ಬ್ರೇಕಿಂಗ್ ನ್ಯೂಸ್
28-09-25 05:04 pm Mangalore Correspondent ಕ್ರೈಂ
ಮಂಗಳೂರು, ಸೆ.28 : ವಾಟ್ಸಪ್ ಮೆಸೇಜ್ ನಂಬಿ ನಕಲಿ ಷೇರು ಮಾರುಕಟ್ಟೆಯ ಲಿಂಕ್ ಕ್ಲಿಕ್ ಮಾಡಿ ಹಣ ಡಬಲ್ ಮಾಡಲು ಹೋದ ಮಹಿಳೆಯೊಬ್ಬರು 15 ದಿನದಲ್ಲಿ ಬರೋಬ್ಬರಿ 45 ಲಕ್ಷ ರು. ಕಳಕೊಂಡಿದ್ದು ಮೋಸ ತಿಳಿಯುತ್ತಿದ್ದಂತೆ ಮಂಗಳೂರಿನ ಸೈಬರ್ ಠಾಣೆಗೆ ದೂರು ನೀಡಿದ್ದಾರೆ.
ದೂರುದಾರೆ ಮಹಿಳೆಗೆ ಕಳೆದ ಆಗಸ್ಟ್ ನಲ್ಲಿ ಷೇರ್ ಮಾರ್ಕೆಟ್ ಎಂದು ಹೇಳಿ ಲಿಂಕ್ ಬಂದಿತ್ತು. ಲಿಂಕ್ ಕ್ಲಿಕ್ ಮಾಡಿದ ವೇಳೆ F9 Indian Market Forum ಎಂಬ ವಾಟ್ಸಪ್ ಗ್ರೂಪ್ (ಗ್ರೂಪ್ ನ ಅಡ್ಮಿನ್ Jass singh 8597164645, Jinal viral mehta 7619640978, +447352579985, 7659855761) ಓಪನ್ ಆಗಿತ್ತು. ಸದ್ರಿ ಗ್ರೂಪ್ ನಲ್ಲಿ ಸ್ಟಾಕ್ ಮಾರ್ಕೆಟ್ ಬಗ್ಗೆ ಜಾಹೀರಾತನ್ನು ನೀಡಿ, ಇನ್ ವೆಸ್ಟ್ ಮೆಂಟ್ ಬಗ್ಗೆ ಆಸಕ್ತಿಯಿದ್ದರೆ “CERBER INV” ಎಂಬ ಆಪ್ ನಲ್ಲಿ ನೊಂದಾಯಿಸುವಂತೆ ಸೂಚಿಸಿದ್ದರು. ಸದ್ರಿ ಲಿಂಕ್ ಮುಖಾಂತರ ತನ್ನ ಹೆಸರು, ಮೊಬೈಲ್ ನಂಬ್ರ ಮತ್ತು ಇಮೇಲ್ ಐ.ಡಿ.ಯನ್ನು ಸದ್ರಿ ಆಪ್ ನಲ್ಲಿ ನೊಂದಾಯಿಸಿದ್ದರು.

ಆನಂತರ, ಈ ಹಿಂದೆ ಇದ್ದ ವಾಟ್ಸಪ್ ಗ್ರೂಪ್ ನಿಂದ ತೆಗೆದು “Investment Alliance Elite Group B3” ನೇ ವಾಟ್ಸಪ್ ಗ್ರೂಪ್ ಸೇರಿಸಲಾಗಿತ್ತು. ಸದ್ರಿ ಗ್ರೂಪ್ ನಲ್ಲಿ ಶೇರ್ ಮಾರ್ಕೆಟಿಂಗ್ ಸ್ಟಾಕ್ಸ್ & ಇನ್ ವೆಸ್ಟ್ ಮೆಂಟ್ ಬಗ್ಗೆ ವಿವರಿಸುತ್ತ ಹೆಚ್ಚಿನ ಲಾಭ ಗಳಿಸಲು ಹೂಡಿಕೆ ಮಾಡಲು ಹೇಳುತ್ತಿದ್ದರು. ರಿಚಾರ್ಜ್ ಮಾಡುವುದಕ್ಕಾಗಿ ಅಡ್ಮಿನ್ ಮ್ಯಾನೇಜರ್ ರಿಯಾ ಎಂಬವರನ್ನು ಸಂಪರ್ಕಿಸಿ ಎಂದು +1(307)412-4480 ನೇ ನಂಬರ್ ನೀಡಿದ್ದು ಸದ್ರಿ ರಿಯಾ ಹೇಳಿದಂತೆ ವಿವಿಧ ಬ್ಯಾಂಕ್ ಖಾತೆಗಳಿಗೆ ಮಹಿಳೆ ತನ್ನ ಖಾತೆಯಿಂದ ಹಣ ಹಾಕಿದ್ದರು. ಅದರಂತೆ ಸೆ.9ರಿಂದ 25ರ ವರೆಗೆ ತನ್ನ ಬ್ಯಾಂಕ್ ಖಾತೆಗಳಿಂದ ಹಂತ ಹಂತವಾಗಿ ಒಟ್ಟು 45,10,000/- ರೂ. ಗಳನ್ನು ಬೇರೆ ಬೇರೆ ಬ್ಯಾಂಕ್ ಖಾತೆಗಳಿಗೆ IMPS & RTGS ಹಾಗು UPI ಮೂಲಕ ವರ್ಗಾವಣೆ ಮಾಡಿದ್ದು ಮತ್ತೆ 33 ಲಕ್ಷ ಪಾವತಿಸಲು ಒತ್ತಾಯಿಸಿದ್ದರು. ಅಷ್ಟರಲ್ಲಿ ಅನುಮಾನಗೊಂಡ ಮಹಿಳೆ ತನ್ನ ಹಿಂದಿನ ಮೊತ್ತ ನೀಡುವಂತೆ ಸದ್ರಿ ವಾಟ್ಸಪ್ ಗ್ರೂಪ್ ನಲ್ಲಿದ್ದ ಮೊಬೈಲ್ ನಂಬರ್ ಗೆ ಕರೆ ಮಾಡಿದಾಗ ಸ್ವೀಕರಿಸದೆ ಮೋಸ ಮಾಡಿದ್ದರು.
