ಬ್ರೇಕಿಂಗ್ ನ್ಯೂಸ್
26-11-22 10:05 pm Mangalore Correspondent ಕ್ರೈಂ
ಸುಳ್ಯ, ನ.26 : ಪತ್ನಿಯನ್ನು ಕೊಲೆಗೈದು ಶವವನ್ನು ಗೋಣಿಚೀಲದಲ್ಲಿ ತುಂಬಿಸಿಟ್ಟು ಓಡಿ ಹೋಗಿದ್ದ ಪಶ್ಚಿಮ ಬಂಗಾಳ ಮೂಲದ ಆರೋಪಿಯನ್ನು ಸುಳ್ಯ ಪೊಲೀಸರು ಬಂಧಿಸಿದ್ದಾರೆ.
ಸುಳ್ಯದ ಬೀರಮಂಗಲದಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದ ಪಶ್ಚಿಮ ಬಂಗಾಲದ ಇಮ್ರಾನ್ ಶೇಖ್ ಎಂಬಾತ ತನ್ನ ಪತ್ನಿಯನ್ನು ಕೊಂದು ಗೋಣಿಯಲ್ಲಿ ತುಂಬಿಸಿಟ್ಟು ಪರಾರಿಯಾಗಿದ್ದ. ಬಾರ್ ಅಂಡ್ ರೆಸ್ಟೋರೆಂಟ್ ಒಂದರಲ್ಲಿ ಕೆಲಸ ಮಾಡುತ್ತಿದ್ದ ಇಮ್ರಾನ್ ತನ್ನ ಪತ್ನಿ ಗರ್ಭಿಣಿಯಾಗಿದ್ದು ಆಕೆಯನ್ನು ಊರಲ್ಲಿ ಬಿಟ್ಟು ಬರುವುದಾಗಿ ಹೊಟೇಲ್ ಮಾಲಕರಲ್ಲಿ ಹೇಳಿದ್ದ. ಆದರೆ ಈ ನಡುವೆ, ಇಮ್ರಾನ್ ಹೇಳದೆ ಕೇಳದೆ ನಾಪತ್ತೆಯಾಗಿದ್ದ. ಆತನ ಮನೆಯಲ್ಲಿ ಪತ್ನಿ ಇದ್ದ ಬಗ್ಗೆ ತಿಳಿದಿದ್ದರಿಂದ ಹೊಟೇಲಿನ ಇತರ ಕೆಲಸಗಾರರು ಮನೆ ಮಾಲೀಕರಿಗೆ ಕೇಳಿದ್ದರು. ಆದರೆ ಮನೆಗೆ ಬೀಗ ಹಾಕಲಾಗಿತ್ತು.
ಬಳಿಕ ಪೊಲೀಸರಿಗೆ ತಿಳಿಸಲಾಗಿ ಮನೆ ಬೀಗ ಒಡೆದು ನೋಡಿದಾಗ ಒಳಭಾಗದಲ್ಲಿ ಗೋಣಿಚೀಲದಲ್ಲಿ ಯುವತಿಯ ಶವ ಸಿಕ್ಕಿತ್ತು. ಟಾಯ್ಲೆಟ್ ಕೋಣೆಯಲ್ಲಿ ಗೋಣಿ ಚೀಲ ಇಡಲಾಗಿತ್ತು. ಪೊಲೀಸರು ಮತ್ತು ಸ್ಥಳೀಯರು ಇಮ್ರಾನ್ ಬಗ್ಗೆ ಶಂಕೆ ವ್ಯಕ್ತಪಡಿಸಿದ್ದರು. ಅದರಂತೆ, ಸುಳ್ಯ ಪೊಲೀಸರು ಆರೋಪಿ ಇಮ್ರಾನ್ ಶೇಖ್ ಬಗ್ಗೆ ಹುಡುಕಾಟ ನಡೆಸಿದ್ದಾರೆ. ಆತ ಪಶ್ಚಿಮ ಬಂಗಾಳ ತೆರಳಿರುವ ಬಗ್ಗೆ ಮಾಹಿತಿ ಪಡೆದು ಅಲ್ಲಿನ ಪೊಲೀಸರ ಸಹಾಯ ಪಡೆದು ಆರೋಪಿಯನ್ನು ಬಂಧಿಸಿದ್ದಾರೆ.
ಪತ್ನಿಯನ್ನು ಕೊಂದು ಗೋಣಿಯಲ್ಲಿ ತುಂಬಿಟ್ಟು ಪರಾರಿಯಾಗಿದ್ದ ಇಮ್ರಾನ್ ತನ್ನ ಊರಿಗೆ ಹೋಗಿದ್ದ ಎನ್ನಲಾಗಿದೆ. ತನಿಖೆ ನಡೆಸಿದ ಸುಳ್ಯ ಪೊಲೀಸರು ಅಲ್ಲಿನ ಪೋಲೀಸರ ಸಹಾಯ ಪಡೆದು ಬಂಧಿಸಿ, ಸುಳ್ಯಕ್ಕೆ ಕರೆತಂದಿರುವುದಾಗಿ ತಿಳಿದು ಬಂದಿದೆ. ಎಂಟು ತಿಂಗಳ ಹಿಂದೆ ಪತ್ನಿಯೆಂದು ಹೇಳಿ ಯುವತಿಯನ್ನು ಪಶ್ಚಿಮ ಬಂಗಾಳದಿಂದ ಕರೆತಂದಿದ್ದ. ಯಾಕಾಗಿ ಕೊಲೆ ಮಾಡಿದ್ದಾನೆ, ಆಕೆ ಗರ್ಭಿಣಿಯಾಗಿದ್ದಳೇ ಎಂಬ ಬಗ್ಗೆ ಪೊಲೀಸ್ ತನಿಖೆಯಲ್ಲಿ ತಿಳಿದುಬರಬೇಕು.
Police arrested a man, accused of killing his wife and stuffing her body into a gunny bag before escaping from the spot. Imran was working in a hotel in Sullia and used to reside in a rented house at Beeramangala for the past seven months. Few days ago, he told his employer that he is leaving to native place. Imran Sheikh, native of West Bengal is the accused arrested by Sullia police with the help of police of West Bengal. He was brought to Sullia on November 24.
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
20-04-25 08:42 pm
HK News Desk
Jagdeep Dhankhar, Justice Varma case: ರಾಷ್ಟ್ರ...
18-04-25 02:21 pm
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
Mumbai terror attack, Tahawwur Rana David He...
14-04-25 11:25 pm
20-04-25 05:42 pm
Mangalore Correspondent
DK Shivakumar, Dharmasthala temple, Mangalore...
20-04-25 12:51 pm
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
20-04-25 07:26 pm
HK News Desk
Gold smuggling case, Mangalore Court Verdict,...
19-04-25 10:46 pm
Ullal Gang Rape, Crime, Update, Mangalore: ಗ್...
19-04-25 09:22 pm
Ricky Rai Shot, Crime, Rakesh Malli, Mangalor...
19-04-25 11:01 am
ರಾಣಾ ಬಳಿಕ ಮತ್ತೊಬ್ಬ ಮೋಸ್ಟ್ ವಾಂಟೆಡ್ ಖಲೀಸ್ತಾನಿ ಉ...
19-04-25 10:55 am