ಅಗ್ನಿಶಾಮಕ ಸಿಬಂದಿ ಮಂಗಳೂರಿನಲ್ಲಿ ಅಪಘಾತಕ್ಕೀಡಾಗಿ ಸಾವು ; ರಾಯಚೂರಿನಲ್ಲಿ ಆರು ತಿಂಗಳ ಮಗುವನ್ನು ಕೊಂದು ಸಾವಿಗೆ ಶರಣಾದ ಪತ್ನಿ ! 

17-04-22 12:17 pm       Mangalore Correspondent   ಕರಾವಳಿ

ಮಂಗಳೂರು ನಗರದ ಕುಂಟಿಕಾನದಲ್ಲಿರುವ ಅಗ್ನಿಶಾಮಕ ಕಚೇರಿಯಲ್ಲಿ ಚಾಲಕನಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಸಿಬಂದಿ ಅಪಘಾತದಲ್ಲಿ ಸಾವನಪ್ಪಿದ್ದು, ಈ ಸುದ್ದಿಯಿಂದ ಆಘಾತಗೊಂಡ ಆತನ ಪತ್ನಿ ತನ್ನ 6 ತಿಂಗಳ ಮಗುವನ್ನು ಕೊಂದು ಆತ್ಮಹತ್ಯೆಗೆ ಶರಣಾದ ಘಟನೆ ರಾಯಚೂರಿನಲ್ಲಿ ನಡೆದಿದೆ. 

ಮಂಗಳೂರು, ಎ.17: ಮಂಗಳೂರು ನಗರದ ಕುಂಟಿಕಾನದಲ್ಲಿರುವ ಅಗ್ನಿಶಾಮಕ ಕಚೇರಿಯಲ್ಲಿ ಚಾಲಕನಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಸಿಬಂದಿ ಅಪಘಾತದಲ್ಲಿ ಸಾವನಪ್ಪಿದ್ದು, ಈ ಸುದ್ದಿಯಿಂದ ಆಘಾತಗೊಂಡ ಆತನ ಪತ್ನಿ ತನ್ನ 6 ತಿಂಗಳ ಮಗುವನ್ನು ಕೊಂದು ಆತ್ಮಹತ್ಯೆಗೆ ಶರಣಾದ ಘಟನೆ ರಾಯಚೂರಿನಲ್ಲಿ ನಡೆದಿದೆ. 

ಮಂಗಳೂರಿನಲ್ಲಿ ಇಲಾಖಾ ಕರ್ತವ್ಯದಲ್ಲಿದ್ದ ರಾಯಚೂರು ಮೂಲದ ಸಿಬಂದಿ ಗಂಗಾಧರ ಬಿ. ಕಮ್ಮಾರ (36) ಅಪಘಾತದಲ್ಲಿ ಮೃತಪಟ್ಟವರು. ಎಜೆ ಆಸ್ಪತ್ರೆ ಬಳಿಯ ಬಳಿಯ ಕುಂಟಿಕಾನದಲ್ಲಿ ರಾಷ್ಟ್ರೀಯ ಹೆದ್ದಾರಿ ದಾಟುತ್ತಿದ್ದಾಗ ಬೆಂಗಳೂರಿಂದ ಕುಂದಾಪುರಕ್ಕೆ ಹೋಗುತ್ತಿದ್ದ ಕಾರು ಡಿಕ್ಕಿ ಹೊಡೆದಿದ್ದು ಗಂಗಾಧರ ಸ್ಥಳದಲ್ಲೇ ಮೃತಪಟ್ಟಿದ್ದರು.

ಅಪಘಾತದಲ್ಲಿ ಪತಿ ತೀರಿಕೊಂಡ ವಿಷಯ ತಿಳಿಯುತ್ತಲೇ ರಾಯಚೂರಿನಲ್ಲಿ ಸಂಬಂಧಿಕರ ಮನೆಯಲ್ಲಿದ್ದ ಪತ್ನಿ ಶೃತಿ (30) ಅವರು ರಾತ್ರಿ 10 ಗಂಟೆಗೆ ತನ್ನ ಆರು ತಿಂಗಳ ಪುತ್ರನನ್ನು ಕೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರಾಯಚೂರು ಜಿಲ್ಲೆಯ ಲಿಂಗಸೂಗೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸಂಭವಿಸಿದ್ದು, ಶ್ರುತಿ ಅವರು ತಮ್ಮನ ಮನೆಯಲ್ಲಿದ್ದರು. ಮನೆಯವರಿಗೆ ವಿಷಯ ತಿಳಿಯುವ ಮೊದಲೇ ಶೃತಿ ಆತ್ಮಹತ್ಯೆ ಮಾಡಿಕೊಂಡಿದ್ದು ಆಘಾತ ಮೂಡಿಸಿದೆ. ಆಮೂಲಕ ಇಡೀ ಕುಟುಂಬ ಒಂದೇ ದಿನ ಸಾವಿಗೀಡಾದಂತಾಗಿದೆ.

A 36-year-old driver working in Fire and Emergency Services in city died on the spot after an  XUV 500 ran over him on NH-66 in Kuntikana on Saturday at 8.50 pm. The deceased, identified as Gangadhara B Kammara, was crossing the road when the vehicle rammed into him.