ಬ್ರೇಕಿಂಗ್ ನ್ಯೂಸ್
15-03-26 12:49 pm HK News Desk ಕ್ರೈಂ
ಕ್ಯಾಲಿಫೋರ್ನಿಯಾ, ಮಾರ್ಚ್ 15: ಮಾಸ್ಕ್ ಧರಿಸಿದ ದರೋಡೆಕೋರರಿದ್ದ ಗುಂಪೊಂದು ಸಿನಿಮೀಯ ರೀತಿಯಲ್ಲಿ ಜುವೆಲ್ಲರಿ ದರೋಡೆಗೈದು ಬರೋಬ್ಬರಿ 16 ಕೋಟಿ ರೂ. ಮೌಲ್ಯದ ಚಿನ್ನಾಭರಣಗಳನ್ನು ದೋಚಿ ಒಂದೂವರೆ ನಿಮಿಷದಲ್ಲಿ ಪರಾರಿಯಾದ ಘಟನೆ ಅಮೆರಿಕದ ಕ್ಯಾಲಿಫೋರ್ನಿಯಾ ನಗರದಲ್ಲಿ ನಡೆದಿದೆ.
ಕ್ಯಾಲಿಫೋರ್ನಿಯಾದ ಫ್ರೀಮಾಂಟ್ ನಲ್ಲಿರುವ ಕುಮಾರ್ ಜ್ಯುವೆಲರ್ಸ್ ನಲ್ಲಿ ಈ ಘಟನೆ ನಡೆದಿದ್ದು, ಸಿಸಿಟಿವಿಯಲ್ಲಿ ದರೋಡೆಕೋರರು ಭಾರತೀಯ-ಅಮೆರಿಕನ್ ಕುಟುಂಬದ ಒಡೆತನದ ಜುವೆಲ್ಲರಿ ಅಂಗಡಿಗೆ ನುಗ್ಗಿ ಕೇವಲ ಒಂದು ನಿಮಿಷದಲ್ಲಿ 15.7 ಕೋಟಿ ರೂ. ($1.7 ಮಿಲಿಯನ್) ಮೌಲ್ಯದ ಅಮೂಲ್ಯ ಚಿನ್ನದ ಸರಕುಗಳೊಂದಿಗೆ ಓಡಿಹೋಗುವುದು ದಾಖಲಾಗಿದೆ.
ಕಳೆದ ವರ್ಷ ಜೂನ್ 18 ರಂದು ಘಟನೆ ನಡೆದಿದ್ದು, ದರೋಡೆಯಲ್ಲಿ ಜುವೆಲ್ಲರಿ ಅಂಗಡಿಯಲ್ಲಿದ್ದ ಒಟ್ಟು ಸ್ಟಾಕ್ಸ್ ಪೈಕಿ 75 ರಿಂದ 80 ಪ್ರತಿಶತದಷ್ಟು ಕಳೆದುಕೊಂಡಿದೆ. ಪೊಲೀಸರು ಬೆನ್ನಟ್ಟಿದ ನಂತರ ನಾಲ್ವರು ಶಂಕಿತರನ್ನು ವಶಕ್ಕೆ ಪಡೆದಿದ್ದರೂ, ಗುಂಪಿನ ಬಹುಪಾಲು ಜನರು ತಲೆಮರೆಸಿಕೊಂಡಿದ್ದಾರೆ.
ಸುತ್ತಿಗೆಗಳು ಮತ್ತು ಹೊತ್ತೊಯ್ಯುವ ಚೀಲಗಳೊಂದಿಗೆ ಶಸ್ತ್ರಸಜ್ಜಿತರಾಗಿದ್ದ ದರೋಡೆಕೋರರು ಗಾಜಿನ ಪೆಟ್ಟಿಗೆಗಳನ್ನು ಒಡೆದು ಕೆಲವೇ ಕ್ಷಣದಲ್ಲಿ ಚಿನ್ನ ಮತ್ತು ವಜ್ರಗಳನ್ನು ಕದ್ದಿದ್ದಾರೆ. ದರೋಡೆಕೋರರು ಕದ್ದ ಕಾರುಗಳ ಮೂಲಕ ವಿವಿಧ ದಿಕ್ಕುಗಳಲ್ಲಿ ಸಂಚರಿಸಿ ಸ್ಥಳದಿಂದ ಪರಾರಿಯಾಗಿದ್ದಾರೆ. ವೀಡಿಯೊ ವೈರಲ್ ಆಗುತ್ತಿದ್ದಂತೆ, ಸಾಮಾಜಿಕ ಮಾಧ್ಯಮ ಬಳಕೆದಾರರು ಯುಎಸ್ನಲ್ಲಿ ಇಂತಹ ದರೋಡೆಗಳು ಹೆಚ್ಚುತ್ತಿವೆ ಎಂದು ಹೇಳಿದ್ದಾರೆ. ಅಲ್ಲಿ ಗ್ಯಾಂಗ್ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಅಂಗಡಿಗಳಿಗೆ ನುಸುಳುತ್ತಿದ್ದಾರೆ. ಈ ದರೋಡೆ ಒಂದು "ಗ್ಯಾಂಗ್ ಕಾರ್ಯಾಚರಣೆ" ಆಗಿದ್ದು, 3-5 ಜನರ "ಸ್ಮ್ಯಾಶ್ ಅಂಡ್ ಗ್ರಾಬ್" ಗ್ಯಾಂಗ್ಗಳು ಹೆಚ್ಚತೊಡಗಿದೆ. ಇದು ನಿರಂತರವಾಗಿ ನಡೆಯುತ್ತಿರುತ್ತದೆ. ಏಕೆಂದರೆ ಇದರಲ್ಲಿ ಹದಿಹರೆಯದವರು ಹೆಚ್ಚು ತೊಡಗಿಸಿದ್ದಾರೆ. ಅವರಿಗೆ ಅರ್ಹವಾದ ಶಿಕ್ಷೆ ಸಿಗುತ್ತಿಲ್ಲ ಎಂದಿದ್ದಾರೆ.
