ಬ್ರೇಕಿಂಗ್ ನ್ಯೂಸ್
            
                        08-08-25 12:27 pm Bangalore Correspondent ಕ್ರೈಂ
            ಬೆಂಗಳೂರು, ಆ.8 : ಕಳ್ಳರ ಬೇಟೆಯಾಡಬೇಕಿದ್ದ ಪೊಲೀಸ್ ಕಾನ್ಸ್ಟೇಬಲ್ ಒಬ್ಬರು ತನ್ನ ಮನೆಯಲ್ಲೇ ಕುಖ್ಯಾತ ಕಳ್ಳನಿಗೆ ಆಶ್ರಯ ನೀಡಿ, ಸರ್ಕಾರಿ ಕೆಲಸದಿಂದ ಅಮಾನತುಗೊಂಡ ಪ್ರಕರಣ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ.
ಕುಖ್ಯಾತ ಕಳ್ಳ ಬಾಂಬೆ ಸಲೀಂ ಜತೆ ಸ್ನೇಹ ಬೆಳೆಸಿ, ಮನೆಯಲ್ಲೇ ಆಶ್ರಯ ಕೊಟ್ಟು ಪೊಲೀಸರ ಕೈಗೆ ಸಿಗದಂತೆ ಮಾಡಿದ್ದ ಆರೋಪದಲ್ಲಿ ಗೋವಿಂದಪುರ ಠಾಣೆ ಕಾನ್ಸ್ಟೇಬಲ್ ಎಚ್.ಆರ್. ಸೋನಾರ ಎಂಬವರನ್ನು ಸೇವೆಯಿಂದ ಅಮಾನತುಗೊಳಿಸಿ ಬೆಂಗಳೂರು ಪೂರ್ವ ವಿಭಾಗದ ಡಿಸಿಪಿ ದೇವರಾಜು ಆದೇಶ ಹೊರಡಿಸಿದ್ದಾರೆ.
ಆಡುಗೋಡಿಯ ಪೊಲೀಸ್ ವಸತಿ ಸಮುಚ್ಚಯದಲ್ಲಿ ವಾಸವಿರುವ ಕಾನ್ಸ್ಟೇಬಲ್ ಸೋನಾರ ಅವರ ಮನೆಯಲ್ಲಿ ಕೆಲವು ತಿಂಗಳು ವಾಸವಿದ್ದ ಸಲೀಂ, ಸೋನಾರ ಇಲ್ಲದೇ ಇದ್ದಾಗ ಪೊಲೀಸ್ ಯೂನಿಫಾರಂ ಧರಿಸಿ ತನ್ನ ಪತ್ನಿಗೆ ವಿಡಿಯೋ ಕರೆ ಮಾಡಿ ಪೋಸು ನೀಡುತ್ತಿದ್ದ. 'ಕಳ್ಳನಾದರೂ ಪೊಲೀಸರ ಮನೆಯಲ್ಲಿದ್ದೇನೆ. ಅವರದ್ದೇ ಯೂನಿಫಾರಂ ಧರಿಸಿದ್ದೇನೆ ನೋಡು' ಎಂದು ಬಿಲ್ಡಪ್ ಕೊಟ್ಟಿದ್ದ. ಇದಕ್ಕೆ ಸಾಕ್ಷಿಯಾಗಿ ತನ್ನ ಮೊಬೈಲ್ ನಲ್ಲಿ ಸ್ಕ್ರೀನ್ ಶಾಟ್ ಫೋಟೊ ತೆಗೆಸಿಟ್ಟುಕೊಂಡಿದ್ದ.
ಡಿಫೆನ್ಸ್ ಕಾಲೊನಿಯಲ್ಲಿ ವಾಸವಿರುವ ವೈದ್ಯರೊಬ್ಬರ ಮನೆಯಲ್ಲಿ ಜೂ.22ರಂದು ರಾತ್ರಿ ಚಿನ್ನಾಭರಣ ಕಳವಾಗಿತ್ತು. ಪ್ರಕರಣ ಸಂಬಂಧ ಹಲವು ಆಯಾಮಗಳಲ್ಲಿ ತನಿಖೆ ನಡೆಸಿ ಆರೋಪಿ ಬಾಂಬೆ ಸಲೀಂನನ್ನು ಇಂದಿರಾ ನಗರ ಠಾಣೆ ಪೊಲೀಸರು ಬಂಧಿಸಿದ್ದರು. ಆರೋಪಿ ಕದ್ದಿದ್ದ ಸುಮಾರು 15 ಲಕ್ಷ ರೂ. ಮೌಲ್ಯದ ಆಭರಣ ಹಾಗೂ ಇತರೆ ವಸ್ತುಗಳನ್ನು ವಶಪಡಿಸಿದ್ದರು. ತನಿಖೆ ಸಲುವಾಗಿ ಬಾಂಬೆ ಸಲೀಂನ ಮೊಬೈಲ್ ಜಪ್ತಿ ಮಾಡಿ ಪರಿಶೀಲಿಸಿದಾಗ ಪೊಲೀಸ್ ಯೂನಿಫಾರಂ ಧರಿಸಿರುವ ಪೋಟೊಗಳು ಪತ್ತೆಯಾಗಿದ್ದವು. ಜತೆಗೆ, ಅವನು ಧರಿಸಿದ್ದ ಯೂನಿಫಾರಂನ ನಂಬರ್ ಪ್ಲೇಟ್ನಲ್ಲಿ ಎಚ್.ಆರ್. ಸೋನಾರ ಹೆಸರಿತ್ತು.
