ಬ್ರೇಕಿಂಗ್ ನ್ಯೂಸ್
            
                        07-07-25 10:18 pm Mangalore Correspondent ಕ್ರೈಂ
            ಮಂಗಳೂರು, ಜುಲೈ 7 : ದುಬೈನ ಎನ್ನೆಂಸಿ ಹೆಲ್ತ್ ಸೆಂಟರಿನಲ್ಲಿ ಉದ್ಯೋಗ ಇದೆಯೆಂದು ಹೇಳಿ ಮಹಿಳೆಯೊಬ್ಬಳು ಮಾಡಿದ ಫೋನ್ ಕರೆಗೆ ಮಂಗಳೂರಿನ ಯುವ ವೈದ್ಯ ಬೌಲ್ಡ್ ಆಗಿದ್ದು, ಕುಳಿತಲ್ಲೇ 4.20 ಲಕ್ಷ ರೂಪಾಯಿ ಕಳಕೊಂಡ ಬಗ್ಗೆ ಮಂಗಳೂರಿನ ಕಂಕನಾಡಿ ನಗರ ಠಾಣೆಯಲ್ಲಿ ದಾಖಲಾಗಿದೆ.
ಜೂನ್ 6ರಂದು ಸಂಗೀತಾ ಎಂದು ತನ್ನನ್ನು ಪರಿಚಯಿಸಿದ್ದ ಮಹಿಳೆ ಮಂಗಳೂರಿನ ವೈದ್ಯರೊಬ್ಬರಿಗೆ ಕರೆ ಮಾಡಿದ್ದಾಳೆ. ತಾನು ದುಬೈನ ಎನ್ ಎಂಸಿ ಹೆಲ್ತ್ ಸೆಂಟರಿನಲ್ಲಿದ್ದು ಇಲ್ಲಿ ಡಾಕ್ಟರ್ ಹುದ್ದೆಯೊಂದು ಖಾಲಿಯಿದ್ದು, ನೀವು ಎಪ್ಲೈ ಮಾಡಬಹುದು ಎಂದು ಹೇಳಿ ಆಫರ್ ಮಾಡಿದ್ದಳು. ಅಲ್ಲದೆ, ಹುದ್ದೆ ಖಾಲಿಯಿರುವ ಬಗ್ಗೆ ಮೈಲ್ ಸಂದೇಶ ಕಳುಹಿಸುವುದಾಗಿಯೂ ಹೇಳಿದ್ದಳು.
ಆನಂತರ, [email protected] ಹೆಸರಿನಲ್ಲಿ ವೈದ್ಯರಿಗೆ ಮೈಲ್ ಬಂದಿದ್ದು, ಹುದ್ದೆಯ ವಿವರ, ಸ್ಯಾಲರಿ ಇತ್ಯಾದಿ ಮಾಹಿತಿಯನ್ನೂ ಕೊಡಲಾಗಿತ್ತು. ಇದರ ಬೆನ್ನಲ್ಲೇ ವಿನಯ್ ಸಿಂಗ್ ಎಂಬಾತ ವೈದ್ಯರನ್ನು ಸಂಪರ್ಕಿಸಿದ್ದು, ಎನ್ನೆಂಸಿ ಹೆಲ್ತ್ ಸೆಂಟರಿನಲ್ಲಿ ಉದ್ಯೋಗ ಖಾತ್ರಿ ಪಡಿಸುವುದಕ್ಕೆ ರಿಜಿಸ್ಟ್ರೇಶನ್ ಮಾಡುವಂತೆ ಹೇಳಿ ಅದಕ್ಕಾಗಿ 5499 ರೂ. ಕಳಿಸುವಂತೆ ತಿಳಿಸಿದ್ದ. ಇದನ್ನು ನಂಬಿದ ಮಂಗಳೂರಿನ ವೈದ್ಯ ಜೂನ್ 13ರಂದು ಹಣವನ್ನು ರವಾನಿಸಿದ್ದಾರೆ. ಆಮೇಲೆ ವೆರಿಫಿಕೇಶನ್, ಪ್ರೊಸೆಸ್ಸಿಂಗ್, ಲೈಸನ್ಸಿಂಗ್, ಎನ್ಓಸಿ ಇತ್ಯಾದಿ ಹೆಸರಲ್ಲಿ ಹಣವನ್ನು ಕೇಳಿದ್ದು, ವೈದ್ಯರು ದುಬೈ ಉದ್ಯೋಗ ಸಿಕ್ಕೇಬಿಡ್ತು ಎಂದುಕೊಂಡು ಹಣ ಕಳಿಸಿದ್ದರು. ಒಟ್ಟು 4,20,062 ರೂಪಾಯಿ ಹಣವನ್ನು ಅಪರಿಚಿತ ಹೇಳಿದ ಖಾತೆಗಳಿಗೆ ವರ್ಗಾಯಿಸಿದ್ದರು.
ಇಷ್ಟಾದರೂ, ಹಣದ ಬೇಡಿಕೆ ನಿಂತಿರಲಿಲ್ಲ. ಮತ್ತೆ 2.62 ಲಕ್ಷ ರೂಪಾಯಿ ಹಣವನ್ನು ಕಳಿಸುವಂತೆ ವೈದ್ಯರಿಗೆ ಸೂಚಿಸಲಾಗಿತ್ತು. ಇದರಿಂದ ಸಂಶಯಕ್ಕೀಡಾದ ವೈದ್ಯ ತನ್ನ ಗೆಳೆಯರಲ್ಲಿ ಹೇಳಿಕೊಂಡಿದ್ದು, ಎನ್ನೆಂಸಿ ಹೆಲ್ತ್ ಸೆಂಟರಿನಲ್ಲಿ ಜಾಬ್ ಆಫರ್ ಇರೋದು ಹೌದಾ ಎಂದು ಚೆಕ್ ಮಾಡಲು ಮುಂದಾಗಿದ್ದರು. ಚೆಕ್ ಮಾಡಿದಾಗ, ಎನ್ನೆಂಸಿ ಸಂಸ್ಥೆಯಲ್ಲಿ ಅಂತಹ ಹುದ್ದೆಯೇ ಇಲ್ಲ ಎನ್ನುವುದು ಗೊತ್ತಾಗಿದೆ. ತಾನು ಮೋಸ ಹೋದ ಅರಿವಾಗುತ್ತಿದ್ದಂತೆ ವೈದ್ಯ ಮಂಗಳೂರಿನ ಕಂಕನಾಡಿ ನಗರ ಠಾಣೆಯಲ್ಲಿ ದೂರು ನೀಡಿದ್ದು, ಸೈಬರ್ ವಂಚಕರು ಹೀಗೂ ಮೋಸ ಮಾಡುತ್ತಾರಲ್ಲಾ ಎಂದು ಹುಬ್ಬೇರಿಸಿದ್ದಾರೆ.
            
