ಬ್ರೇಕಿಂಗ್ ನ್ಯೂಸ್
05-08-25 10:39 pm Bangalore Correspondent ಕ್ರೈಂ
ಬೆಂಗಳೂರು, ಆಗಸ್ಟ್ 05 : ಸೈಬರ್ ವಂಚನೆಗೊಳಗಾದ ಉದ್ಯಮಿಗೆ ಕಾನೂನು ಸೇವೆ ಒದಗಿಸುವುದಾಗಿ ನಂಬಿಸಿ ನಗರದಲ್ಲಿ ಕಾಲ್ ಸೆಂಟರ್ ತೆರೆದು ಲಕ್ಷಾಂತರ ರೂಪಾಯಿ ವಂಚಿಸಿದ್ದ ಆರೋಪದ ಮೇಲೆ ಬೆಂಗಳೂರು ನಗರ ಸೈಬರ್ ಕ್ರೈಂ ಪೊಲೀಸರು ವ್ಯಕ್ತಿಯೊಬ್ಬನನ್ನು ಬಂಧಿಸಿದ್ದಾರೆ.
ಹೆಚ್ ಬಿಆರ್ ಲೇಔಟ್ ನಿವಾಸಿ ತೌಫೈಲ್ ಮೊಹಮ್ಮದ್ (38) ಬಂಧಿತ ಆರೋಪಿ. 12.5 ಲಕ್ಷ ಹಣ ಕಳೆದುಕೊಂಡ ಮಧ್ಯಪ್ರದೇಶ ಮೂಲದ ಉದ್ಯಮಿ ಸೂರ್ಯನಾರಾಯಣ್ ಸಿನ್ಹಾ ಎಂಬುವರು ನೀಡಿದ ದೂರು ಆಧರಿಸಿ ಸಿಸಿಬಿ ಪೊಲೀಸರು ಆರೋಪಿಯನ್ನ ಬಂಧಿಸಿದ್ದಾರೆ.
ಈತ ನೀಡಿದ ಮಾಹಿತಿ ಆಧರಿಸಿ ಕಸ್ತೂರಿನಗರದಲ್ಲಿರುವ ಇಂಡಿಯಾ ಲೀಗಲ್ ಹೆಸರಿನಲ್ಲಿ ನಡೆಸುತ್ತಿದ್ದ ಕಾಲ್ ಸೆಂಟರ್ನಲ್ಲಿದ್ದ 10 ಕಂಪ್ಯೂಟರ್ ಹಾರ್ಡ್ ಡಿಸ್ಕ್ ಗಳು, 7 ನಕಲಿ ಕಂಪನಿ ಸೀಲ್ಗಳು, ಬಾಡಿಗೆ ಒಪ್ಪಂದ ಪತ್ರಗಳು, 11 ಸಿಮ್ ಕಾರ್ಡ್ ಗಳು ಹಾಗೂ ಎಸ್ಐಪಿ ಟ್ರಂಕ್ ವ್ಯವಸ್ಥೆಯ ಡೇಟಾ ಸೇರಿದಂತೆ ಇನ್ನಿತರ ಉಪಕರಗಳನ್ನ ವಶಕ್ಕೆ ಪಡೆದುಕೊಳ್ಳಲಾಗಿದೆ. ಸದ್ಯ ಆರೋಪಿಯನ್ನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಉದ್ಯಮಿ ಸೂರ್ಯನಾರಾಯಣ್ ಅವರು ಮಧ್ಯಪ್ರದೇಶದಲ್ಲಿ ಸೋಲಾರ್ ಪ್ಲಾಂಟ್ ಅಳವಡಿಸುವುದಾಗಿ ನಂಬಿಸಿ 1.5 ಕೋಟಿ ವಂಚನೆಗೆ ಒಳಗಾಗಿದ್ದರು. ಈ ಹಣವನ್ನ ಮರಳಿ ಪಡೆಯಲು ಆನ್ ಲೈನ್ ನಲ್ಲಿ ಶೋಧ ನಡೆಸುವಾಗ ಆರೋಪಿ ಒಡೆತನದ ಕ್ವಿಕ್ ಮೊಟೊ ಲೀಗಲ್ ಸರ್ವಿಸ್ ವೆಬ್ ಸೈಟ್ ಕಂಡು ಸಂಪರ್ಕಿಸಿದ್ದಾರೆ. ವಂಚನೆ ವಿವರ ತಿಳಿದುಕೊಂಡು ಆರೋಪಿಯು ಕಾನೂನುಸೇವೆ ಒದಗಿಸುವುದಾಗಿ ದೂರುದಾರರಿಂದ 12.5 ಲಕ್ಷ ಹಣ ಶುಲ್ಕ ವರ್ಗಾಯಿಸಿಕೊಂಡು ವಂಚಿಸಿದ್ದ ಎಂದು ಪೊಲೀಸರು ಹೇಳಿದ್ದಾರೆ.
