ಬ್ರೇಕಿಂಗ್ ನ್ಯೂಸ್
02-01-24 02:21 pm HK News Desk ಕ್ರೈಂ
ಕುಣಿಗಲ್, ಜ 02: ರಸ್ತೆ ಅಪಘಾತ ಸಂಬಂಧ ಹಾಸನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅವರ ಸಂಬಂಧಿಗಳ ಮತ್ತು ಬಿದನಗೆರೆ ಗ್ರಾಮಸ್ಥರ ನಡುವೆ ಜಟಾಪಟಿ ನಡೆದು ಜಿಲ್ಲಾ ಎಸ್ಪಿ ಅವರ ತಾಯಿ ಮೇಲೆ ಹಲ್ಲೆ ನಡೆದಿರುವ ಘಟನೆ ರಾಷ್ಟ್ರೀಯ ಹೆದ್ದಾರಿ 75 ರ ಬಿದನಗೆರೆ ಬೈಪಾಸ್ನಲ್ಲಿ ನಡೆದಿದೆ.
ಘಟನೆಯಲ್ಲಿ ಹಾಸನ ಜಿಲ್ಲಾ ಎಸ್ಪಿ ಮೊಹಮ್ಮದ್ ಸುಜಿತಾ ಅವರ ತಾಯಿ ಎ.ಜೆ.ಮಹಮದ್ ಅಜೀಜಾ (60) ಹಲ್ಲೆಗೆ ಒಳಗಾದ ಮಹಿಳೆಯಾಗಿದ್ದು, ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ, ಘಟನೆ ಸಂಬಂಧ ಬಿದನಗೆರೆ ಗ್ರಾಮದ ಮೂರು ಮಂದಿ ವಿರುದ್ದ ಕುಣಿಗಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜ. 1 ಸೋಮವಾರದಂದು ಮಧ್ಯಾಹ್ನ ಎ.ಜೆ.ಮಹಮದ್ ಅಜೀಜಾ ಹಾಗೂ ಅವರ ಸಂಬಂಧಿಕರು ಹಾಸನದಿಂದ ಕುಣಿಗಲ್ ಮಾರ್ಗವಾಗಿ ಎರ್ಟಿಗಾ ಕಾರಿನಲ್ಲಿ ಬೆಂಗಳೂರಿಗೆ ತೆರಳುತ್ತಿರಬೇಕಾದರೆ, ಬಿದನಗೆರೆ ಬೈಪಾಸ್ ನಲ್ಲಿ ಯಾವುದೋ ಒಂದು ವಾಹನ ವ್ಯಕ್ತಿಯೋರ್ವನಿಗೆ ಅಪಘಾತ ಮಾಡಿ ಪರಾರಿಯಾಗಿತ್ತು, ತಕ್ಷಣ ನಾವು ಕಾರು ನಿಲ್ಲಿಸಿ ಅಪಘಾತವಾದ ವ್ಯಕ್ತಿಗೆ ಅಸ್ಪತ್ರೆಗೆ ಸೇರಿಸಬೇಕೆಂದು ಪರಿಶೀಲಿಸಲು ನಾವು ಪ್ರಯತ್ನಿಸಿದ್ದಾಗ 10 ಜನರ ಗುಂಪೊಂದು ನಮ್ಮನು ಸುತ್ತುವರೆದು, ನಮ್ಮೊಂದಿಗೆ ಜಗಳವಾಡಲು ಪ್ರಾರಂಭಿಸಿದರು, ಆ ವ್ಯಕ್ತಿಯನ್ನು ಪರೀಕ್ಷಿಸಲು ಅವರು ಅವಕಾಶ ಕೊಡಲಿಲ್ಲ, ಬದಲಾಗಿ ಅವರು ನಮ್ಮನು ನಿಂದಿಸಿ, ಹಣಕ್ಕೆ ಬೇಡಿಕೆ ಇಟ್ಟರು, ಆ ಗುಂಪಿನಲ್ಲಿ ಇದ್ದ ಕೆಲವರು ನಮಗೆ ಹಣ ನೀಡುವಂತೆ ಬೆದರಿಕೆ ಹಾಕಿದರು, ಕೈಯಲ್ಲಿ ಛತ್ರಿ ಹಿಡಿದಿದ್ದ ವ್ಯಕ್ತಿಯೋರ್ವರು ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ.
