ಬ್ರೇಕಿಂಗ್ ನ್ಯೂಸ್
14-04-22 09:58 pm HK Desk news ಕ್ರೈಂ
ಮುಂಬೈ, ಎ.14: ಕಾಡಿಗೆ ಬೇಟೆಗೆ ಹೋಗಿದ್ದ ನಾಲ್ವರ ತಂಡವೊಂದು ಹಲ್ಲಿ ಜಾತಿಯ ಉಡ ಎನ್ನುವ ಪ್ರಾಣಿಯನ್ನು ಹಿಡಿದು ಅದರ ಜೊತೆಗೆ ಬಲವಂತ ಸಂಭೋಗ ನಡೆಸಿದ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ. ಇದರ ವಿಡಿಯೋವನ್ನು ಬೇಟೆಗಾರರಲ್ಲಿ ಒಬ್ಬಾತ ಮೊಬೈಲಲ್ಲಿ ಸೆರೆಹಿಡಿದಿದ್ದು ವಿಡಿಯೋ ಹೊರಬರುತ್ತಲೇ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ. ಅಲ್ಲದೆ, ಅವರ ವಿರುದ್ಧ ವನ್ಯಜೀವ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ಹಲ್ಲಿ ಮೇಲೆ ಗ್ಯಾಂಗ್ ರೇಪ್ ಎನ್ನುವ ರೀತಿ ರಾಷ್ಟ್ರೀಯ ಮಾಧ್ಯಮದಲ್ಲಿ ಸುದ್ದಿಯಾಗಿದೆ.
ಈ ರೀತಿಯ ವಿಕ್ಷಿಪ್ತ ಘಟನೆ ಮಹಾರಾಷ್ಟ್ರದ ರತ್ನಗಿರಿ ಜಿಲ್ಲೆಯಲ್ಲಿ ನಡೆದಿದೆ. ಸಹ್ಯಾದ್ರಿ ರಕ್ಷಿತಾರಣ್ಯಕ್ಕೆ ಒಳಪಟ್ಟಿರುವ ರತ್ನಗಿರಿ ಜಿಲ್ಲೆಯ ಗೋಥಾನೆ ಗ್ರಾಮದಲ್ಲಿ ಮಾ.31ರಂದು ಘಟನೆ ನಡೆದಿದೆ ಎನ್ನಲಾಗುತ್ತಿದೆ. ನಾಲ್ವರ ತಂಡ ಅಕ್ರಮವಾಗಿ ಅಲ್ಲಿನ ಚಂದೋಳಿ ರಾಷ್ಟ್ರೀಯ ಉದ್ಯಾನವನಕ್ಕೆ ನುಗ್ಗಿದ್ದು, ಕೈಯಲ್ಲಿ ಗನ್ ಹಿಡಿದು ಪ್ರಾಣಿ ಬೇಟೆಗಾಗಿ ತೊಡಗಿದ್ದರು. ಈ ವೇಳೆ ಇವರ ಕೈಗೆ ಸಿಕ್ಕಿದ ಉಡದ ಮೇಲೆ ನಾಲ್ವರು ಅತ್ಯಾಚಾರ ನಡೆಸಿದ್ದಾರೆ.
ನಾಲ್ವರನ್ನು ಪೊಲೀಸರು ಬಂಧಿಸಿದ್ದು ಸಂದೀಪ್ ತುಕಾರಾಮ್ ಪವಾರ್, ಮಂಗೇಶ್ ಕಾಮ್ಟೇಕರ್, ಅಕ್ಷಯ್ ಕಾಮ್ಟೇಕರ್, ರಮೇಶ್ ಗಾಗ್ ಎಂದು ಗುರುತಿಸಲಾಗಿದೆ. ಇವರಲ್ಲಿ ಒಬ್ಬಾತನ ಮೊಬೈಲಿನಲ್ಲಿ ಅತ್ಯಾಚಾರದ ವಿಡಿಯೋ ಇದ್ದು ಅದನ್ನು ಮೊಬೈಲ್ ಸಹಿತ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆನಂತರ ಆರೋಪಿಗಳನ್ನು ಅರಣ್ಯಾಧಿಕಾರಿಯ ವಶಕ್ಕೆ ನೀಡಲಾಗಿದ್ದು, ವನ್ಯಜೀವಿ ಕಾಯ್ದೆ ಮತ್ತು ಅಕ್ರಮ ಬೇಟೆ ಪ್ರಕರಣ ದಾಖಲಿಸಲಾಗಿದೆ. ಆರೋಪಿಗಳು ಸದ್ಯ ಜಾಮೀನಿನಲ್ಲಿ ಹೊರಬಂದಿದ್ದು ಪ್ರತೀ ಸೋಮವಾರ ಅರಣ್ಯಾಧಿಕಾರಿಯ ಮುಂದೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿದೆ.
