ಕಟ್ಟಡದಿಂದ ಬಿದ್ದು ಯುವಕ ದುರಂತ ಸಾವು ; ವಿಎಚ್ ಪಿ ಕಾರ್ಯಕರ್ತನಾಗಿದ್ದ ಬಡ ಕುಟುಂಬದ ಯುವಕ ! 

29-03-22 09:36 am       Mangalore Correspondent   ಕರಾವಳಿ

ಬಡ ಕುಟುಂಬಕ್ಕೆ ಏಕೈಕ ಆಸೆರಯಾಗಿದ್ದ ಯುವಕನೊಬ್ಬ ನಿರ್ಮಾಣ ಹಂತದ ಕಟ್ಟಡದಲ್ಲಿ ಕೆಲಸ ಮಾಡುತ್ತಿದ್ದಾಗ ಆಯತಪ್ಪಿ ಕೆಳಗೆ ಬಿದ್ದು ಮೃತಪಟ್ಟ ಘಟನೆ ನಗರದಲ್ಲಿ ನಡೆದಿದೆ.

ಮಂಗಳೂರು, ಮಾ.29: ಬಡ ಕುಟುಂಬಕ್ಕೆ ಏಕೈಕ ಆಸೆರಯಾಗಿದ್ದ ಯುವಕನೊಬ್ಬ ನಿರ್ಮಾಣ ಹಂತದ ಕಟ್ಟಡದಲ್ಲಿ ಕೆಲಸ ಮಾಡುತ್ತಿದ್ದಾಗ ಆಯತಪ್ಪಿ ಕೆಳಗೆ ಬಿದ್ದು ಮೃತಪಟ್ಟ ಘಟನೆ ನಗರದಲ್ಲಿ ನಡೆದಿದೆ. ಮೃತನನ್ನು ವಿಶ್ವ ಹಿಂದು ಪರಿಷತ್ ಕಾರ್ಯಕರ್ತ ಅಜಿಲಮೊಗರು ನಿವಾಸಿ ವಿಜಯ್ ಪುಣ್ಕೆದಡಿ ಎಂದು ಗುರುತಿಸಲಾಗಿದೆ. 

ಸೋಮವಾರ ಬೆಳಗ್ಗೆ ಎಂದಿನಂತೆ ಕೆಲಸಕ್ಕೆ ಹೋಗಿದ್ದು ಕಟ್ಟಡದಲ್ಲಿ ಕೆಲಸ ಮಾಡುತ್ತಿದ್ದಾಗ ಆಯತಪ್ಪಿ ಬಿದ್ದಿದ್ದಾನೆ. ಕೂಡಲೇ ಆತನನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ವೈದ್ಯರು ಪರೀಕ್ಷಿಸಿ ಮೃತಪಟ್ಟಿದ್ದಾಗಿ ತಿಳಿಸಿದ್ದಾರೆ. ವಿಜಯ್ ಬಡ ಕುಟುಂಬಕ್ಕೆ ಏಕೈಕ ಆಸರೆಯಾಗಿದ್ದು ಅಕ್ಕನಿಗೆ ಮದುವೆ ನಡೆಸಲು ಸಿದ್ಧತೆ ನಡೆಸಿದ್ದ. ಅದರ ನಡುವಲ್ಲೇ ಸಾವಿನ ಘಟನೆ ಆಗಿದೆ. ತಂದೆ, ತಾಯಿ, ಸೋದರಿಯನ್ನು ಅಗಲಿದ್ದಾರೆ.‌

In a tragic incident, a young man, the sole breadwinner of his family, slipped from the fourth floor of a building while working and died here on Monday, March 28. The incident occurred at Padil here.