ಬ್ರೇಕಿಂಗ್ ನ್ಯೂಸ್
14-04-22 09:58 pm HK Desk news ಕ್ರೈಂ
ಮುಂಬೈ, ಎ.14: ಕಾಡಿಗೆ ಬೇಟೆಗೆ ಹೋಗಿದ್ದ ನಾಲ್ವರ ತಂಡವೊಂದು ಹಲ್ಲಿ ಜಾತಿಯ ಉಡ ಎನ್ನುವ ಪ್ರಾಣಿಯನ್ನು ಹಿಡಿದು ಅದರ ಜೊತೆಗೆ ಬಲವಂತ ಸಂಭೋಗ ನಡೆಸಿದ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ. ಇದರ ವಿಡಿಯೋವನ್ನು ಬೇಟೆಗಾರರಲ್ಲಿ ಒಬ್ಬಾತ ಮೊಬೈಲಲ್ಲಿ ಸೆರೆಹಿಡಿದಿದ್ದು ವಿಡಿಯೋ ಹೊರಬರುತ್ತಲೇ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ. ಅಲ್ಲದೆ, ಅವರ ವಿರುದ್ಧ ವನ್ಯಜೀವ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ಹಲ್ಲಿ ಮೇಲೆ ಗ್ಯಾಂಗ್ ರೇಪ್ ಎನ್ನುವ ರೀತಿ ರಾಷ್ಟ್ರೀಯ ಮಾಧ್ಯಮದಲ್ಲಿ ಸುದ್ದಿಯಾಗಿದೆ.
ಈ ರೀತಿಯ ವಿಕ್ಷಿಪ್ತ ಘಟನೆ ಮಹಾರಾಷ್ಟ್ರದ ರತ್ನಗಿರಿ ಜಿಲ್ಲೆಯಲ್ಲಿ ನಡೆದಿದೆ. ಸಹ್ಯಾದ್ರಿ ರಕ್ಷಿತಾರಣ್ಯಕ್ಕೆ ಒಳಪಟ್ಟಿರುವ ರತ್ನಗಿರಿ ಜಿಲ್ಲೆಯ ಗೋಥಾನೆ ಗ್ರಾಮದಲ್ಲಿ ಮಾ.31ರಂದು ಘಟನೆ ನಡೆದಿದೆ ಎನ್ನಲಾಗುತ್ತಿದೆ. ನಾಲ್ವರ ತಂಡ ಅಕ್ರಮವಾಗಿ ಅಲ್ಲಿನ ಚಂದೋಳಿ ರಾಷ್ಟ್ರೀಯ ಉದ್ಯಾನವನಕ್ಕೆ ನುಗ್ಗಿದ್ದು, ಕೈಯಲ್ಲಿ ಗನ್ ಹಿಡಿದು ಪ್ರಾಣಿ ಬೇಟೆಗಾಗಿ ತೊಡಗಿದ್ದರು. ಈ ವೇಳೆ ಇವರ ಕೈಗೆ ಸಿಕ್ಕಿದ ಉಡದ ಮೇಲೆ ನಾಲ್ವರು ಅತ್ಯಾಚಾರ ನಡೆಸಿದ್ದಾರೆ.
ನಾಲ್ವರನ್ನು ಪೊಲೀಸರು ಬಂಧಿಸಿದ್ದು ಸಂದೀಪ್ ತುಕಾರಾಮ್ ಪವಾರ್, ಮಂಗೇಶ್ ಕಾಮ್ಟೇಕರ್, ಅಕ್ಷಯ್ ಕಾಮ್ಟೇಕರ್, ರಮೇಶ್ ಗಾಗ್ ಎಂದು ಗುರುತಿಸಲಾಗಿದೆ. ಇವರಲ್ಲಿ ಒಬ್ಬಾತನ ಮೊಬೈಲಿನಲ್ಲಿ ಅತ್ಯಾಚಾರದ ವಿಡಿಯೋ ಇದ್ದು ಅದನ್ನು ಮೊಬೈಲ್ ಸಹಿತ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆನಂತರ ಆರೋಪಿಗಳನ್ನು ಅರಣ್ಯಾಧಿಕಾರಿಯ ವಶಕ್ಕೆ ನೀಡಲಾಗಿದ್ದು, ವನ್ಯಜೀವಿ ಕಾಯ್ದೆ ಮತ್ತು ಅಕ್ರಮ ಬೇಟೆ ಪ್ರಕರಣ ದಾಖಲಿಸಲಾಗಿದೆ. ಆರೋಪಿಗಳು ಸದ್ಯ ಜಾಮೀನಿನಲ್ಲಿ ಹೊರಬಂದಿದ್ದು ಪ್ರತೀ ಸೋಮವಾರ ಅರಣ್ಯಾಧಿಕಾರಿಯ ಮುಂದೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿದೆ.
