ಬ್ರೇಕಿಂಗ್ ನ್ಯೂಸ್
01-06-25 11:02 pm Mangalore Correspondent ಕ್ರೈಂ
ಉಳ್ಳಾಲ, ಜೂ.1 : ನಸುಕಿನ ವೇಳೆ ಗೂಗಲ್ ಮ್ಯಾಪ್ ಅನುಸರಿಸಿ ವಿಳಾಸ ಸಿಗದೆ ದಿಕ್ಕೆಟ್ಟ ಆಟೋ ರಿಕ್ಷಾ ಚಾಲಕನೊಬ್ಬ ಮಾರ್ಕೆಟ್ ಗೆ ಕೆಲಸಕ್ಕೆಂದು ಮತ್ತೊಂದು ಬಾಡಿಗೆ ರಿಕ್ಷಾದಲ್ಲಿ ತೆರಳುತ್ತಿದ್ದ ಇಬ್ಬರು ಯುವಕರಲ್ಲಿ ವಿಳಾಸ ಕೇಳಿದ್ದು, ಮುಂಜಾನೆಯ ವೇಳೆ ಅಪರಿಚಿತನನ್ನ ಕಂಡು ಬೇಸ್ತು ಬಿದ್ದ ಯುವಕರು ತಮ್ಮ ಮೇಲೆ ದಾಳಿ ನಡೆಸುತ್ತಾರೆಂಬ ತಪ್ಪು ಗ್ರಹಿಕೆಯಿಂದ ತಪ್ಪಿಸಿ ಓಡೋಗಿ ಉಳ್ಳಾಲ ಠಾಣೆಗೆ ದೂರು ನೀಡಿರುವ ಘಟನೆ ನಡೆದಿದ್ದು, ಪೊಲೀಸರ ವಿಚಾರಣೆಯಿಂದ ಘಟನೆಯ ಅಸಲಿಯತ್ತು ಬಯಲಾಗಿದೆ.
ಪ್ರತ್ಯಕ್ಷ ನೋಡಿದರೂ ಪ್ರಮಾಣಿಸಿ ನೋಡು ಎಂಬ ಮಾತಿಗೆ ಪೂರಕವೆಂಬಂತಿದೆ ಈ ಘಟನೆ. ಕಳೆದ ಶುಕ್ರವಾರ ಮುಂಜಾನೆ ಕಲ್ಲಾಪುವಿನ ತರಕಾರಿ ಮಾರುಕಟ್ಟೆಗೆ ದೇರಳಕಟ್ಟೆಯಿಂದ ರಿಕ್ಷಾದಲ್ಲಿ ಕುತ್ತಾರು ರಾಣಿಪುರದ ಒಳ ರಸ್ತೆಯಿಂದ ತೆರಳುತ್ತಿದ್ದ ಇಬ್ಬರು ಮುಸ್ಲಿಂ ಯುವಕರ ಮೇಲೆ ಇನ್ನೊಂದು ರಿಕ್ಷಾದಲ್ಲಿ ಬಂದ ತಂಡ ದಾಳಿಗೆ ಯತ್ನಿಸಿದೆ ಎಂಬ ದೂರು ಕೇಳಿಬಂದಿತ್ತು. ಈ ಬಗ್ಗೆ ಇಬ್ಬರು ಮುಸ್ಲಿಂ ಯುವಕರು ಉಳ್ಳಾಲ ಠಾಣೆಗೆ ತಮ್ಮ ಮೇಲೆ ದಾಳಿಗೆ ಯತ್ನ ನಡೆದಿರೋದಾಗಿ ದೂರನ್ನ ನೀಡಿದ್ದರು.
ಪ್ರಕರಣದ ಬೆನ್ನತ್ತಿದ್ದ ಉಳ್ಳಾಲ ಪೊಲೀಸರು ರಾಣಿಪುರ ರಿಷಿವನ ಬಳಿಯ ಸಿಸಿ ಕ್ಯಾಮೆರಾದ ದೃಶ್ಯಾವಳಿಗಳನ್ನ ಪರಿಶೀಲಿಸಿದಾಗ ಘಟನೆಯ ಅಸಲಿಯತ್ತು ಬಯಲಾಗಿದ್ದು ಪ್ರಕರಣ ಠಾಣೆಯಲ್ಲೇ ಇತ್ಯರ್ಥಗೊಂಡಿದೆ.
ಹಾಗಿದ್ದರೆ ನಡೆದಿದ್ದೇನು..?
