ಬ್ರೇಕಿಂಗ್ ನ್ಯೂಸ್
17-09-20 02:01 pm Headline Karnataka News Network ನ್ಯೂಸ್ View
ಬೆಂಗಳೂರು, ಸೆಪ್ಟಂಬರ್ 17: ಈ ರಮೇಶ್ ಜಾರಕಿಹೊಳಿ ಗೊತ್ತಲ್ಲ.. ಕುಮಾರಸ್ವಾಮಿ ಸರಕಾರವನ್ನು ತನ್ನ ಕಿರು ಬೆರಳಿನಲ್ಲೇ ಬುಗುರಿಯಂತೆ ತಿರುಗಿಸಿ ಮೂಲೆಗೆ ತಳ್ಳಿದ ಬೆಳಗಾವಿ ಬ್ರದರ್..! ಕುಮಾರಣ್ಣ ಸರಕಾರವನ್ನು ಹಿಂಬಾಗಿಲಿಂದ ಹುಳಿ ಹಿಂಡಿಯೇ ಪತನಗೊಳಿಸಿದ್ದಕ್ಕಾಗಿ ಜಾರಕಿ 'ಹುಳಿ' ಅಂತ್ಲೇ ಮಾಧ್ಯಮದಲ್ಲಿ ಹೆಸರಾದವರು. ಎಷ್ಟಾದ್ರೂ ಈ ಬೆಳಗಾವಿ ರಾಜಕಾರಣಿ ಹಾಗೇ ಕುಂತ್ಕೊಳ್ಳೋ ಮನುಷ್ಯ ಅಲ್ಲ.. ಯಾರಿಗಾದ್ರೂ ಹುಳಿ ಹಿಂಡೋದೇ ಜಾಯಮಾನ ಅನ್ನೋದು ಅವ್ರ ರಾಜಕೀಯ ನಡೆಗಳಿಂದಲೇ ತೋರಿಸಿಕೊಟ್ಟಿದ್ದಾರೆ. ಈಗ ಈ ಜಾರಕಿಹೊಳಿಯನ್ನು ಹಿಡಿದು ಬಿಜೆಪಿ ಹೈಕಮಾಂಡ್ ಮಹಾರಾಷ್ಟ್ರದಲ್ಲಿ ಹಕೀಮತ್ ಮಾಡೋಕೆ ಕಳಿಸ್ತಿದ್ಯಾ ಅನ್ನೋ ಅನುಮಾನ ಕೇಳಿಬಂದಿದೆ. ಇದ್ಕೆ ಕಾರಣ ಆಗಿರೋದು ಜಾರಕಿಹೊಳಿ ದೆಹಲಿಯಲ್ಲಿ ಬಿಜೆಪಿಯ ಮಾಜಿ ಸಿಎಂ ಫಡ್ನವೀಸ್ ಭೇಟಿ ಮಾಡಿದ್ದು.
ಮಹಾರಾಷ್ಟ್ರದಲ್ಲಿ ಬಿಜೆಪಿಯ ಮೈತ್ರಿಯನ್ನು ಕಡಿದುಕೊಂಡು ಕಾಂಗ್ರೆಸ್, ಎನ್ ಸಿಪಿ ಜೊತೆಯಾಗಿ ಅಧಿಕಾರ ನಡೆಸ್ತಿರೋ ಶಿವಸೇನೆ ಸರಕಾರಕ್ಕೆ ಜಾರಕಿಹೊಳಿ ಹುಳಿ ಹಿಂಡಲಿದ್ದಾರೆಯೇ ಎಂಬ ಪ್ರಶ್ನೆ ಮೂಡಿದೆ. ಬೆಳಗಾವಿಯಲ್ಲಿ ಪ್ರಭಾವಿಯಾಗಿರುವ ಜಾರಕಿಹೊಳಿ ಬ್ರದರ್ಸ್ ಮಹಾರಾಷ್ಟ್ರ ಭಾಗದಲ್ಲೂ ಪ್ರಭಾವ ಹೊಂದಿದ್ದಾರೆ. ಮೇಲಾಗಿ ಗಡಿಭಾಗದ ಶಾಸಕರು ಪಕ್ಷಭೇದ ಇಲ್ಲದೆ ಬೆಳಗಾವಿಯ ಪ್ರಭಾವಿಗಳ ಜೊತೆ ಹತ್ತಿರದ ನಂಟು ಹೊಂದಿದ್ದಾರೆ. ಇಂಥ ವ್ಯಕ್ತಿ ಈಗ ಮಹಾರಾಷ್ಟ್ರದಲ್ಲಿ ಕಳೆದ ಬಾರಿ ಸಿಎಂ ಆಗಿದ್ದ ದೇವೇಂದ್ರ ಫಡ್ನವಿಸ್ ಅವರನ್ನು ಭೇಟಿಯಾಗಿದ್ದಾರೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಸೂಚನೆ ಮೇರೆಗೆ ರಮೇಶ್ ಜಾರಕಿಹೊಳಿ ದೆಹಲಿಯಲ್ಲಿ ಈ ಭೇಟಿ ಮಾಡಿದ್ದಾರೆ ಎನ್ನಲಾಗ್ತಿದೆ. ಒಂದು ಗಂಟೆಗೂ ಹೆಚ್ಚು ಕಾಲ ಇವರಿಬ್ಬರು ಮಾತುಕತೆ ನಡೆಸಿದ್ದು ಈಗ ರಾಜಕೀಯ ಕುತೂಹಲಕ್ಕೆ ಕಾರಣವಾಗಿದೆ.
ಕುಮಾರಸ್ವಾಮಿ ಸರಕಾರ ಪತನಗೊಳಿಸಿದ ಸಂದರ್ಭ ರಮೇಶ್ ಜಾರಕಿಹೊಳಿ ಮತ್ತು ಎಚ್.ವಿಶ್ವನಾಥ್ ಗ್ಯಾಂಗ್ ಮುಂಬೈನ ಹೊಟೇಲಲ್ಲಿ ಉಳಿದುಕೊಂಡಿತ್ತು. ಹೇಗಾದ್ರೂ ಸರಕಾರ ಉಳಿಸಿಕೊಳ್ಳಬೇಕೆಂದು ಡಿಕೆಶಿ ಅಂಡ್ ಗ್ಯಾಂಗ್ ಜಾರಕಿಹೊಳಿ ಭೇಟಿಗಾಗಿ ಮುಂಬೈಗೆ ತೆರಳಿದ್ದರು. ಆದರೆ ಆಗ ಮಹಾರಾಷ್ಟ್ರದಲ್ಲಿ ಅಧಿಕಾರದಲ್ಲಿದ್ದ ಬಿಜೆಪಿ ಸರಕಾರ, ಡಿಕೆ ಶಿವಕುಮಾರ್ ಗೆ ಜಾರಕಿಹೊಳಿ ಉಳಿದುಕೊಂಡಿದ್ದ ಹೊಟೇಲಿಗೆ ತೆರಳಲು ಅವಕಾಶ ನೀಡಿರಲಿಲ್ಲ. ಕೊನೆಗೆ ಡಿಕೆಶಿ ಅಂಡ್ ಟೀಮ್ ಮುಂಬೈನಲ್ಲಿ ಹೈಡ್ರಾಮಾ ಮಾಡಿ, ಏನೂ ಮಾಡಲಾಗದೆ ಹಿಂತಿರುಗಿತ್ತು. ಇತ್ತ ಕರ್ನಾಟಕದಲ್ಲಿ ಬಿಜೆಪಿ ಸರಕಾರ ಬರಲು ರಮೇಶ್ ಜಾರಕಿಹೊಳಿ ಕಾರಣ ಆಗಿದ್ದೂ ಅವರ ಛಾರ್ಮ್ ಹೆಚ್ಚುವಂತೆ ಮಾಡಿತ್ತು. ಆವತ್ತು ಸಿಎಂ ಫಡ್ನವಿಸ್ ಕಾರಣದಿಂದ ಮುಂಬೈನಲ್ಲಿ ಅತೃಪ್ತರನ್ನು ಕಟ್ಟಿಕೊಂಡು 15 ದಿನಗಳ ಕಾಲ ಉಳಿದುಕೊಂಡಿದ್ದ ಜಾರಕಿಹೊಳಿ ಈಗ ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ವಿರುದ್ಧ ತೊಡೆ ತಟ್ಟಲಿದ್ದಾರೆಯೇ ಅನ್ನುವ ಮಾತು ಕೇಳಿಬಂದಿದೆ. ಜಾರಕಿಹೊಳಿ ಮತ್ತು ಫಡ್ನವಿಸ್ ನಡುವಿನ ಭೇಟಿ ಕುತೂಹಲಕ್ಕೆ ಕಾರಣವಾಗಿದ್ದಲ್ಲದೆ, ಅತ್ತ ಶಿವಸೇನೆ - ಕಾಂಗ್ರೆಸ್ ಸರಕಾರದಲ್ಲಿ ನಡುಕ ಸೃಷ್ಟಿಸಿದೆ.
