ಬ್ರೇಕಿಂಗ್ ನ್ಯೂಸ್
25-12-22 02:17 pm HK News Desk ಕ್ರೈಂ
ಪುಣೆ, ಡಿ.25 : 'ದೃಶ್ಯಂ’ ಚಿತ್ರದಲ್ಲಿ ಕೊಲೆ ಅಪರಾಧವನ್ನು ಮಾಡಿದರೂ, ಪೊಲೀಸರ ಕೈಗೆ ಸಿಗದಂತೆ ಮುಚ್ಚಿ ಹಾಕುವ ಕತೆಯಿದೆ. ಇದರಿಂದ ಪ್ರೇರಿತರಾದ ಇಬ್ಬರು ಯುವಕರು ತಮ್ಮ ತಂದೆಯನ್ನೇ ಕೊಂದು ದೇಹವನ್ನು ಸುಟ್ಟು ಹಾಕಿ ಸಾಕ್ಷ್ಯ ಮುಚ್ಚಿ ಹಾಕಲು ಯತ್ನಿಸಿದ ಘಟನೆ ಪುಣೆಯಲ್ಲಿ ನಡೆದಿದೆ. ಎಂಟು ದಿನಗಳ ಬಳಿಕ ಘಟನೆ ಬೆಳಕಿಗೆ ಬಂದಿದ್ದು ಪುಣೆ ಬಳಿಯ ಪಿಂಪ್ರಿ ಚಿಂಚ್ವಾಡ್ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.
ಮೃತರನ್ನು ಧನಂಜಯ್ ನವನಾಥ್ ಬನ್ಸೋಡೆ (45) ಎಂದು ಗುರುತಿಸಲಾಗಿದೆ. ತಿಂಡಿಗಳನ್ನು ತಯಾರಿಸಿ ಮಾರಾಟ ಮಾಡುವ ಕೆಲಸ ಮಾಡುತ್ತಿದ್ದ ಅವರನ್ನು ಡಿಸೆಂಬರ್ 15ರ ಮಧ್ಯರಾತ್ರಿ ಮಕ್ಕಳೇ ಕಬ್ಬಿಣದ ರಾಡ್ ನಲ್ಲಿ ಹೊಡೆದು ಹತ್ಯೆ ಮಾಡಿದ್ದಾರೆ.
ಇಬ್ಬರು ಮಕ್ಕಳಲ್ಲಿ ಒಬ್ಬಾತ ಸುಜಿತ್ ಬನ್ಸೋಡೆ (22) ಕಂಪ್ಯೂಟರ್ ಇಂಜಿನಿಯರಿಂಗ್ ವಿದ್ಯಾರ್ಥಿ. ಮತ್ತೋರ್ವ ಅಭಿಜಿತ್ (18) 12ನೇ ತರಗತಿಯಲ್ಲಿ ಓದುತ್ತಿದ್ದಾನೆ. ಈಗ ಇಬ್ಬರೂ ಜೈಲು ಸೇರಿದ್ದಾರೆ. ದೃಶ್ಯಂ ಹಿಂದಿ ಅವತರಣಿಕೆ ಚಿತ್ರವನ್ನು ನೋಡಿದ್ದ ಸಹೋದರರು, ತಂದೆಯ ಮೇಲಿನ ಸಿಟ್ಟಿನಿಂದ ಕೊಲೆಗೆ ಸಂಚು ರೂಪಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಗಳು ಸಾಕ್ಷ್ಯ ನಾಶಪಡಿಸಲು ಶವವನ್ನು ಸುಟ್ಟು ಹಾಕಿರುವುದು ತನಿಖೆಯಲ್ಲಿ ತಿಳಿದುಬಂದಿದೆ.
ಕೊಲೆಯಾದ ವ್ಯಕ್ತಿ ಜಾಲತಾಣದಲ್ಲಿ ನಾಗ್ಪುರ ಮೂಲದ ಮಹಿಳೆಯೊಂದಿಗೆ ಪ್ರೇಮ ಸಂಬಂಧ ಹೊಂದಿದ್ದ. ಪತ್ನಿ ಮತ್ತು ಇಬ್ಬರು ಮಕ್ಕಳು ಇದನ್ನು ಆಕ್ಷೇಪಿಸಿದ್ದು, ಈ ಕಾರಣಕ್ಕೆ ಇವರ ನಡುವೆ ಪದೇ ಪದೇ ಜಗಳ ನಡೀತಿತ್ತು. ಆದರೆ ಮಕ್ಕಳು ಬೆದರಿಕೆ ಹಾಕಿದರೂ, ತಂದೆ ತನ್ನ ಅಕ್ರಮ ಸಂಬಂಧದಿಂದ ಹೊರಬರಲು ಒಪ್ಪಿಕೊಂಡಿಲ್ಲ ಎನ್ನಲಾಗಿದೆ. ಹೀಗಾಗಿ ಇಬ್ಬರು ಸೋದರರು ಸೇರಿ ತಂದೆಯನ್ನು ಕೊಲ್ಲಲು ನಿರ್ಧರಿಸಿದ್ದರು.
