ಬ್ರೇಕಿಂಗ್ ನ್ಯೂಸ್
12-11-22 05:55 pm Bangalore Correspondent ಕ್ರೈಂ
ಬೆಂಗಳೂರು, ನ.12: ಯುವಕರ ತಂಡವೊಂದು ತಮ್ಮ ಗೆಳೆಯನನ್ನೇ ಬ್ಲ್ಯಾಕ್ ಮೇಲ್ ಮಾಡಿ 15 ಲಕ್ಷ ರೂ. ಸುಲಿಗೆ ಮಾಡಿ ಸಿಕ್ಕಿ ಬಿದ್ದಿರುವ ಘಟನೆ ನಡೆದಿದೆ. ಅದು ಕೂಡ ತುಂಬಾ ನಂಬಿಕೆ ಇಟ್ಟಿದ್ದ ಗೆಳೆಯರೇ ಯುವಕನ ಸಂಕಷ್ಟದ ಸ್ಥಿತಿಯನ್ನು ಎನ್ಕ್ಯಾಶ್ ಮಾಡಿಕೊಂಡ ವಂಚನೆಯ ಕಥೆ.
ಚಾಮರಾಜಪೇಟೆಯ ಚಿನ್ನಾಭರಣ ವ್ಯಾಪಾರಿಯೊಬ್ಬರ ಪುತ್ರನಿಗೆ ಇತ್ತೀಚೆಗೆ ಇನ್ಸ್ಟಾ ಗ್ರಾಂನಲ್ಲಿ ಯುವತಿಯೊಬ್ಬಳ ಪರಿಚಯ ಆಗಿತ್ತು. ಇಬ್ಬರ ನಡುವೆ ಆತ್ಮೀಯತೆ ಬೆಳೆದು ಪರಸ್ಪರ ಚಾಟಿಂಗ್' ಮಾಡಿಕೊಂಡು ಖಾಸಗಿಯಾಗಿ ವಿಡಿಯೋಕಾಲ್ ನಲ್ಲಿ ಮಾತನಾಡಿಕೊಂಡಿದ್ದರು.

ಕೆಲದಿನಗಳ ಬಳಿಕ ಯುವಕ ಮತ್ತು ಯುವತಿ ಗಲಾಟೆ ಮಾಡಿಕೊಂಡು ಸಂಬಂಧ ಹಳಸಿತ್ತು. ಈ ವಿಚಾರವನ್ನು ಚಿನ್ನದ ವ್ಯಾಪಾರಿಯ ಪುತ್ರ ತನ್ನ ಸ್ನೇಹಿತರ ಬಳಿ ಹೇಳಿಕೊಂಡಿದ್ದ. ಮಾತ್ರವಲ್ಲ, ಖಾಸಗಿ ವಿಡಿಯೊಗಳ ಫೋಟೊಗಳನ್ನು ಶೇರ್ ಮಾಡಿಕೊಂಡಿದ್ದ.
ಸ್ನೇಹಿತನ ಖಾಸಗಿ ವಿಡಿಯೋ ಸ್ಕ್ರೀನ್ ಶಾರ್ಟ್ಗಳನ್ನೇ ಬಂಡವಾಳ ಮಾಡಿಕೊಂಡ ಸ್ನೇಹಿತರು ಅವನಿಂದ ದುಡ್ಡು ಕೀಳಲು ಹವಣಿಸಿದರು. ಯುವತಿ ಜತೆ ಖಾಸಗಿ ವಿಡಿಯೊ ಚಾಟ್ ಮಾಡಿರುವ ವಿಚಾರ ಸಿಸಿಬಿ ಪೊಲೀಸರಿಗೆ ಗೊತ್ತಾಗಿದೆ. ಅವರು ನಿನ್ನನ್ನು ಬಂಧಿಸುತ್ತಾರೆ ಎಂದು ಬ್ಲ್ಯಾಕ್ ಮೇಲ್ ಮಾಡಲು ಶುರು ಮಾಡಿದರು.

ನಮಗೆ ಐಪಿಎಸ್ ಅಧಿಕಾರಿಗಳು ಗೊತ್ತು. ಅವರ ಪರಿಚಯವಿದೆ. ಹೀಗಾಗಿ ವಿವಾದವನ್ನು ಸೆಟಲ್ಮೆಂಟ್ ಮಾಡೋಣ ಎಂದರು. ಹಾಗೆ ಸೆಟಲ್ಮೆಂಟ್ಗೆ ಹಣ ಕೇಳುತ್ತಾರೆ ಎಂದು ದುಡ್ಡಿಗೆ ಬೇಡಿಕೆ ಇಟ್ಟರು.
ಮೊದಲು 99 ಗ್ರಾಂ ತೂಕದ ಚಿನ್ನದ ಬಿಸ್ಕತ್ತನ್ನು ಸ್ನೇಹಿತರಿಗೆ ನೀಡಿದ್ದ ಈ ಯುವಕ. ಆದರೆ, ಅಷ್ಟಕ್ಕೇ ತೃಪ್ತರಾಗದ ಗೆಳೆಯರು ಸಿಸಿಬಿ ಪೊಲೀಸರು ಇನ್ನೂ ಹೆಚ್ಚಿನ ಹಣ ಕೇಳುತ್ತಿದ್ದಾರೆ ಎಂದು ಹೆದರಿಸಿ 3.50 ಲಕ್ಷ ರೂ. ಪಡೆದಿದ್ದರು. ಬ್ಲ್ಯಾಕ್ಮೇಲ್ ಮಾಡಿ ಸಿಸಿಬಿ ಪೊಲೀಸರ ಹೆಸರಲ್ಲಿ ಹಂತ ಹಂತವಾಗಿ 15.90 ಲಕ್ಷ ರೂ. ಪಡೆದರು.