ನನ್ನ ರಕ್ಷಣೆಗೆ ಬಂದ ನನ್ನ ಸಹೋದರ ಎ.ಜೆ.ಹಸನ್ ಅಲಿ ಶೇಕ್ ಗೂ ಹೊಡೆದರು, ನನ್ನ ಅಣ್ಣನ ಬೆನ್ನಿಗೆ ತೀವ್ರ ಹೊಡೆತ ಬಿದ್ದಿದೆ. ನಂತರ ಏಕಾಏಕಿ ಎರಡು ಮೂರು ಮಂದಿ ಕೂಡ ನನ್ನ ಮೇಲೆ ಹಲ್ಲೆ ನಡೆಸಿದರು, ಗುಂಪಿನಲ್ಲಿ ಇದ್ದ ಮಹಿಳೆಯೋರ್ವಳು ತನ್ನ ಕೈಯಲ್ಲಿ ಚಾಕು ತೆಗೆದುಕೊಂಡು ನನ್ನ ಗಂಟಲ ಬಳಿ ಇಟ್ಟು ಹಣ ನೀಡುವಂತೆ ಒತ್ತಾಯಿಸಿದರು, ಇಲ್ಲದಿದ್ದರೆ ನಮ್ಮನು ಕೊಲ್ಲುವುದಾಗಿ ಬೆದರಿಕೆ ಹಾಕಿದರು. ಮತ್ತೊಬ್ಬ ವ್ಯಕ್ತಿ ನನ್ನ ತಲೆ ಹಿಂಭಾಗಕ್ಕೆ ಹೊಡೆದಿದ್ದು, ತಕ್ಷಣ ನಾನು ಪ್ರಜ್ಞೆ ತಪ್ಪಿದೆ ಎಂದು ಪೊಲೀಸರಿಗೆ ನೀಡಿರುವ ಹೇಳಿಕೆಯಲ್ಲಿ ಎ.ಜೆ.ಮಹಮದ್ ಅಜೀಜಾ ಆರೋಪಿಸಿದ್ದಾರೆ.
The incident took place at Bidanagere bypass on National Highway 75 after a scuffle broke out between the relatives of Hassan District Superintendent of Police and bidanagere villagers over a road accident.
04-05-25 09:55 pm
HK News Desk
ಸಿಇಟಿ ಬಳಿಕ ನೀಟ್ ಪರೀಕ್ಷೆಗೂ ಜನಿವಾರಕ್ಕೆ ಕತ್ತರಿ !...
04-05-25 09:26 pm
ಹಿಮಾಲಯ - ದೆಹಲಿಗೆ ಸುನಾಮಿ, ಮಹಾನ್ ನಾಯಕರ ದುರ್ಮರಣ...
04-05-25 09:15 pm
Bangalore Girl Naked, HSR Layout: ಬೆಂಗಳೂರಿನಲ್...
04-05-25 02:27 pm
Suhas Shetty Murder, Parameshwar: ಸುಹಾಸ್ ಶೆಟ್...
04-05-25 01:18 pm
30-04-25 06:59 pm
HK News Desk
India Pakistan War: ಭಾರತೀಯ ಸೇನಾಪಡೆಗೆ ಪರಮಾಧಿಕಾ...
30-04-25 03:14 pm
Pakistan, No-fly zone islamabad: ಭಾರತದ ಪ್ರತೀಕ...
30-04-25 02:13 pm
ಮೋದಿ 'ಗಾಯಬ್' ಎಂದು ಕಾಂಗ್ರೆಸ್ ಪೋಸ್ಟ್ ; ಕಾಂಗ್ರೆಸ...
29-04-25 03:45 pm
'ನನಗೆ ಪಾಕಿಸ್ತಾನದಲ್ಲಿ ಯಾರೂ ಇಲ್ಲ, ದಯವಿಟ್ಟು ಉಳಿಸ...
28-04-25 06:52 pm
04-05-25 11:26 pm
Mangalore Correspondent
Mangalore, Hate speech, BJP MLA Harish Poonja...
04-05-25 08:49 pm
Minister Gundu Rao, Mangalore: ಮುಸ್ಲಿಂ ಮುಖಂಡರ...
04-05-25 08:39 pm
Mp Brijesh Chowta, Suhas Shetty Murder: ಆ್ಯಂಟ...
03-05-25 10:57 pm
ಬಜರಂಗಿ ಸುಹಾಸ್ ಶೆಟ್ಟಿ ಹತ್ಯೆಗೆ ಕಳಸದವರು ಬಂದಿದ್ದೇ...
03-05-25 10:43 pm
03-05-25 02:16 pm
Mangalore Correspondent
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm
Mangalore Mudipu Murder, Mob, Police, Crime:...
29-04-25 09:59 pm