ಶುಕ್ರವಾರ ಬೆಳ್ಳಂಬೆಳಗ್ಗೆ ಉಳ್ಳಾಲ ತಾಲೂಕಿನಾದ್ಯಂತ ಇತಿಹಾಸ ಕಾಣದ ಧಾರಾಕಾರ ಮಳೆ ಸುರಿದು ಜಲಪ್ರಳಯವೇ ಉಂಟಾಗಿತ್ತು. ದೇರಳಕಟ್ಟೆ ನಿವಾಸಿಗಳಾದ ರುಕ್ಮಾನ್ ಮತ್ತು ರಾಹಿನ್ ಅವರು ಮುಂಜಾನೆ 5 ಗಂಟೆಗೆ ಬಾಡಿಗೆ ರಿಕ್ಷಾದಲ್ಲಿ ಕಲ್ಲಾಪುವಿನ ಗ್ಲೋಬಲ್ ಮಾರುಕಟ್ಟೆಗೆ ಕುತ್ತಾರು- ರಾಣಿಪುರದ ಒಳ ರಸ್ತೆಯಾಗಿ ಕೆಲಸಕ್ಕೆ ತೆರಳುತ್ತಿದ್ದರು. ಈ ವೇಳೆ ರಾಣಿಪುರ ರಿಷಿವನದ ಬಳಿ ಗೂಗಲ್ ಮ್ಯಾಪನ್ನ ಅನುಸರಿಸಿ ಬಂದು ದಿಕ್ಕೆಟ್ಟ ರಿಕ್ಷಾವೊಂದು ಎದುರಾಗಿ ನಿಂತಿದ್ದು, ಅದರ ಚಾಲಕ ರುಕ್ಮಾನ್ ಮತ್ತು ರಾಹಿನ್ ಅವರಲ್ಲಿ ಋಷಿವನದ ದಾರಿಯನ್ನ ಕೇಳಿದ್ದಾರೆ. ಅಷ್ಟಕ್ಕೇ ಭಯಭೀತರಾದ ರುಕ್ಮಾನ್ ಮತ್ತು ರಾಹಿನ್ ಅವರು ಸ್ಥಳದಿಂದ ಓಡಿದ್ದು ಉಳ್ಳಾಲ ಠಾಣೆಗೆ ಹೋಗಿ ತಮ್ಮ ಮೇಲೆ ದಾಳಿಗೆ ಯತ್ನ ನಡೆದಿರೋದಾಗಿ ದೂರು ಕೊಟ್ಟಿದ್ದಾರೆ.
ಉಳ್ಳಾಲ ಪೊಲೀಸರು ವಿಚಾರಣೆ ನಡೆಸಿ ಸಿಸಿಟಿವಿ ಪರಿಶೀಲಿಸಿದಾಗ ರಾಣಿಪುರ ರಿಷಿವನ ಕಾನ್ವೆಂಟ್ಗೆ ಕೊಯಮತ್ತೂರಿನಿಂದ ವ್ಯಕ್ತಿಯೊಬ್ಬರು ಬಂದಿದ್ದು, ಅವರನ್ನು ಮಂಗಳೂರು ರೈಲ್ವೇ ನಿಲ್ದಾಣದಿಂದ ರಿಕ್ಷಾ ಚಾಲಕರೋರ್ವರು ಗೂಗಲ್ ಮ್ಯಾಪ್ ಅನುಸರಿಸಿ ಕರೆತಂದಿದ್ದರು. ಮುಂಜಾನೆ ಒಳರಸ್ತೆಯಲ್ಲಿ ವಿಳಾಸ ಸಿಕ್ಕದೆ ದಿಕ್ಕೆಟ್ಟು ಅಲ್ಲೇ ಎದುರಾದ ರಿಕ್ಷಾವನ್ನ ನಿಲ್ಲಿಸಿ ವಿಳಾಸ ಕೇಳಿದ್ದಾರೆ.
ಇತ್ತೀಚೆಗೆ ಜಿಲ್ಲೆಯಲ್ಲಿ ನಿರಂತರವಾಗಿ ನಡೆಯುತ್ತಿರುವ ಕೋಮು ಸಂಘರ್ಷದ ಕುರಿತಾಗಿ ಆಗಂತುಕರು ದಾರಿ ಕೇಳಿಕೊಂಡು ಬಂದು ದಾಳಿ ನಡೆಸುತ್ತಾರೆಂದು ವಾಟ್ಸಪ್ ಸಂದೇಶಗಳನ್ನ ಓದಿದ್ದೆವು. ಹಾಗಾಗಿ ತಪ್ಪಾಗಿ ಗ್ರಹಿಸಿ ರಿಕ್ಷಾ ನಿಲ್ಲಿಸದೇ ನೇರವಾಗಿ ಹೋಗಿದ್ದೆವೆಂದು ದೂರು ಕೊಟ್ಟ ಮುಸ್ಲಿಂ ಯುವಕರು ಪೊಲೀಸರಲ್ಲಿ ಹೇಳಿದ್ದಾರೆ.