ಈ ಕುರಿತು ಆರೋಪಿಯನ್ನು ಹೆಚ್ಚಿನ ವಿಚಾರಣೆ ನಡೆಸಿದಾಗ ''ಕೆಲವು ತಿಂಗಳ ಹಿಂದೆ ಕಾನ್ಸ್ಟೇಬಲ್ ಸೋನಾರ ಮನೆಯಲ್ಲಿ ವಾಸವಿದ್ದಾಗ ಯೂನಿಫಾರಂ ಧರಿಸಿ ಪತ್ನಿಗೆ ಕರೆ ಮಾಡಿದ್ದೆ'' ಎಂದು ಬಾಯಿಟ್ಟಿದ್ದ. ಈ ವರದಿಯನ್ನು ಡಿಸಿಪಿ ಅವರಿಗೆ ಸಲ್ಲಿಸಲಾಗಿತ್ತು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
"ಕರ್ತವ್ಯದಲ್ಲಿ ದುರ್ನಡತೆ ಹಾಗೂ ಶಿಸ್ತು ಉಲ್ಲಂಘಿಸಿದ ಕಾನ್ಸ್ಟೇಬಲ್ ಸೋನಾರನ್ನು ಇಲಾಖಾ ವಿಚಾರಣೆ ಬಾಕಿ ಇರಿಸಿ ಸೇವೆಯಿಂದ ಅಮಾನತು ಮಾಡಲಾಗಿದೆ. ಪ್ರಕರಣದ ಹೆಚ್ಚಿನ ತನಿಖೆ ಮುಂದುವರಿದಿದೆ ಎಂದು ಡಿಸಿಪಿ ದೇವರಾಜು ತಿಳಿಸಿದ್ದಾರೆ.
ಕದ್ದ ಚಿನ್ನ ಮುಂಬೈನಲ್ಲಿ ಮಾರುತ್ತಿದ್ದ, ಐಷಾರಾಮಿ ಜೀವನ
ರಾಜಧಾನಿ ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಮನೆಗಳಿಗೆ ಕನ್ನ ಹಾಕಿ ಕಳವು ನಡೆಸುವುದರಲ್ಲಿ ಸಲೀಂ ಅಲಿಯಾಸ್ ಬಾಂಬೆ ಸಲೀಂ ಕುಖ್ಯಾತಿ ಪಡೆದಿದ್ದಾನೆ. ದಶಕಕ್ಕೂ ಹೆಚ್ಚು ಕಾಲದಿಂದ ಮನೆಗಳ್ಳತನವನ್ನೇ ಉದ್ಯೋಗ ಮಾಡಿಕೊಂಡಿದ್ದ. ಈತನ ವಿರುದ್ಧ 50ಕ್ಕೂ ಹೆಚ್ಚು ಪ್ರಕರಣಗಳು ವಿವಿಧ ಠಾಣೆಗಳಲ್ಲಿ ದಾಖಲಾಗಿವೆ. ಕೆಲ ತಿಂಗಳ ಹಿಂದೆ ಗೋವಿಂದಪುರ ಠಾಣೆ ಪೊಲೀಸರಿಂದ ಬಂಧಿತನಾಗಿ ಜೈಲು ಸೇರಿದ್ದ. ಜಾಮೀನು ಪಡೆದು ಹೊರಬಂದ ಬಳಿಕವೂ ಪುನಃ ತನ್ನ ಕಸುಬು ಮುಂದುವರಿಸಿದ್ದ. ಮೈಸೂರಿನ ಹುಣಸೂರು ಮೂಲದ ಸಲೀಂ, ಬಾಂಬೆಯಲ್ಲಿ (ಮುಂಬೈ) ಪತ್ನಿ ಜತೆ ವಾಸಿಸುತ್ತಿದ್ದ. ಹೀಗಾಗಿ, ಬಾಂಬೆ ಸಲೀಂ ಎಂಬ ಅಡ್ಡ ಹೆಸರು ಬಂದಿದೆ. ಚಿನ್ನಾಭರಣ ಕಳ್ಳತನ ಮಾಡುವ ಸಲೀಂ, ಮುಂಬೈಗೆ ಒಯ್ದು ಮಾರಾಟ ಮಾಡಿ ಬರುತ್ತಿದ್ದ. ಕಳ್ಳತನದ ಹಣದಲ್ಲಿ ಐಷಾರಾಮಿ ಜೀವನ ನಡೆಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
            
            
            The police had arrested Saleem a.k.a Bombay Saleem and while bringing him to the city, the constable had shared a hotel room with the thief. Sonar also let Saleem wear his uniform and make a video call to his wife. Photos of Saleem wearing the police uniform were found on his phone after which an inquiry was launched.
    
