ಬ್ರೇಕಿಂಗ್ ನ್ಯೂಸ್
23-08-23 10:20 pm HK News Desk ದೇಶ - ವಿದೇಶ
ನವದೆಹಲಿ, ಆಗಸ್ಟಡ್ 23: ಫಿಡೆ ರೇಟೆಡ್ ವಿಶ್ವ ಚೆಸ್ ಟೂರ್ನಮೆಂಟಿನ ಫೈನಲ್ ಸ್ಪರ್ಧೆಯ ಎರಡನೇ ಪಂದ್ಯದಲ್ಲೂ ಭಾರತದ ಅತಿ ಕಿರಿಯ ಆಟಗಾರ ಆರ್. ಪ್ರಜ್ಞಾನಂದ ಡ್ರಾ ಸಾಧನೆ ಮಾಡಿದ್ದಾರೆ.
ಜಗತ್ತಿನ ನಂಬರ್ ವನ್ ಆಟಗಾರ ನಾರ್ವೆ ಮೂಲದ ಮ್ಯಾಗ್ನಸ್ ಕಾರ್ಲ್ಸನ್ ವಿರುದ್ಧ ಬುಧವಾರ ಎರಡನೇ ಫೈನಲ್ ಪಂದ್ಯವನ್ನು ಪ್ರಜ್ಞಾನಂದ ಆಡಿದ್ದು, ಇದರಲ್ಲಿಯೂ ಡ್ರಾ ಮಾಡಿಕೊಂಡಿದ್ದಾರೆ. ಮಂಗಳವಾರ ಮೊದಲ ಪಂದ್ಯವೂ 35 ನಡೆಗಳೊಂದಿಗೆ ಡ್ರಾ ಆಗಿತ್ತು. ಎರಡನೇ ಪಂದ್ಯದಲ್ಲಿ ಕೇವಲ 30 ನಡೆಗಳಲ್ಲಿ ಪಂದ್ಯವನ್ನು ಡ್ರಾ ಮಾಡಿದ್ದು, ವಿಶ್ವ ಚೆಸ್ ಆಟಗಾರರ ಹುಬ್ಬೇರುವಂತೆ ಮಾಡಿದೆ. ಭಾರತದ ಚೆಸ್ ಮಾಂತ್ರಿಕ ವಿಶ್ವನಾಥನ್ ಆನಂದ್ ಕೂಡ 18 ವರ್ಷದ ಪ್ರಜ್ಞಾನಂದ ಆಟವನ್ನು ಶ್ಲಾಘಿಸಿದ್ದಾರೆ.
ಅಜರ್ ಬೈಜಾನಿನ ಬಾಕು ನಗರದಲ್ಲಿ ವಿಶ್ವ ಚೆಸ್ ಟೂರ್ನಿ ನಡೆಯುತ್ತಿದ್ದು, ಭಾರತದ ಪ್ರಜ್ಞಾನಂದ ಚೆಸ್ ಜಗತ್ತಿನಲ್ಲಿ ಹೊಸ ಭರವಸೆ ಮೂಡಿಸಿದ್ದಾರೆ. ಮೊದಲ ಫೈನಲ್ ಪಂದ್ಯವು ನಾಲ್ಕು ಗಂಟೆಗಳ ಸುದೀರ್ಘ ಕಾಲ ನಡೆದಿದ್ದರೆ, ಎರಡನೇ ಪಂದ್ಯವು ಕೇವಲ ಒಂದು ಗಂಟೆಯಲ್ಲಿ ಮುಗಿದಿತ್ತು. ಚೆಸ್ ವಿಶ್ವಕಪ್ ವಿಜೇತ ಯಾರು ಅನ್ನುವುದನ್ನು ನಿರ್ಧರಿಸಲು ಗುರುವಾರ ಬಿರುಸಿನ ನಡೆಯ ಟೈ ಬ್ರೇಕರ್ ಪಂದ್ಯ ನಡೆಯಲಿದೆ.
