ಸಂತೋಷ್ ಪಾಟೀಲ್ ಆತ್ಮಹತ್ಯೆ ; ಉಡುಪಿ ಠಾಣೆಯಲ್ಲಿ ಸಚಿವ ಈಶ್ವರಪ್ಪ, ಪಿಎ ರಮೇಶ್ ವಿರುದ್ಧ ಪ್ರಕರಣ ದಾಖಲು 

13-04-22 10:39 am       Udupi Correspondent   ಕರಾವಳಿ

ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಘಟನೆಗೆ ಸಂಬಂಧಿಸಿ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಸಂಬಂಧಿಕರು ದೂರು ದಾಖಲಿಸಿದ್ದು ಆರೋಪಿ ಸ್ಥಾನದಲ್ಲಿ ಮೊದಲ ಹೆಸರನ್ನು ಸಚಿವ ಈಶ್ವರಪ್ಪ ಎಂದು ನಮೂದಿಸಲಾಗಿದೆ. 

ಉಡುಪಿ, ಎ.13: ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಘಟನೆಗೆ ಸಂಬಂಧಿಸಿ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಸಂಬಂಧಿಕರು ದೂರು ದಾಖಲಿಸಿದ್ದು ಆರೋಪಿ ಸ್ಥಾನದಲ್ಲಿ ಮೊದಲ ಹೆಸರನ್ನು ಸಚಿವ ಈಶ್ವರಪ್ಪ ಎಂದು ನಮೂದಿಸಲಾಗಿದೆ. 

ಈಶ್ವರಪ್ಪ ವಿರುದ್ಧ ನಲ್ವತ್ತು ಶೇ. ಕಮಿಷನ್ ಆರೋಪ ಮಾಡಿದ್ದ ಬೆಳಗಾವಿ ಮೂಲದ ಗುತ್ತಿಗೆದಾರ, ಬಿಜೆಪಿ ಕಾರ್ಯಕರ್ತ ಸಂತೋಷ್ ಪಾಟೀಲ್ ಉಡುಪಿಯ ಶಾಂಭವಿ ಲಾಡ್ಜ್ ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. 

ಮಂಗಳವಾರ ತಡರಾತ್ರಿ ಉಡುಪಿಗೆ ಆಗಮಿಸಿದ ಸಂತೋಷ್ ಕುಟುಂಬಸ್ಥರು ಉಡುಪಿ ಠಾಣೆಯಲ್ಲಿ ದೂರು ನೀಡಿದ್ದು ದೂರಿನಲ್ಲಿ ಮೊದಲನೇ ಆರೋಪಿಯಾಗಿ ಈಶ್ವರಪ್ಪ ಹೆಸರು ನಮೂದಿಸಿದ್ದಾರೆ.‌ ಉಳಿದಂತೆ ಸಚಿವರ ಪಿಎಗಳಾದ ಬಸವರಾಜ್, ರಮೇಶ್ ಮತ್ತು ಇತರರು ಎಂದು ಉಲ್ಲೇಖಿಸಲಾಗಿದ್ದು ಪ್ರಕರಣ ದಾಖಲಾಗಿದೆ. ಪಿಡಬ್ಲ್ಯುಡಿ ಕಾಮಗಾರಿಯ ಬಿಲ್ ಪಾಸ್ ಮಾಡಲು 40 ಶೇಕಡಾ ಕಮಿಷನ್ ಕೇಳಿರುವ ಕುರಿತು ದೂರಿನಲ್ಲಿ ಹೇಳಲಾಗಿದೆ. 

BJP member Santhosh who accused top Karnataka minister of corruption found  dead | The News Minute

ಮಂಗಳೂರಿನಿಂದ ಆಗಮಿಸಿರುವ ಎಫ್ಎಸ್ಎಲ್ ತಜ್ಞರು ಸ್ಥಳದಲ್ಲಿ ಪಂಚನಾಮೆ ನಡೆಸಲಿದ್ದಾರೆ.‌ ಕೋಣೆಯೊಳಗೆ ಇರುವ ಬೆರಳಚ್ಚುಗಳ ವಿವರ ಸಂಗ್ರಹಿಸುತ್ತಿದ್ದಾರೆ. ಆತ್ಮಹತ್ಯೆಗೆ ಬಳಸಿದ ವಿಷ ಯಾವುದು? ವಿಷ ಸೇವನೆ ಮಾಡಿದ್ದು ಹೇಗೆ ? ಮಲಗಿದಂತಿರುವ ಶವ ಯಾವ ಭಂಗಿಯಲ್ಲಿದೆ ? ವಿಷ ಸೇವಿಸಿ ಎಷ್ಟು ಗಂಟೆಗಳು ಕಳೆದಿವೆ? ಇತ್ಯಾದಿ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಲು ಮಾಹಿತಿಗಳನ್ನು ವಿಧಿ ವಿಜ್ಞಾನ ತಂಡದ ತಜ್ಞರು ಸಂಗ್ರಹಿಸಲಿದ್ದಾರೆ. ಮಣಿಪಾಲದ ಎಫ್ಎಸ್ಎಲ್ ತಜ್ಞರನ್ನೂ ಉಡುಪಿ ಪೊಲೀಸರು ಕರೆಸಿದ್ದು ಪ್ರತ್ಯೇಕ ಮಹಜರು ನಡೆಸಲಿದ್ದಾರೆ.

An FIR has been filed against Rural Development & Panchayat Raj (RDPR) minister K S Eshwarappa in Udupi in connection to the Santhosh K Patil death case. Eshwarappa has been named as the first accused in the case. Prashanth Patil, brother of Santhosh Patil had visited the spot on Tuesday late night. After visiting the hotel room, he filed a complaint and named minister Eshwarappa, Ramesh and Basavaraj, PA to the minister as accused.