            
            In a shocking case of cyber fraud, a young doctor from Mangaluru was duped of ₹4.20 lakh after falling for a fake job offer allegedly from NMC Healthcare in Dubai. The incident has been reported at the Kankanady Town Police Station in Mangaluru.
    
            
             04-11-25 04:38 pm
                        
            
                  
                Bangalore Correspondent    
            
                    
ಸಚಿವ ಸತೀಶ್ ಜಾರಕಿಹೊಳಿ ದಿಢೀರ್ ದೆಹಲಿಗೆ ; ಕೆಪಿಸಿಸ...
03-11-25 05:17 pm
ಕಣ್ಣೂರಿನ ಪಯ್ಯಂಬಲಂ ಬೀಚ್ ನಲ್ಲಿ ಸಮುದ್ರಕ್ಕಿಳಿದ ಬೆ...
02-11-25 11:09 pm
ಆರೆಸ್ಸೆಸ್ನವರಷ್ಟು ಹೇಡಿಗಳು ಯಾರೂ ಇಲ್ಲ, ಅವರ್ಯಾಕೆ...
01-11-25 09:33 pm
ನಮ್ಮ ಕ್ಷೇತ್ರದಲ್ಲಿ ಪಥಸಂಚಲನ ಮಾಡೋದನ್ನು ಆರೆಸ್ಸೆಸ್...
31-10-25 08:10 pm
    
            
             03-11-25 01:13 pm
                        
            
                  
                HK News Desk    
            
                    
ಜೋಧಪುರ ; ಭೀಕರ ರಸ್ತೆ ಅಪಘಾತದಲ್ಲಿ 18 ಜನರು ಸಾವು,...
02-11-25 11:12 pm
ಕೇರಳದಲ್ಲಿ ಮುಸ್ಲಿಮ್ ಮತ್ತು ಕ್ರಿಶ್ಚಿಯನ್ನರಿಗೆ ಒಬಿ...
02-11-25 05:13 pm
ಜೆಡ್ಡಾದಿಂದ ಹೈದರಾಬಾದ್ ಬರುತ್ತಿದ್ದ ವಿಮಾನದಲ್ಲಿ ಬ...
01-11-25 07:27 pm
ಭಾರತದಲ್ಲಿ ಸ್ವತಂತ್ರವಾಗಿದ್ದೇನೆ, ಮತ್ತೆ ಬಾಂಗ್ಲಾದೇ...
30-10-25 03:20 pm
    
            
             04-11-25 05:06 pm
                        
            
                  
                Mangalore Correspondent    
            
                    
ಧರ್ಮಸ್ಥಳ ಪ್ರಕರಣ ; ಎಸ್ಐಟಿ ತನಿಖಾ ಪ್ರಕ್ರಿಯೆಗೆ ಮಹ...
04-11-25 05:03 pm
ಹಿಂದುಗಳು, ಬಿಜೆಪಿಗರೆಂದು ತಾರತಮ್ಯಗೈದರೆ ಕ್ಷೇತ್ರದ...
03-11-25 10:47 pm
ಡಿ.27 ರಂದು 9ನೇ ವರ್ಷದ ಮಂಗಳೂರು ಕಂಬಳ ; ಈ ಬಾರಿ ’ನ...
03-11-25 05:20 pm
ಸಸಿಹಿತ್ಲು ಬೀಚ್ ನಲ್ಲಿ ನೀರಾಟಕ್ಕಿಳಿದು ಬೆಂಗಳೂರಿನ...
03-11-25 12:37 pm
    
            
             04-11-25 02:11 pm
                        
            
                  
                Mangalore Correspondent    
            
                    
ಟೋಪಿ ನೌಫಾಲ್ ಕೊಲೆಯಲ್ಲ, ರೈಲು ಡಿಕ್ಕಿ ಹೊಡೆದು ಸಾವು...
03-11-25 12:33 pm
ಶಬರಿಮಲೆ ಅಯ್ಯಪ್ಪ ದೇವಸ್ಥಾನದಲ್ಲಿ ಚಿನ್ನ ಕಳವು ಪ್ರಕ...
01-11-25 07:25 pm
Rowdy Topi Naufal Murder, Mangalore: ಮಂಗಳೂರಿನ...
01-11-25 03:31 pm
ವೃದ್ಧ ಮಹಿಳೆಗೆ ಡಿಜಿಟಲ್ ಅರೆಸ್ಟ್ ಬಲೆ ; ಐದು ಗಂಟೆಯ...
01-11-25 01:31 pm