ಬ್ರೇಕಿಂಗ್ ನ್ಯೂಸ್
28-03-25 06:12 pm Bangalore Correspondent ಕ್ರೈಂ
ಬೆಂಗಳೂರು, ಮಾ.28 : ಎರಡು ವರ್ಷಗಳ ಹಿಂದಷ್ಟೇ ಮದುವೆಯಾಗಿದ್ದ ಸುಂದರಿ ಪತ್ನಿಯನ್ನು ಸಾಫ್ಟ್ವೇರ್ ಪತಿಯೇ ಭೀಕರವಾಗಿ ಕೊಲೆಗೈದು ಪೀಸ್ ಪೀಸ್ ಮಾಡಿ ಸೂಟ್ ಕೇಸಿನಲ್ಲಿ ತುಂಬಿಸಿಟ್ಟು ಮನೆಯಿಂದ ಪರಾರಿಯಾದ ಘಟನೆ ಹುಳಿಮಾವು ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಕೊಲೆಯಾದ ಮಹಿಳೆಯ ಹೆಸರು ಗೌರಿ ಅನಿಲ್ ಸಾಂಬೇಕರ್. ಮಾಸ್ ಕಮ್ಯುನಿಕೇಷನ್ನಲ್ಲಿ ಡಿಗ್ರಿ ಮುಗಿಸಿದ್ದ ಗೌರಿ ಗಂಡನೊಂದಿಗೆ ಬೆಂಗಳೂರಿಗೆ ಬಂದು ಕೆಲಸದ ಹುಡುಕಾಟ ನಡೆಸುತ್ತಿದ್ದಳು. ಪತಿ ರಾಕೇಶ್ ಮಹಾರಾಷ್ಟ್ರದ ಪುಣೆ ಮೂಲದ ನಿವಾಸಿಯಾಗಿದ್ದು ಬೆಂಗಳೂರಿನಲ್ಲಿ ಸಾಫ್ಟ್ ವೇರ್ ಕಂಪನಿಯಲ್ಲಿ ಪ್ರಾಜೆಕ್ಟ್ ಮ್ಯಾನೇಜರ್ ಆಗಿದ್ದ.
ಒಂದು ತಿಂಗಳ ಹಿಂದಷ್ಟೇ ಬೆಂಗಳೂರಿನ ಹುಳಿಮಾವು ಪರಿಸರದ ದೊಡ್ಡ ಕಮ್ಮನಹಳ್ಳಿಯ ಬಾಡಿಗೆ ಮನೆ ಮಾಡಿ ನೆಲೆಸಿದ್ದರು. ಪತ್ನಿ ಗೌರಿ, ಮನೆಯಲ್ಲೇ ಇದ್ದು ಕೆಲಸ ಹುಡುಕುತ್ತಿದ್ದಳು. ಈ ನಡುವೆ, ಪತಿ ರಾಕೇಶ್ ವರ್ಕ್ ಫ್ರಮ್ ಹೋಮ್ ಕೆಲ್ಸ ಮಾಡುತ್ತಿದ್ದ. ಸುಖ ಜೀವನದಲ್ಲಿದ್ದಾಗಲೇ ಮೊನ್ನೆ ರಾತ್ರಿ ಊಟದ ಸಮಯದಲ್ಲಿ ಪತಿ- ಪತ್ನಿ ಸಣ್ಣ ವಿಚಾರಕ್ಕೆ ಗಲಾಟೆ ಮಾಡಿದ್ದಾರೆ. ಗಲಾಟೆ ವಿರೋಪಕ್ಕೆ ತಿರುಗಿದ್ದು ರಾಕೇಶ್ ಕೋಪದಲ್ಲಿ ಚೂರಿಯಿಂದ ಇರಿದು ಪತ್ನಿಯನ್ನು ಕೊಲೆ ಮಾಡಿದ್ದಾನೆ. ಬಳಿಕ ಪತ್ನಿಯ ಕುತ್ತಿಗೆ, ಹೊಟ್ಟೆಯ ಭಾಗದಲ್ಲಿ ಕೊಯ್ದು ಸೂಟ್ಕೇಸ್ಗೆ ತುಂಬಿಸಿ ಹೊರಕ್ಕೆ ಒಯ್ಯಲು ಯತ್ನಿಸಿದ್ದಾನೆ.
ಆದರೆ ಸೂಟ್ಕೇಸ್ ತುಂಬಿದ್ದ ರಾಕೇಶ್ ನಡುರಾತ್ರಿ 12.30ರ ಸುಮಾರಿಗೆ ಒಬ್ಬನೇ ನಡೆದುಕೊಂಡು ಅಪಾರ್ಟ್ ಮೆಂಟ್ ಬಳಿ ನಿಲ್ಲಿಸಿದ್ದ ತನ್ನ ಕಾರಿನಲ್ಲಿ ಎಸ್ಕೇಪ್ ಆಗಿದ್ದಾನೆ. ಇದಕ್ಕೂ ಮುನ್ನ ಪತ್ನಿ ಗೌರಿ ಮನೆಯವರಿಗೆ ಮತ್ತು ತಾವು ಬಾಡಿಗೆ ಇದ್ದ ಕೆಳಗಿನ ಮನೆಯವರಿಗೂ ಕರೆ ಮಾಡಿ ಪತ್ನಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆಂದು ವಿಷ್ಯ ತಿಳಿಸಿದ್ದಾನೆ. ಕೆಳಗಿನ ಮನೆಯಲ್ಲಿದ್ದ ಮಾಲೀಕರು ಪೊಲೀಸ್ ಕಂಟ್ರೋಲ್ ರೂಂಗೆ ಕರೆ ಮಾಡಿದ್ದರು. ಬಳಿಕ ಹುಳಿಮಾವು ಪೊಲೀಸರು ಸ್ಥಳಕ್ಕೆ ಬಂದು, ಮನೆಯ ಬಾಗಿಲು ಓಪನ್ ಮಾಡಿದಾಗ ಟಾಯ್ಲೆಟ್ನಲ್ಲಿ ಇಟ್ಟಿದ್ದ ಸೂಟ್ಕೇಸ್ನಲ್ಲಿ ಶವ ಪತ್ತೆ ಆಗಿದೆ.
