ಬ್ರೇಕಿಂಗ್ ನ್ಯೂಸ್
10-10-22 09:47 pm Bangalore Correspondent ಕರ್ನಾಟಕ
ಬೆಂಗಳೂರು, ಅ.10: ಆರೋಪಿಗಳ ಕೈಯಿಂದ ಜಪ್ತಿ ಮಾಡಿದ್ದ 50 ಲಕ್ಷ ರೂ. ನಗದಿನಲ್ಲಿ 10 ಲಕ್ಷ ರೂ. ಎಗರಿಸಿದ್ದ ಆರೋಪದಲ್ಲಿ ಪೊಲೀಸ್ ಮುಖ್ಯ ಪೇದೆಯೊಬ್ಬರನ್ನು ಚಂದ್ರಾ ಲೇಔಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಮಹೇಂದ್ರ ಗೌಡ (45) ಬಂಧಿತ ಪೊಲೀಸ್ ಹೆಡ್ ಕಾನ್ಸ್ ಟೇಬಲ್. ರಾಮನಗರ ಜಿಲ್ಲೆಯ ರಾಮಾಪುರ ಗ್ರಾಮದ ಲಿಂಗೇಶ್ ಎಂಬವರು ನೀಡಿದ ದೂರಿನಂತೆ ತನಿಖೆ ನಡೆಸಿದ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ. ಹಣ ಎಗರಿಸಿದ ಆರೋಪ ಮೇಲ್ನೋಟಕ್ಕೆ ಸಾಬೀತಾದ ಹಿನ್ನೆಲೆಯಲ್ಲಿ ಪಶ್ಚಿಮ ವಿಭಾಗದ ಡಿಸಿಪಿ ಲಕ್ಷ್ಮಣ್ ನಿಂಬರಗಿ, ಮಹೇಂದ್ರ ಅವರನ್ನು ಕರ್ತವ್ಯದಿಂದ ಅಮಾನತುಗೊಳಿಸಿದ್ದಾರೆ.
ಕಮಿಷನ್ ಆಸೆಗೆ ಬಿದ್ದು ಸಿಕ್ಕಿಬಿದ್ದಿದ್ದರು
ರಾಮನಗರದ ಲಿಂಗೇಶ್ ವ್ಯವಸಾಯದ ಜೊತೆಗೆ ರಿಯಲ್ ಎಸ್ಟೇಟ್ ವ್ಯವಹಾರ ಮಾಡಿಕೊಂಡಿದ್ದ ವ್ಯಕ್ತಿ. ಇತ್ತೀಚೆಗೆ ಸ್ನೇಹಿತ ಪ್ರದೀಪ್ ಕರೆ ಮಾಡಿ, ಕಮಿಷನ್ ಡೀಲ್ ಬಗ್ಗೆ ಹೇಳಿಕೊಂಡಿದ್ದ. ತನ್ನ ಬೇರೆ ಸೇಹಿತರೊಬ್ಬರ ಬಳಿ 2 ಸಾವಿರ ರೂ. ನೋಟಿನ ಕೋಟ್ಯಂತರ ರೂಪಾಯಿ ಇದೆ. ಭವಿಷ್ಯದಲ್ಲಿ ಎರಡು ಸಾವಿರ ರೂ. ಮುಖಬೆಲೆಯ ನೋಟುಗಳನ್ನು ರದ್ದು ಮಾಡುವ ಸಾಧ್ಯತೆ ಇದ್ದು 500 ರೂ. ನೋಟುಗಳಿಗೆ ಬದಲಾಯಿಸಲು ನೋಡುತ್ತಿದ್ದಾರೆ. 500 ರೂ. ನೋಟು ನೀಡಿದರೆ, ಶೇ.10 ಕಮಿಷನ್ ನೀಡಲಿದ್ದಾರೆ ಎಂದು ಹೇಳಿದ್ದರು. ಡೀಲ್ ಒಪ್ಪಿದ್ದ ಲಿಂಗೇಶ್, 500ರ ನೋಟಿನ 50 ಲಕ್ಷ ರೂ. ರೆಡಿ ಮಾಡಿದ್ದರು. ಅದರಂತೆ, ಅ.2ರಂದು ಲಿಂಗೇಶ್ ಮತ್ತು ಪ್ರದೀಪ್ ಕಾರಿನಲ್ಲಿ ಇಲೆಕ್ಟ್ರಾನಿಕ್ ಸಿಟಿ ಬಳಿಯ ಸಿಂಗಸಂದ್ರಕ್ಕೆ 50 ಲಕ್ಷ ನೋಟುಗಳ ಜೊತೆ ತೆರಳಿದ್ದರು. ಅಲ್ಲಿ ವಟ್ರಿವೇಲು ಎಂಬಾತನನ್ನು ಭೇಟಿಯಾಗಿದ್ದು ಬಳಿಕ ಮೂವರು ಚಂದ್ರಾಲೇಔಟ್ ಎಂಬಲ್ಲಿಗೆ ಬಂದಿದ್ದರು.