ಡಿಸೆಂಬರ್ 15 ರಂದು ರಾತ್ರಿ ತಂದೆ ಮಲಗಿದ್ದಾಗ, ಕಬ್ಬಿಣದ ರಾಡ್ನಿಂದ ಹೊಡೆದು ಸಾಯಿಸಿದ್ದಾರೆ. ನಂತರ ಶವವನ್ನು ತಂದೆ ತಿಂಡಿ ಕಾಯಿಸಲು ಬಳಸುತ್ತಿದ್ದ ಕುಲುಮೆಯಲ್ಲಿ ಸುಟ್ಟಿದ್ದಾರೆ. ಸಾಕ್ಷಿ ಉಳಿಯದಂತೆ ಮಾಡಲು ಬೂದಿ ಮತ್ತು ಮೂಳೆಗಳನ್ನು ನದಿಯಲ್ಲಿ ವಿಸರ್ಜಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ತಂದೆಯನ್ನು ಸುಟ್ಟು ಹಾಕಿದ್ದಲ್ಲದೆ, ಎಲುಬುಗಳನ್ನು ನದಿಯಲ್ಲಿ ವಿಸರ್ಜಿಸಿರುವುದು ನೋಡಿದರೆ ಉಡುಪಿಯಲ್ಲಿ ಭಾಸ್ಕರ ಶೆಟ್ಟಿ ಎಂಬ ಉದ್ಯಮಿಯನ್ನು ಮಗನೇ ಕೊಲೆಗೈದು ಶವವನ್ನು ಹೋಮ ಕುಂಡದಲ್ಲಿ ಸುಟ್ಟು ನದಿಯಲ್ಲಿ ವಿಸರ್ಜಿಸಿದ ಕೃತ್ಯದ ರೀತಿಯಲ್ಲೇ ನಡೆದಿದೆ. ವಿಕೃತ ರೀತಿಯಲ್ಲಿ ವರ್ತಿಸಿದ ಅಣ್ಣ- ತಮ್ಮಂದಿರು ಈಗ ಜೈಲು ಪಾಲಾಗಿದ್ದಾರೆ.
Taking a leaf out of “Drishyam” movie, two men murder their 43-year-old father and burn his body. The Pimpri-Chinchwad police arrested the duo on Friday, eight days after the crime was committed.According to the police, the deceased has been identified as Dhananjay Navnath Bansode, who ran an eatery that mainly sold farsan, a fried snack. Dhananjay was killed by his two sons using an iron rod when he was sleeping during the intervening night of December 15 and 16.
06-05-25 01:35 pm
HK News Desk
Hassan Suicide, Police Constable Harrasment:...
05-05-25 01:30 pm
ಅಲ್ಲೊಂದು, ಇಲ್ಲೊಂದು ಕೊಲೆ ಆಗತ್ತೆ, ಅದನ್ಯಾಕೆ ಧರ್ಮ...
04-05-25 09:55 pm
ಸಿಇಟಿ ಬಳಿಕ ನೀಟ್ ಪರೀಕ್ಷೆಗೂ ಜನಿವಾರಕ್ಕೆ ಕತ್ತರಿ !...
04-05-25 09:26 pm
ಹಿಮಾಲಯ - ದೆಹಲಿಗೆ ಸುನಾಮಿ, ಮಹಾನ್ ನಾಯಕರ ದುರ್ಮರಣ...
04-05-25 09:15 pm
06-05-25 02:45 pm
HK News Desk
ಭಾರತ - ಪಾಕ್ ಯುದ್ಧ ಸನ್ನಿವೇಶ ; ದೇಶಾದ್ಯಂತ ಮೇ 7ರಂ...
05-05-25 11:10 pm
ಪಾಕ್ ವಾಯು ಪ್ರದೇಶದಲ್ಲಿ ಭಾರತದ ವಿಮಾನಗಳಿಗೆ ನಿರ್ಬಂ...
30-04-25 06:59 pm
India Pakistan War: ಭಾರತೀಯ ಸೇನಾಪಡೆಗೆ ಪರಮಾಧಿಕಾ...
30-04-25 03:14 pm
Pakistan, No-fly zone islamabad: ಭಾರತದ ಪ್ರತೀಕ...
30-04-25 02:13 pm
06-05-25 12:32 pm
Mangalore Correspondent
Mangalore Police, Sharan Pumpwell: ದಕ್ಷಿಣ ಕನ್...
05-05-25 10:59 pm
Suhas Shetty murder, MP Brijesh Chowta, Param...
05-05-25 10:43 pm
Mangalore Suhas Shetty murder, BJP Umanath Ko...
05-05-25 07:15 pm
MLA Harish Poonja, Dinesh Gundurao: ಬುರ್ಖಾಧಾರ...
05-05-25 05:10 pm
03-05-25 02:16 pm
Mangalore Correspondent
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm
Mangalore Mudipu Murder, Mob, Police, Crime:...
29-04-25 09:59 pm