ಬ್ರೇಕಿಂಗ್ ನ್ಯೂಸ್
29-10-25 02:33 pm Mangalore Correspondent ಕ್ರೈಂ
ಪುತ್ತೂರು, ಅ.29 : ನಕಲಿ ಚಿನ್ನಾಭರಣಗಳನ್ನು ಅಡವಿಟ್ಟು ವಂಚನೆ ನಡೆಸಿರುವ ವ್ಯಕ್ತಿಯೊಬ್ಬನ ವಿರುದ್ಧ ಮೂರ್ತೆದಾರರ ಸಹಕಾರಿ ಸಂಘ, ಪಡೀಲ್ ಪುತ್ತೂರು ಇದರ ಕಾರ್ಯ ನಿರ್ವಹಣಾಧಿಕಾರಿ ಶ್ರೀಮತಿ ಸವಿತಾ ಪುತ್ತೂರು ನಗರ ಠಾಣೆಗೆ ದೂರು ನೀಡಿದ್ದಾರೆ. ದೂರಿನಲ್ಲಿ ವಿವಿಧ ದಿನಗಳಲ್ಲಿ ಒಟ್ಟು 101 ಗ್ರಾಮ್ ನಕಲಿ ಚಿನ್ನವನ್ನು ಅಡವಿಟ್ಟು 6 ಲಕ್ಷಕ್ಕೂ ಅಧಿಕ ಸಾಲ ಪಡೆದು ವಂಚಿಸಿದ್ದಾಗಿ ತಿಳಿಸಿದ್ದಾರೆ.
ಆಗಸ್ಟ್ 5ರಂದು ವಿನೋದ್ ಎಂಬಾತ 32 ಗ್ರಾಮ್ ಚಿನ್ನದ ಸರವನ್ನು ತಂದಿದ್ದು ಸರಾಫ ಶ್ರೀನಿವಾಸ ಆಚಾರ್ಯ ಪರಿಶೀಲಿಸಿದ ಬಳಿಕ ಎರಡು ಲಕ್ಷ ರೂ. ಸಾಲ ನೀಡಲಾಗಿತ್ತು. ಆನಂತರ, ಮರುದಿನ ಆಗಸ್ಟ್ 6ರಂದು 17 ಗ್ರಾಮ್ ತೂಕದ ಚಿನ್ನದ ನೆಕ್ಲೆಸ್ ತಂದಿದ್ದು, ಸರಾಫರ ಪರಿಶೀಲನೆ ಬಳಿಕ 1.10 ಲಕ್ಷ ರೂ. ಸಾಲ ನೀಡಲಾಗಿತ್ತು.
ಆಗಸ್ಟ್ 26ರಂದು ಇದೇ ವ್ಯಕ್ತಿ ಒಂದು ಚೈನ್ ಮತ್ತು ಎರಡು ಬ್ರಾಸ್ಲೇಟ್ ಸೇರಿ 52 ಗ್ರಾಮ್ ತೂಕದ ಚಿನ್ನವನ್ನು ಅಡಮಾನ ಇರಿಸಲು ಬಂದಿದ್ದು ಸರಾಫ ಶ್ರೀನಿವಾಸ ಆಚಾರ್ಯ ಪರಿಶೀಲನೆ ಬಳಿಕ ಸೊಸೈಟಿಯಿಂದ 1.10 ಲಕ್ಷ ರೂ. ಸಾಲ ನೀಡಲಾಗಿತ್ತು. ಸೆ.4ರಂದು ಆರೋಪಿ ವಿನೋದ್ ಶಾಖೆಗೆ ಬಂದಿದ್ದು, ಆಗಸ್ಟ್ 5ರಂದು ಇಟ್ಟಿದ್ದ ಬಂಗಾರವನ್ನು ಬಿಡಿಸಲು ಎರಡು ಲಕ್ಷ ಅಸಲಿ ಮೊತ್ತ ಮತ್ತು ಬಡ್ಡಿ ಮೊತ್ತವನ್ನು ಪಾವತಿಸಿದ್ದಾನೆ. ಆನಂತರ, ಅದೇ ಬಂಗಾರವನ್ನು ಮರಳಿ ಅಡವಿಟ್ಟು 2.10 ಲಕ್ಷ ಸಾಲ ಪಡೆದಿದ್ದಾನೆ.
