ಬ್ರೇಕಿಂಗ್ ನ್ಯೂಸ್
02-03-23 09:29 pm Bangalore Correspondent ಕ್ರೈಂ
ಬೆಂಗಳೂರು, ಮಾ.2: ಅಪಾರ್ಟ್ಮೆಂಟ್ ಮೇಲೆ 15 ಕೋಟಿ ಸಾಲ ಇದೆಯೆಂದು ಹೇಳಿ ಬ್ಯಾಂಕ್ ಸಿಬಂದಿ ಏಕಾಏಕಿ ನ್ಯಾಯಾಲಯದ ಆದೇಶದ ನೆಪದಲ್ಲಿ 29 ಮನೆಗಳನ್ನು ಸೀಜ್ ಮಾಡಿ, ನೂರಕ್ಕೂ ಹೆಚ್ಚು ಮಂದಿಯನ್ನು ಬೀದಿಗೆ ತಳ್ಳಿದ ಘಟನೆ ರಾಜಾಜಿನಗರದಲ್ಲಿ ನಡೆದಿದೆ.
ರಾಜಾಜಿನಗರದ ಶಿವನಹಳ್ಳಿಯ ಐಶ್ವರ್ಯ ಅಪಾರ್ಟ್ಮೆಂಟ್ ನಲ್ಲಿ ಘಟನೆ ನಡೆದಿದೆ. ಶಿವಣ್ಣ ಎಂಬವರಿಗೆ ಸೇರಿದ ಅಪಾರ್ಟ್ಮೆಂಟ್ ಇದಾಗಿದ್ದು, ಬ್ಯಾಂಕ್ ಸಾಲ ಮರುಪಾವತಿ ಮಾಡಿಲ್ಲವೆಂದು ಅಲ್ಲಿರುವ ಮನೆಗಳನ್ನು ಜಪ್ತಿ ಮಾಡಿದ್ದಾರೆ. ಇದರಿಂದ 25 ವರ್ಷಗಳಿಂದ ಮನೆಗಳನ್ನು ಲೀಸ್ ಪಡೆದಿದ್ದವರು ಶಾಕ್ ಆಗಿದ್ದಾರೆ. 29 ಮನೆಗಳ ಸಂಸಾರವನ್ನು ಏಕಾಏಕಿ ಬ್ಯಾಂಕ್ ಸಿಬಂದಿ ಮತ್ತು ಜೊತೆಗೆ ಬಂದಿದ್ದ ಮೂರನೇ ವ್ಯಕ್ತಿಗಳು ದೌರ್ಜನ್ಯ ನಡೆಸಿ ಬೀದಿಗೆ ತಳ್ಳಿದ್ದಾರೆ. ಮನೆಮಂದಿ ಕೂಡಲೇ ಮನೆ ಖಾಲಿ ಮಾಡಬೇಕೆಂದು ಹೇಳಿ ದೌರ್ಜನ್ಯ ಎಸಗಿದ್ದಾರೆ.
ಅಪಾರ್ಟ್ಮೆಂಟ್ ಹೆಸರಲ್ಲಿ ಕೆನರಾ ಬ್ಯಾಂಕ್ ನಿಂದ 15 ಕೋಟಿ ಸಾಲ ಪಡೆದಿದ್ದಾರೆ ಎನ್ನಲಾಗುತ್ತಿದೆ. ಬಹುತೇಕ ಎಲ್ಲ ಕುಟುಂಬದವರು ಮನೆಗಳನ್ನು ಲೀಸ್ ಮೇಲೆ ಪಡೆದಿದ್ದು, ಈಗ ಏಕಾಏಕಿ ಎದ್ದು ಹೋಗಿ ಅಂದರೆ ಎಲ್ಲಿ ಹೋಗುವುದು ಎಂದು ಕಂಗಾಲಾಗಿದ್ದಾರೆ. ಮಾಲೀಕರು ಮಾಡಿದ ದೋಖಾಗೆ ಮನೆಗಳನ್ನು ಭೋಗ್ಯಕ್ಕೆ ಪಡೆದವರು ಈಗ ಸಿಕ್ಕಿಬೀಳುವಂತಾಗಿದೆ ಎನ್ನುವ ಆರೋಪ ಕೇಳಿಬಂದಿದೆ.
25 ವರ್ಷಗಳಿಂದ ನಾವು ಮನೆಯಲ್ಲಿದ್ದೀವಿ, ಇದುವರೆಗೂ ಸಾಲದ ಬಗ್ಗೆ ನಮಗೆ ಗೊತ್ತಿಲ್ಲ, ಇಬ್ಬರು ಬ್ಯಾಂಕ್ ಸಿಬಂದಿ, ಥರ್ಡ್ ಪಾರ್ಟಿಯವರನ್ನು ಕರೆಸ್ಕೊಂಡು ಬಂದು ಮನೆ ಒಳಗಡೆ ನುಗ್ಗಿ ದಾಂಧಲೆ ನಡೆಸಿದ್ದಾರೆ, ಅಮ್ಮನ ಮೇಲೆ ಕಾಲಲ್ಲಿ ಒದ್ದಿದ್ದಾರೆ. ಮನೆಯಲ್ಲಿ ಯಾರೂ ಇಲ್ಲದೇ ಇದ್ದಾಗ ಮಧ್ಯಾಹ್ನ ಹೊತ್ತಲ್ಲಿ ಬಂದು ದಾಂಧಲೆ ನಡೆಸಿದರೆ ಹೇಗೆ ಎಂದು ಮಾದೇಶ್ ಎಂಬವರು ಸುದ್ದಿ ವಾಹಿನಿಯ ಜೊತೆಗೆ ಅಲವತ್ತುಕೊಂಡಿದ್ದಾರೆ.
Big scam, 15 crore loan in the name of Aishwarya Apartment in Bengaluru, 29 flats seized by Bank in Bangalore, hundreds homeless. Flat residents were shocked after a sudden raid by bank officials.
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
18-04-25 02:21 pm
HK News Desk
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
Mumbai terror attack, Tahawwur Rana David He...
14-04-25 11:25 pm
14 ಸಾವಿರ ಕೋಟಿ ವಂಚನೆ ಎಸಗಿ ದೇಶ ಬಿಟ್ಟು ಹೋಗಿದ್ದ ಮ...
14-04-25 05:38 pm
19-04-25 06:19 pm
Mangaluru Correspondent
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
Mangalore Waqf protest, Adyar, Police: ವಕ್ಫ್...
18-04-25 10:17 pm
Mangalore Waqf Protest, Adyar, Police, Live:...
18-04-25 12:54 pm
19-04-25 10:46 pm
Mangalore Correspondent
Ullal Gang Rape, Crime, Update, Mangalore: ಗ್...
19-04-25 09:22 pm
Ricky Rai Shot, Crime, Rakesh Malli, Mangalor...
19-04-25 11:01 am
ರಾಣಾ ಬಳಿಕ ಮತ್ತೊಬ್ಬ ಮೋಸ್ಟ್ ವಾಂಟೆಡ್ ಖಲೀಸ್ತಾನಿ ಉ...
19-04-25 10:55 am
Mangalore Kuthar, Ullal Gang Rape, Arrest: ಕು...
18-04-25 10:59 pm