ಈ ನಡುವೆ ಯುವಕನಿಗೆ ತನ್ನ ಸ್ನೇಹಿತರ ಮೇಲೆಯೇ ಅನುಮಾನ ಬಂತು. ಕೊನೆಗೆ ಸಿಸಿಬಿ ಪೊಲೀಸರಲ್ಲಿ ಬೇರೆಯವರ ಮೂಲಕ ವಿಚಾರಿಸಿದಾಗ ಅಲ್ಲಿ ಇಂಥ ಪ್ರಕರಣವೇ ಇಲ್ಲ ಎನ್ನುವುದು ಗೊತ್ತಾಯಿತು.
ಇದಾದ ಬಳಿಕ ಗೆಳೆಯರು ಹಣ ಪಡೆದು ಬ್ಲ್ಯಾಕ್ ಮೇಲ್ ಮಾಡಿರುವ ಬಗ್ಗೆ ತಿಲಕ್ ನಗರ ಠಾಣೆಗೆ ದೂರು ನೀಡಿದ. ಪ್ರಕರಣದ ಬೆನ್ನಲ್ಲೇ ಪೊಲೀಸರು ಸುನಿಲ್, ಹೇಮಂತ್, ಪ್ರವೀಣ್ ಎಂಬುವವರ ವಿರುದ್ಧ ಎಫ್ ಐಆರ್ ದಾಖಲಿಸಿ ಬಂಧಿಸಿದ್ದಾರೆ.
Bangalore Friends blackmail close friend of private video, and loot Rs 15 lakhs by Blackmail.
12-08-26 06:57 pm
HK News Staffer
ರಾಜ್ಯದಲ್ಲಿ ಗುಟ್ಕಾ, ಪಾನ್ ಮಸಾಲಾ ಉತ್ಪನ್ನಗಳಿಗೆ ನಿ...
12-08-26 06:06 pm
13 ಸಚಿವರಿಗೆ ಖಾತೆ ಹಂಚಿಕೆ; ಮುನಿಯಪ್ಪ ಸಮಾಜ ಕಲ್ಯಾಣ...
12-08-26 02:58 pm
ಜೈಲಿನಲ್ಲಿ ವಿಐಪಿ ಖೈದಿಗಳ ಬ್ಯಾರಕ್ ಗೆ ಸಿಸಿಬಿ ದಾಳ...
12-08-26 11:37 am
ಹೋಟೆಲ್ ಅಡುಗೆ ಮನೆಯಲ್ಲೂ ಕ್ಯಾಮೆರಾ ಕಡ್ಡಾಯ ; ಹೊಸ ಕ...
10-08-26 07:54 pm
11-08-26 10:25 pm
HK News Staffer
ಇಬ್ಬರು ಸಹೋದರಿಯರ ಇಸ್ಲಾಂ ಮತಾಂತರ ಎತ್ತಿಹಿಡಿದ ಅಲಹಾ...
11-08-26 04:49 pm
ಕಾಶ್ಮೀರಿ ಪಂಡಿತರನ್ನು ಗುರಿಯಾಗಿಸಿ ಉಗ್ರರ ಬೆದರಿಕೆ...
11-08-26 04:32 pm
ಮೋದಿ ಸೆಲ್ಫಿ ವಿಡಿಯೋ ತೆಗೆದು ಹಾಕಿದ್ದ ಫೇಸ್ಬುಕ್ ಕಂ...
05-08-26 08:36 pm
ಜಾನ್ಸನ್ & ಜಾನ್ಸನ್ ಬೇಬಿ ಪೌಡರ್ ನಿಂದ ಕ್ಯಾನ್ಸರ್ ಆ...
01-08-26 05:17 pm
12-08-26 11:06 pm
HK News Desk
ಸಾರ್ವಜನಿಕ ಕೆಲಸಕ್ಕೆ ಲಂಚದ ಆರೋಪ; ಮಂಗಳೂರು, ಬೆಳ್ತಂ...
12-08-26 02:08 pm
ದಕ್ಷಿಣ ಕನ್ನಡ ಡಿಸಿ ಸರ್ಕಾರಿ ನಿವಾಸದ ನಾಮಫಲಕದಲ್ಲಿ...
12-08-26 11:32 am
Mangalore Railway, Train: ಕಾಲು ಜಾರಿ ರೈಲಿನಡಿ ಬ...
11-08-26 10:23 pm
ಮೂಡುಬಿದಿರೆಯಲ್ಲಿ ಸಿಲಿಂಡರ್ ಸ್ಫೋಟ ; ಆರು ವರ್ಷದ ಬಾ...
11-08-26 10:03 pm
12-08-26 11:18 pm
HK News Staffer
Panambur Robbery, Update, Mangalore: ಪಣಂಬೂರು...
12-08-26 07:47 pm
ಉಡುಪಿಯಲ್ಲಿ ಶಿಕ್ಷಕಿಯ ಮನೆಯ ಟೆರೇಸ್ ಬಾಗಿಲು ಮುರಿದ...
11-08-26 05:34 pm
ಫೇಸ್ಬುಕ್ ಜಾಹೀರಾತು ನಂಬಿ ಷೇರು ಮಾರ್ಕೆಟ್ ಹೂಡಿಕೆ...
11-08-26 05:28 pm
ಸುರತ್ಕಲ್ ನಲ್ಲಿ ಹೈಟೆನ್ಷನ್ ತಂತಿಗೆ ಕಬ್ಬಿಣದ ರಾಡ್...
11-08-26 01:04 pm