ಬ್ರೇಕಿಂಗ್ ನ್ಯೂಸ್
17-08-23 09:53 pm Mangalore Correspondent ಕ್ರೈಂ
ಸುಳ್ಯ, ಆಗಸ್ಟ್ 17: ರಿಲಯನ್ಸ್ ಜಿಯೋ ಕಂಪನಿಯ ಟವರ್ ನಿರ್ಮಾಣ ಮಾಡಲು ಜಾಗ ಬೇಕಿದೆ ಎಂದು ಕರೆ ಮಾಡಿದ್ದ ಅಪರಿಚಿತರು ವ್ಯಕ್ತಿಯೊಬ್ಬರಿಂದ ದಾಖಲೆ ಪತ್ರಗಳನ್ನು ಪಡೆದು ಮೋಸ ಮಾಡಿದ್ದಲ್ಲದೆ, ಕೊನೆಗೆ ಅವರಿಂದಲೇ ಹಣ ವಸೂಲಿ ಮಾಡಿ ವಂಚನೆ ಎಸಗಿರುವ ಘಟನೆ ಬೆಳಕಿಗೆ ಬಂದಿದೆ.
ಈ ಬಗ್ಗೆ ಮೋಸಕ್ಕೊಳಗಾದ ಸುಳ್ಯ ತಾಲೂಕಿನ ಐವತ್ತೊಕ್ಲು ಗ್ರಾಮದ ನಿವಾಸಿ ನಾರಾಯಣ್ ಎನ್(56) ಎಂಬವರು ಸುಬ್ರಹ್ಮಣ್ಯ ಠಾಣೆಗೆ ದೂರು ನೀಡಿದ್ದಾರೆ. ತಮ್ಮನ್ನು ರಿಲಯನ್ಸ್ ಕಂಪನಿಯವರೆಂದು ಪರಿಚಯಿಸಿಕೊಂಡು ಕರೆ ಮಾಡಿದ್ದ ಅಪರಿಚಿತರು ಟವರ್ ನಿರ್ಮಾಣಕ್ಕೆ ಸ್ವಂತ ಜಾಗದಲ್ಲಿ ಜಮೀನು ಕೇಳಿದ್ದಾರೆ. ಇಂತಿಷ್ಟು ಬಾಡಿಗೆ ನೀಡುತ್ತೇವೆಂದು ಹೇಳಿ ಒಪ್ಪಿಸಿದ್ದಲ್ಲದೆ, ಜಾಗದ ಪತ್ರಗಳನ್ನು ಮೊಬೈಲ್ ವಾಟ್ಸಪ್ ಮೂಲಕ ಪಡೆದುಕೊಂಡಿದ್ದಾರೆ.
ಅಲ್ಲದೆ, ಕಾಗದ ಪತ್ರಗಳ ರಿಜಿಸ್ಟ್ರೇಶನ್ ಹೆಸರಲ್ಲಿ ಆಗಸ್ಟ್ 12ರಿಂದ 14ರ ನಡುವೆ 52 ಸಾವಿರ ರೂಪಾಯಿ ಹಣವನ್ನು ಬೇರೆ ಬೇರೆ ಖಾತೆಗಳಿಗೆ ಹಾಕಿಸಿದ್ದಾರೆ. ಸುಬ್ರಹ್ಮಣ್ಯ ಠಾಣೆಯಲ್ಲಿ ವಂಚನೆ ಪ್ರಕರಣ ದಾಖಲಾಗಿದೆ. ಆನ್ಲೈನಲ್ಲಿ ತರಹೇವಾರಿ ಕಾರಣಗಳನ್ನು ಮುಂದಿಟ್ಟು ಅಮಾಯಕರನ್ನು ಮೋಸಗೊಳಿಸುವ ಪ್ರಕರಣಗಳು ನಡೆಯುತ್ತಿದ್ದು, ಇದೊಂದು ಹೊಸ ಮಾದರಿಯ ಘಟನೆಯಾಗಿದೆ.
