ಬ್ರೇಕಿಂಗ್ ನ್ಯೂಸ್
23-05-25 10:02 am Mangalore Correspondent ಕ್ರೈಂ
ಮಂಗಳೂರು, ಮೇ 23 : ಮದುವೆ ಸಂಬಂಧದಲ್ಲಿ ಬಿರುಕು ಉಂಟಾದ ಕೋಪದಲ್ಲಿ ಮದುವೆ ಗಂಡು ಬ್ರೋಕರ್ ವ್ಯಕ್ತಿಯನ್ನೇ ಕತ್ತಿಯಿಂದ ಕಡಿದು ಕೊಲೆಗೈದ ದಾರುಣ ಘಟನೆ ಮಂಗಳೂರು ಹೊರವಲಯದ ವಳಚ್ಚಿಲ್ ನಲ್ಲಿ ನಡೆದಿದೆ.
ವಾಮಂಜೂರು ನಿವಾಸಿ ಸುಲೇಮಾನ್ (50) ಸ್ಥಳದಲ್ಲೇ ಸಾವನ್ನಪ್ಪಿದ ವ್ಯಕ್ತಿ. ತಲವಾರಿನಿಂದ ಕಡಿದು ಕೊಲೆಗೈದ ವಳಚ್ಚಿಲ್ ನಿವಾಸಿ ಮುಸ್ತಫಾ (30) ನನ್ನು ಪೊಲೀಸರು ಬಂಧಿಸಿದ್ದಾರೆ. ಮದುವೆ ಬ್ರೋಕರ್ ಆಗಿದ್ದ ಸುಲೇಮಾನ್ ತನ್ನ ಸಂಬಂಧಿಕ ಯುವತಿಯನ್ನು ಎಂಟು ತಿಂಗಳ ಹಿಂದೆ ಮುಸ್ತಫಾಗೆ ಮದುವೆ ಮಾಡಿಸಿದ್ದ. ಮದುವೆ ನಂತರ ಕುಟುಂಬ ಜಗಳ ಉಂಟಾಗಿದ್ದು ವೈಮನಸ್ಸಿನಿಂದ ಎರಡು ತಿಂಗಳ ಹಿಂದೆ ಪತ್ನಿ ಮುಸ್ತಫಾನನ್ನು ಬಿಟ್ಟು ಹೋಗಿದ್ದಳು. ಇದರ ಕೋಪದಲ್ಲಿ ಸುಲೇಮಾನ್ ಮತ್ತು ಮುಸ್ತಫಾ ನಡುವೆ ಜಗಳ ಆಗಿತ್ತು.
ನಿನ್ನೆ ರಾತ್ರಿ ಮಾತುಕತೆಗೆಂದು ಆರೋಪಿ ಮುಸ್ತಫಾ, ಸುಲೇಮಾನನ್ನು ತನ್ನ ಮನೆಗೆ ಕರೆಸಿಕೊಂಡಿದ್ದ. ಹರೆಯದ ಇಬ್ಬರು ಮಕ್ಕಳ ಜೊತೆಗೆ ರಾತ್ರಿ ಹತ್ತು ಗಂಟೆ ವೇಳೆಗೆ ಮುಸ್ತಫಾ ಮನೆಗೆ ಬಂದಿದ್ದ ಸುಲೇಮಾನ್, ಮನೆಯ ಹೊರಗಡೆ ಮಕ್ಕಳನ್ನು ನಿಲ್ಲಿಸಿ ಮಾತುಕತೆ ನಡೆಸುತ್ತಿದ್ದ. ಆನಂತರ, ಮಾತುಕತೆ ವಿಫಲವಾಯ್ತು, ನಾವು ಮರಳಿ ಹೋಗೋಣ ಎಂದು ಹೇಳುತ್ತ ಬಿರುಸಿನಿಂದ ಸುಲೇಮಾನ್ ಹಿಂದಕ್ಕೆ ಬರುತ್ತಿದ್ದಾಗಲೇ ಕತ್ತಿ ಹಿಡಿದು ಅಟ್ಟಿಸಿಕೊಂಡು ಬಂದ ಮುಸ್ತಫಾ ನೇರವಾಗಿ ಸುಲೇಮಾನ್ ಕುತ್ತಿಗೆ ಭಾಗಕ್ಕೆ ಕಡಿದಿದ್ದಾನೆ.