ನಟ ಸುಶಾಂತ್ ಸಾವಿನ ಪ್ರಕರಣದಲ್ಲಿ ಹೆಸರು ಕೆಡಿಸಿಕೊಂಡಿರುವ ಶಿವಸೇನೆ ಸರಕಾರದ ಬಗ್ಗೆ ಅಲ್ಲಿನ ಶಾಸಕರು ಅತೃಪ್ತಿ ಹೊಂದಿದ್ದಾರೆ ಎನ್ನಲಾಗುತ್ತಿದೆ. ಇದೇ ಸಮಯವನ್ನು ಬಿಜೆಪಿ ತಮ್ಮ ಲಾಭಕ್ಕೆ ಬಳಸಿಕೊಳ್ಳಲು ಮುಂದಾಗಿದ್ದು ಚತುರ ರಾಜಕೀಯ ನಡೆ ಎನ್ನುವ ಮಾತು ಕೇಳಿಬರುತ್ತಿದೆ.
Join our WhatsApp group for latest news updates
14-03-25 11:11 pm
Bangalore Correspondent
Swamiji, Bagalkot, Police Video: ದುಡ್ಡು ಪಡೆದು...
14-03-25 08:30 pm
Shivarama Hebbar, S.T. Somashekar, Lingaraj P...
14-03-25 03:39 pm
Ranya Rao Gold Smuggling, Ips Ramchandra Rao:...
14-03-25 02:20 pm
ಕುದುರೆಮುಖ ರಾಷ್ಟ್ರೀಯ ಅರಣ್ಯಕ್ಕೆ ಬೆಂಕಿ ; ಸ್ಥಳೀಯರ...
13-03-25 02:56 pm
13-03-25 03:49 pm
HK News Desk
Shiradi Ghat, Mangalore Bengalore, Mp Brijesh...
13-03-25 01:30 pm
ಪಾಕಿಸ್ತಾನದಲ್ಲಿ 500ಕ್ಕು ಹೆಚ್ಚು ಪ್ರಯಾಣಿಕರಿದ್ದ ರ...
12-03-25 11:41 am
ಅಮೆರಿಕದಲ್ಲಿ 20 ವರ್ಷದ ಭಾರತೀಯ ಮೂಲದ ಮೆಡಿಕಲ್ ವಿದ್...
10-03-25 10:17 pm
ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಜೊತೆಗೆ ಆಟೋ ಚಾಲಕನ ಸ...
10-03-25 11:45 am
14-03-25 10:35 pm
Mangalore Correspondent
Mohan Gowda, Mangalore: ಬಿ.ಸಿ.ರೋಡಿನಲ್ಲಿ ಮಾ.16...
14-03-25 09:39 pm
Mangalore tulu Artist Vivek Madur death: ಕಲಾ...
14-03-25 11:02 am
Mangalore Accident, Kapikad, Murder: ನೆರೆಮನೆ...
13-03-25 09:20 pm
PFI, Mangalore Crime, Police: ಪಿಎಫ್ಐ ಮುಖಂಡರಿಗ...
13-03-25 08:46 pm
14-03-25 05:02 pm
HK News Desk
Ccb Police, Firearms, Mangalore crime: ವಾಮಂಜೂ...
13-03-25 06:44 pm
Kothanur Police, Bangalore crime, Murder: ನಾಲ...
11-03-25 07:34 pm
Tanishq showroom, Bihar Robbery: ಬಿಹಾರದಲ್ಲಿ ಹ...
10-03-25 10:48 pm
Actress Ranya Rao, CBI, Gold case; ನಟಿ ರನ್ಯಾ...
09-03-25 05:06 pm