ಬ್ರೇಕಿಂಗ್ ನ್ಯೂಸ್
05-04-23 10:18 pm Bangalore Correspondent ಕ್ರೈಂ
ಬೆಂಗಳೂರು, ಎ.5 : ಸುಟ್ಟ ಸ್ಥಿತಿಯಲ್ಲಿ ಮಹಿಳೆಯ ಶವ ಪತ್ತೆಯಾಗಿದ್ದು ಆಕೆಯನ್ನು ಪ್ರಿಯಕರನೇ ಕೊಲೆಗೈದು ಸುಟ್ಟು ಹಾಕಿದ ಬಗ್ಗೆ ಸಂಶಯ ವ್ಯಕ್ತವಾಗಿದೆ. ಮಂಜು (32) ಕೊಲೆಯಾದ ಮಹಿಳೆ.
ಬೆಂಗಳೂರು ಹೊರವಲಯದ ಹೆಬ್ಬಗೋಡಿ ವ್ಯಾಪ್ತಿಯ ಸಿಂಗೇನ ಅಗ್ರಹಾರದಲ್ಲಿ ಘಟನೆ ನಡೆದಿದೆ. ದೇಹವನ್ನು ಕತ್ತರಿಸಿ ನಿರ್ಜನ ಪ್ರದೇಶ ಸುಟ್ಟು ಹಾಕಿರುವುದನ್ನು ಪೊಲೀಸರು ಪತ್ತೆ ಮಾಡಿದ್ದಾರೆ. ಅಲ್ಲಲ್ಲಿ ಚದುರಿ ಬಿದ್ದ ದೇಹದ ಭಾಗಗಳನ್ನು ಪತ್ತೆ ಮಾಡಲಾಗಿದೆ.
ಮಂಜುವನ್ನು ಕೊಲೆಗೈದಿರುವ ಬಗ್ಗೆ ಸಂಬಂಧಿಕರು ಆರೋಪಿಸಿದ್ದಾರೆ. ಈ ಕುರಿತು ಹೆಬ್ಬಗೋಡಿ ಪೊಲೀಸರಿಗೆ ದೂರು ನೀಡಿದ್ದಾರೆ. ಮಂಜು ಜತೆ 10 ವರ್ಷಗಳಿಂದ ನಾರಾಯಣ್ ಎಂಬಾತ ಅನೈತಿಕ ಸಂಬಂಧದಲ್ಲಿದ್ದು ಆತನೇ ಕೊಲೆಗೈದ ಆರೋಪ ಕೇಳಿಬಂದಿದೆ. ನಾರಾಯಣ್ ಸಂಪಿಗೆನಗರದಲ್ಲಿ ಕಿರಾಣಿ ಅಂಗಡಿ ನಡೆಸ್ತಿದ್ದರೆ, ಮಂಜು ಅಪಾರ್ಟ್ಮೆಂಟ್ ಗಳಲ್ಲಿ ಮನೆಕೆಲಸ ಮಾಡುತ್ತಿದ್ದಳು. ಕೆಲವು ದಿನಗಳ ಹಿಂದೆ ಮಂಜು ಜೊತೆ ನಾರಾಯಣ್ ಜಗಳವಾಡಿದ್ದು ನೀನು ಕೆಲಸಕ್ಕೆ ಹೋಗಬಾರದೆಂದು ತಾಕೀತು ಮಾಡಿದ್ದ ಎನ್ನಲಾಗಿದೆ. ಆದರೆ ನಾರಾಯಣ್ ಮಾತನ್ನು ಲೆಕ್ಕಿಸದೆ ಮಂಜು ಕೆಲಸಕ್ಕೆ ಹೋಗಿದ್ದಳು.
ಮಾ.29ರಿಂದ ಮಹಿಳೆ ಕಾಣೆಯಾಗಿದ್ದು ಹೆಬ್ಬಗೋಡಿ ಠಾಣೆಗೆ ತಂಗಿ ಲಕ್ಷ್ಮಿ ನಾಪತ್ತೆ ದೂರು ನೀಡಿದ್ದಳು. ಈ ನಡುವೆ, ನಿರ್ಜನ ಪ್ರದೇಶದಲ್ಲಿ ಸುಟ್ಟು ಹೋಗಿದ್ದ ಸ್ಥಿತಿಯಲ್ಲಿ ಶವ ಸಿಕ್ಕಿತ್ತು. ಸಂಶಯದಲ್ಲಿ ಮಂಜು ತಂಗಿ ಲಕ್ಷ್ಮಿಯನ್ನು ಕರೆದು ಪೊಲೀಸರು ತೋರಿಸಿದ್ದು ಚಪ್ಪಲಿ, ಕೈ ಬಳೆ ಕಂಡು ದೇಹದ ಗುರುತು ಹಿಡಿದಿದ್ದಾಳೆ. ಇದೀಗ ಸಂಪಿಗೆನಗರ ನಿವಾಸಿ ನಾರಾಯಣ್ ಮೇಲೆ ಕೊಲೆ ಆರೋಪ ದಾಖಲಾಗಿದೆ. ಇದೇ ವೇಳೆ, ಆರೋಪಿ ನಾರಾಯಣ್ ನಾಪತ್ತೆಯಾಗಿದ್ದು ಪೊಲೀಸರು ತನಿಖೆ ಆರಂಭಿಸಿದ್ದಾರೆ.