            
             03-11-25 05:17 pm
                        
            
                  
                Bangalore Correspondent    
            
                    
ಕಣ್ಣೂರಿನ ಪಯ್ಯಂಬಲಂ ಬೀಚ್ ನಲ್ಲಿ ಸಮುದ್ರಕ್ಕಿಳಿದ ಬೆ...
02-11-25 11:09 pm
ಆರೆಸ್ಸೆಸ್ನವರಷ್ಟು ಹೇಡಿಗಳು ಯಾರೂ ಇಲ್ಲ, ಅವರ್ಯಾಕೆ...
01-11-25 09:33 pm
ನಮ್ಮ ಕ್ಷೇತ್ರದಲ್ಲಿ ಪಥಸಂಚಲನ ಮಾಡೋದನ್ನು ಆರೆಸ್ಸೆಸ್...
31-10-25 08:10 pm
'ನವೆಂಬರ್ ಕ್ರಾಂತಿ' ಮುನ್ಸೂಚನೆ ನೀಡಿದ್ದ ರಾಜಣ್ಣ ಅಖ...
31-10-25 06:02 pm
    
            
             03-11-25 01:13 pm
                        
            
                  
                HK News Desk    
            
                    
ಜೋಧಪುರ ; ಭೀಕರ ರಸ್ತೆ ಅಪಘಾತದಲ್ಲಿ 18 ಜನರು ಸಾವು,...
02-11-25 11:12 pm
ಕೇರಳದಲ್ಲಿ ಮುಸ್ಲಿಮ್ ಮತ್ತು ಕ್ರಿಶ್ಚಿಯನ್ನರಿಗೆ ಒಬಿ...
02-11-25 05:13 pm
ಜೆಡ್ಡಾದಿಂದ ಹೈದರಾಬಾದ್ ಬರುತ್ತಿದ್ದ ವಿಮಾನದಲ್ಲಿ ಬ...
01-11-25 07:27 pm
ಭಾರತದಲ್ಲಿ ಸ್ವತಂತ್ರವಾಗಿದ್ದೇನೆ, ಮತ್ತೆ ಬಾಂಗ್ಲಾದೇ...
30-10-25 03:20 pm
    
            
             03-11-25 10:47 pm
                        
            
                  
                Mangalore Correspondent    
            
                    
ಡಿ.27 ರಂದು 9ನೇ ವರ್ಷದ ಮಂಗಳೂರು ಕಂಬಳ ; ಈ ಬಾರಿ ’ನ...
03-11-25 05:20 pm
ಸಸಿಹಿತ್ಲು ಬೀಚ್ ನಲ್ಲಿ ನೀರಾಟಕ್ಕಿಳಿದು ಬೆಂಗಳೂರಿನ...
03-11-25 12:37 pm
ಧರ್ಮಸ್ಥಳ ಪ್ರಕರಣ ; ಗುರುತು ಪತ್ತೆಯಾಗದ 38 ಪ್ರಕರಣಗ...
02-11-25 10:23 pm
ಮಂಗಳೂರು ಅಂತಾರಾಷ್ಟ್ರೀಯ ಬ್ಯಾಡ್ಮಿಂಟನ್ ಕೂಟಕ್ಕೆ ತೆ...
02-11-25 06:57 pm
    
            
             03-11-25 12:33 pm
                        
            
                  
                Mangalore Correspondent    
            
                    
ಶಬರಿಮಲೆ ಅಯ್ಯಪ್ಪ ದೇವಸ್ಥಾನದಲ್ಲಿ ಚಿನ್ನ ಕಳವು ಪ್ರಕ...
01-11-25 07:25 pm
Rowdy Topi Naufal Murder, Mangalore: ಮಂಗಳೂರಿನ...
01-11-25 03:31 pm
ವೃದ್ಧ ಮಹಿಳೆಗೆ ಡಿಜಿಟಲ್ ಅರೆಸ್ಟ್ ಬಲೆ ; ಐದು ಗಂಟೆಯ...
01-11-25 01:31 pm
ಸುಹಾಸ್ ಶೆಟ್ಟಿ ಕೊಲೆ ಪ್ರಕರಣ ; 11 ಆರೋಪಿಗಳ ವಿರುದ್...
31-10-25 10:57 pm