ಬ್ರೇಕಿಂಗ್ ನ್ಯೂಸ್
21-11-22 06:51 pm HK News Desk ಕ್ರೈಂ
ಇಂದೋರ್, ನ.21: ಇತ್ತೀಚೆಗೆ ರಾಜಧಾನಿ ದೆಹಲಿಯಲ್ಲಿ ತನ್ನನ್ನು ಪ್ರೀತಿಸುತ್ತಿದ್ದ ಸಂಗಾತಿಯನ್ನು ಕೊಂದು 35 ತುಂಡುಗಳನ್ನಾಗಿ ಕತ್ತರಿಸಿದ್ದು ಇಡೀ ದೇಶವನ್ನೇ ಬೆಚ್ಚಿ ಬೀಳಿಸಿತ್ತು. ಮಧ್ಯಪ್ರದೇಶದಲ್ಲಿ ಅದೇ ರೀತಿಯ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದ್ದು, ಪತ್ನಿಯ ಶೀಲ ಶಂಕಿಸಿ ಗಂಡನೇ ಆಕೆಯನ್ನು ಕಡಿದು ಕತ್ತರಿಸಿ ಹಾಕಿದ್ದಾನೆ.
ಹೀಗೆ ಕತ್ತರಿಸಲ್ಪಟ್ಟ ಮಹಿಳೆಯನ್ನು ಸರಸ್ವತಿ ಪಟೇಲ್ ಎಂದು ಗುರುತಿಸಿದ್ದು, ಆಕೆಯ ಗಂಡನನ್ನು ರಾಮಕಿಶೋರ್ ಪಟೇಲ್ ಎಂದು ಗುರುತಿಸಲಾಗಿದೆ. ಪತ್ನಿಯನ್ನು ಕಡಿದು ಹಾಕಲು ಬಳಸಿದ ಹರಿತ ಆಯುಧವನ್ನು ಮತ್ತು ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪತ್ನಿಯನ್ನು ಕಡಿದು ಹಾಕಿದ್ದಲ್ಲದೆ ಎರಡಾಗಿ ವಿಭಜಿಸಿ ಪ್ರತ್ಯೇಕವಾಗಿ ಎರಡು ಕಡೆ ಹೂತು ಹಾಕಿದ್ದ. ನರಸಿಂಗಪುರ್ ಜಿಲ್ಲೆಯ ಕರೇಲಿ ಎಂಬಲ್ಲಿ ಘಟನೆ ನಡೆದಿದೆ.
ನ.13ರಂದು ತನ್ನ ಪತ್ನಿ ನಾಪತ್ತೆ ಆಗಿರುವುದಾಗಿ ರಾಮಕಿಶೋರ್ ಪೊಲೀಸ್ ದೂರು ನೀಡಿದ್ದ. ಆದರೆ ಆತನ ಈ ಹೇಳಿಕೆಯಿಂದ ಆಕೆಯ ಸೋದರಿ ಸಂಶಯಕ್ಕೀಡಾಗಿದ್ದರು. ಪೊಲೀಸರು ದೂರು ದಾಖಲಿಸಿ ತನಿಖೆ ನಡೆಸುತ್ತಿದ್ದಾಗಲೇ ಕಾಡಿನಲ್ಲಿ ಆಕೆಯ ಬಟ್ಟೆಗಳು ಲಭಿಸಿದ್ದವು. ಆನಂತರ ಹುಡುಕಾಟ ನಡೆಸಿದಾಗ, ಮಹಿಳೆಯ ತಲೆಯ ಭಾಗ ಒಂದು ಕಡೆಯಲ್ಲಿ ಪತ್ತೆಯಾಗಿದೆ. ಆನಂತರ ದೇಹದ ಇನ್ನಿತರ ಭಾಗಗಳು ಕೆಲವು ಕಡೆ ಸಿಕ್ಕಿದ್ದು, ಗಂಡ ರಾಮಕಿಶೋರ್ ನನ್ನು ಸಂಶಯದ ಮೇರೆಗೆ ಪೊಲೀಸರು ವಿಚಾರಣೆ ನಡೆಸಿದ್ದಾರೆ.
ವಿಚಾರಣೆಯಲ್ಲಿ ಆರೋಪಿ ತನ್ನ ಕೃತ್ಯ ಒಪ್ಪಿಕೊಂಡಿದ್ದಾನೆ. ಪತ್ನಿಯ ನಡವಳಿಕೆಯಿಂದ ಸಂಶಯ ಹೊಂದಿದ್ದ ರಾಮಕಿಶೋರ್, ಕಾಡಿಗೆ ಕರೆದೊಯ್ದು ಅಲ್ಲಿಯೇ ತನ್ನಲ್ಲಿದ್ದ ಕೊಡಲಿಯಿಂದ ತಲೆಯನ್ನು ಕಡಿದು ಹಾಕಿದ್ದಾನೆ. ಆನಂತರ ರುಂಡ ಮುಂಡ ಬೇರೆಯಾಗಿಸಿ ದೇಹದ ಭಾಗವನ್ನು ಹೂತಿದ್ದ.
