ಬ್ರೇಕಿಂಗ್ ನ್ಯೂಸ್
17-03-26 07:16 pm HK News Staffer ಕರಾವಳಿ
ಮಂಗಳೂರು, ಮಾರ್ಚ್ 17: ಮೂಡುಬಿದ್ರೆ ಇನ್ಸ್ ಪೆಕ್ಟರ್ ಸಂದೇಶ್ ವಿರುದ್ಧದ ಆರೋಪ ಪ್ರಕರಣದ ಬಗ್ಗೆ ಪ್ರಾಥಮಿಕ ವರದಿ ಪಡೆದ ಮಂಗಳೂರು ಪೊಲೀಸ್ ಕಮಿಷನರ್ ಸುಧೀರ್ ರೆಡ್ಡಿ ಅವರನ್ನು ಇಲಾಖಾ ತನಿಖೆ ಬಾಕಿ ಇರಿಸಿ ಕರ್ತವ್ಯದಿಂದ ಅಮಾನತು ಮಾಡಿದ್ದಾರೆ.
ಇನ್ಸ್ ಪೆಕ್ಟರ್ ಬಗ್ಗೆ ಆರೋಪ ಮಾಡಿರುವ ಸುಮತಿ ನಾಯ್ಕ್ ಮತ್ತು ಅವರ ಅಕ್ಕನ ವಿಚಾರದಲ್ಲಿ ಕೌಟುಂಬಿಕ ಕಲಹದ ಬಗ್ಗೆ ಪ್ರತ್ಯೇಕ ನಾಲ್ಕು ಕೇಸು ದಾಖಲಾಗಿದೆ. ಈ ಪೈಕಿ ಒಂದು ಕೇಸು ತನಿಖಾ ಹಂತದಲ್ಲಿದ್ದು ಇತರ ಮೂರು ಕೇಸುಗಳು ಹೈಕೋರ್ಟ್ ನಲ್ಲಿ ಸ್ಟೇಯಾಗಿದೆ. ಅವಿತಾ ಮಿನೇಜಸ್ ಎಂಬ ಮತ್ತೊಬ್ಬ ಮಹಿಳೆ ಮಾಧ್ಯಮಕ್ಕೆ ಆರೋಪ ಮಾಡಿದ್ದು ಆಕೆಯ ಗಂಡನ ಬಗ್ಗೆ ನಾಲ್ಕು ಕೇಸು ಮೂಡುಬಿದ್ರೆಯಲ್ಲಿ ದಾಖಲಾಗಿದೆ. ಒಂದರಲ್ಲಿ ಬಡ ಕುಟುಂಬದ ಕಿಡ್ನಿ ಚಿಕಿತ್ಸೆಗೆಂದು ಹಣ ಸಂಗ್ರಹಿಸಿದ ವಿಚಾರದಲ್ಲಿ ದಂಪತಿ ವಿರುದ್ಧ ಕೇಸು ದಾಖಲಾಗಿದ್ದು ಇನ್ಸ್ ಪೆಕ್ಟರ್ ಸಾಕ್ಷ್ಯ ಸಂಗ್ರಹಿಸಿ ಚಾರ್ಜ್ ಶೀಟ್ ಸಲ್ಲಿಸಿದ್ದಾರೆ. ಈ ವೇಳೆ, ಆಕೆಗೆ ಇನ್ಸ್ ಪೆಕ್ಟರ್ ಕಿರುಕುಳ ನೀಡಿದ್ದಾರೆಂಬ ವಿಚಾರದಲ್ಲಿ ಯಾವುದೇ ಸಾಕ್ಷ್ಯ ಸಿಕ್ಕಿಲ್ಲ. ಈ ಸಂದರ್ಭದಲ್ಲಿ ಜೊತೆಗಿದ್ದ ಇಬ್ಬರು ಮೀಡಿಯಾದವರು ಮತ್ತು ಒಬ್ಬರು ವಕೀಲರನ್ನು ಪ್ರಶ್ನಿಸಿದ್ದು ಹಣ ಕೇಳಿರುವುದು ಮತ್ತು ಲೈಂಗಿಕ ಕಿರುಕುಳದ ಆರೋಪವನ್ನು ನಿರಾಕರಿಸಿದ್ದಾರೆ.