ಸಹ್ಯಾದ್ರಿ ರಕ್ಷಿತಾರಣ್ಯ ಮಹಾರಾಷ್ಟ್ರದ ಸತಾರಾ, ಸಾಂಗ್ಲಿ, ಕೊಲ್ಲಾಪುರ ಮತ್ತು ರತ್ನಗಿರಿ ಜಿಲ್ಲೆಯಲ್ಲಿ ಹರಡಿಕೊಂಡಿದೆ. ಬೆಂಗಾಲ್ ಮಾನಿಟರ್ ಲಿಜಾರ್ಡ್ ಎಂದು ವೈಜ್ಞಾನಿಕ ಹೆಸರಿನಿಂದ ಕರೆಯಲಾಗುವ, ಕನ್ನಡ ಭಾಷೆಯಲ್ಲಿ ಉಡ ಎಂದು ಕರೆಯಲ್ಪಡುವ ಈ ಪ್ರಾಣಿ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಸಾಮಾನ್ಯವಾಗಿದ್ದು, ಹೆಚ್ಚಿನ ಕಡೆ ಮಾಂಸಕ್ಕಾಗಿ ಬೇಟೆ ಮಾಡಲಾಗುತ್ತದೆ. ಅವನತಿ ಅಂಚಿನಲ್ಲಿರುವ ಈ ಪ್ರಾಣಿಯನ್ನು ಕೊಲ್ಲುವುದು, ಬೇಟೆಯಾಡುವುದು ವನ್ಯಜೀವಿ ಕಾಯ್ದೆ ಪ್ರಕಾರ ನಿಷಿದ್ಧ. ಸಾಧಾರಣ ನಾಲ್ಕು ಫೀಟ್ ಉದ್ದಕ್ಕೆ ಬೆಳೆಯುವ ಹಲ್ಲಿ ಪ್ರಭೇದಕ್ಕೆ ಸೇರಿದ ಉಡಗಳು ಹೆಚ್ಚೆಂದರೆ 15-18 ಕೇಜಿ ತೂಗುತ್ತದೆ.
Four persons were arrested for allegedly raping a Bengal monitor lizard in Sahyadri Tiger Reserve (STR) in Maharashtra, a forest official said on Wednesday. The incident, which occurred at Gothane village in Ratnagiri district, came to light days after the four accused were booked for illegally entering Chandoli National Park, which is part of the reserve, with one of them carrying a gun for hunting, he said.
09-11-25 06:53 pm
Bangalore Correspondent
ಇಪಿಎಫ್ ಸೊಸೈಟಿಯಲ್ಲಿ 70 ಕೋಟಿ ದುರ್ಬಳಕೆ ; ಅಕೌಂಟೆಂ...
09-11-25 03:47 pm
ISIS Terrorists, Umesh Reddy, Parappana Agrah...
08-11-25 10:29 pm
High Court Directs Kalaburagi: ಚಿತ್ತಾಪುರ ಆರೆಸ...
08-11-25 12:38 pm
ಯಾವ ಕ್ರಾಂತಿಯೂ ಆಗಲ್ಲ, ವಾಂತಿಯೂ ಆಗಲ್ಲ.. ನನಗೆ ಸಿದ...
07-11-25 09:59 pm
09-11-25 07:49 pm
HK News Desk
ಮುಸ್ಲಿಂ ವ್ಯಕ್ತಿಯ ಎರಡನೇ ಮದುವೆ ನೋಂದಣಿಗೆ ನಿರಾಕರಣ...
07-11-25 05:21 pm
ಮತಗಳವು ಆರೋಪ ; ರಾಹುಲ್ ವಿರುದ್ಧ ತಿರುಗಿಬಿದ್ದ ಮತದಾ...
07-11-25 11:33 am
'ನವೆಂಬರ್ ಕ್ರಾಂತಿ' ವದಂತಿ ತಳ್ಳಿಹಾಕಿದ ಡಿಸಿಎಂ ; ನ...
06-11-25 10:22 pm
ಐಸಿಸಿ ಮಹಿಳಾ ವಿಶ್ವಕಪ್ ಎತ್ತಿಹಿಡಿದ ಭಾರತದ ವನಿತೆಯರ...
03-11-25 01:13 pm
08-11-25 08:31 pm
Mangalore Correspondent
ಬೆಂಗಳೂರು- ಮಂಗಳೂರು ಹೈಸ್ಪೀಡ್ ಕಾರಿಡಾರ್ ; ಶಿರಾಡ...
07-11-25 10:58 pm
ಕುದ್ರೋಳಿ ಕ್ಷೇತ್ರ ಸ್ಥಾಪಿಸಿದ ಫೆ.21ರಂದು ನಾರಾಯಣ ಗ...
07-11-25 07:23 pm
ಗೋಡಂಬಿ ಉದ್ಯಮಕ್ಕೆ ನೂರು ವರ್ಷ ; ನ.14-16ರಂದು ದೇಶದ...
07-11-25 05:25 pm
ನೆಲ್ಯಾಡಿಯಲ್ಲಿ ಹೊಟೇಲ್ ಉದ್ಯಮ ನಡೆಸುತ್ತಿದ್ದ ಅಭಿಷೇ...
07-11-25 02:18 pm
09-11-25 10:27 pm
Mangalore Correspondent
ಬಹುಕೋಟಿ ವಂಚಕ ರೋಷನ್ ಸಲ್ದಾನಗೆ ಸೇರಿದ 2.85 ಕೋಟಿ ಮ...
09-11-25 03:50 pm
ಕೋಮುದ್ವೇಷದ ಕೊಲೆ ; ಪ್ರತೀಕಾರಕ್ಕೆ ಪ್ರಚೋದಿಸಿ ಇನ್...
08-11-25 11:15 pm
Digital Arrest Scam, Mangalore Online Fraud:...
08-11-25 04:08 pm
ಆರೋಪಿಗೆ ಜಾಮೀನು ನೀಡಲು ಹೋಗಿ ತಾನೇ ತಗ್ಲಾಕ್ಕೊಂಡ !...
07-11-25 11:20 pm