ಕಾನೂನು ಸೇವೆ ಸೋಗಿನಲ್ಲಿ 12.5 ಲಕ್ಷ ಹಣ ವಂಚಿಸಿದ ಕಂಪನಿ ಬಗ್ಗೆ ಶೋಧಿಸಿದಾಗ ಬೆಂಗಳೂರಿನ ರಾಮೂರ್ತಿ ನಗರದಲ್ಲಿರುವುದಾಗಿ ಹೇಳಿ ಮಧ್ಯಪ್ರದೇಶ ಪೊಲೀಸರು ದೂರುದಾರರಿಗೆ ತಿಳಿಸಿ ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ಪ್ರಕರಣ ವರ್ಗಾಯಿಸಿದ್ದರು.
ಈ ಪ್ರಕರಣದ ತನಿಖೆ ಕೈಗೊಂಡ ಸೈಬರ್ ಕ್ರೈಂ ಪೊಲೀಸರು ವೆಬ್ ಸೈಟ್ ನಲ್ಲಿನ ವಿಳಾಸ ಅಧರಿಸಿ ಕಸ್ತೂರಿನಗರಕ್ಕೆ ತೆರಳಿ ಪರಿಶೀಲಿಸಿದಾಗ ಕ್ವಿಕ್ ಮೊಟೊ ಲೀಗಲ್ ಸರ್ವಿಸ್ ಕಂಪನಿಯೇ ಇಲ್ಲದಿರುವುದು ತಿಳಿದು ಬಂದಿತ್ತು. ಇದರ ಬದಲಾಗಿ ಇಂಡಿಯಾ ಲೀಗಲ್ ಹೆಸರಿನಲ್ಲಿ ಕಾಲ್ ಸೆಂಟರ್ ನಡೆಸುತ್ತಿರುವುದು ಪೊಲೀಸರಿಗೆ ಗೊತ್ತಾಯ್ತು.
ಆರೋಪಿ ವಂಚಿಸುವುದನ್ನ ಕಾಯಕ ಮಾಡಿಕೊಂಡಿದ್ದ. ಕಳೆದ ಒಂದು ವರ್ಷದಿಂದ ನಗರದಲ್ಲಿ ಕಾಲ್ ಸೆಂಟರ್ ನಡೆಸುತ್ತಿದ್ದ. ಇದಕ್ಕಾಗಿ 12 ಮಂದಿ ಟೆಲಿಕಾಲರ್ ಗಳನ್ನ ನೇಮಿಸಿಕೊಂಡಿದ್ದ. ಕಾನೂನು ಸೇವೆ ಸೋಗಿನಲ್ಲಿ ಸಾರ್ವಜನಿಕರಿಗೆ ಹಣ ವಂಚಿಸುತ್ತಿದ್ದ. ಹಣ ವಂಚಿಸಿದ ಬಳಿಕ ಎಸ್ಐಪಿ ತಂತ್ರಜ್ಞಾನದಿಂದ ಮೊಬೈಲ್ ನಂಬರ್ ಗಳನ್ನ ಬ್ಲಾಕ್ ಮಾಡುತ್ತಿದ್ದ. ಆರೋಪಿ ಬಂಧಿಸಿ ಹೆಚ್ಚಿನ ವಿಚಾರಣೆಗೊಳಪಡಿಸಿದಾಗ ಈತನ ಸಹೋದರ ದುಬೈನಲ್ಲಿದ್ದು, ಈತನ ಸೂಚನೆ ಮೇರೆಗೆ ಕಂಪನಿ ನಡೆಸುತ್ತಿದ್ದೆ ಎಂದು ಹೇಳಿಕೆ ನೀಡಿದ್ದಾನೆ.
ಈತನನ್ನ ಈ ಹಿಂದೆ ವಂಚನೆ ಪ್ರಕರಣದಲ್ಲಿ ಪಾಂಡಿಚೇರಿ ಪೊಲೀಸರು ಬಂಧಿಸಿದ್ದರು. ಆರೋಪಿ ವಿರುದ್ಧ ರಾಷ್ಟ್ರೀಯ ಸೈಬರ್ ಕ್ರೈಂ ಪೋರ್ಟಲ್ ನಲ್ಲಿ 29ಕ್ಕೂ ಹೆಚ್ಚು ಅಧಿಕ ದೂರುಗಳು ದಾಖಲಾಗಿದ್ದು ಕೋಟ್ಯಂತರ ರೂಪಾಯಿ ವಂಚಿಸಿರುವುದು ದೃಢಪಟ್ಟಿದೆ ಎಂದು ಪೊಲೀಸರು ತಿಳಿಸಿದ್ದಾರೆ.
