ಬ್ರೇಕಿಂಗ್ ನ್ಯೂಸ್
30-10-22 06:02 pm Mangaluru Correspondent ಕ್ರೈಂ
ಸುಳ್ಯ, ಅ.30: ಗಂಡು ಮಗು ಹೆತ್ತವರನ್ನು ನೋಡಿಕೊಳ್ಳಲ್ಲ ಎಂದು ಹತ್ತು ತಿಂಗಳ ನವಜಾತ ಗಂಡು ಶಿಶುವನ್ನು ತಾಯಿಯೇ ಬಾವಿಗೆಸೆದು ಕೊಂದು ಹಾಕಿದ ಘಟನೆ ಸುಳ್ಯ ತಾಲೂಕಿನ ಸುಬ್ರಹ್ಮಣ್ಯ ಬಳಿಯ ಕೂತ್ಕುಂಜ ಎಂಬಲ್ಲಿ ನಡೆದಿದೆ.
ಕೂತ್ಕುಂಜ ನಿವಾಸಿ ಪವಿತ್ರಾ ಎಂಬಾಕೆ ಅ.19ರಂದು ಮಂಗಳೂರಿನ ಲೇಡಿಗೋಷನ್ ಆಸ್ಪತ್ರೆಯಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದಳು. ಗರ್ಭಿಣಿಯಾಗಿದ್ದಾಗಲೇ ನನಗೆ ಹೆಣ್ಣು ಮಗು ಆಗುತ್ತದೆ, ಗಂಡು ಮಕ್ಕಳು ತಂದೆ, ತಾಯಿಯನ್ನು ನೋಡಿಕೊಳ್ಳುವುದಿಲ್ಲ. ಹೆಣ್ಣು ಮಗುವೆಂದರೆ ತುಂಬ ಇಷ್ಟ ಎಂದು ಹೇಳಿಕೊಂಡಿದ್ದಳು. ತಾನು ಹೆತ್ತಿದ್ದು ಗಂಡು ಮಗು ಎಂದು ತಿಳಿದು ಅದಕ್ಕೆ ಮೊಲೆ ಹಾಲು ನೀಡದೇ ಸತಾಯಿಸುತ್ತಿದ್ದಳು.
ಅ.29ರಂದು ಸಂಜೆ ಈ ಗಂಡು ಮಗು ತನಗೆ ಇಷ್ಟವಿಲ್ಲದಿದ್ದರೂ ಹುಟ್ಟಿದೆ ಎಂದು ಹೇಳಿ ಮಗುವನ್ನು ಎತ್ತಿಕೊಂಡು ಮನೆಯಿಂದ ಹೊರಗೆ ಬಂದು ಅಂಗಳದಲ್ಲಿರುವ ಬಾವಿಗೆ ಎಸೆದಿದ್ದಾಳೆ. ಬಳಿಕ ಮನೆಯ ಒಳಗಡೆ ಓಡಿದ್ದಾಳೆ. ಮನೆಯಲ್ಲಿದ್ದ ಆಕೆಯ ಅಣ್ಣನ ಪತ್ನಿ ರಂಜಿತಾ ಇದನ್ನು ನೋಡಿದ್ದು, ತನ್ನ ಪತಿಗೆ ವಿಷಯ ತಿಳಿಸಿದ್ದಾಳೆ. ಪತಿ ಅರುಣ್ ಕುಮಾರ್ ಮತ್ತು ಆತನ ಸ್ನೇಹಿತರು ಬಂದು ಬಾವಿಯಿಂದ ಮಗುವನ್ನು ಎತ್ತಿ ಬಳಿಕ ಪಂಜ ಸರಕಾರಿ ಆಸ್ಪತ್ರೆಗೆ ಒಯ್ದಿದ್ದು, ಅಷ್ಟರಲ್ಲಿ ಮಗು ಮೃತಪಟ್ಟಿತ್ತು.
ಪವಿತ್ರಾ ನಾಲ್ಕು ವರ್ಷದ ಹಿಂದೆ ಬೆಂಗಳೂರು ಮೂಲದ ಹರೀಶ್ ಎಂಬಾತನನ್ನು ಮದುವೆಯಾಗಿದ್ದು ಆನಂತರ ಆತನಿಗೆ ವಿಚ್ಛೇದನ ಕೊಟ್ಟು ತುಮಕೂರು ಮೂಲದ ಮಣಿಕಂಠ ಎಂಬವನನ್ನು ಒಂದು ವರ್ಷದ ಹಿಂದೆ ಮದುವೆಯಾಗಿದ್ದಳು. ಕೆಲ ಕಾಲ ಆತನ ಜೊತೆಗಿದ್ದು ಹುಷಾರಿಲ್ಲವೆಂದು ತವರು ಮನೆಗೆ ಬಂದಿದ್ದಳು. ಈ ವೇಳೆ, ಗರ್ಭಿಣಿಯಾಗಿದ್ದ ಪವಿತ್ರಾ ತನಗೆ ಹೆಣ್ಣು ಮಗುವೇ ಆಗಬೇಕೆಂದು ಹಂಬಲಿಸುತ್ತಿದ್ದಳು. ಇಷ್ಟದಂತೆ ಹೆಣ್ಣು ಮಗುವಾಗದೆ ಗಂಡು ಮಗುವನ್ನು ಹೆತ್ತಿದ್ದರ ಕೋಪದಲ್ಲಿ ಸ್ವತಃ ತಾಯಿಯೇ ತನ್ನ ಹಸುಗೂಸನ್ನು ಬಾವಿಗೆಸೆದು ಕೊಂದಿದ್ದಾಳೆ. ಈ ಬಗ್ಗೆ ಘಟನೆಯನ್ನು ಕಣ್ಣಾರೆ ಕಂಡಿದ್ದ ರಂಜಿತಾ ಸುಬ್ರಹ್ಮಣ್ಯ ಪೊಲೀಸರಿಗೆ ದೂರು ನೀಡಿದ್ದಾರೆ. ಆರೋಪಿ ಪವಿತ್ರಾ ವಿರುದ್ಧ ಕೊಲೆ ಪ್ರಕರಣ ದಾಖಲಾಗಿದೆ.
