ಪಿಂಡ ಪ್ರದಾನಕ್ಕೆ ಬಂದಿದ್ದ ವೇಳೆ ದುರಂತ ; ಅಕ್ಕ- ತಂಗಿಯರು ಸುರತ್ಕಲ್ ಸಮುದ್ರಪಾಲು ! 

10-04-22 01:42 pm       Mangalore Correspondent   ಕರಾವಳಿ

ಶ್ರಾದ್ಧ ಕಾರ್ಯಕ್ಕೆಂದು ಸಮುದ್ರ ತೀರಕ್ಕೆ ಬಂದಿದ್ದಾಗ ನೀರಾಟಕ್ಕಿಳಿದ ಅಕ್ಕ , ತಂಗಿಯರು ನೀರುಪಾಲಾದ ಘಟನೆ ಸುರತ್ಕಲ್ ಬೀಚ್ ನಲ್ಲಿ ನಡೆದಿದೆ. 

ಸುರತ್ಕಲ್, ಎ.10 : ಶ್ರಾದ್ಧ ಕಾರ್ಯಕ್ಕೆಂದು ಸಮುದ್ರ ತೀರಕ್ಕೆ ಬಂದಿದ್ದಾಗ ನೀರಾಟಕ್ಕಿಳಿದ ಅಕ್ಕ , ತಂಗಿಯರು ನೀರುಪಾಲಾದ ಘಟನೆ ಸುರತ್ಕಲ್ ಬೀಚ್ ನಲ್ಲಿ ನಡೆದಿದೆ. 

ಮೃತರನ್ನು ಮಂಗಳೂರು ಶಕ್ತಿನಗರ ನಿವಾಸಿಗಳಾದ ವೈಷ್ಣವಿ(21) ಮತ್ತು ತ್ರಿಶಾ(13) ಎಂದು ಗುರುತಿಸಲಾಗಿದೆ. ಇವರು ಪೊಲೀಸ್ ಸಿಬಂದಿಯ ಪುತ್ರಿಯರು ಎನ್ನುವ ಮಾಹಿತಿ ಲಭಿಸಿದೆ.‌

ಇವರು ಇತ್ತೀಚೆಗೆ ಮೃತಪಟ್ಟ ತಮ್ಮ ಮಾವನ ತಿಥಿ ಕಾರ್ಯದ ನಿಮಿತ್ತ ಪಿಂಡ ಪ್ರದಾನ ಕಾರ್ಯಕ್ರಮದಲ್ಲಿ ಭಾಗವಹಿಸಲು ಕುಟುಂಬಸ್ಥರ ಜೊತೆಗೆ ಎನ್ಐಟಿಕೆ ಬೀಚ್ ಗೆ ಆಗಮಿಸಿದ್ದರು. ಇದೇ ಸಂಧರ್ಭ ವೆಂಕಟೇಶ್ ಎಂಬವರು ವೈಷ್ಣವಿ ಮತ್ತು ತ್ರಿಶಾ ಜೊತೆ ಸಮುದ್ರದಲ್ಲಿ ಆಟವಾಡಲು ಇಳಿದಿದ್ದು ಈ ವೇಳೆ ದುರ್ಘಟನೆ ಸಂಭವಿಸಿದೆ. ಅಲೆಗಳ ಅಬ್ಬರಕ್ಕೆ ಸಿಲುಕಿದ ಮೂವರನ್ನು ಸ್ಥಳೀಯ ಈಜುಗಾರರು ಮತ್ತು ಸ್ಥಳದಲ್ಲಿದ್ದ ಸುರತ್ಕಲ್ ಪೊಲೀಸ್ ಠಾಣೆಯ ಹೋಂ ಗಾರ್ಡ್ ಪ್ರಶಾಂತ್ ಮೇಲೆತ್ತಿದ್ದಾರೆ. ಆದರೆ ಆಸ್ಪತ್ರೆಗೆ ಸಾಗಿಸುವ ಮಧ್ಯೆ ವೈಷ್ಣವಿ  ಮತ್ತು ತ್ರಿಶಾ ಕೊನೆಯುಸಿರೆಳೆದಿದ್ದಾರೆ. ವೆಂಕಟೇಶ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

Weekend turned tragic for two siblingss out in Surathkal's NITK beach on Sunday, April 10. Reports from closely placed sources said Trisha (17) and her elder sister Vaishnavi (18) who were out to enjoy the weekend were washed away by strong waves in the beach in the morning hours.