ಬ್ರೇಕಿಂಗ್ ನ್ಯೂಸ್
26-07-25 09:35 pm HK News Desk ಕ್ರೈಂ
ಬೆಳಗಾವಿ, ಜುಲೈ 26 : ಸೈಬರ್ ವಂಚಕರ ಜಾಲದ ಖದೀಮರಿಗಾಗಿ ನಕಲಿ ದಾಖಲೆಗಳನ್ನು ಮುಂದಿಟ್ಟು ಬ್ಯಾಂಕ್ ಖಾತೆಗಳನ್ನು ಮಾಡಿಕೊಡುತ್ತಿದ್ದ ಮೂವರು ಆರೋಪಿಗಳನ್ನು ಚೆನ್ನೈ ಪೊಲೀಸರು ಬೆಳಗಾವಿಯಲ್ಲಿ ಬಂಧಿಸಿದ್ದಾರೆ.
ಬೆಳಗಾವಿ ನಗರದ ಆರ್ಪಿಡಿ ಕ್ರಾಸ್ನ ಬಿಬಿಎ ಪದವೀಧರ ಸರ್ವೇಶ ಕಿಣಿ, ಕುವೆಂಪು ನಗರದ ಅನಿಲ್ ಕೊಲ್ಲಾಪುರ, ಗಣೇಶಪುರದ ರೋಹನ್ ಕಾಂಬಳೆ ಬಂಧಿತರು. ಕರ್ನಾಟಕದಲ್ಲಿ ಮೂರು ಸೇರಿ ಈ ಮೂವರ ವಿರುದ್ಧ ದೇಶದ ವಿವಿಧ ಠಾಣೆಗಳಲ್ಲಿ 27 ಕೇಸ್ ದಾಖಲಾಗಿದೆ. ಕಮಿಷನ್ ಆಸೆ ಹುಟ್ಟಿಸಿ ಬ್ಯಾಂಕ್ ನಲ್ಲಿ ಕರೆಂಟ್ ಅಕೌಂಟ್ ತೆರೆದು ಕೊಡುವಂತೆ ಇಬ್ಬರಿಗೂ ಸರ್ವೇಶ್ ಪ್ರಚೋದನೆ ಮಾಡುತ್ತಿದ್ದ.



ಕಂಪನಿಗಳ ಹೆಸರಿನಲ್ಲಿ ಬ್ಯಾಂಕ್ಗೆ ನಕಲಿ ದಾಖಲೆ ಕೊಟ್ಟು ಕರೆಂಟ್ ಅಕೌಂಟ್ ತೆರೆಯುತ್ತಿದ್ದ ರೋಹನ್ ಮತ್ತು ಅನಿಲ್ ಅವುಗಳನ್ನು ಸರ್ವೇಶ್ ಮೂಲಕ ಸೈಬರ್ ವಂಚಕರಿಗೆ ಪೂರೈಸುತ್ತಿದ್ದರು. ಈ ಬ್ಯಾಂಕ್ ಖಾತೆಗಳ ಪಾಸ್ ಬುಕ್, ಅಕೌಂಟ್ ನಂಬರ್, ಎಟಿಎಂ ಕಾರ್ಡ್ ಗಳನ್ನು ಸರ್ವೇಶ್ ಗೆ ನೀಡಿದ್ದರು. ಇವರು ಮಾಡಿಕೊಡುತ್ತಿದ್ದ ಬ್ಯಾಂಕ್ ಅಕೌಂಟ್ ಗಳನ್ನು ಸರ್ವೇಶ್ ಸೈಬರ್ ವಂಚಕರಿಗೆ ನೀಡಿದ್ದ.
ಸೈಬರ್ ವಂಚಕರು ಅಮಾಯಕರ ಖಾತೆಗಳನ್ನು ಹ್ಯಾಕ್ ಮಾಡಿ, ಅದರಲ್ಲಿರುವ ಹಣವನ್ನು ಇವರು ಕೊಡುತ್ತಿದ್ದ ಅಕೌಂಟ್ಗೆ ವರ್ಗಾಯಿಸಿಕೊಳ್ತಿದ್ದರು. ಬಳಿಕ ಈ ಹಣವನ್ನು ಬೇರೆ ಬೇರೆ ಅಕೌಂಟ್ಗೆ ವರ್ಗಾವಣೆ ಮಾಡುತ್ತಿದ್ದುದು, ಹಣವನ್ನು ವಿತ್ ಡ್ರಾ ಮಾಡುತ್ತಿದ್ದುದು ತನಿಖೆಯಲ್ಲಿ ಪತ್ತೆಯಾಗಿದೆ. ಇವರ ಖಾತೆಯಲ್ಲಿ ಒಂದು ಕೋಟಿ ಹಣ ವರ್ಗಾವಣೆಯಾದಲ್ಲಿ 60 ಸಾವಿರ ಕಮಿಷನ್ ನೀಡುವುದಾಗಿ ಅನಿಲ್ ಮತ್ತು ರೋಹನ್ಗೆ ಆಮಿಷ ಒಡ್ಡಲಾಗಿತ್ತು. 10 ಕೋಟಿಗೂ ಅಧಿಕ ಹಣ ಬೆಳಗಾವಿಯಲ್ಲಿದ್ದ ವಂಚಕರ ಖಾತೆಗೆ ಬಂದಿರುವ ಶಂಕೆಯಿದ್ದು ಮೂವರನ್ನೂ ಪೊಲೀಸರು ಬಂಧಿಸಿ ಚೆನ್ನೈಗೆ ಕರೆದೊಯ್ದಿದ್ದಾರೆ.
