ಬ್ರೇಕಿಂಗ್ ನ್ಯೂಸ್
22-10-22 11:28 am Mangalore Correspondent ಕ್ರೈಂ
ಪುತ್ತೂರು, ಅ.21: ಬೆಡ್ ಶೀಟ್ ಮಾರಾಟದ ನೆಪದಲ್ಲಿ ಮನೆಗೆ ಬಂದಿದ್ದ ಇಬ್ಬರು ಯುವಕರು ಮಹಿಳೆಯ ಜೊತೆ ಸಲುಗೆ ಮಾತನಾಡಿದ್ದಲ್ಲದೆ, ಜೊತೆಗೆ ಮಲಗಲು ಅವಕಾಶ ನೀಡಿದರೆ ಪುಕ್ಕಟೆಯಾಗಿ ಬೆಡ್ ಶೀಟ್ ಕೊಡುತ್ತೇವೆಂದು ಹೇಳಿ, ಮಾನಭಂಗಕ್ಕೆ ಯತ್ನಿಸಿದ ಘಟನೆ ಕಡಬ ತಾಲೂಕಿನ ದೋಲ್ಪಾಡಿ ಗ್ರಾಮದ ಕಾಯರ್ ಮನೆ ಎಂಬಲ್ಲಿ ನಡೆದಿದೆ.
ನೀಲಿ ಬಣ್ಣದ ಕಾರಿನಲ್ಲಿ ಬಂದಿದ್ದ ರಫೀಕ್ ಮತ್ತು ರಮಿಯುದ್ದೀನ್ ಎಂಬ ಯುವಕರು ಈ ಕೃತ್ಯ ಎಸಗಿದ್ದಾರೆ ಎಂದು ಮಹಿಳೆ ಕಡಬ ಠಾಣೆಯಲ್ಲಿ ದೂರು ನೀಡಿದ್ದಾರೆ. ಬೆಡ್ ಶೀಟ್ ರೇಟ್ ಹೇಳುವಂತೆ ಹೇಳಿದ ಮಹಿಳೆಯರಿಗೆ, ಬೆಡ್ ಶೀಟ್ ನಿಮಗೆ ಕಡಿಮೆ ದರಕ್ಕೆ ಕೊಡುತ್ತೇವೆ ಎನ್ನುತ್ತಾ ಮನೆಯೊಳಗೆ ಬಂದಿದ್ದಾರೆ. ಬೆಡ್ ಶೀಟ್ ರೇಟ್ ಹೇಳದೆ, ನಿಮ್ಮಲ್ಲಿ ಹಣ ಇಲ್ಲದಿದ್ದರೆ ಪರ್ವಾಗಿಲ್ಲ. ನಮ್ಮ ಜೊತೆ ಮಲಗಲು ಅವಕಾಶ ನೀಡಿದರೆ ಬೆಟ್ ಶೀಟ್ ಫ್ರೀ ಕೊಡುತ್ತೇವೆ. ಜೊತೆಗೆ ಒಂದಷ್ಟು ಹಣವನ್ನೂ ಕೊಡುತ್ತೇವೆ ಎಂದು ಪುಸಲಾಯಿಸಿದ್ದಾರೆ. ನೀವು ಮನೆಯಿಂದ ಹೋಗಿ ಎಂದು ಮಹಿಳೆಯರು ಬೈದಾಗ, ಕೈಯನ್ನು ಹಿಡಿದೆಳೆದು ಮಾನಭಂಗಕ್ಕೆ ಯತ್ನಿಸಿದ್ದಾರೆಂದು ದೂರಲಾಗಿದೆ. ಬಳಿಕ ಮಹಿಳೆ ಜೋರು ಬೊಬ್ಬೆ ಹೊಡೆದಾಗ ಅವರು ಓಡಿ ಹೋಗಿದ್ದಾರೆ. ಘಟನೆ ಸಂಬಂಧಿಸಿ ಎಸ್ಸಿ-ಎಸ್ಟಿ ಏಕ್ಟ್ ಅಡಿ ಪ್ರಕರಣ ದಾಖಲಾಗಿದೆ.
