ಬ್ರೇಕಿಂಗ್ ನ್ಯೂಸ್
26-11-23 09:25 pm Mangaluru Correspondent ಕ್ರೈಂ
ಪುತ್ತೂರು, ನ.26: ಸವಣೂರು ಗ್ರಾಮದ ಎಡಪತ್ಯ ಫಾರ್ಮ್ ನಲ್ಲಿ 25 ಗೋಣಿಯಷ್ಟು ಒಣ ಅಡಿಕೆ ಕಳ್ಳತನ ಆಗಿರುವ ಶಂಕೆ ವ್ಯಕ್ತವಾಗಿದೆ. ನ.25ರಂದು ಶನಿವಾರ ನಸುಕಿನಲ್ಲಿ ತಲವಾರು ತೋರಿಸಿ ಪರಾರಿಯಾಗಿದ್ದ ಅಡಿಕೆ ಕಳ್ಳರ ಕೃತ್ಯದ ಹಿನ್ನೆಲೆಯಲ್ಲಿ ಸೋಲಾರ್ ಅಂಗಳದಲ್ಲಿ ಇರಿಸಲಾಗಿದ್ದ ಅಡಿಕೆಯನ್ನು ಪರಿಶೀಲಿಸಿದಾಗ 5 ಲಕ್ಷದಷ್ಟು ಮೊತ್ತದ ಅಡಿಕೆ ಕಳವಾಗಿದೆ ಎನ್ನಲಾಗುತ್ತಿದೆ.
ಈ ಬಗ್ಗೆ ಅಡಿಕೆ ಫಾರ್ಮ್ಸ್ ಮಾಲೀಕ, ಸವಣೂರು ಗ್ರಾಮದ ನಿವಾಸಿ ಚಂದ್ರ ಎಡಪತ್ಯ ಅವರು ಬೆಳ್ಳಾರೆ ಠಾಣೆಗೆ ದೂರು ನೀಡಿದ್ದಾರೆ. ನ.25ರಂದು ನಸುಕಿನ ವೇಳೆಗೆ 3.30ರ ಸುಮಾರಿಗೆ ಚಂದ್ರ ಅವರ ಪುತ್ರ ನಿಷ್ಕಲ್ ರಾಮ, ಮೈಸೂರಿನಿಂದ ಬೈಕಿನಲ್ಲಿ ಮನೆಗೆ ಆಗಮಿಸಿದ್ದರು. ಈ ವೇಳೆ, ಮನೆಯ ಅಂಗಳಕ್ಕೆ ಸ್ಕೂಟರ್ ಮತ್ತು ಇನ್ನೊಂದು ಕಾರಿನಲ್ಲಿ ಬಂದಿದ್ದ ಅಡಿಕೆ ಕಳ್ಳರು ಸುಲಿದಿಟ್ಟ ಅಡಿಕೆ ಮತ್ತು ಒಣಗಲು ಹಾಕಿದ್ದ ಅಡಿಕೆಯನ್ನು ಕಳವು ಮಾಡುತ್ತಿದ್ದರು.
ಅಡಿಕೆಯನ್ನು ತಮ್ಮ ವಾಹನಕ್ಕೆ ತುಂಬಿಸುತ್ತಿದ್ದಾಗ ನಿಷ್ಕಲ್ ರಾಮ ಪ್ರಶ್ನಿಸಿದ್ದು, ಈ ವೇಳೆ ಆರೋಪಿಗಳು ತಲವಾರು ತೋರಿಸಿ ಬೆದರಿಸಿದ್ದಾರೆ. ನಿಷ್ಕಲ್ ಆರೋಪಿಗಳಲ್ಲಿ ಒಬ್ಬನನ್ನು ಹಿಡಿಯಲು ಯತ್ನಿಸಿದಾಗ ಹಲ್ಲೆ ನಡೆಸಿದ್ದಾರೆ. ಎರಡು ಗೋಣಿ ಚೀಲದಲ್ಲಿ ಸುಲಿದಿಟ್ಟ ಅಡಿಕೆಯನ್ನು ಸ್ಕೂಟರಿನಲ್ಲಿಟ್ಟು ಒಬ್ಬಾತ ಪರಾರಿಯಾಗಿದ್ದಾನೆ.