Sullia man cheats about 52 thousand for installing Reliance tower in Mangalore.
13-08-26 02:22 pm
HK News Staffer
ಸಚಿವ ಸ್ಥಾನ ಕೈತಪ್ಪಿದ ಮಂಕಾಳ ವೈದ್ಯಗೆ ವಿಧಾನಸಭೆ ಉಪ...
13-08-26 01:00 pm
ಕೊನೆಗೂ ಖಾತೆ ಫೈನಲ್ ; ಜಮೀರ್ ಡೌನ್ ಗ್ರೇಡ್, ಖಾದರ್...
12-08-26 06:57 pm
ರಾಜ್ಯದಲ್ಲಿ ಗುಟ್ಕಾ, ಪಾನ್ ಮಸಾಲಾ ಉತ್ಪನ್ನಗಳಿಗೆ ನಿ...
12-08-26 06:06 pm
13 ಸಚಿವರಿಗೆ ಖಾತೆ ಹಂಚಿಕೆ; ಮುನಿಯಪ್ಪ ಸಮಾಜ ಕಲ್ಯಾಣ...
12-08-26 02:58 pm
11-08-26 10:25 pm
HK News Staffer
ಇಬ್ಬರು ಸಹೋದರಿಯರ ಇಸ್ಲಾಂ ಮತಾಂತರ ಎತ್ತಿಹಿಡಿದ ಅಲಹಾ...
11-08-26 04:49 pm
ಕಾಶ್ಮೀರಿ ಪಂಡಿತರನ್ನು ಗುರಿಯಾಗಿಸಿ ಉಗ್ರರ ಬೆದರಿಕೆ...
11-08-26 04:32 pm
ಮೋದಿ ಸೆಲ್ಫಿ ವಿಡಿಯೋ ತೆಗೆದು ಹಾಕಿದ್ದ ಫೇಸ್ಬುಕ್ ಕಂ...
05-08-26 08:36 pm
ಜಾನ್ಸನ್ & ಜಾನ್ಸನ್ ಬೇಬಿ ಪೌಡರ್ ನಿಂದ ಕ್ಯಾನ್ಸರ್ ಆ...
01-08-26 05:17 pm
12-08-26 11:06 pm
HK News Desk
ಸಾರ್ವಜನಿಕ ಕೆಲಸಕ್ಕೆ ಲಂಚದ ಆರೋಪ; ಮಂಗಳೂರು, ಬೆಳ್ತಂ...
12-08-26 02:08 pm
ದಕ್ಷಿಣ ಕನ್ನಡ ಡಿಸಿ ಸರ್ಕಾರಿ ನಿವಾಸದ ನಾಮಫಲಕದಲ್ಲಿ...
12-08-26 11:32 am
Mangalore Railway, Train: ಕಾಲು ಜಾರಿ ರೈಲಿನಡಿ ಬ...
11-08-26 10:23 pm
ಮೂಡುಬಿದಿರೆಯಲ್ಲಿ ಸಿಲಿಂಡರ್ ಸ್ಫೋಟ ; ಆರು ವರ್ಷದ ಬಾ...
11-08-26 10:03 pm
13-08-26 01:17 pm
HK News Staffer
Mangalore crime, Arrest: ಕೈ ಕೋಳದಲ್ಲೇ ಪೊಲೀಸರನ್...
12-08-26 11:18 pm
Panambur Robbery, Update, Mangalore: ಪಣಂಬೂರು...
12-08-26 07:47 pm
ಉಡುಪಿಯಲ್ಲಿ ಶಿಕ್ಷಕಿಯ ಮನೆಯ ಟೆರೇಸ್ ಬಾಗಿಲು ಮುರಿದ...
11-08-26 05:34 pm
ಫೇಸ್ಬುಕ್ ಜಾಹೀರಾತು ನಂಬಿ ಷೇರು ಮಾರ್ಕೆಟ್ ಹೂಡಿಕೆ...
11-08-26 05:28 pm