Three individuals have been arrested by Chennai police in Belagavi for providing fake bank accounts to cyber fraudsters. The accused allegedly facilitated fraudulent transactions running into crores by supplying fake documents to open bank accounts on behalf of cybercriminals.
24-03-26 02:55 pm
HK News Staffer
ಬಿಜೆಪಿ ಜೊತೆಗಿನ ಮೈತ್ರಿ ತಳ್ಳಿಹಾಕಿದ ನಟ ವಿಜಯ್ ; ಜ...
23-03-26 12:48 pm
ಇನ್ನೆರಡು ದಿನಗಳಲ್ಲಿ ಕಮರ್ಷಿಯಲ್ ಗ್ಯಾಸ್ ಪೂರೈಕೆ ಶೇ...
22-03-26 11:44 am
ದಾವಣಗೆರೆಯಲ್ಲಿ ರಂಜಾನ್ ಪ್ರಾರ್ಥನೆ ವೇಳೆ ಹೆಜ್ಜೇನು...
21-03-26 08:29 pm
ಡಿಜಿಪಿ ರಾಮಚಂದ್ರ ರಾವ್ ಅಶ್ಲೀಲ ವಿಡಿಯೋ ಪ್ರಕರಣ ; ಎ...
21-03-26 08:25 pm
24-03-26 12:10 pm
HK News Staffer
ಇರಾನ್ - ಅಮೆರಿಕ ಸಂಘರ್ಷ ; ದಿಢೀರ್ ಐದು ದಿನಗಳ ಕದನ...
23-03-26 09:46 pm
ಯುದ್ಧ ಪೀಡಿತ ಇರಾನ್ಗೆ ಕಾಶ್ಮೀರದಲ್ಲಿ ದೇಣಿಗೆ ಸಂಗ್...
23-03-26 11:33 am
ಅಮೆರಿಕ ಪಾಕಿಸ್ತಾನದ ಮೇಲೆ ದಾಳಿ ಮಾಡಿದರೆ ನಾವು ಮುಂಬ...
22-03-26 08:37 pm
ಮುಯ್ಯಿಗೆ ಮುಯ್ಯಿ ; ಇಸ್ರೇಲ್ ಅಣು ಸ್ಥಾವರಕ್ಕೆ ಇರಾನ...
22-03-26 03:14 pm
24-03-26 11:55 am
HK News Staffer
ಹರ್ಮುಜ್ ಜಲಸಂಧಿ ಬಂದ್ ; ಭಾರತದ 22 ಹಡಗು ಲಂಗರು, 20...
24-03-26 09:24 am
ಕಾಸರಗೋಡು ಅಖಾಡ ರೆಡಿ ; ಎಲ್ ಡಿಎಫ್ ನಿಂದ ಶಾನವಾಸ್ ಪ...
23-03-26 05:36 pm
ಸೌಜನ್ಯಾ ಕೊಲೆ ಪ್ರಕರಣದ ಮರು ತನಿಖೆ ; ರಾಜ್ಯ ಸರಕಾರ,...
23-03-26 05:13 pm
Sandesh PG, CID Case: ಮೂಡುಬಿದಿರೆ ಇನ್ಸ್ಪೆಕ್ಟರ...
23-03-26 02:24 pm
24-03-26 02:04 pm
HK News Staffer
ಸಾಮಾಜಿಕ ಜಾಲತಾಣದಲ್ಲಿ ಕೋಮುದ್ವೇಷ ಪ್ರಚೋದಿಸುವ ವಿಡಿ...
23-03-26 09:44 pm
ಪಂಪ್ವೆಲ್ - ಎಕ್ಕೂರಿನಲ್ಲಿ ಆಟೋದಲ್ಲಿ ಡ್ರಗ್ಸ್ ಮಾರಾ...
23-03-26 03:08 pm
ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇಯಲ್ಲಿ ಭೀಕರ ಅಪಘ...
23-03-26 11:17 am
ಬೆಂಗಳೂರಲ್ಲಿ ಅಪಾಯಕಾರಿ ರೀತಿಯಲ್ಲಿ ಲ್ಯಾಂಬೋರ್ಗಿನಿ...
22-03-26 09:44 pm