದಿ ಇಟ್ಟುಕೊಳ್ಳದಿರುವ ವಿಚಾರದ ಬಗ್ಗೆ ಮೇಯರ್ ವ್ಯಾಪಾರಿಗಳನ್ನು ತರಾಟೆಗೆತ್ತಿಕೊಂಡರು. ಎಲ್ಲಿಂದ ಕುರಿ, ಆಡುಗಳನ್ನು ತರುತ್ತೀರಿ, ಎಷ್ಟು ಕಡಿಯುತ್ತೀರಿ ಮತ್ತು ಮಾಂಸದ ಪ್ರಮಾಣ ಎಷ್ಟು ಎನ್ನುವ ಬಗ್ಗೆ ಕಂಪ್ಯೂಟರೈಸ್ಡ್ ಬಿಲ್ ಇಟ್ಟುಕೊಳ್ಳಬೇಕು. ಈ ಬಗ್ಗೆ ಪಾಲಿಕೆಯ ಆರೋಗ್ಯ ಇಲಾಖೆ ಅಧಿಕಾರಿಗಳು ದಿನವೂ ಚೆಕ್ ಮಾಡಬೇಕು ಎಂದು ಸೂಚನೆ ನೀಡಿದರು.
ದಾಳಿ ವೇಳೆ, ದಿನದ ಮಾಂಸ ಪತ್ತೆಯಾಗಿಲ್ಲ ಎಂದು ಮೇಯರ್ ದಿವಾಕರ್ ಹೇಳಿದ್ದಾರೆ. ಇದೇ ವೇಳೆ, ಕುದ್ರೋಳಿ ಕಸಾಯಿಖಾನೆಗೂ ಮೇಯರ್ ಭೇಟಿ ನೀಡಿದ್ದಾರೆ. ಅಲ್ಲಿ ಎಷ್ಟು ಪ್ರಮಾಣದಲ್ಲಿ ಡೈಲಿ ಆಡು, ಕುರಿ, ದನಗಳನ್ನು ಕಡಿಯಲಾಗುತ್ತದೆ ಎನ್ನುವ ಮಾಹಿತಿಯೇ ಇರಲಿಲ್ಲ. ಅದರ ಬಗ್ಗೆ ರಶೀದಿ ಕೇಳಿದ್ದಕ್ಕೆ ಅಲ್ಲಿನ ಸಿಬಂದಿಗಳು ಕೈಯಲ್ಲಿ ಬರೆದ ಚೀಟಿಗಳನ್ನು ಮುಂದಿಟ್ಟರು. ರಶೀದಿ, ಬಿಲ್ ಪುಸ್ತಕ ಇಟ್ಟುಕೊಳ್ಳದ ವ್ಯಾಪಾರಿಗಳ ವಿರುದ್ಧ ಗರಂ ಆದ ಮೇಯರ್, ಆರೋಗ್ಯ ಇಲಾಖೆಯ ಅಧಿಕಾರಿಗಳನ್ನು ತರಾಟೆಗೆತ್ತಿಕೊಂಡರು.





ದಿನವೂ ದನ, ಆಡುಗಳನ್ನು ಕಡಿಯುವ ವೇಳೆ, ಆರೋಗ್ಯ ಇಲಾಖೆ ಅಧಿಕಾರಿಗಳು ಸ್ಥಳದಲ್ಲಿರಬೇಕು. ಅಧಿಕಾರಿಗಳ ಅನುಮತಿಯ ಬಳಿಕವೇ ವಧೆ ಮಾಡಬೇಕೆಂದು ನಿಯಮ ಇದೆ. ಆರೋಗ್ಯ ಅಧಿಕಾರಿಗಳು ಇದನ್ನು ಕಡ್ಡಾಯವಾಗಿ ಪಾಲನೆ ಮಾಡಬೇಕು ಎಂದು ಸೂಚನೆ ನೀಡಿದರು.
Mangaluru City Corporation (MCC) officials, including mayor Diwakara raided the slaughterhouse under the limits of MCC as there were allegations that beef meat is being mixed with mutton here on Wednesday 14th, October 2020.