ಕಾರಿನಿಂದ ಹಣ ಎಗರಿಸಿದ್ದ ಪೊಲೀಸ್
ಅಲ್ಲಿ ವಟ್ರಿವೇಲು, ಸಂತೋಷ್ ಎಂಬವರ ಜೊತೆಗೆ ಲಿಂಗೇಶ್ ಮಾತನಾಡುತ್ತಿದ್ದಾಗಲೇ ಪೊಲೀಸ್ ಮುಖ್ಯಪೇದೆ ಮಹೇಂದ್ರಗೌಡ ಹೊಯ್ಸಳ ವಾಹನದಲ್ಲಿ ಗಸ್ತು ಬಂದಿದ್ದರು. ಪೊಲೀಸ್ ವಾಹನ ನೋಡುತ್ತಲೇ ಅಲ್ಲಿಂದ ಪರಾರಿಯಾಗಲು ಯತ್ನಿಸಿದ್ದ ವಟ್ರಿವೇಲು ಕಾರಿನಲ್ಲಿ ಮುಂದೆ ತೆರಳಿದ್ದರು. ಅಷ್ಟರಲ್ಲಿ ಮಹೇಂದ್ರಗೌಡ ಮತ್ತೊಂದು ಪೊಲೀಸ್ ವಾಹನ ಕರೆಸಿಕೊಂಡು ನಾಲ್ವರನ್ನು ಕೂಡ ವಶಕ್ಕೆ ಪಡೆದಿದ್ದು ಪೊಲೀಸ್ ಠಾಣೆಗೆ ಕರೆತಂದಿದ್ದರು. ಲಿಂಗೇಶ್ ಅವರಿದ್ದ ಕಾರನ್ನು ಪೊಲೀಸ್ ಮಹೇಂದ್ರಗೌಡ ಸ್ವತಃ ಚಲಾಯಿಸಿಕೊಂಡು ಠಾಣೆಗೆ ತಂದಿದ್ದರು.
ಪೊಲೀಸ್ ಠಾಣೆ ತಲುಪಿದಾಗ, ಅವರ ಕಾರಿನಲ್ಲಿ 40 ಲಕ್ಷ ಇರುವುದಾಗಿ ಮಹೇಂದ್ರ ಗೌಡ ತೋರಿಸಿದ್ದರು. ಆದರೆ ಲಿಂಗೇಶ್, ತಾನು ಮನೆಯಿಂದ 50 ಲಕ್ಷ ರೂ. ತಂದಿದ್ದೆ. ಕಾರನ್ನು ಚಲಾಯಿಸಿಕೊಂಡು ಬಂದಿದ್ದ ಮುಖ್ಯಪೇದೆಯೇ ಹಣ ಎಗರಿಸಿರುವ ಅನುಮಾವಿದೆ ಎಂದು ಚಂದ್ರಾಲೇಔಟ್ ಠಾಣೆಗೆ ದೂರು ನೀಡಿದ್ದರು. ದೂರು ಆಧರಿಸಿ ತನಿಖೆ ಕೈಗೊಂಡಾಗ, ಮಹೇಂದ್ರ ಗೌಡ ದಾರಿ ಮಧ್ಯೆ 10 ಲಕ್ಷ ರೂ. ಎಗರಿಸಿರುವುದು ಸಾಬೀತಾಗಿದ್ದು ಆರೋಪಿಯನ್ನು ಬಂಧಿಸಿದ್ದಾರೆ. ಅಲ್ಲದೆ, ಹಣದ ಡೀಲ್ ಕುದುರಿಸಲು ಹೋಗಿರುವ ಲಿಂಗೇಶ್ ತಂಡದ ಮೇಲೂ ಪ್ರಕರಣ ದಾಖಲಿಸಿದ್ದಾರೆ.
