ಬ್ರೇಕಿಂಗ್ ನ್ಯೂಸ್
07-11-25 08:05 pm HK News Desk ಕ್ರೈಂ
ಕಲಬುರಗಿ, ನ.7 : ಹಗಲು ಕುರಾನ್ ಬೋಧಕ, ರಾತ್ರಿ ಮನೆಗಳ್ಳ.. ಯಾರಿಗೂ ಗೊತ್ತಾಗದಂತೆ ಡಬಲ್ ಪಾರ್ಟ್ ಮಾಡುತ್ತಿದ್ದ ಮನೆಗಳ್ಳನನ್ನು ಕಲಬುರಗಿ ನಗರದ ವಿವಿ ಠಾಣಾ ಪೊಲೀಸರು ಬಂಧಿಸಿದ್ದಾರೆ. ಕಲಬುರಗಿಯ ಜಿಲಾನಾಬಾದ್ ಕಾಲೋನಿ ನಿವಾಸಿ ಮಹ್ಮದ್ ಆರೀಫ್ ಅಲಿ(50) ಎನ್ನುವಾತನೇ ಬಂಧಿತ ಮನೆಗಳ್ಳ.
ಕಲಬುರಗಿ ನಗರದಲ್ಲಿ ಮಸೀದಿಯೊಂದರಲ್ಲಿ ಅರೆಬಿಕ್ ಶಿಕ್ಷಕ (ಕುರಾನ್ ಬೋಧಕ) ನಾಗಿ ಆರಿಫ್ ಕೆಲಸ ಮಾಡುತ್ತಿದ್ದ. ಹಗಲಲ್ಲಿ ಕುರಾನ್ ಬೋಧಕ, ರಾತ್ರಿಯಾಗುತ್ತಿದ್ದಂತೆ ಮನೆ ಕಳ್ಳನಾಗುತ್ತಿದ್ದ. ಮಧ್ಯಾಹ್ನ ಮತ್ತು ಸಂಜೆ ಕೆಲಸದ ಬಿಡುವಿನ ವೇಳೆ ಬಡಾವಣೆ ಸುತ್ತಾಡಿ, ಬೀಗ ಹಾಕಿರುವ ಮನೆಗಳನ್ನು ಗುರುತಿಸುತ್ತಿದ್ದ. ನಸುಕಿನ 3 ಗಂಟೆ ಸುಮಾರಿಗೆ ಎಲ್ಲರೂ ಗಾಢ ನಿದ್ರೆಯಲ್ಲಿರುವಾಗ ಬೀಗ ಹಾಕಿದ ಮನೆಗಳಿಗೆ ಹೋಗಿ ರಾಡ್ ನಿಂದ ಬೀಗ ಮುರಿದು ಮನೆ ದೋಚುತ್ತಿದ್ದ.
ಕಳ್ಳತನ ಮಾಡಿದ್ದ 13.41 ಲಕ್ಷ ರೂಪಾಯಿ ಮೌಲ್ಯದ 100 ಗ್ರಾಮ್ ಚಿನ್ನದ ಆಭರಣಗಳು, 16 ಸಾವಿರ ರೂಪಾಯಿ ಮೌಲ್ಯದ 200 ಗ್ರಾಮ ಬೆಳ್ಳಿ, 25 ಸಾವಿರ ರೂಪಾಯಿ ಮೌಲ್ಯದ ಒಂದು ಬೈಕನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.
ಸಿಕ್ಕಿಬಿದ್ದಿದ್ದೇ ರೋಚಕ
ಕಲಬುರಗಿಯ ವಿವಿ ಠಾಣಾ ವ್ಯಾಪ್ತಿಯ ಕೆಲವು ಬಡಾವಣೆಗಳಲ್ಲಿ ಇತ್ತೀಚಿಗೆ ಮನೆಗಳ್ಳತನ ಪ್ರಕರಣಗಳು ಹೆಚ್ಚಾಗಿದ್ದವು. ಕಳವು ಪ್ರಕರಣಗಳ ತನಿಖೆಗಿಳಿದ ಪೊಲೀಸರಿಗೆ ಯಾವುದೇ ಸುಳಿವು ಸಿಕ್ಕಿರಲಿಲ್ಲ. ಹಗಲು ಮತ್ತು ರಾತ್ರಿ ಹೊತ್ತಲ್ಲಿ ಬಡಾವಣೆ ಒಳಗಡೆ ಆರೀಫ್ ಅಲಿ ಬೈಕ್ ಮೇಲೆ ಸಂಚರಿಸುವ ಸಿಸಿ ಟಿವಿ ದೃಶ್ಯಗಳ ನೋಡಿ ಅನುಮಾನ ಬಂದಿತ್ತು. ನಂತರ ಈತನ ಚಲನ ವಲನಗಳ ಮೇಲೆ ಪೊಲೀಸರು ತೀವ್ರ ನಿಗಾ ಇಟ್ಟಿದ್ದರು. ಅನುಮಾನ ದೃಢವಾಗುತ್ತಿದ್ದಂತೆ ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದ್ದು ಸತ್ಯ ಒಪ್ಪಿಕೊಂಡಿದ್ದಾನೆ.