ಈ ನಡುವೆ, ಅ.17ರಂದು ಆರೋಪಿ ವಿನೋದ್ ಬೇರೆ ಸಹಕಾರಿ ಬ್ಯಾಂಕುಗಳಲ್ಲಿ ನಕಲಿ ಚಿನ್ನ ಅಡವಿಟ್ಟು ಸಾಲ ತೆಗೆದಿರುವ ಬಗ್ಗೆ ಪತ್ರಿಕೆಗಳಲ್ಲಿ ಸುದ್ದಿ ಬಂದಿರುವುದನ್ನು ನೋಡಿ, ನಮ್ಮ ಶಾಖೆಯಲ್ಲಿ ಇಟ್ಟಿರುವ ಚಿನ್ನವನ್ನು ಪುತ್ತೂರಿನ ಬಾಲಾಜಿ ಎಂಟರ್ ಪ್ರೈಸಸ್ ನಲ್ಲಿ ಪರಿಶೀಲನೆ ನಡೆಸಿದಾಗ ವಿವಿಧ ದಿನಗಳಲ್ಲಿ ಅಡಮಾನ ಇರಿಸಿರುವ 101.580 ಗ್ರಾಮ್ ತೂಕದ ಚಿನ್ನ ನಕಲಿ ಎಂದು ತಿಳಿದುಬಂದಿರುತ್ತದೆ ಎಂದು ದೂರು ನೀಡಿದ್ದು ಪುತ್ತೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
A case has been registered against a man who allegedly pledged fake gold ornaments to obtain loans from the Murthydarara Co-operative Society, Padil, Puttur. The society’s acting manager, Savitha, has lodged a formal complaint at the Puttur City Police Station.
28-10-25 10:03 pm
Bangalore Correspondent
ಶಾಸಕಾಂಗ ನಾಯಕರ ಆಯ್ಕೆ ವೇಳೆ 2.5 ವರ್ಷ ಎಂದು ತಿಳಿಸಿ...
28-10-25 07:18 pm
ಆರೆಸ್ಸೆಸ್ ಚಟುವಟಿಕೆ ನಿರ್ಬಂಧಿಸುವ ಸರ್ಕಾರಿ ಸ್ಥಳದ...
28-10-25 03:40 pm
ನವೆಂಬರ್ ಕುತೂಹಲ, ದೆಹಲಿ ಭೇಟಿಗೆ ತೆರಳಿದ ಡಿಕೆಶಿಗೆ...
27-10-25 10:52 pm
ಕಾಂಗ್ರೆಸಿನಲ್ಲಿ ಮತ್ತೊಬ್ಬ ಏಕನಾಥ್ ಶಿಂಧೆ, ಪವಾರ್ ಹ...
27-10-25 10:42 pm
28-10-25 10:23 pm
HK News Desk
ಶಾಂಘೈ ತೆರಳಿದ್ದ ಪ್ರಧಾನಿ ಮೋದಿ ಹತ್ಯೆಗೆ ಅಮೆರಿಕ ಸಂ...
26-10-25 11:01 pm
ಅಂಗೈಯಲ್ಲಿ ಡೆತ್ ನೋಟ್ ಬರೆದಿಟ್ಟು ಸರ್ಕಾರಿ ವೈದ್ಯೆ...
26-10-25 05:38 pm
ಮುಂದಿನ ವಾರದಿಂದಲೇ ತಮಿಳುನಾಡಿನಲ್ಲಿ ಮತದಾರ ಪಟ್ಟಿಯ...
25-10-25 09:36 pm
Vemuri Kaveri Travels Bus Accident, Fire, Ill...
25-10-25 02:28 pm
29-10-25 06:55 pm
Mangalore Correspondent
ಸುಳ್ಳು ಕೇಸು ಹಾಕುತ್ತಿದ್ದಾರೆಂದು ಮನವಿ ಕೊಡಲು ಬಂದವ...
29-10-25 03:57 pm
ಭ್ರಷ್ಟಾಚಾರ ಆರೋಪಕ್ಕೆ ಉತ್ತರಿಸಲು ಸ್ಪೀಕರ್ ಖಾದರ್ ನ...
29-10-25 03:16 pm
Smart City, Kadri Park Road: ಕದ್ರಿ ಪಾರ್ಕ್ ರಸ್...
28-10-25 08:36 pm
ಸ್ಪೀಕರ್ ಕೊಠಡಿ- ಶಾಸಕರ ಭವನ ನವೀಕರಣ ನೆಪದಲ್ಲಿ ಭಾರೀ...
28-10-25 03:36 pm
29-10-25 02:53 pm
Mangalore Correspondent
ಪುತ್ತೂರು ಮೂರ್ತೆದಾರರ ಸಹಕಾರಿ ಸಂಘಕ್ಕೆ 101 ಗ್ರಾಮ್...
29-10-25 02:33 pm
ಕೇರಳ ಮೂಲದ ಗಲ್ಫ್ ಉದ್ಯಮಿಗೆ ಹನಿಟ್ರ್ಯಾಪ್ ; ಬಂಧನಕ್...
28-10-25 10:48 pm
ಕೋಟಿ ರೂ. ಚೀಟಿ ವ್ಯವಹಾರ ಇದೆ, ಹಣ ಸಾಲ ಕೊಟ್ಟರೆ ದುಪ...
27-10-25 05:29 pm
ದುಬೈನಲ್ಲಿ ಕುಳಿತು ಬೆಂಗಳೂರಿನ ಫೈನಾನ್ಸ್ ಕಂಪನಿಗೆ ಕ...
27-10-25 04:04 pm