ಅಂದಹಾಗೆ, ವಿಶ್ವ ಚೆಸ್ ಟೂರ್ನಿಯ ಫೈನಲ್ ಸುತ್ತು ಪ್ರವೇಶಿಸಿದ ಭಾರತದ ಎರಡನೇ ಆಟಗಾರನೆಂಬ ಶ್ರೇಯವೂ ಪ್ರಜ್ಞಾನಂದ ಅವರಿಗೆ ಸಂದಿದೆ. ಈ ಮೊದಲು ವಿಶ್ವನಾಥನ್ ಆನಂದ್ ಮಾತ್ರ ಫೈನಲ್ ಸುತ್ತು ಪ್ರವೇಶ ಮಾಡಿದ್ದು ಮತ್ತು ವಿಶ್ವ ಚೆಸ್ ಮಾಸ್ಟರ್ ಆಗಿರುವ ಸಾಧನೆ ಮಾಡಿದ್ದರು. ಸದ್ಯ ಪ್ರಜ್ಞಾನಂದ ವಿಶ್ವ ಚೆಸ್ ರ್ಯಾಂಕಿಂಗ್ ನಲ್ಲಿ 23ನೇ ಶ್ರೇಯಾಂಕದ ಆಟಗಾರನಾಗಿದ್ದರೆ, ಮ್ಯಾಗ್ನಸ್ ಕಾರ್ಲ್ಸನ್ ನಂಬರ್ ವನ್ ಆಟಗಾರ. ಗುರುವಾರದ ಮೂರನೇ ಪಂದ್ಯದಲ್ಲಿ ನಂಬರ್ ವನ್ ಆಟಗಾರನನ್ನು ಪ್ರಜ್ಞಾನಂದ ಸೋಲಿಸಿದರೆ, ಹೊಸ ಇತಿಹಾಸ ಸೃಷ್ಟಿಸಲಿದ್ದಾರೆ.
In a remarkable turn of events, Indian Grandmaster Rameshbabu Praggnanandhaa on Monday advanced to the final of the FIDE Chess World Cup 2023. His astounding victory over world number 3 Fabiano Caruana in Baku, Azerbaijan, has garnered widespread astonishment. This young talent's steady ascent in the realm of chess has been nothing short of impressive, and he is now poised to face off against world number 1, Magnus Carlsen, in the championship clash.
13-09-25 10:38 pm
Bangalore Correspondent
ಕುರುಬ ಕ್ರಿಶ್ಚಿಯನ್, ಕುಂಬಾರ ಕ್ರಿಶ್ಚಿಯನ್ ಇದೆಯೇ?...
13-09-25 08:46 pm
Caste Cenus News, Karnataka; ಸೆ.22ರಿಂದ ಅ.7ರ ವ...
13-09-25 07:50 pm
Hassan Accident, 9 killed, Update: ಗಣೇಶ ಮೆರವಣ...
13-09-25 04:31 pm
Hassan truck Accident: ಅರಕಲಗೂಡು ; ಗಣೇಶ ಮೆರವಣಿ...
13-09-25 10:19 am
13-09-25 03:25 pm
HK News Desk
ವಾಷಿಂಗ್ ಮೆಷಿನ್ ವಿಷಯದಲ್ಲಿ ವಾಗ್ವಾದ ; ಅಮೆರಿಕದಲ...
12-09-25 11:33 am
ನೇಪಾಳದಲ್ಲಿ ಕಮ್ಯುನಿಸ್ಟ್ ಸರಕಾರ ಪತನ ; ಹೊಸ ನಾಯಕ ಯ...
10-09-25 04:22 pm
ನೇಪಾಳದಲ್ಲಿ ಹಿಂಸಾಚಾರ ತೀವ್ರ ; ದೇಶ ಬಿಟ್ಟು ಓಡಿದ ಪ...
09-09-25 11:09 pm
ನೂತನ ಉಪ ರಾಷ್ಟ್ರಪತಿಯಾಗಿ ಎನ್.ಡಿ.ಎ ಮೈತ್ರಿಕೂಟದ ಸಿ...
09-09-25 09:38 pm
13-09-25 11:05 pm
Udupi Correspondent
Mangalore, Police, Loud Speakers: ಗಣೇಶೋತ್ಸವಕ್...
12-09-25 10:58 pm
Mahesh Vikram Hegde Arrested, Post Card Kanna...
12-09-25 09:25 pm
Sameer Md, Dharmasthala: ವಿದೇಶದಿಂದ ಫಂಡ್ ಬಂದಿ...
12-09-25 08:53 pm
RTI Dharmasthala Hostels, Mahesh Thimarodi: ಧ...
12-09-25 07:43 pm
13-09-25 11:36 am
Mangalore Correspondent
ಅಪ್ರಾಪ್ತ ಬಾಲಕಿಯನ್ನು ಅತ್ಯಾಚಾರಗೈದು ಹತ್ಯೆ ; ಬೆಳಗ...
12-09-25 11:07 pm
Ullal Police, Mangalore, Gold Robbery: ತೊಕ್ಕೊ...
12-09-25 10:48 pm
Udupi, Brahmavar Stabbing, Crime: ಬ್ರಹ್ಮಾವರ ;...
12-09-25 05:31 pm
Mangalore Police, Arrest: ಉರ್ವಾದಲ್ಲಿ ಪೊಲೀಸ್ ಕ...
11-09-25 09:13 pm