ಇನ್ನೊಬ್ಬ ವ್ಯಕ್ತಿ ಬಶೀರ್ ಎನ್ನುವಾತ ಸುಲಿಯದ ಅಡಿಕೆಯನ್ನು ಎಂಟು ಗೋಣಿ ಚೀಲದಲ್ಲಿ ತುಂಬಿಸಿ ಕಾರಿನಲ್ಲಿ ಹಾಕಿ ಪರಾರಿಯಾಗಲು ಯತ್ನಿಸಿದ್ದಾನೆ. ಅಷ್ಟರಲ್ಲಿ ಬೊಬ್ಬೆ ಕೇಳಿ ಮನೆಯವರು ಬಂದಿದ್ದು ಬಶೀರ್ ನನ್ನು ಹಿಡಿದು ಕೂಡಿ ಹಾಕಿದ್ದಾರೆ. ವಿಚಾರಣೆ ವೇಳೆ ಪರಾರಿಯಾದ ವ್ಯಕ್ತಿಯನ್ನು ಹಕೀಂ ಎಂದು ಬಶೀರ್ ತಿಳಿಸಿದ್ದಾನೆ. ಸದ್ರಿ ಆರೋಪಿಯನ್ನು ಹಿಡಿದು ಮನೆಯವರೇ ಬೆಳ್ಳಾರೆ ಠಾಣೆಗೆ ಕರೆತಂದಿದ್ದು, ದೂರು ನೀಡಿದ್ದಾರೆ. ಪೊಲೀಸ್ ವಿಚಾರಣೆ ವೇಳೆ ಆರೋಪಿ ಬಶೀರ್ ಇದೇ ರೀತಿ ಹಲವು ಸಮಯದಿಂದ ಅಡಿಕೆ ಕಳ್ಳತನ ಮಾಡುತ್ತಿರುವುದಾಗಿ ಹೇಳಿದ್ದಾನೆ.
Two arecanut thieves, who arrived in a vehicle to Edapathya farm of Savanoor, swung a sword at the son of the owner as he caught them red handed.
20-06-25 10:36 am
Bangalore Correspondent
ಕಮಲ್ ನಟನೆಯ 'ಥಗ್ ಲೈಫ್' ಸಿನಿಮಾ ಪ್ರಸಾರಕ್ಕೆ ಸುಪ್ರ...
17-06-25 05:35 pm
Dk Shivakumar, Plan Crash: ವಿಮಾನ ದುರಂತ ; ಬಿಜೆ...
16-06-25 10:44 pm
Judge Heart Attack, Kalaburagi Court: ನ್ಯಾಯಾಲ...
16-06-25 02:56 pm
ಎರಡೇ ವರ್ಷಗಳಲ್ಲಿ ಬೆಂಗಳೂರಿನ ಶಾಸಕರ ಆದಾಯ ವಿಪರೀತ ಹ...
15-06-25 09:29 pm
19-06-25 10:58 pm
HK News Desk
ಕೇರಳ ಸಿಎಂ ಸ್ವಂತ ಊರಿನಲ್ಲೇ ಮುಸ್ಲಿಂ ಗುಂಪಿನ ನೈತಿಕ...
19-06-25 08:26 pm
Israel-Iran’s War: ಇಸ್ರೇಲಿನ ಅತಿದೊಡ್ಡ ಆಸ್ಪತ್ರೆ...
19-06-25 07:13 pm
ಪಾಕ್ ಸೇನಾ ಮುಖ್ಯಸ್ಥನಿಗೆ ಡೊನಾಲ್ಡ್ ಟ್ರಂಪ್ ಔತಣ ಕೂ...
18-06-25 09:54 pm
ಖಾಸಗಿ ವಾಹನಗಳಿಗೆ ಫಾಸ್ಟ್ ಟ್ಯಾಗ್ ಮತ್ತಷ್ಟು ಸುಲಭ ;...
18-06-25 08:49 pm
19-06-25 10:08 pm
Mangalore Correspondent
ಜಪ್ಪಿನಮೊಗರು ಕಾರು ಅಪಘಾತಕ್ಕೆ ಮದ್ಯ ಸೇವನೆ, ಅತಿ ವೇ...
19-06-25 07:48 pm
Mangalore Police, Sudheer Kumar Reddy: ಕೋಮು ಸ...
19-06-25 01:05 pm
Udupi Bus Driver: ಅಡ್ಡಾದಿಡ್ಡಿ ಬಸ್ ಚಲಾಯಿಸಿ ರಂಪ...
18-06-25 10:57 pm
Lokayukta Arrest, Mangalore: ಸಿಂಗಲ್ ಸೈಟ್ ನಕ್ಷ...
18-06-25 10:46 pm
19-06-25 04:37 pm
Mangalore Correspondent
Ccb Police, Bangalore, Drugs, crime: ಚೂಡಿದಾರ್...
17-06-25 05:06 pm
Kolar ATM Robbery: ಕರ್ನಾಟಕದಲ್ಲಿ ಹೆಚ್ಚುತ್ತಿರುವ...
17-06-25 12:10 pm
Fake Currency Racket, Shivamogga: ಖೋಟಾ ನೋಟು ಚ...
16-06-25 03:05 pm
Bangalore Crime, House Maid, Chamrajpet: ಕೆಲಸ...
14-06-25 11:02 pm