ಇತ್ತಿಚಿಗೆ ವಿವಿ ಠಾಣೆ ವ್ಯಾಪ್ತಿಯಲ್ಲಿ ನಡೆದ ಮೂರು ಮನೆಗಳ್ಳತನ ಕೃತ್ಯ ಮಾಡಿದ್ದು ತಾನೇ ಎಂದು ಆರಿಫ್ ಆಲಿ ಒಪ್ಪಿಕೊಂಡಿದ್ದಾನೆ. ಮಸೀದಿಯಲ್ಲಿ ಕುರಾನ್ ಬೋಧನೆಯಿಂದ 12 ಸಾವಿರ ಸಂಬಳ ಬರುತ್ತಿದ್ದು ಅದು ಜೀವನ ನಿರ್ವಹಣೆಗೆ ಸಾಲದ್ದಕ್ಕೆ ಈ ಕೆಲಸಕ್ಕೆ ಇಳಿದಿದ್ದಾಗಿ ಹೇಳಿಕೊಂಡಿದ್ದಾನೆ.
In a shocking revelation, Kalaburagi city police arrested a Quran teacher who turned into a house burglar by night, leading a double life for months without raising suspicion. The accused, Mohammed Arif Ali (50), a resident of Zilanabad Colony, worked as an Arabic instructor at a local mosque during the day and carried out house thefts at night.
23-03-26 12:48 pm
HK News Staffer
ಇನ್ನೆರಡು ದಿನಗಳಲ್ಲಿ ಕಮರ್ಷಿಯಲ್ ಗ್ಯಾಸ್ ಪೂರೈಕೆ ಶೇ...
22-03-26 11:44 am
ದಾವಣಗೆರೆಯಲ್ಲಿ ರಂಜಾನ್ ಪ್ರಾರ್ಥನೆ ವೇಳೆ ಹೆಜ್ಜೇನು...
21-03-26 08:29 pm
ಡಿಜಿಪಿ ರಾಮಚಂದ್ರ ರಾವ್ ಅಶ್ಲೀಲ ವಿಡಿಯೋ ಪ್ರಕರಣ ; ಎ...
21-03-26 08:25 pm
Kudremukh Fire: ಕುದುರೆಮುಖ ರಕ್ಷಿತಾರಣ್ಯದಲ್ಲಿ 25...
21-03-26 06:57 pm
23-03-26 09:46 pm
HK News Staffer
ಯುದ್ಧ ಪೀಡಿತ ಇರಾನ್ಗೆ ಕಾಶ್ಮೀರದಲ್ಲಿ ದೇಣಿಗೆ ಸಂಗ್...
23-03-26 11:33 am
ಅಮೆರಿಕ ಪಾಕಿಸ್ತಾನದ ಮೇಲೆ ದಾಳಿ ಮಾಡಿದರೆ ನಾವು ಮುಂಬ...
22-03-26 08:37 pm
ಮುಯ್ಯಿಗೆ ಮುಯ್ಯಿ ; ಇಸ್ರೇಲ್ ಅಣು ಸ್ಥಾವರಕ್ಕೆ ಇರಾನ...
22-03-26 03:14 pm
ಮುಸ್ಲಿಂ ರಾಷ್ಟ್ರಗಳೊಂದಿಗೆ ಸಂಘರ್ಷ ಬಯಸುವುದಿಲ್ಲ ;...
22-03-26 11:41 am
23-03-26 05:36 pm
HK News Staffer
ಸೌಜನ್ಯಾ ಕೊಲೆ ಪ್ರಕರಣದ ಮರು ತನಿಖೆ ; ರಾಜ್ಯ ಸರಕಾರ,...
23-03-26 05:13 pm
Sandesh PG, CID Case: ಮೂಡುಬಿದಿರೆ ಇನ್ಸ್ಪೆಕ್ಟರ...
23-03-26 02:24 pm
ವಿನಾಯಕ ಬಾಳಿಗಾ ಕೊಲೆಗೆ ಹತ್ತು ವರ್ಷ ; ವೆಂಕಟರಮಣ ದ...
23-03-26 01:11 pm
ಉಡುಪಿಯಲ್ಲಿ ರಾಜಕೀಯ ಕಾದಾಟ ; ಶಾಸಕ ಯಶ್ ಪಾಲ್ ವಿರುದ...
22-03-26 07:30 pm
23-03-26 09:44 pm
HK News Staffer
ಪಂಪ್ವೆಲ್ - ಎಕ್ಕೂರಿನಲ್ಲಿ ಆಟೋದಲ್ಲಿ ಡ್ರಗ್ಸ್ ಮಾರಾ...
23-03-26 03:08 pm
ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇಯಲ್ಲಿ ಭೀಕರ ಅಪಘ...
23-03-26 11:17 am
ಬೆಂಗಳೂರಲ್ಲಿ ಅಪಾಯಕಾರಿ ರೀತಿಯಲ್ಲಿ ಲ್ಯಾಂಬೋರ್ಗಿನಿ...
22-03-26 09:44 pm
ಆರು ವರ್ಷದ ಮೊಮ್ಮಗಳ ಮೇಲೆ ಅತ್ಯಾಚಾರವೆಸಗಿದ ನೀಚ ಅಜ್...
20-03-26 04:09 pm