A Karnataka policeman has been arrested on charges of keeping Rs 10 lakh for himself while seizing Rs 50 lakh in Bengaluru, police said on Sunday.The policeman has been identified as Mahendra Gowda, a head constable attached to the Chandra Layout police station. According to the police, the accused committed the crime during his patrolling duty.
30-06-25 02:55 pm
HK News Desk
ಅಕ್ರಮ ಗೋಸಾಗಣೆ ತಡೆದ ಶ್ರೀರಾಮ ಸೇನೆ ಕಾರ್ಯಕರ್ತರನ್ನ...
30-06-25 01:44 pm
Spike in Heart Attack, Hassan: Dr. Manjunath...
30-06-25 12:05 pm
Tumakuru accident, four killed: ಕ್ಯಾಂಟರ್ -...
30-06-25 11:04 am
ಕರ್ಣಾಟಕ ಬ್ಯಾಂಕ್ ಸಿಇಓ, ಎಂಡಿ ಶ್ರೀಕೃಷ್ಣನ್ ಹರಿಹರ...
29-06-25 10:48 pm
29-06-25 11:13 am
HK News Desk
IPS Officer Parag Jain: ಭಾರತದ ಗುಪ್ತಚರ ಸಂಸ್ಥೆ...
28-06-25 10:14 pm
400 ಕಿಮೀ ಎತ್ತರದ ಬಾಹ್ಯಾಕಾಶ ನಿಲ್ದಾಣ ತಲುಪಿದ ಮೊದಲ...
27-06-25 01:44 pm
ಆಪರೇಶನ್ ಸಿಂಧೂರ ಬಗ್ಗೆ ಪಾಕಿಸ್ತಾನಕ್ಕೆ ಮಾಹಿತಿ ಹಂಚ...
26-06-25 10:22 pm
ರೈಲು ಹಳಿ ಮೇಲೆ ಕಾರು ಓಡಿಸಿ ಹುಚ್ಚಾಟ ; ಆಂಟಿಯ ರಂಪಾ...
26-06-25 07:40 pm
30-06-25 08:19 pm
Mangalore Correspondent
Mangalore, Rain, School News: ತರಗತಿ ನಡೆಯುತ್ತಿ...
30-06-25 03:20 pm
Mangalore Bomb Threat, Airport: ಮಂಗಳೂರು ಸೇರಿ...
30-06-25 01:07 pm
Red Stone Quarry, Dakshina Kannada, Protest:...
27-06-25 10:17 pm
ಧರ್ಮಸ್ಥಳ ಗ್ರಾಮದಲ್ಲಿ ಅಸಹಜ ಸಾವಿನ ವೈರಲ್ ಪತ್ರ ; ಮ...
27-06-25 04:56 pm
30-06-25 06:12 pm
Giridhar Shetty, Mangaluru
Olx Fraud, Mangalore: ಓಎಲ್ ಎಕ್ಸ್ ನಲ್ಲಿ ಕಾರು ಮ...
29-06-25 11:23 pm
Udupi Crime, Kapu, Railway: ರೈಲಿನಲ್ಲಿ ಉಡುಪಿಗೆ...
29-06-25 11:15 pm
Davanagere ATM Robbery : ಪೆಟ್ರೋಲ್ ಸುರಿದು ಎಟಿಎ...
29-06-25 04:26 pm
Tumakuru Husband Murder, Wife arrest, Crime:...
29-06-25 02:26 pm