Bangalore married woman murdered by boyfriend over work issue. The deceased has been knows as Manju. Manju and Narayan had illecit affair from past 10 years. Manju was burnt and cut into pieces aftee manju began to to work which Narayan didn't like.
12-08-26 06:57 pm
HK News Staffer
ರಾಜ್ಯದಲ್ಲಿ ಗುಟ್ಕಾ, ಪಾನ್ ಮಸಾಲಾ ಉತ್ಪನ್ನಗಳಿಗೆ ನಿ...
12-08-26 06:06 pm
13 ಸಚಿವರಿಗೆ ಖಾತೆ ಹಂಚಿಕೆ; ಮುನಿಯಪ್ಪ ಸಮಾಜ ಕಲ್ಯಾಣ...
12-08-26 02:58 pm
ಜೈಲಿನಲ್ಲಿ ವಿಐಪಿ ಖೈದಿಗಳ ಬ್ಯಾರಕ್ ಗೆ ಸಿಸಿಬಿ ದಾಳ...
12-08-26 11:37 am
ಹೋಟೆಲ್ ಅಡುಗೆ ಮನೆಯಲ್ಲೂ ಕ್ಯಾಮೆರಾ ಕಡ್ಡಾಯ ; ಹೊಸ ಕ...
10-08-26 07:54 pm
11-08-26 10:25 pm
HK News Staffer
ಇಬ್ಬರು ಸಹೋದರಿಯರ ಇಸ್ಲಾಂ ಮತಾಂತರ ಎತ್ತಿಹಿಡಿದ ಅಲಹಾ...
11-08-26 04:49 pm
ಕಾಶ್ಮೀರಿ ಪಂಡಿತರನ್ನು ಗುರಿಯಾಗಿಸಿ ಉಗ್ರರ ಬೆದರಿಕೆ...
11-08-26 04:32 pm
ಮೋದಿ ಸೆಲ್ಫಿ ವಿಡಿಯೋ ತೆಗೆದು ಹಾಕಿದ್ದ ಫೇಸ್ಬುಕ್ ಕಂ...
05-08-26 08:36 pm
ಜಾನ್ಸನ್ & ಜಾನ್ಸನ್ ಬೇಬಿ ಪೌಡರ್ ನಿಂದ ಕ್ಯಾನ್ಸರ್ ಆ...
01-08-26 05:17 pm
12-08-26 11:06 pm
HK News Desk
ಸಾರ್ವಜನಿಕ ಕೆಲಸಕ್ಕೆ ಲಂಚದ ಆರೋಪ; ಮಂಗಳೂರು, ಬೆಳ್ತಂ...
12-08-26 02:08 pm
ದಕ್ಷಿಣ ಕನ್ನಡ ಡಿಸಿ ಸರ್ಕಾರಿ ನಿವಾಸದ ನಾಮಫಲಕದಲ್ಲಿ...
12-08-26 11:32 am
Mangalore Railway, Train: ಕಾಲು ಜಾರಿ ರೈಲಿನಡಿ ಬ...
11-08-26 10:23 pm
ಮೂಡುಬಿದಿರೆಯಲ್ಲಿ ಸಿಲಿಂಡರ್ ಸ್ಫೋಟ ; ಆರು ವರ್ಷದ ಬಾ...
11-08-26 10:03 pm
12-08-26 11:18 pm
HK News Staffer
Panambur Robbery, Update, Mangalore: ಪಣಂಬೂರು...
12-08-26 07:47 pm
ಉಡುಪಿಯಲ್ಲಿ ಶಿಕ್ಷಕಿಯ ಮನೆಯ ಟೆರೇಸ್ ಬಾಗಿಲು ಮುರಿದ...
11-08-26 05:34 pm
ಫೇಸ್ಬುಕ್ ಜಾಹೀರಾತು ನಂಬಿ ಷೇರು ಮಾರ್ಕೆಟ್ ಹೂಡಿಕೆ...
11-08-26 05:28 pm
ಸುರತ್ಕಲ್ ನಲ್ಲಿ ಹೈಟೆನ್ಷನ್ ತಂತಿಗೆ ಕಬ್ಬಿಣದ ರಾಡ್...
11-08-26 01:04 pm