ಮಸೀದಿ ಬಾವಿಗೆ ಬಿದ್ದ ಭಾರೀ ಗಾತ್ರದ ಕಡವೆ ; ಬಾವಿಯಿಂದ ರಕ್ಷಿಸಿ ಕಾಡಿಗೆ ಬಿಟ್ಟ ಅಗ್ನಿಶಾಮಕ ಸಿಬಂದಿ 

25-03-22 10:21 pm       Mangalore Correspondent   ಕರಾವಳಿ

ಕಾಡಿನಿಂದ ಬಂದ ಭಾರೀ ಗಾತ್ರದ ಕಡವೆಯೊಂದು ಮಸೀದಿ ಬಾವಿಗೆ ಬಿದ್ದು ಒದ್ದಾಡಿದ್ದು ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ಸಿಬ್ಬಂದಿ ಕಡವೆಯನ್ನ ರಕ್ಷಿಸಿ ಕಾಡಿಗೆ ಬಿಟ್ಟ ಘಟನೆ ಕಿನ್ಯ ಗ್ರಾಮದ ಉಕ್ಕುಡದಲ್ಲಿ ನಡೆದಿದೆ. 

ಉಳ್ಳಾಲ, ಮಾ.25 : ಕಾಡಿನಿಂದ ಬಂದ ಭಾರೀ ಗಾತ್ರದ ಕಡವೆಯೊಂದು ಮಸೀದಿ ಬಾವಿಗೆ ಬಿದ್ದು ಒದ್ದಾಡಿದ್ದು ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ಸಿಬ್ಬಂದಿ ಕಡವೆಯನ್ನ ರಕ್ಷಿಸಿ ಕಾಡಿಗೆ ಬಿಟ್ಟ ಘಟನೆ ಕಿನ್ಯ ಗ್ರಾಮದ ಉಕ್ಕುಡದಲ್ಲಿ ನಡೆದಿದೆ. 

ಕಿನ್ಯ ಗ್ರಾಮದ ಉಕ್ಕುಡ ಮಸೀದಿಯ ಬಾವಿಗೆ ಇಂದು ಬೆಳಗ್ಗೆ ಭಾರೀ ಗಾತ್ರದ ಕಡವೆಯೊಂದು ಬಿದ್ದು ಜೀವರಕ್ಷಣೆಗಾಗಿ ಚಡಪಡಿಸುತ್ತಿತ್ತು. ಮಸೀದಿಗೆ ಬಂದಿದ್ದ ಸ್ಥಳೀಯರು ಗಮನಿಸಿ ಅರಣ್ಯ ಇಲಾಖೆ, ಅಗ್ನಿಶಾಮಕ ದಳದವರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಸ್ಥಳಕ್ಕೆ ದೌಡಾಯಿಸಿದ ಅಗ್ನಿ ಶಾಮಕದಳದ ಸಿಬ್ಬಂದಿ ಕಡವೆಯನ್ನ ಮೇಲಕ್ಕೆತ್ತಿ ರಕ್ಷಿಸಿದ್ದಾರೆ. ಸ್ಥಳದಲ್ಲಿದ್ದ ಅರಣ್ಯ ಅಧಿಕಾರಿಗಳು ಕಡವೆಗೆ ಪ್ರಥಮ ಚಿಕಿತ್ಸೆ ನೀಡಿ ಕಾಡಿಗೆ ಬಿಟ್ಟಿದ್ದಾರೆ. ವಲಯ ಅರಣ್ಯಾಧಿಕಾರಿ ಪ್ರಶಾಂತ್ ಕುಮಾರ್ ಪೈ ಮಾರ್ಗದರ್ಶನದಲ್ಲಿ ಕೋಟೆಕಾರು ಶಾಖೆ ಉಪವಲಯ ಅರಣ್ಯಾಧಿಕಾರಿ ಮಹಾಬಲ, ಅರಣ್ಯ ರಕ್ಷಕಿ ಸೌಮ್ಯ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

Mangalore Big size Samba deer falls to well in Ullal, fire team come to rescue. The incident took place at Kinya near Ukkada Mosque.