Sullia 10 months old baby thrown to the well by mother for giving birth to a boy child in subramanya, Mangalore.
10-11-25 07:17 pm
Bangalore Correspondent
54 ಹೆಕ್ಟೇರ್ ಅರಣ್ಯ ನಾಶ ಭೀತಿ ; ಶರಾವತಿ ಪಂಪ್ಡ್ ಸ್...
10-11-25 02:58 pm
'ನೋ ಚೇರ್ ಇನ್ ನವೆಂಬರ್' ಎಐ ವಿಡಿಯೋ ಹಂಚಿಕೊಂಡ ಬಿಜೆ...
10-11-25 01:23 pm
ಬೆಂಗಳೂರು ವಿಮಾನ ನಿಲ್ದಾಣದಲ್ಲಿ ನಮಾಜ್ ವಿಡಿಯೋ ವೈರಲ...
10-11-25 12:22 pm
ಮುಸ್ಲಿಂ, ಕ್ರೈಸ್ತರು ಆರೆಸ್ಸೆಸ್ ಶಾಖೆಗೆ ಬರಬಹುದಾ?...
09-11-25 06:53 pm
10-11-25 11:07 pm
HK News Desk
ದೆಹಲಿಯಲ್ಲಿ ಭಾರೀ ಬಾಂಬ್ ಸ್ಫೋಟ ; ಛಿದ್ರಗೊಂಡು ಚದುರ...
10-11-25 09:08 pm
ರಾಜಧಾನಿ ದೆಹಲಿಯಲ್ಲಿ ಪ್ರಬಲ ಬಾಂಬ್ ಸ್ಫೋಟ ; ಒಂಬತ್ತ...
10-11-25 08:23 pm
ಫರಿದಾಬಾದ್ ; ಕಾಶ್ಮೀರಿ ವೈದ್ಯನ ಮಾಹಿತಿಯಂತೆ 300 ಕ...
10-11-25 03:04 pm
ದೊಡ್ಡ ಮಟ್ಟದ ವಿಧ್ವಂಸಕ ಕೃತ್ಯಕ್ಕೆ ಸಂಚು ; ಮೂವರು ಶ...
09-11-25 07:49 pm
08-11-25 08:31 pm
Mangalore Correspondent
ಬೆಂಗಳೂರು- ಮಂಗಳೂರು ಹೈಸ್ಪೀಡ್ ಕಾರಿಡಾರ್ ; ಶಿರಾಡ...
07-11-25 10:58 pm
ಕುದ್ರೋಳಿ ಕ್ಷೇತ್ರ ಸ್ಥಾಪಿಸಿದ ಫೆ.21ರಂದು ನಾರಾಯಣ ಗ...
07-11-25 07:23 pm
ಗೋಡಂಬಿ ಉದ್ಯಮಕ್ಕೆ ನೂರು ವರ್ಷ ; ನ.14-16ರಂದು ದೇಶದ...
07-11-25 05:25 pm
ನೆಲ್ಯಾಡಿಯಲ್ಲಿ ಹೊಟೇಲ್ ಉದ್ಯಮ ನಡೆಸುತ್ತಿದ್ದ ಅಭಿಷೇ...
07-11-25 02:18 pm
09-11-25 10:27 pm
Mangalore Correspondent
ಬಹುಕೋಟಿ ವಂಚಕ ರೋಷನ್ ಸಲ್ದಾನಗೆ ಸೇರಿದ 2.85 ಕೋಟಿ ಮ...
09-11-25 03:50 pm
ಕೋಮುದ್ವೇಷದ ಕೊಲೆ ; ಪ್ರತೀಕಾರಕ್ಕೆ ಪ್ರಚೋದಿಸಿ ಇನ್...
08-11-25 11:15 pm
Digital Arrest Scam, Mangalore Online Fraud:...
08-11-25 04:08 pm
ಆರೋಪಿಗೆ ಜಾಮೀನು ನೀಡಲು ಹೋಗಿ ತಾನೇ ತಗ್ಲಾಕ್ಕೊಂಡ !...
07-11-25 11:20 pm