ಇದೇ ವಿಚಾರದಲ್ಲಿ ಬೆಳ್ಳಾರೆ ಠಾಣೆಯಲ್ಲಿ ಪ್ರತಿ ದೂರು ದಾಖಲಾಗಿದೆ. ರಫೀಕ್ ಮತ್ತು ರಮಿಯುದ್ದೀನ್ ದೋಲ್ಪಾಡಿಯ ಘಟನೆಯ ಬಳಿಕ ಕಾಣಿಯೂರು ಗ್ರಾಮಕ್ಕೆ ತಲುಪಿದಾಗ ಕೆಲವು ಯುವಕರು ಸೇರಿ ಹಲ್ಲೆ ನಡೆಸಿದ್ದಾರೆ. ರಸ್ತೆಗೆ ಪಿಕಪ್ ಅಡ್ಡ ಇಟ್ಟು ಯುವಕರಿದ್ದ ಕಾರನ್ನು ನಿಲ್ಲಿಸಿ, ಅವರಿಗೆ ಹಲ್ಲೆ ನಡೆಸಿದ್ದಾರೆ. ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆಂದು. ಕಾರು ಜಖಂಗೊಳಿಸಿ, ಬೆಡ್ ಶೀಟ್ ಗಳನ್ನು ಹಾಳುಗೆಡವಿದ್ದಾರೆಂದು ರಫೀಕ್ ಮತ್ತು ರಮಿಯುದ್ದೀನ್ ಬೆಳ್ಳಾರೆ ಠಾಣೆಗೆ ದೂರು ನೀಡಿದ್ದಾರೆ.
Mangalore Sexual assault in the name of selling blankets, two held at Kadaba.
10-11-25 07:17 pm
Bangalore Correspondent
54 ಹೆಕ್ಟೇರ್ ಅರಣ್ಯ ನಾಶ ಭೀತಿ ; ಶರಾವತಿ ಪಂಪ್ಡ್ ಸ್...
10-11-25 02:58 pm
'ನೋ ಚೇರ್ ಇನ್ ನವೆಂಬರ್' ಎಐ ವಿಡಿಯೋ ಹಂಚಿಕೊಂಡ ಬಿಜೆ...
10-11-25 01:23 pm
ಬೆಂಗಳೂರು ವಿಮಾನ ನಿಲ್ದಾಣದಲ್ಲಿ ನಮಾಜ್ ವಿಡಿಯೋ ವೈರಲ...
10-11-25 12:22 pm
ಮುಸ್ಲಿಂ, ಕ್ರೈಸ್ತರು ಆರೆಸ್ಸೆಸ್ ಶಾಖೆಗೆ ಬರಬಹುದಾ?...
09-11-25 06:53 pm
10-11-25 11:07 pm
HK News Desk
ದೆಹಲಿಯಲ್ಲಿ ಭಾರೀ ಬಾಂಬ್ ಸ್ಫೋಟ ; ಛಿದ್ರಗೊಂಡು ಚದುರ...
10-11-25 09:08 pm
ರಾಜಧಾನಿ ದೆಹಲಿಯಲ್ಲಿ ಪ್ರಬಲ ಬಾಂಬ್ ಸ್ಫೋಟ ; ಒಂಬತ್ತ...
10-11-25 08:23 pm
ಫರಿದಾಬಾದ್ ; ಕಾಶ್ಮೀರಿ ವೈದ್ಯನ ಮಾಹಿತಿಯಂತೆ 300 ಕ...
10-11-25 03:04 pm
ದೊಡ್ಡ ಮಟ್ಟದ ವಿಧ್ವಂಸಕ ಕೃತ್ಯಕ್ಕೆ ಸಂಚು ; ಮೂವರು ಶ...
09-11-25 07:49 pm
08-11-25 08:31 pm
Mangalore Correspondent
ಬೆಂಗಳೂರು- ಮಂಗಳೂರು ಹೈಸ್ಪೀಡ್ ಕಾರಿಡಾರ್ ; ಶಿರಾಡ...
07-11-25 10:58 pm
ಕುದ್ರೋಳಿ ಕ್ಷೇತ್ರ ಸ್ಥಾಪಿಸಿದ ಫೆ.21ರಂದು ನಾರಾಯಣ ಗ...
07-11-25 07:23 pm
ಗೋಡಂಬಿ ಉದ್ಯಮಕ್ಕೆ ನೂರು ವರ್ಷ ; ನ.14-16ರಂದು ದೇಶದ...
07-11-25 05:25 pm
ನೆಲ್ಯಾಡಿಯಲ್ಲಿ ಹೊಟೇಲ್ ಉದ್ಯಮ ನಡೆಸುತ್ತಿದ್ದ ಅಭಿಷೇ...
07-11-25 02:18 pm
09-11-25 10:27 pm
Mangalore Correspondent
ಬಹುಕೋಟಿ ವಂಚಕ ರೋಷನ್ ಸಲ್ದಾನಗೆ ಸೇರಿದ 2.85 ಕೋಟಿ ಮ...
09-11-25 03:50 pm
ಕೋಮುದ್ವೇಷದ ಕೊಲೆ ; ಪ್ರತೀಕಾರಕ್ಕೆ ಪ್ರಚೋದಿಸಿ ಇನ್...
08-11-25 11:15 pm
Digital Arrest Scam, Mangalore Online Fraud:...
08-11-25 04:08 pm
ಆರೋಪಿಗೆ ಜಾಮೀನು ನೀಡಲು ಹೋಗಿ ತಾನೇ ತಗ್ಲಾಕ್ಕೊಂಡ !...
07-11-25 11:20 pm