A businessman who earlier lost ₹1.5 crore in a cyber fraud has now fallen victim to a second scam, this time by a fraudster posing as a legal service provider. The accused has been arrested by the Bengaluru Cyber Crime Police.
27-06-26 04:21 pm
HK News Staffer
ಆರ್ಎಸ್ಎಸ್ ಗಲಿಬಿಲಿಗೊಂಡರೆ ಬಿಜೆಪಿ ಬುಸುಗುಡುತ್ತದ...
26-06-26 08:30 pm
ಬಿಡದಿಯಲ್ಲಿ ರೈತರ ವಿರುದ್ಧವಾಗಿ ಟೌನ್ಶಿಪ್ ಕಟ್ಟುವ...
26-06-26 05:10 pm
ಇಷ್ಟೆಲ್ಲಾ ಅಲ್ಲೋಲ ಕಲ್ಲೋಲಕ್ಕೆ ಶೋಭಾ ಕರಂದ್ಲಾಜೆ ನೇ...
25-06-26 09:10 pm
ಗೃಹಲಕ್ಷ್ಮಿ ಯೋಜನೆಯಲ್ಲಿ ಭಾರೀ ಕಳ್ಳಾಟ ! 19 ಸಾವಿರ...
24-06-26 05:55 pm
25-06-26 12:13 pm
HK News Staffer
ಕೂಲ್ ಸಿಟಿ ಯುರೋಪಿನಲ್ಲೀಗ ಬಿಸಿಲ ಹೊಡೆತ ; ಫ್ರಾನ್ಸ್...
24-06-26 01:51 pm
ಮಾಹಿತಿ ಹಕ್ಕು ನಿಯಮಗಳಿಗೆ ಮಹಾರಾಷ್ಟ್ರ ಸರ್ಕಾರ ತಿದ್...
23-06-26 10:47 pm
ಟಿಎಂಸಿಯಲ್ಲಿ ರಾಜಕೀಯ ಭೂಕಂಪ ; ಮಮತಾ ಬ್ಯಾನರ್ಜಿ ಅಧ...
23-06-26 12:21 pm
ಕತಾರ್ ಕೈಗಾರಿಕಾ ಪ್ರದೇಶದಲ್ಲಿ ಭಾರೀ ಸ್ಫೋಟ ; 54 ಜನ...
22-06-26 12:55 pm
27-06-26 02:44 pm
HK News Staffer
Rss ಸಂಘಟನೆಯನ್ನು ರಿಜಿಸ್ಟರ್ ಮಾಡಿದ್ರೆ ಒಳ್ಳೇದು ;...
26-06-26 09:42 pm
ಸಾಂಪ್ರದಾಯಿಕ ಕನ್ನಡ ಎಂಎ ಪದವಿಗೆ ಆಧುನಿಕ ಟಚ್; ಸಂತ...
26-06-26 08:33 pm
ಡಿಕೆಶಿ ಜೊತೆ ಯಾವುದೇ ವ್ಯಾವಹಾರಿಕ ಸಂಬಂಧವಿಲ್ಲ, ಅಪಪ...
26-06-26 02:14 pm
ಮಂಗಳೂರು, ಮೈಸೂರು ಸೇರಿ ರಾಜ್ಯದ 10 ನಗರಗಳಿಗೆ ಇಲೆಕ್...
25-06-26 10:56 pm
27-06-26 04:23 pm
HK News Staffer
ಬೆಂಗಳೂರಿನಲ್ಲಿ ಅಕ್ರಮ ಹಣದ ಭಾರಿ ಬೇಟೆ ; ಕುರುಬರಹಳ್...
27-06-26 04:19 pm
ಮಂತ್ರಾಲಯ ಯಾತ್ರೆ ಮಧ್ಯೆ ಯಮನಂತೆ ನುಗ್ಗಿದ ಲಾರಿ! ಡಿ...
27-06-26 11:46 am
Mangalore, Police, criminial escapes: ಪಾಂಡೇಶ್...
27-06-26 10:54 am
Mumbai Train Murder, Mangalore: ಮುಂಬೈ ಲೋಕಲ್ ಟ...
26-06-26 07:35 pm