ಇವರಿಬ್ಬರು ಮಾಧ್ಯಮಕ್ಕೆ ಹೇಳಿಕೆ ನೀಡಿದ್ದರೆ, ಆಡಿಯೋದಲ್ಲಿ ಮಾತನಾಡಿದ್ದು ಮತ್ತು ವಿಡಿಯೋದಲ್ಲಿ ಕಾಣಿಸಿಕೊಂಡವರು ಬೇರೆಯೇ ಆಗಿದ್ದಾರೆ. ಆದರೆ ಆಡಿಯೋ ಮತ್ತು ವಿಡಿಯೋದಲ್ಲಿ ಇನ್ಸ್ ಪೆಕ್ಟರ್ ಮಾತು, ವರ್ತನೆ ಪ್ರಶ್ನಾರ್ಹವಾಗಿದ್ದು ಬೇಜವಾಬ್ದಾರಿಯಿಂದ ಮಾತನಾಡಿದ್ದು ಕಂಡುಬಂದಿದೆ. ಇದೇ ವೇಳೆ, ಮಾಧ್ಯಮಕ್ಕೆ ಹೇಳಿಕೆ ನೀಡಿರುವ ಮಹಿಳೆಯರು ಘಟನೆ ಬಗ್ಗೆ ತನಿಖೆಗೆ ಪೊಲೀಸ್ ದೂರು ಕೊಡಲು ನಿರಾಕರಿಸಿದ್ದಾರೆ. ಆದರೆ ಇನ್ಸ್ ಪೆಕ್ಟರ್ ಆಗಿದ್ದುಕೊಂಡು ಮಹಿಳೆಯರ ಜೊತೆಗೆ ದುರ್ನಡತೆ ತೋರಿದ್ದಕ್ಕಾಗಿ ಸಂದೇಶ್ ಅವರನ್ನು ಕರ್ತವ್ಯದಿಂದ ಅಮಾನತು ಪಡಿಸಿದ್ದು ಸಮಗ್ರ ತನಿಖೆ ನಡೆಸಲು ಎಸಿಪಿಗೆ ಹೊಣೆ ವಹಿಸಲಾಗಿದೆ ಎಂದು ಪೊಲೀಸ್ ಕಮಿಷನರ್ ಸುಧೀರ್ ರೆಡ್ಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Moodbidri Police Inspector Sandesh has been suspended from duty pending a departmental inquiry, following allegations of misconduct involving women. The action was taken by Mangaluru Police Commissioner Sudheer Reddy after reviewing a preliminary report on the matter.
15-09-26 09:13 pm
HK News Staffer
Imran Pasha, Pratap Simha: ನಿನ್ನಂತಹ ಒಂದು ಲಕ್...
15-09-26 04:46 pm
ಬಿಜೆಪಿಯವರಿಗೆ ಕೊಬ್ಬು ಹೆಚ್ಚಾಗಿದೆ ಅದಕ್ಕೆ ಬಳ್ಳಾರಿ...
12-09-26 09:40 pm
ಯತ್ನಾಳ್ ಆರೋಪಿಸಿದರೂ ವಿಜಯೇಂದ್ರ ಮನೆ ಮೇಲೆ ಇಡಿ, ಐಟ...
12-09-26 09:38 pm
ಮಸೀದಿ ಮುಂದೆ ಗಣೇಶ ಮೆರವಣಿಗೆ ಮಾಡಿದ್ರೆ ಗ್ರಹಚಾರ ಬಿ...
12-09-26 09:36 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
15-09-26 09:18 pm
HK News Staffer
Satish Kumpala, Manglore: ಕಾಟಾಚಾರಕ್ಕೆ ಸಂಪುಟ ಸ...
15-09-26 07:46 pm
U T Khader, KDP Meeting, Bharath Sheety, Hari...
15-09-26 06:52 pm
Aravind Bolar Controversy, Mangalore: “ಎಂಕ್ ಮ...
15-09-26 05:29 pm
U T Khader, KDP Meeting, Sudheer Reddy Ips: :...
15-09-26 05:27 pm
15-09-26 09:19 pm
HK News Staffer
Mangalore Blackmail: ಫೋಟೋ ಮಾರ್ಫ್ ಮಾಡಿ ಬ್ಲ್ಯಾಕ...
15-09-26 12:55 pm
Manyda Accident: ಗಣೇಶ ಹಬ್ಬ ಮುಗಿಸಿ ಬೆಂಗಳೂರಿಗೆ...
15-09-26 12:48 pm
ಗಣೇಶ ಹಬ್ಬದ ಬೆನ್ನಲ್ಲೇ ಕರ್ನಾಟಕದಲ್ಲಿ ಸರಣಿ ದುರಂತ:...
15-09-26 12:41 pm
ಗಣೇಶೋತ್ಸವದ ಸಂಭ್ರಮದ ನಡುವೆ ಭೀಕರ ದುರಂತ: ಅಗ್ನಿ ಅವ...
15-09-26 10:31 am