ಗಂಭೀರ ಏಟಿಗೊಳಗಾದ ಸುಲೇಮಾನ್ ಸ್ಥಳದಲ್ಲೇ ಕುಸಿದು ಬಿದ್ದರೆ, ತಡೆಯಲು ಬಂದ ಮಕ್ಕಳಾದ ಸಿಯಾಬ್ ಮತ್ತು ರಿಯಾಬ್ ಮೇಲೂ ಆರೋಪಿ ತಲವಾರು ಬೀಸಿದ್ದಾನೆ. ಸಿಯಾಬ್ ಎದೆಗೆ ಗಾಯವಾಗಿದ್ದರೆ, ರಿಯಾಬ್ ಬಲಗೈಯ ಅಂಗೈಗೆ ಏಟು ಬಿದ್ದಿದೆ. ಸ್ಥಳೀಯರು ಕೂಡಲೇ ಇವರನ್ನು ಅಡ್ಯಾರ್ ಖಾಸಗಿ ಆಸ್ಪತ್ರೆಗೆ ಕರೆತಂದಿದ್ದು ಅಷ್ಟರಲ್ಲಿ ಸುಲೇಮಾನ್ ಸಾವನ್ನಪ್ಪಿದ್ದಾರೆ. ಆರೋಪಿ ಮುಸ್ತಫಾನನ್ನು ಮಂಗಳೂರು ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದಾರೆ.
50 year old murdered at Valachil over marriage dispute in Mangalore. The deceased has been identified as Suleman. Preliminary investigation reveals that the deceased Suleman, who worked as a marriage broker, had facilitated the marriage of the accused Mustafa (30), a relative, with a woman named Shaheenaz about eight months ago. Due to subsequent marital discord, Shaheenaz had returned to her parental home two months prior to the incident, leading to tension between Mustafa and Suleman.
05-08-25 01:45 pm
Bangalore Correspondent
19 Peacocks Dead, Tumkuru: ಹುಲಿಗಳ ಹತ್ಯೆಯಾಯ್ತು...
05-08-25 12:44 pm
Bangalore Suicide, School Boy: ನಾನು ಈಗ ಸ್ವರ್ಗ...
04-08-25 01:00 pm
Veerappa Moily, Kharge: 1980ರಲ್ಲೇ ನಾನು ಸಿಎಂ ಆ...
03-08-25 09:30 pm
Ravi Poojary Aide Kaviraj Arrested, Kolar Pol...
03-08-25 10:52 am
06-08-25 12:15 pm
HK News Desk
1954 ರಿಂದ ಪಾಕಿಸ್ತಾನಕ್ಕೆ 2 ಬಿಲಿಯನ್ ಡಾಲರ್ ಮೌಲ್ಯ...
05-08-25 10:58 pm
ಹಠಾತ್ ಮೇಘಸ್ಫೋಟಕ್ಕೆ ನಲುಗಿದ ಉತ್ತರಾಖಂಡ ; ಉತ್ತರಕಾ...
05-08-25 09:33 pm
ದೇಶದ ಅತಿ ದೀರ್ಘಾವಧಿಯ ಗೃಹ ಸಚಿವರಾಗಿ ಅಮಿತ್ ಷಾ ದಾ...
05-08-25 06:59 pm
ಜಮ್ಮು ಕಾಶ್ಮೀರದ ಮಾಜಿ ರಾಜ್ಯಪಾಲ ಸತ್ಯಪಾಲ ಮಲಿಕ್ ನ...
05-08-25 03:23 pm
06-08-25 06:00 pm
HK News Desk
ಬೆಂಗಳೂರು ಹೋಗುತ್ತೇನೆಂದು ತೆರಳಿದ್ದ ದೇರಳಕಟ್ಟೆ ಯುವ...
06-08-25 03:45 pm
Looking for a Reliable Nurse, Nanny, or House...
06-08-25 01:06 pm
Puttur Doctor Dr Keerthana Joshi, Suicide, Ma...
05-08-25 10:34 pm
Dharmasthala Case, Update, 11-12 spot: ಧರ್ಮಸ್...
05-08-25 08:22 pm
06-08-25 05:43 pm
Bangalore Correspondent
Cybercrime, New Fraud, Mobile Hacking: ಅಪರಿಚಿ...
06-08-25 11:23 am
Udupi Gold, Theft: ಕದ್ದ ಚಿನ್ನವನ್ನು ಕರಗಿಸಿ ಗಟ್...
06-08-25 11:04 am
Bangalore Cyber Fraud: 1.5 ಕೋಟಿ ರೂ. ಸೈಬರ್ ವಂಚ...
05-08-25 10:39 pm
ದೇಲಂತಬೆಟ್ಟು ದೇವಸ್ಥಾನದ ಕಾಣಿಕೆ ಡಬ್ಬಿ ಕಳವು ; ಮೂವ...
03-08-25 10:11 pm