ಸಹ್ಯಾದ್ರಿ ರಕ್ಷಿತಾರಣ್ಯ ಮಹಾರಾಷ್ಟ್ರದ ಸತಾರಾ, ಸಾಂಗ್ಲಿ, ಕೊಲ್ಲಾಪುರ ಮತ್ತು ರತ್ನಗಿರಿ ಜಿಲ್ಲೆಯಲ್ಲಿ ಹರಡಿಕೊಂಡಿದೆ. ಬೆಂಗಾಲ್ ಮಾನಿಟರ್ ಲಿಜಾರ್ಡ್ ಎಂದು ವೈಜ್ಞಾನಿಕ ಹೆಸರಿನಿಂದ ಕರೆಯಲಾಗುವ, ಕನ್ನಡ ಭಾಷೆಯಲ್ಲಿ ಉಡ ಎಂದು ಕರೆಯಲ್ಪಡುವ ಈ ಪ್ರಾಣಿ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಸಾಮಾನ್ಯವಾಗಿದ್ದು, ಹೆಚ್ಚಿನ ಕಡೆ ಮಾಂಸಕ್ಕಾಗಿ ಬೇಟೆ ಮಾಡಲಾಗುತ್ತದೆ. ಅವನತಿ ಅಂಚಿನಲ್ಲಿರುವ ಈ ಪ್ರಾಣಿಯನ್ನು ಕೊಲ್ಲುವುದು, ಬೇಟೆಯಾಡುವುದು ವನ್ಯಜೀವಿ ಕಾಯ್ದೆ ಪ್ರಕಾರ ನಿಷಿದ್ಧ. ಸಾಧಾರಣ ನಾಲ್ಕು ಫೀಟ್ ಉದ್ದಕ್ಕೆ ಬೆಳೆಯುವ ಹಲ್ಲಿ ಪ್ರಭೇದಕ್ಕೆ ಸೇರಿದ ಉಡಗಳು ಹೆಚ್ಚೆಂದರೆ 15-18 ಕೇಜಿ ತೂಗುತ್ತದೆ.
Four persons were arrested for allegedly raping a Bengal monitor lizard in Sahyadri Tiger Reserve (STR) in Maharashtra, a forest official said on Wednesday. The incident, which occurred at Gothane village in Ratnagiri district, came to light days after the four accused were booked for illegally entering Chandoli National Park, which is part of the reserve, with one of them carrying a gun for hunting, he said.
22-04-25 02:37 pm
HK News Desk
ಜನಿವಾರ ತೆಗೆಸಿರುವ ಕ್ರಮ ನಿಯಮಬಾಹಿರ, ಧಾರ್ಮಿಕ ನಂಬಿ...
22-04-25 01:00 pm
R Ashok, Census Probe: ಜಾತಿಗಣತಿ ವರದಿಯೇ ನಕಲಿ,...
21-04-25 07:27 pm
ನ್ಯಾ.ಕೃಷ್ಣ ದೀಕ್ಷಿತ್, ನ್ಯಾ.ಹೇಮಂತ್ ಚಂದನಗೌಡರ್ ಸೇ...
21-04-25 07:10 pm
Jayaprakash Hegde; ಹಿಂದೂಗಳಂತೆ ಮುಸ್ಲಿಮರಲ್ಲು 93...
19-04-25 03:04 pm
21-04-25 07:46 pm
HK News Desk
Pope Francis Death, Vatican, Catholic: ಕೆಥೋಲಿ...
21-04-25 02:13 pm
No GST on UPI Payments: ಎರಡು ಸಾವಿರಕ್ಕಿಂತ ಮೇಲಿ...
20-04-25 08:42 pm
Jagdeep Dhankhar, Justice Varma case: ರಾಷ್ಟ್ರ...
18-04-25 02:21 pm
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
21-04-25 10:32 pm
Mangalore Correspondent
Puttur, Arun Putila: ಬ್ರಾಹ್ಮಣರು ಮತ್ತೆ ಪರಶುರಾಮ...
21-04-25 07:08 pm
Mangalore Chakravarti Sulibele, Ujre; ಸರ್ಕಾರವ...
20-04-25 05:42 pm
DK Shivakumar, Dharmasthala temple, Mangalore...
20-04-25 12:51 pm
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
22-04-25 03:26 pm
Bangalore Correspondent
Om Prakash IPS Murder, Wife arrest: ನಿವೃತ್ತ ಡ...
21-04-25 01:03 pm
Karnataka DGP Om Prakash Murder, wife: ನಿವೃತ್...
20-04-25 10:52 pm
ರಾಮಕೃಷ್ಣ ಆಶ್ರಮದ ಕಾರ್ಯದರ್ಶಿಗೇ ಟೋಪಿ ; ಇಡಿ ಅಧಿಕಾ...
20-04-25 07:26 pm
Gold smuggling case, Mangalore Court Verdict,...
19-04-25 10:46 pm