A woman from Mangaluru lost ₹45 lakh in just 15 days after falling prey to a fake stock market scam promoted through WhatsApp messages.
01-11-25 09:33 pm
HK News Desk
ನಮ್ಮ ಕ್ಷೇತ್ರದಲ್ಲಿ ಪಥಸಂಚಲನ ಮಾಡೋದನ್ನು ಆರೆಸ್ಸೆಸ್...
31-10-25 08:10 pm
'ನವೆಂಬರ್ ಕ್ರಾಂತಿ' ಮುನ್ಸೂಚನೆ ನೀಡಿದ್ದ ರಾಜಣ್ಣ ಅಖ...
31-10-25 06:02 pm
ಧರ್ಮಸ್ಥಳ ಕೇಸ್ ; ಮಹೇಶ್ ಶೆಟ್ಟಿ ತಿಮರೋಡಿ ತಂಡದ ಮೇಲ...
30-10-25 11:00 pm
ನಟ ಪ್ರಕಾಶ್ ರಾಜ್, ರಾಜೇಂದ್ರ ಚೆನ್ನಿ, ಜಕರಿಯಾ ಜೋಕಟ...
30-10-25 07:25 pm
02-11-25 05:13 pm
HK News Desk
ಜೆಡ್ಡಾದಿಂದ ಹೈದರಾಬಾದ್ ಬರುತ್ತಿದ್ದ ವಿಮಾನದಲ್ಲಿ ಬ...
01-11-25 07:27 pm
ಭಾರತದಲ್ಲಿ ಸ್ವತಂತ್ರವಾಗಿದ್ದೇನೆ, ಮತ್ತೆ ಬಾಂಗ್ಲಾದೇ...
30-10-25 03:20 pm
ಭಾರತ ಮೂಲದ ಅನಿಲ್ ಕುಮಾರ್ ಬೊಲ್ಲಗೆ 240 ಕೋಟಿ ಮೊತ್ತ...
28-10-25 10:23 pm
ಶಾಂಘೈ ತೆರಳಿದ್ದ ಪ್ರಧಾನಿ ಮೋದಿ ಹತ್ಯೆಗೆ ಅಮೆರಿಕ ಸಂ...
26-10-25 11:01 pm
02-11-25 06:57 pm
Mangalore Correspondent
ವೆನ್ಲಾಕ್, ಲೇಡಿಗೋಷನ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ...
02-11-25 06:51 pm
ಪುತ್ತೂರಿನಲ್ಲಿ ಆಟೋ - ಕಾರು ಮುಖಾಮುಖಿ ಡಿಕ್ಕಿ ; ಆಟ...
01-11-25 11:05 pm
ಉಡುಪಿ - ಕಾಸರಗೋಡು 440 ಕೆವಿ ವಿದ್ಯುತ್ ಲೈನ್ ; ಕೃಷ...
01-11-25 11:02 pm
ಅಂತಾರಾಷ್ಟ್ರೀಯ ಬ್ಯಾಡ್ಮಿಂಟನ್ ; ಫೈನಲ್ಸ್ ಮಾತ್ರ ಬ...
01-11-25 10:31 pm
01-11-25 07:25 pm
HK News Desk
Rowdy Topi Naufal Murder, Mangalore: ಮಂಗಳೂರಿನ...
01-11-25 03:31 pm
ವೃದ್ಧ ಮಹಿಳೆಗೆ ಡಿಜಿಟಲ್ ಅರೆಸ್ಟ್ ಬಲೆ ; ಐದು ಗಂಟೆಯ...
01-11-25 01:31 pm
ಸುಹಾಸ್ ಶೆಟ್ಟಿ ಕೊಲೆ ಪ್ರಕರಣ ; 11 ಆರೋಪಿಗಳ ವಿರುದ್...
31-10-25 10:57 pm
ಮುಂಬೈನಲ್ಲಿ 17 ಮಕ್ಕಳನ್ನು ಒತ್ತೆಯಾಳಾಗಿಸಿದ್ದ ವ್ಯಕ...
31-10-25 12:55 pm