ದೇಲಂತಬೆಟ್ಟು ದೇವಸ್ಥಾನದ ಕಾಣಿಕೆ ಡಬ್ಬಿ ಕಳವು ; ಮೂವರು ಯುವಕರ ಬಂಧನ 

03-08-25 10:11 pm       Mangalore Correspondent   ಕ್ರೈಂ

ವಿಟ್ಲ ಠಾಣೆ ವ್ಯಾಪ್ತಿಯ ಕನ್ಯಾನ ಗ್ರಾಮದ ದೇಲಂತಬೆಟ್ಟು ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಕಾಣಿಕೆ ಡಬ್ಬಿಗಳನ್ನು ಕಳವುಗೈದ ಪ್ರಕರಣಕ್ಕೆ ಸಂಬಂಧಿಸಿ ಮೂವರು ಆರೋಪಿಗಳನ್ನು ವಿಟ್ಲ ಪೊಲೀಸರು ಬಂಧಿಸಿದ್ದಾರೆ. 

ಬಂಟ್ವಾಳ, ಆ.3 : ವಿಟ್ಲ ಠಾಣೆ ವ್ಯಾಪ್ತಿಯ ಕನ್ಯಾನ ಗ್ರಾಮದ ದೇಲಂತಬೆಟ್ಟು ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಕಾಣಿಕೆ ಡಬ್ಬಿಗಳನ್ನು ಕಳವುಗೈದ ಪ್ರಕರಣಕ್ಕೆ ಸಂಬಂಧಿಸಿ ಮೂವರು ಆರೋಪಿಗಳನ್ನು ವಿಟ್ಲ ಪೊಲೀಸರು ಬಂಧಿಸಿದ್ದಾರೆ. 

ಕನ್ಯಾನ ಗ್ರಾಮದ ದೇಲಂತಬೆಟ್ಟು ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಕಾಣಿಕೆ ಹುಂಡಿಯನ್ನು ಸ್ಥಳೀಯ ಶಾಲಾ ರಸ್ತೆಯ ಪಕ್ಕದಲ್ಲಿ  ಇರಿಸಲಾಗಿತ್ತು. ಅದೇ ರೀತಿ ಚರ್ಚ್ ಕೆಳಭಾಗದಲ್ಲಿನ ರಸ್ತೆ ಬದಿಯಲ್ಲೂ ಹಲವು ವರ್ಷಗಳಿಂದ ಇನ್ನೊಂದು ಕಾಣಿಕೆ ಹುಂಡಿ ಇಡಲಾಗಿತ್ತು. ಇವೆರಡನ್ನೂ ಮುರಿದು ಹಣ ಕಳ್ಳತನ ಮಾಡಲಾಗಿತ್ತು. ಜುಲೈ 26ರಂದು ದೇವಸ್ಥಾನದ ಅಧ್ಯಕ್ಷ ಡಿ.ನಾರಾಯಣ ಭಟ್ ಎಂಬವರು ಕಳವಾಗಿದ್ದನ್ನು ಗಮನಿಸಿ ವಿಟ್ಲ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. 

ದೂರಿಗೆ ಸಂಬಂಧಿಸಿದಂತೆ ತನಿಖೆ ನಡೆಸಿದ ವಿಟ್ಲ ಪೊಲೀಸರು ಆರೋಪಿಗಳಾದ ವಿಟ್ಲ ಕಸಬಾ ಗ್ರಾಮದ ಉಕ್ಕುಡ ನಿವಾಸಿ ತ್ವಾಹಿದ್(19), ಉಮ್ಮರ್ ಫಾರೂಕ್ (18) ಮತ್ತು ಮೊಹಮ್ಮದ್ ನಬೀಲ್(18) ಎಂಬವರನ್ನು ಸೊತ್ತುಗಳ ಸಹಿತ ಬಂಧಿಸಿದ್ದಾರೆ. ಒಂದು ಡಬ್ಬಿಯಿಂದ 12 ಸಾವಿರ ರೂ. ಮತ್ತೊಂದು ಕಾಣಿಕೆ ಹುಂಡಿಯಿಂದ 15 ಸಾವಿರ ರೂ.‌ ಕಳವು ಮಾಡಿರುವುದು ಕಂಡುಬಂದಿತ್ತು.

In a case of temple theft, police from Vittla station have arrested three youths in connection with the theft of donation boxes (hundi) from the Delanthabettu Shri Vishnumurthy Temple located in Kanyana village under the Vittla police limits.