04-11-25 04:38 pm
Bangalore Correspondent
ಸಚಿವ ಸತೀಶ್ ಜಾರಕಿಹೊಳಿ ದಿಢೀರ್ ದೆಹಲಿಗೆ ; ಕೆಪಿಸಿಸ...
03-11-25 05:17 pm
ಕಣ್ಣೂರಿನ ಪಯ್ಯಂಬಲಂ ಬೀಚ್ ನಲ್ಲಿ ಸಮುದ್ರಕ್ಕಿಳಿದ ಬೆ...
02-11-25 11:09 pm
ಆರೆಸ್ಸೆಸ್ನವರಷ್ಟು ಹೇಡಿಗಳು ಯಾರೂ ಇಲ್ಲ, ಅವರ್ಯಾಕೆ...
01-11-25 09:33 pm
ನಮ್ಮ ಕ್ಷೇತ್ರದಲ್ಲಿ ಪಥಸಂಚಲನ ಮಾಡೋದನ್ನು ಆರೆಸ್ಸೆಸ್...
31-10-25 08:10 pm
03-11-25 01:13 pm
HK News Desk
ಜೋಧಪುರ ; ಭೀಕರ ರಸ್ತೆ ಅಪಘಾತದಲ್ಲಿ 18 ಜನರು ಸಾವು,...
02-11-25 11:12 pm
ಕೇರಳದಲ್ಲಿ ಮುಸ್ಲಿಮ್ ಮತ್ತು ಕ್ರಿಶ್ಚಿಯನ್ನರಿಗೆ ಒಬಿ...
02-11-25 05:13 pm
ಜೆಡ್ಡಾದಿಂದ ಹೈದರಾಬಾದ್ ಬರುತ್ತಿದ್ದ ವಿಮಾನದಲ್ಲಿ ಬ...
01-11-25 07:27 pm
ಭಾರತದಲ್ಲಿ ಸ್ವತಂತ್ರವಾಗಿದ್ದೇನೆ, ಮತ್ತೆ ಬಾಂಗ್ಲಾದೇ...
30-10-25 03:20 pm
04-11-25 10:51 pm
Mangalore Correspondent
Mangalore Police, Panambur Beach: ಗಂಡ - ಹೆಂಡತ...
04-11-25 08:37 pm
ಅಬಕಾರಿ ಇಲಾಖೆಯಲ್ಲಿ ವ್ಯಾಪಕ ಭ್ರಷ್ಟಾಚಾರ, ಹಣಕ್ಕಾಗಿ...
04-11-25 06:15 pm
ವ್ಯಾಟಿಕನ್ ಸಿಟಿಯ ಭಾರತದ ರಾಯಭಾರಿ ಆ್ಯಂಡ್ರಿಯಾ ಫಾನ್...
04-11-25 05:06 pm
ಧರ್ಮಸ್ಥಳ ಪ್ರಕರಣ ; ಎಸ್ಐಟಿ ತನಿಖಾ ಪ್ರಕ್ರಿಯೆಗೆ ಮಹ...
04-11-25 05:03 pm
04-11-25 02:11 pm
Mangalore Correspondent
ಟೋಪಿ ನೌಫಾಲ್ ಕೊಲೆಯಲ್ಲ, ರೈಲು ಡಿಕ್ಕಿ ಹೊಡೆದು ಸಾವು...
03-11-25 12:33 pm
ಶಬರಿಮಲೆ ಅಯ್ಯಪ್ಪ ದೇವಸ್ಥಾನದಲ್ಲಿ ಚಿನ್ನ ಕಳವು ಪ್ರಕ...
01-11-25 07:25 pm
Rowdy Topi Naufal Murder, Mangalore: ಮಂಗಳೂರಿನ...
01-11-25 03:31 pm
ವೃದ್ಧ ಮಹಿಳೆಗೆ ಡಿಜಿಟಲ್ ಅರೆಸ್ಟ್ ಬಲೆ ; ಐದು ಗಂಟೆಯ...
01-11-25 01:31 pm