The Department of Justice has released footage of thugs stealing $1.7 million of jewelry in about one minute in Fremont, California.
— Collin Rugg (@CollinRugg) March 13, 2026
The incident happened on June 18, 2025, at Kumar Jewelers.
The thugs were able to steal about 75% of the store's merchandise.
According to… pic.twitter.com/tTkcLek0w5
09-05-26 10:41 pm
HK News Desk
12ನೇ ಶತಮಾನದ ಕಾಕತೀಯರ ಕಾಲದ ಪ್ರಾಚೀನ ಶಿವ ದೇಗುಲ ಧ್...
08-05-26 08:05 pm
ಕಲಬುರಗಿ ಪೊಲೀಸರ ‘ಆಪರೇಷನ್ ಭರವಸೆ’ ಸಕ್ಸಸ್; 2 ತಿಂಗ...
08-05-26 12:21 pm
IPS Ramachandra Rao: ಸರ್ಕಾರಿ ಕಚೇರಿಯಲ್ಲೇ ತುಂಟಾ...
07-05-26 03:10 pm
ಇರು ಅಂದ್ರೆ ಇರ್ತೀನಿ, ಹೈಕಮಾಂಡ್ ಮಾತನ್ನಷ್ಟೇ ಕೇಳ್ತ...
06-05-26 07:41 pm
10-05-26 12:26 pm
HK News Staffer
ತಮಿಳುನಾಡನ್ನು ದೇವರೇ ಕಾಪಾಡಬೇಕು ; ಟಿವಿಕೆ ಗ್ಯಾರಂಟ...
09-05-26 12:06 pm
ಭಾರತದ ಆಪರೇಷನ್ ಸಿಂಧೂರ್ ಕಾರ್ಯಾಚರಣೆ ; ಶತ್ರುರಾಷ್ಟ...
09-05-26 11:14 am
ಬಂಗಾಳದಲ್ಲಿ ಕೇಸರಿ ಯುಗಾರಂಭ ; ಮೊದಲ ಬಿಜೆಪಿ ಸಿಎಂ ಆ...
08-05-26 06:45 pm
ದ್ರಾವಿಡರ ನಾಡಲ್ಲಿ ದಳಪತಿ ವಿಜಯ್ ಸರ್ಕಾರ್ ! ಮ್ಯಾಜಿ...
08-05-26 06:38 pm
09-05-26 11:51 pm
Mangalore Correspondent
ಮಂಜೇಶ್ವರ ಕ್ಷೇತ್ರ ; ಸಿಪಿಎಂ ಅಭ್ಯರ್ಥಿಗೆ ಇತಿಹಾಸದಲ...
09-05-26 02:15 pm
ಮನೆ ಕಳ್ಳತನ ತಡೆಗೆ ಉಡುಪಿ ಪೊಲೀಸರ ಹೊಸ ಹೆಜ್ಜೆ ; “ಲ...
09-05-26 02:13 pm
Kuthar, Mangalore, UT Khader: ಕುತ್ತಾರಿನಲ್ಲಿ ಕ...
08-05-26 10:33 pm
ಸುತ್ತಿ ಬಳಸಿ ಓಡಾಟಕ್ಕೆ ಬೀಳಲಿದೆ ಬ್ರೇಕ್ ; ಮಂಗಳೂರು...
08-05-26 09:05 pm
09-05-26 10:29 pm
HK News Desk
ಉಪ್ಪಿನಂಗಡಿಯಲ್ಲಿ ರೋಡ್ ರೋಲರ್ ಹರಿದು ಕೂಲಿ ಕಾರ್ಮಿಕ...
09-05-26 09:50 pm
ಸಾಲ ಕೊಟ್ಟ ಮಹಿಳೆಯ ಜೀವ ತೆಗೆದ ಕಟುಕರು; ಅಪಘಾತದ ನಾಟ...
09-05-26 08:29 pm
ಆರೋಪಿಯಿಂದಲೇ ಲಂಚ ; ಒಂದು ಲಕ್ಷ ಪಡೆಯುತ್ತಿದ್ದಾಗ ಗು...
09-05-26 06:42 pm
ಸ್ನಾನಕ್ಕೆ ತೆರಳಿದ್ದ ಸ್ನೇಹಿತೆಯರು ನದಿಯಲ್ಲಿ ಮುಳುಗ...
09-05-26 09:54 am