In a similar incident to the Shraddha Walkar murder in Delhi, where the accused strangled, chopped his live-in partner into 35 pieces and then dumped those pieces at different places in Mehrauli forest, a man in Madhya Pradesh’s Shahdol cut his wife into two and buried those parts at different places in a forest. The deceased was identified as Saraswati Patel and her husband, the accused as Ram Kishore Patel. The accused allegedly killed his wife with an axe on suspicion of infidelity.
09-06-26 07:04 pm
HK News Staffer
ವಿಧಾನ ಪರಿಷತ್ ಚುನಾವಣೆ ; ಕಾಂಗ್ರೆಸ್ ಐದನೇ ಅಭ್ಯರ್ಥ...
09-06-26 01:27 pm
Krishna Byre Gowda: ಡಿಕೆಶಿ ಸಂಪುಟದಲ್ಲಿ ಮತ್ತೊಂದ...
08-06-26 12:37 pm
ರಾಮಲಿಂಗಾರೆಡ್ಡಿ ರಾಜೀನಾಮೆ ಡ್ರಾಮಾಗೆ ಟ್ವಿಸ್ಟ್ ; ಡ...
06-06-26 12:49 pm
ಎಂಬಿಬಿಎಸ್ ಪದವಿ ಮುಗಿಸಿದ ಬೆನ್ನಲ್ಲೇ ಸರ್ಕಾರಿ ಆಸ್ಪ...
05-06-26 07:14 pm
08-06-26 09:11 pm
HK News Staffer
ದೇಲಂಪಾಡಿ ; ಭಾರೀ ಮಳೆಗೆ ಕಲ್ಲಿನ ತಡೆಗೋಡೆ ಕುಸಿದು ಬ...
06-06-26 10:42 pm
ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ; ಜಿರಳೆಗಳ ಮುಖವಾಡ ಧ...
06-06-26 05:48 pm
ತಮಿಳುನಾಡಿನಲ್ಲಿ ಅಣ್ಣಾಮಲೈ ಸಂಚಲನ ; ಬಿಜೆಪಿಗೆ ಗುಡ್...
05-06-26 02:34 pm
ಯೋಗಿಜೀ ನಮ್ಮನ್ನು ಕ್ಷಮಿಸಿ..! ಇನ್ನೆಂದೂ ಅಪರಾಧ ಕೃತ...
04-06-26 04:19 pm
09-06-26 08:58 pm
ರಿಚರ್ಡ್ | Richard
Mangalore: ಡಿಗ್ರಿ, ಇಂಜಿನಿಯರಿಂಗ್ ವಿದ್ಯಾರ್ಥಿಗಳಿ...
09-06-26 06:15 pm
ಮಳೆಗಾಲ ಹಿನ್ನೆಲೆ ; ರಸ್ತೆ ಹೊಂಡಕ್ಕೆ ಬಿದ್ದು ಪ್ರಾಣ...
08-06-26 09:21 pm
ಮಂಗಳೂರಿನಲ್ಲಿ ಡಿಎಚ್ಓಗೆ ಸಚಿವ ಯು.ಟಿ ಖಾದರ್ ಕ್ಲಾಸ್...
08-06-26 04:55 pm
UT Khader, Mangalore: ಎಂಬಿಬಿಎಸ್ ಆದವರಿಗೆ ಕಲಿತ...
07-06-26 03:38 pm
09-06-26 05:03 pm
HK News Staffer
Mangalore Blackmail, crime, Honeytrap: ಸಲಿಂಗಕ...
09-06-26 10:26 am
ಬಂಟ, ಬಿಲ್ಲವ ಜಾತಿಗಳ ಬಗ್ಗೆ ಅವಹೇಳನ ಹೇಳಿಕೆ ; ಸಾಮಾ...
08-06-26 11:10 pm
ಡಿಜಿಟಲ್ ಅರೆಸ್ಟ್ ಹೆಸರಿನಲ್ಲಿ 98 ಲಕ್ಷ ರೂ. ದೋಚಿದ...
08-06-26 10:41 pm
ಹೃದಯಾಘಾತ ; ಸಕಾಲದಲ್ಲಿ ಆ್ಯಂಬುಲೆನ್ಸ್ ಸಿಗದೆ ಕೊಕ್ಕ...
08-06-26 04:42 pm