Mangalore Mistaken Identity Sparks Fear; Youth Flee After Auto Driver Asks for Directions at Ullal
04-11-25 04:38 pm
Bangalore Correspondent
ಸಚಿವ ಸತೀಶ್ ಜಾರಕಿಹೊಳಿ ದಿಢೀರ್ ದೆಹಲಿಗೆ ; ಕೆಪಿಸಿಸ...
03-11-25 05:17 pm
ಕಣ್ಣೂರಿನ ಪಯ್ಯಂಬಲಂ ಬೀಚ್ ನಲ್ಲಿ ಸಮುದ್ರಕ್ಕಿಳಿದ ಬೆ...
02-11-25 11:09 pm
ಆರೆಸ್ಸೆಸ್ನವರಷ್ಟು ಹೇಡಿಗಳು ಯಾರೂ ಇಲ್ಲ, ಅವರ್ಯಾಕೆ...
01-11-25 09:33 pm
ನಮ್ಮ ಕ್ಷೇತ್ರದಲ್ಲಿ ಪಥಸಂಚಲನ ಮಾಡೋದನ್ನು ಆರೆಸ್ಸೆಸ್...
31-10-25 08:10 pm
03-11-25 01:13 pm
HK News Desk
ಜೋಧಪುರ ; ಭೀಕರ ರಸ್ತೆ ಅಪಘಾತದಲ್ಲಿ 18 ಜನರು ಸಾವು,...
02-11-25 11:12 pm
ಕೇರಳದಲ್ಲಿ ಮುಸ್ಲಿಮ್ ಮತ್ತು ಕ್ರಿಶ್ಚಿಯನ್ನರಿಗೆ ಒಬಿ...
02-11-25 05:13 pm
ಜೆಡ್ಡಾದಿಂದ ಹೈದರಾಬಾದ್ ಬರುತ್ತಿದ್ದ ವಿಮಾನದಲ್ಲಿ ಬ...
01-11-25 07:27 pm
ಭಾರತದಲ್ಲಿ ಸ್ವತಂತ್ರವಾಗಿದ್ದೇನೆ, ಮತ್ತೆ ಬಾಂಗ್ಲಾದೇ...
30-10-25 03:20 pm
04-11-25 10:51 pm
Mangalore Correspondent
Mangalore Police, Panambur Beach: ಗಂಡ - ಹೆಂಡತ...
04-11-25 08:37 pm
ಅಬಕಾರಿ ಇಲಾಖೆಯಲ್ಲಿ ವ್ಯಾಪಕ ಭ್ರಷ್ಟಾಚಾರ, ಹಣಕ್ಕಾಗಿ...
04-11-25 06:15 pm
ವ್ಯಾಟಿಕನ್ ಸಿಟಿಯ ಭಾರತದ ರಾಯಭಾರಿ ಆ್ಯಂಡ್ರಿಯಾ ಫಾನ್...
04-11-25 05:06 pm
ಧರ್ಮಸ್ಥಳ ಪ್ರಕರಣ ; ಎಸ್ಐಟಿ ತನಿಖಾ ಪ್ರಕ್ರಿಯೆಗೆ ಮಹ...
04-11-25 05:03 pm
04-11-25 02:11 pm
Mangalore Correspondent
ಟೋಪಿ ನೌಫಾಲ್ ಕೊಲೆಯಲ್ಲ, ರೈಲು ಡಿಕ್ಕಿ ಹೊಡೆದು ಸಾವು...
03-11-25 12:33 pm
ಶಬರಿಮಲೆ ಅಯ್ಯಪ್ಪ ದೇವಸ್ಥಾನದಲ್ಲಿ ಚಿನ್ನ ಕಳವು ಪ್ರಕ...
01-11-25 07:25 pm
Rowdy Topi Naufal Murder, Mangalore: ಮಂಗಳೂರಿನ...
01-11-25 03:31 pm
ವೃದ್ಧ ಮಹಿಳೆಗೆ ಡಿಜಿಟಲ್ ಅರೆಸ್ಟ್ ಬಲೆ ; ಐದು ಗಂಟೆಯ...
01-11-25 01:31 pm