ಇದೇ ವೇಳೆ, ಪೊಲೀಸರು ಆರೋಪಿ ರಾಕೇಶ್ ಸಿಂಗ್ ನನ್ನು ಸಿಡಿಆರ್ ಮೂಲಕ ಟ್ರೇಸ್ ಮಾಡಿದ್ದು ಪುಣೆಯಲ್ಲಿ ಬಂಧಿಸಿದ್ದಾರೆ.
A 36-year-old man has been arrested in connection with the murder of his 32-year-old wife, whose body was found stuffed in a suitcase at their rented house in south Bengaluru.
14-08-26 08:42 pm
HK News Staffer
ಗುಟ್ಕಾ-ಪಾನ್ ಮಸಾಲಾ ನಿಷೇಧಕ್ಕೆ 48 ಗಂಟೆಯಲ್ಲೇ ಯು-...
14-08-26 05:32 pm
ಅನುಭವ ಇಲ್ಲದ ಮಂಗ ಯತೀಂದ್ರಗೆ ಮೈಸೂರು ಜಿಲ್ಲಾ ಉಸ್ತು...
13-08-26 10:19 pm
ಆದಿವಾಸಿ ಮತ್ತು ಅಲೆಮಾರಿ ಸಮುದಾಯಗಳ ಅಭಿವೃದ್ಧಿಗೆ ವಿ...
13-08-26 08:09 pm
ಜೈಲಿನಲ್ಲಿದ್ದರೂ ಚಟ ಬಿಡದ ಪ್ರಜ್ವಲ್ ರೇವಣ್ಣ ! ಪೆನ್...
13-08-26 07:14 pm
11-08-26 10:25 pm
HK News Staffer
ಇಬ್ಬರು ಸಹೋದರಿಯರ ಇಸ್ಲಾಂ ಮತಾಂತರ ಎತ್ತಿಹಿಡಿದ ಅಲಹಾ...
11-08-26 04:49 pm
ಕಾಶ್ಮೀರಿ ಪಂಡಿತರನ್ನು ಗುರಿಯಾಗಿಸಿ ಉಗ್ರರ ಬೆದರಿಕೆ...
11-08-26 04:32 pm
ಮೋದಿ ಸೆಲ್ಫಿ ವಿಡಿಯೋ ತೆಗೆದು ಹಾಕಿದ್ದ ಫೇಸ್ಬುಕ್ ಕಂ...
05-08-26 08:36 pm
ಜಾನ್ಸನ್ & ಜಾನ್ಸನ್ ಬೇಬಿ ಪೌಡರ್ ನಿಂದ ಕ್ಯಾನ್ಸರ್ ಆ...
01-08-26 05:17 pm
15-08-26 10:08 pm
HK News Staffer
Mangalore City Centre KFC raided: Six-month-o...
15-08-26 09:30 pm
ಗುಟ್ಕಾ, ಪಾನ್ ಮಸಾಲ ಪ್ರತ್ಯೇಕ ಕೊಟ್ಟರೆ ನಿರ್ಬಂಧ ಇಲ...
15-08-26 04:52 pm
Infosys Mangalore, News: ಕೊಟ್ಟಾರದ ಇನ್ಫೋಸಿಸ್ ಕ...
14-08-26 10:23 pm
ಮಂಗಳೂರು ವಿಮಾನ ದುರಂತದ ಕಹಿನೆನಪು ಬಾಲಕಿಯ ಮನದಲ್ಲಿ...
14-08-26 02:07 pm
15-08-26 09:06 pm
HK News Staffer
ಸ್ವಾತಂತ್ರ್ಯ ದಿನದಂದೇ ಚಾಮರಾಜನಗರದಲ್ಲಿ ಗುಂಡಿನ ಸದ್...
15-08-26 06:11 pm
David Dsouza Murder, Arrest: ಡೇವಿಡ್ ಹತ್ಯೆ ಪ್ರ...
15-08-26 05:09 pm
ಅಪ್ರಾಪ್ತ ಬಾಲಕಿಯನ್ನು ಕಾರಿನಲ್ಲಿ ಕರೆದೊಯ್ದಿದ್ದಕ್ಕ...
15-08-26 04:19 pm
ಕೆಲಸ ಮಾಡಿಕೊಡುವ ನೆಪದಲ್ಲಿ ಪದೇಪದೇ ಹಣಕ್ಕಾಗಿ ಒತ್ತಾ...
15-08-26 02:06 pm