ಹಿಜಾಬ್ ಕಾರಣಕ್ಕೆ ಪರೀಕ್ಷೆ ತಪ್ಪಿಸಿ ಬೀದಿಗೆ ನೂಕಬೇಡಿ, ಕೋರ್ಟ್ ಆದೇಶವನ್ನು ತಪ್ಪಾಗಿ ಬಿಂಬಿಸಬೇಡಿ ; ವಿದ್ಯಾರ್ಥಿಗಳ ಧರಣಿ 

25-03-22 09:53 pm       Mangalore Correspondent   ಕರಾವಳಿ

ವಿದ್ಯಾರ್ಥಿ ಸಮನ್ವಯ ಸಮಿತಿ ಎಂಬ ಬ್ಯಾನರಿನಡಿ ವಿವಿಧ ಕಾಲೇಜುಗಳ ವಿದ್ಯಾರ್ಥಿ- ವಿದ್ಯಾರ್ಥಿನಿಯರು ಸೇರಿ ಮಂಗಳೂರಿನಲ್ಲಿ ಪ್ರತಿಭಟನೆ ನಡೆಸಿದ್ದಾರೆ.

ಮಂಗಳೂರು, ಮಾ.25 : ವಿದ್ಯಾರ್ಥಿ ಸಮನ್ವಯ ಸಮಿತಿ ಎಂಬ ಬ್ಯಾನರಿನಡಿ ವಿವಿಧ ಕಾಲೇಜುಗಳ ವಿದ್ಯಾರ್ಥಿ- ವಿದ್ಯಾರ್ಥಿನಿಯರು ಸೇರಿ ಮಂಗಳೂರಿನಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಹಿಜಾಬ್ ಕುರಿತ ಹೈಕೋರ್ಟ್ ತೀರ್ಪನ್ನು ಕಾಲೇಜು ಆಡಳಿತಗಳು ತಪ್ಪಾಗಿ ಅರ್ಥೈಸಿ, ವಿದ್ಯಾರ್ಥಿಗಳನ್ನು ಬೀದಿಗೆ ನೂಕಿದೆ ಎಂದು ಆರೋಪಿಸಿ ಪ್ರತಿಭಟನೆ ನಡೆಸಲಾಯಿತು. 

ನಗರದ ಕ್ಲಾಕ್ ಟವರ್ ಬಳಿಯ ಮಿನಿ ವಿಧಾನಸೌಧ ಬಳಿ ವಿದ್ಯಾರ್ಥಿಗಳು ಪ್ರತಿಭಟನಾ ಧರಣಿ ನಡೆಸಿದ್ದು ಈ ವೇಳೆ ರಸ್ತೆಗೆ ಬಂದ ವಿದ್ಯಾರ್ಥಿಗಳನ್ನು ತಡೆದ ಪೊಲೀಸರ ಜೊತೆ ವಾಗ್ವಾದ, ಜಟಾಪಟಿ ನಡೆಯಿತು. ಈ ವೇಳೆ ಮಾತನಾಡಿದ ವಿದ್ಯಾರ್ಥಿ ಮುಖಂಡ ರಿಯಾಜ್ ಅಂಕತ್ತಡ್ಕ , ಕಾಲೇಜು ಆಡಳಿತಗಳು ಹಿಜಾಬ್ ಕಾರಣಕ್ಕೆ ವಿದ್ಯಾರ್ಥಿನಿಯರ‌ನ್ನು ತಡೆದಲ್ಲಿ ಪರೀಕ್ಷೆಗೆ ತೊಂದರೆ ಆಗುತ್ತದೆ. ಪರೀಕ್ಷೆ ಬರೆಯಲು ಅಸಾಧ್ಯವಾಗುತ್ತದೆ. ಹಿಜಾಬ್ ಧರಿಸುವುದು ಅವರ ಹಕ್ಕು.‌ ಅದನ್ನು ಯಾರಿಂದಲೂ ಕಸಿದುಕೊಳ್ಳಲು ಸಾಧ್ಯವಿಲ್ಲ. ನಮ್ಮ ಕೂಗನ್ನು ಕೇಳುವವರು ಯಾರಿದ್ದಾರೆ  ಎಂದು ಪ್ರಶ್ನಿಸಿದರು. 

ಪರೀಕ್ಷೆಗೆ ಹಾಜರಾಗಲು ಬಿಡದಿದ್ದರೆ ಅನಿವಾರ್ಯವಾಗಿ ವಿದ್ಯಾರ್ಥಿಗಳು ಬೀದಿಗೆ ಬರಬೇಕಾಗುತ್ತದೆ. ಇದಕ್ಕೆ ಬಿಜೆಪಿ ಸರಕಾರ, ಎಬಿವಿಪಿ ಆರೆಸ್ಸೆಸ್ ಕಾರಣವಾಗುತ್ತದೆ ಎಂದು ರಿಯಾಜ್ ಹೇಳಿದ್ದಾರೆ. 

ವಿದ್ಯಾರ್ಥಿನಿ ಹಿಬಾ ಶೇಕ್ ಮಾತನಾಡಿ, ನಮ್ಮ ಹಕ್ಕಿಗಾಗಿ ನಾವು ಬೀದಿಗೆ ಬಂದಿದ್ದೇವೆ. ಹಿಜಾಬ್ ನಮ್ಮ ಹಕ್ಕು. ಕೋರ್ಟ್ ಆದೇಶವನ್ನು ತಪ್ಪಾಗಿ ಅರ್ಥೈಸಲಾಗಿದೆ. ದುರುಪಯೋಗ ಮಾಡಲಾಗುತ್ತಿದೆ. ನಾವು ನಮ್ಮ ಹಕ್ಕಿಗಾಗಿ ಕಾಲೇಜು ಬಿಟ್ಟು ದೂರ ಇದ್ದೇವೆ ಎಂದರು.

ಕೆಲವು ಮೀಡಿಯಾಗಳು ಹಿಜಾಬ್ ಪೂರ್ತಿ ಬ್ಯಾನ್ ಆಗಿದ್ದಾಗಿ ಹೇಳುತ್ತಿವೆ. ಆದರೆ ಕೋರ್ಟ್ ಪದವಿ ಕಾಲೇಜುಗಳಲ್ಲಿ ಹಿಜಾಬ್ ನಿಷೇಧ ಅಂತ ಹೇಳಿಲ್ಲ. ಆದರೆ ಇದನ್ನು ತಪ್ಪಾಗಿ ತೋರಿಸಲಾಗುತ್ತಿದೆ ಎಂದು ವಿದ್ಯಾರ್ಥಿನಿ ಗೌಸಿಯಾ ಹೇಳಿದರು.

Several college students under the banner of 'Vidhyarthi Samanvaya Samithi' staged a protest alleging that the colleges and the government were misusing the High Court's order on Hijab.The students protested by sitting on the road near the Clock Tower on Friday, March 25 afternoon. Meanwhile, when police prevented students from coming to the road from the footpath during the protest, a verbal scuffle broke out between them.