Mangalore Crime, Pachanady, Compound wall: ರಸ್ತೆ ಅಗಲೀಕರಣ ನೆಪದಲ್ಲಿ ಖಾಸಗಿ ಜಾಗದ ಕಾಂಪೌಂಡ್ ಗೋಡೆ ಧ್ವಂಸ, ಪಚ್ಚನಾಡಿಯ ಯುವಕರ ತಂಡದಿಂದ ದಾಂಧಲೆ ; ಮಹಿಳೆಯರು ಸೇರಿ 17 ಮಂದಿ ವಿರುದ್ಧ ಎಫ್ಐಆರ್ 

19-03-25 08:27 pm       Mangalore Correspondent   ಕ್ರೈಂ

ರಸ್ತೆ ಅಗಲೀಕರಣ ನೆಪವೊಡ್ಡಿ ಗಣೇಶ್, ನವೀನ್ ಮತ್ತಿತರರು ಸೇರಿ ಖಾಸಗಿ ವ್ಯಕ್ತಿಯೊಬ್ಬರಿಗೆ ಸೇರಿದ ಕಾಂಪೌಂಡ್ ಗೋಡೆಯನ್ನು ಜೆಸಿಬಿ ತಂದು ಒಡೆದು ಧ್ವಂಸ ಮಾಡಿದ್ದು ಗೂಂಡಾ ರೀತಿಯ ವರ್ತನೆ ತೋರಿದ್ದಾಗಿ ಮಂಗಳೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಮಂಗಳೂರು, ಮಾ.19 : ರಸ್ತೆ ಅಗಲೀಕರಣ ನೆಪವೊಡ್ಡಿ ಗಣೇಶ್, ನವೀನ್ ಮತ್ತಿತರರು ಸೇರಿ ಖಾಸಗಿ ವ್ಯಕ್ತಿಯೊಬ್ಬರಿಗೆ ಸೇರಿದ ಕಾಂಪೌಂಡ್ ಗೋಡೆಯನ್ನು ಜೆಸಿಬಿ ತಂದು ಒಡೆದು ಧ್ವಂಸ ಮಾಡಿದ್ದು ಗೂಂಡಾ ರೀತಿಯ ವರ್ತನೆ ತೋರಿದ್ದಾಗಿ ಮಂಗಳೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಮಂಗಳೂರಿನ ಪಚ್ಚನಾಡಿ ವೈದ್ಯನಾಥ ನಗರದಲ್ಲಿ ಮಾ.14ರಂದು ಘಟನೆ ನಡೆದಿದ್ದು ಸ್ಥಳೀಯ ಮಹಿಳೆಯರು ಸೇರಿದಂತೆ 17 ಮಂದಿ ವಿರುದ್ಧ ಪ್ರಕರಣ ದಾಖಲಾಗಿದೆ. ಪಚ್ಚನಾಡಿ‌ ವೈದ್ಯನಾಥ ನಗರ ನಿವಾಸಿ ವಿಜಿತ್ ವಿಜೇಶ್ ಸಲ್ದಾನ ಎಂಬವರ ಪತ್ನಿ ಜ್ಯೋತಿ ಈ ಬಗ್ಗೆ ದೂರು ನೀಡಿದ್ದಾರೆ. 

ಗಣೇಶ, ನವೀನ್ ಮತ್ತಿತರ ಸ್ಥಳೀಯರು ಸೇರಿ ಗೂಂಡಾ ವರ್ತನೆ ತೋರಿದ್ದಾರೆ. ಅವಾಚ್ಯ ಶಬ್ದಗಳಿಂದ ಬೈದು ಕಾಂಪೌಂಡ್ ಧ್ವಂಸ ಮಾಡಿದ್ದಾರೆ. ರಸ್ತೆ ಮಾಡುವ ಉದ್ದೇಶದಿಂದ ವಿಜೇಶ್ ಸಲ್ಡಾನ ಎಂಬವರಿಗೆ ಸೇರಿದ ಮನೆಯ ಕಾಂಪೌಂಡ್ ಗೋಡೆಯನ್ನು ಧ್ವಂಸ ಮಾಡಿದ್ದಾರೆ. 

ರಸ್ತೆ ವಿಸ್ತರಣೆ ಉದ್ದೇಶದಿಂದ ಮಹಾನಗರ ಪಾಲಿಕೆಯಿಂದ ಯಾವುದೇ ವರ್ಕ್ ಆರ್ಡರ್ ಇಲ್ಲದೆಯೇ ಜೆಸಿಬಿ ತಂದು ಕಾಂಪೌಂಡ್ ಗೋಡೆ ಕೆಡವಿದ್ದಾಗಿ ದೂರಲಾಗಿದೆ. ಅಲ್ಲದೆ, ಗಣೇಶ ಎಂಬಾತ ಅವಾಚ್ಯ ಶಬ್ದಗಳಿಂದ ನಿಂದಿಸಿರುವುದಲ್ಲದೆ, ವಿಜೇಶ್ ಸಲ್ದಾನ ಅವರ ಪತ್ನಿಗೆ ತನ್ನ ಚಡ್ಡಿ ಜಾರಿಸಿ ತೋರಿಸಿ ಅಶ್ಲೀಲವಾಗಿ ಮಾನಹಾನಿ ಆಗುವ ರೀತಿ ನಡೆದುಕೊಂಡಿದ್ದಾನೆ. ಮಾನಹಾನಿ ಸೇರಿದಂತೆ ಹಲವಾರು ಸೆಕ್ಷನ್ ಅಡಿ ಕೇಸು ದಾಖಲಿಸಲಾಗಿದೆ. ‌

Mangalore Seventeen booked in Vandalism Incident Over Alleged Road Widening and destroying house compound at Pachanady. In a troubling incident reported in Mangaluru, a group including Ganesh, Naveen, and others allegedly demolished the compound wall of a private individual using a JCB machine, claiming it was for road widening. This action has been characterized as thuggish behavior and has resulted in a criminal case being filed at the Mangaluru Rural Police Station.