ಬ್ರೇಕಿಂಗ್ ನ್ಯೂಸ್
09-06-23 10:52 pm Mangalore Correspondent ಕ್ರೈಂ
ಮಂಗಳೂರು, ಜೂನ್ 9: ಗಾಂಜಾ ವ್ಯಾಪಾರ- ವಹಿವಾಟಿನಲ್ಲಿ ತೊಡಗಿಕೊಂಡಿದ್ದ ಬಂಟ್ವಾಳ ಮೂಲದ ಯುವಕನನ್ನು ಚಿಕ್ಕಮಗಳೂರು ಜಿಲ್ಲೆಯ ಬಣಕಲ್ ಗುಡ್ಡದಲ್ಲಿ ಪೆಟ್ರೋಲ್ ಹಾಕಿ ಸುಟ್ಟು ಹಾಕಿದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ಯುವಕನನ್ನು ಬಂಟ್ವಾಳ ತಾಲೂಕಿನ ಇರಾ ಗ್ರಾಮದ ಅಬ್ಬಾಸ್ ಎಂಬವರ ಪುತ್ರ ಫವಾಸ್ ಎಂದು ಗುರುತಿಸಲಾಗಿದೆ. ಮೂಡಿಗೆರೆ ಬಳಿಯ ಬಣಕಲ್ ಗುಡ್ಡದಲ್ಲಿ ಅರೆಸುಟ್ಟ ಶವ ಪತ್ತೆಯಾಗಿದ್ದು, ಫವಾಸ್ ನದ್ದೇ ಶವ ಎಂದು ಪತ್ತೆ ಮಾಡಲಾಗಿದೆ. ಫವಾಸ್ ಈ ಹಿಂದೆ ಮದುವೆಯಾಗಿದ್ದು, ಆನಂತರ ಪತ್ನಿಯನ್ನು ಬಿಟ್ಟು ಹೋಗಿದ್ದ. ಗಾಂಜಾ ಪೆಡ್ಲಿಂಗ್, ಅದೇ ವಹಿವಾಟಿನಲ್ಲಿ ವ್ಯಸ್ತನಾಗಿದ್ದ ಫವಾಸ್ ಮನಗೆ ಬರುವುದನ್ನೇ ಕಡಿಮೆ ಮಾಡಿದ್ದ.
ಫವಾಸ್ ಡ್ರಗ್ಸ್ ಸೇವನೆ ಮಾಡುತ್ತಿದ್ದ ಕಾರಣಕ್ಕೆ ಮನೆಯ ಗೌರವ ಹಾಳಾಗುತ್ತೆ ಎಂದು ಮನೆಯವರು ಕೂಡ ದೂರ ಮಾಡಿದ್ದರು. ಡ್ರಗ್ಸ್ ಮತ್ತು ಗಾಂಜಾ ಗ್ಯಾಂಗಿನಲ್ಲಿ ಗುರುತಿಸಿಕೊಂಡಿದ್ದಕ್ಕೆ ಫವಾಸ್ ಬಗ್ಗೆ ಕುಟುಂಬಸ್ಥರು ಅಸಮಾಧಾನದಲ್ಲಿದ್ದರು. ಅಕ್ರಮವಾಗಿ ಗಾಂಜಾ ವ್ಯವಹಾರದಲ್ಲಿ ತೊಡಗಿಸಿಕೊಂಡಿದ್ದರಿಂದ ಮಂಗಳೂರು, ಬಂಟ್ವಾಳದಲ್ಲಿ ಪೊಲೀಸರಿಗೆ ನೋಟೆಡ್ ಆಗಿಯೂ ಇದ್ದ. ಹತ್ತು ದಿನಗಳ ಹಿಂದೆ ಫವಾಸ್ ನನ್ನು ತಂಡವೊಂದು ಅಪಹರಿಸಿದೆ ಎನ್ನಲಾಗುತ್ತಿದ್ದು ಆನಂತರ ನಾಪತ್ತೆಯಾಗಿದ್ದ. ಗಾಂಜಾ ವಹಿವಾಟಿನಲ್ಲಿ ಹಣಕಾಸು ವಿಷಯದಲ್ಲಿ ವೈಷಮ್ಯದಿಂದ ತಂಡ ಅಪಹರಿಸಿತ್ತು ಎನ್ನಲಾಗಿದೆ.
ಈ ನಡುವೆ, ಮೂಡಿಗೆರೆ ಬಳಿಯ ಬಣಕಲ್ ಗುಡ್ಡದಲ್ಲಿ ಪೆಟ್ರೋಲ್ ಹಾಕಿ ಸುಟ್ಟ ಶವ ಪತ್ತೆಯಾಗಿದ್ದು ಫವಾಸ್ ನದ್ದೇ ಎಂದು ಪೊಲೀಸರು ಗುರುತು ಹಚ್ಚಿದ್ದಾರೆ. ಫವಾಸ್ ಕೊಲೆ ಪ್ರಕರಣದಲ್ಲಿ ವಗ್ಗ ಮತ್ತು ಕಾವಳಕಟ್ಟೆಯ ಯುವಕರು ಇದ್ದಾರೆ ಎಂಬುದನ್ನು ಪೊಲೀಸರು ಶಂಕಿಸಿದ್ದಾರೆ. ಫವಾಸ್ ಜೊತೆಗೆ ಗಾಂಜಾ ವಹಿವಾಟಿನಲ್ಲಿ ಗುರುತಿಸಿದ್ದ ಗೆಳೆಯರನ್ನು ಪೊಲೀಸರು ವಿಚಾರಣೆ ನಡೆಸಿದ್ದಾರೆ.
Mangalore Bantwal Youth involved in Ganja gang murdered, body found at Bankal, gutted with fire. The deceased has been identified as Abbas from Ira, Bantwal.
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
18-04-25 02:21 pm
HK News Desk
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
Mumbai terror attack, Tahawwur Rana David He...
14-04-25 11:25 pm
14 ಸಾವಿರ ಕೋಟಿ ವಂಚನೆ ಎಸಗಿ ದೇಶ ಬಿಟ್ಟು ಹೋಗಿದ್ದ ಮ...
14-04-25 05:38 pm
19-04-25 06:19 pm
Mangaluru Correspondent
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
Mangalore Waqf protest, Adyar, Police: ವಕ್ಫ್...
18-04-25 10:17 pm
Mangalore Waqf Protest, Adyar, Police, Live:...
18-04-25 12:54 pm
19-04-25 09:22 pm
Mangalore Correspondent
Ricky Rai Shot, Crime, Rakesh Malli, Mangalor...
19-04-25 11:01 am
ರಾಣಾ ಬಳಿಕ ಮತ್ತೊಬ್ಬ ಮೋಸ್ಟ್ ವಾಂಟೆಡ್ ಖಲೀಸ್ತಾನಿ ಉ...
19-04-25 10:55 am
Mangalore Kuthar, Ullal Gang Rape, Arrest: ಕು...
18-04-25 10:59 pm
Hyderabad Murder, Mother suicide: ತೆಂಗಿನಕಾಯಿ...
18-04-25 08:14 pm